ರಜೆ ಬೇಕು ಅನ್ನಿಸಿದಾಗೆಲ್ಲ ಮೈಮೇಲೆ ದೇವರು ಬರ್ತಿತ್ತು!


Team Udayavani, Jun 12, 2018, 6:00 AM IST

x-6.jpg

ಟಿವಿಯಲ್ಲಿ ಕ್ರಿಕೆಟ್‌ ಪಂದ್ಯ ಇರುತ್ತಿದ್ದ ದಿನಗಳಲ್ಲೆಲ್ಲ ನಾನು ಶಾಲೆಗೆ ಚಕ್ಕರ್‌ ಹಾಕುತ್ತಿದ್ದೆ. ಅದಕ್ಕೆ ಗೆಳೆಯರೂ ಸಾಥ್‌ ನೀಡುತ್ತಿದ್ದರು. ಆ ದಿನ ಶಾಲೆಗೆ ಹೋಗಿ ಹಾಜರಾತಿ ಹಾಕಿಸಿಕೊಂಡ ಬಳಿಕ ನಮ್ಮ ಅಸಲಿ ಆಟ ಶುರುವಾಗುತ್ತಿತ್ತು. ಆಶುಭಾಷಣ, ನಟನೆ, ಮಿಮಿಕ್ರಿಯಲ್ಲಿ ಪ್ರಚಂಡನೆನಿಸಿಕೊಂಡ ಗೆಳೆಯ, ತನ್ನ ಮೈ ಮೇಲೆ ದೇವರು ಬರುವಂತೆ ಅದ್ಭುತವಾಗಿ ನಟಿಸುತ್ತಿದ್ದ. ನಮ್ಮೂರಿನ ಸುತ್ತಮುತ್ತ ಇದ್ದ ಗಣಮಕ್ಕಳ ನಟನೆಯನ್ನು ಚಿಕ್ಕಂದಿನಿಂದ ನೋಡಿ ಅವರನ್ನು ಚೆನ್ನಾಗಿಯೇ ಅನುಕರಿಸಲು ಕಲಿತಿದ್ದ. ನಮಗೆ ರಜೆ ಬೇಕಾದ ದಿನ ಅವನ ಮೇಲೆ ದೇವರು ಬರುತ್ತಿತ್ತು! ಅವನಿಗೆ ದೇವರು ಬರುತ್ತಿದ್ದಂತೆ ನಾವು ಓಡಿ ಹೋಗಿ ಮುಖ್ಯ ಗುರುಗಳಿಗೆ ವಿಷಯ ತಿಳಿಸುತ್ತಿದ್ದೆವು. ಪರಮ ದೈವಭಕ್ತರಾದ ಗುರುಗಳು, ಅವನನ್ನು ಮನೆಗೆ ಬಿಟ್ಟು ಬರಲು ನನ್ನನ್ನು ಮತ್ತು ಇನ್ನೊಬ್ಬನನ್ನು ಕಳಿಸುತ್ತಿದ್ದರು.

   ಈ “ದೇವರು ಮೈ ಮೇಲೆ ಬರುವ ಗುಟ್ಟು’ ನಮ್ಮ ಬೆಂಚಿನ ಐವರಿಗೆ ಮಾತ್ರ ತಿಳಿದಿತ್ತು. ದೇವರು ಬರುವ ಗೆಳೆಯನೊಂದಿಗೆ ನಾನು ಪರ್ಮನೆಂಟಾಗಿ ಇರುತ್ತಿದ್ದೆ. ನಮ್ಮ ಜೊತೆಗೆ ಬರುವ ಇನ್ನೊಬ್ಬ ಯಾರು ಎಂಬುದನ್ನು ಮೊದಲೇ ನಿರ್ಧರಿಸುತ್ತಿದ್ದೆವು. ಕೆಲವೊಮ್ಮೆ, ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ಎದುರಾಳಿ ತಂಡ ಯಾವುದು ಎನ್ನುವುದರ ಮೇಲೆ ಆ ಮತ್ತೂಬ್ಬ ಯಾರು ಎಂಬುದು ನಿರ್ಧರಿಸಲ್ಪಡುತ್ತಿತ್ತು. ಫೈನಲ್‌ ಪಂದ್ಯದ ದಿನ ನನ್ನ ಜೊತೆಗೆ ಯಾರು ಬರಬೇಕು ಎಂಬ ವಿಷಯಕ್ಕೆ ಗಲಾಟೆಯೂ ನಡೆಯುತ್ತಿತ್ತು. ಕೊನೆಗೆ ಆ ಗಲಾಟೆ, ನಾಣ್ಯ ಚಿಮ್ಮುವಿಕೆಯಿಂದ ಬಗೆಹರಿದಿದ್ದಿದೆ.

   ಹೀಗೆ ನಡೆಯುತ್ತಿದ್ದ ನಮ್ಮ ಚಕ್ಕರ್‌ ಕತೆ, ಎರಡು ವರ್ಷ ಸರಾಗವಾಗಿ ನಡೆದು ಕೊನೆಗೊಂದು ದಿನ ಅಂತ್ಯ ಕಂಡಿತು. ಅಂದು ಭಾರತ – ಪಾಕಿಸ್ತಾನ ಪಂದ್ಯ. ಯಾರು ಹೋಗಬೇಕು ಎನ್ನುವ ವಿಷಯ ಗಲಾಟೆಗೆ ಕಾರಣವಾಯಿತು. ಅದು ಮುಖ್ಯ ಗುರುಗಳಿಗೆ ತಿಳಿದು, ವಿಷಯ ಮನೆಯವರೆಗೂ ತಲುಪಿತು. ಮನೆಯಲ್ಲಿ ನೆಕ್ಕಿ(ಲಕ್ಕಿ) ಸೊಪ್ಪಿನ ಕೋಲಿನಿಂದ ಆರಾಧನೆ ನಡೆಸಿ, ಮೈಮೇಲೆ ಬರುವ ದೇವರನ್ನು ಬಿಡಿಸಿದರು! ಮೈ ಮೇಲೆ ಬಂದಿದ್ದ ಪ್ರತಿ ಬರೆಗಳು, ಚಕ್ಕರ್‌ ಹಾಕಿ ನೋಡಿದ್ದ ಪ್ರತಿ ಪಂದ್ಯಕ್ಕೂ ಸಿಕ್ಕ ಬಹುಮಾನದಂತಿದ್ದವು. ಅಲ್ಲಿಗೆ ನಮ್ಮ ಚಕ್ಕರ್‌ವ್ಯೂಹ ಅಂತ್ಯವಾಯಿತು.

ಪ್ರಶಾಂತ್‌ ಕೆ.ಸಿ. 

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.