ಬೇಡ ಕೃಷ್ಣ ರಂಗಿನಾಟ


Team Udayavani, Jul 18, 2018, 6:00 AM IST

3.jpg

ಗಂಡ ತನ್ನೊಬ್ಬನ ಬಳಿ ಮಾತ್ರ ಸಲುಗೆಯಿಂದ ಇರಬೇಕು ಅನ್ನೋದು ಎಲ್ಲ ಹೆಂಡತಿಯರು ಬಯಸುವ ದಾಂಪತ್ಯ ತತ್ವ. ಓರಗೆಯ ಮಹಿಳೆಯರು ಸಿಕ್ಕಾರ ಗಂಡ ಫ್ಲರ್ಟ್‌ ಮಾಡಿದರೆ, ಅದನ್ನು ಹೆಂಡತಿ ಹೇಗೆ ಸ್ವೀಕರಿಸುತ್ತಾಳೆ? ಇಲ್ಲಿ ಯಾರ ವ್ಯಕ್ತಿತ್ವ ತಪ್ಪು, ಗಂಡನದ್ದಾ? ಪೊಸೆಸಿವ್‌ನೆಸ್‌ ಇಟ್ಕೊಂಡಿರೋ ಹೆಂಡತಿಯದ್ದಾ?

ರಾಹುಲ್‌ ಶ್ರೀಮಂತ ಮನೆಯ ಹುಡುಗನಾಗಿದ್ದ. ಕೆಲಸದ ನಿಮಿತ್ತ ಎರಡು ವರ್ಷ ಅಮೆರಿಕದಲ್ಲಿ ವಾಸವಿದ್ದ. ಆಧುನಿಕ ಜೀವನಶೈಲಿಯನ್ನು ಮೈಗೂಡಿಸಿಕೊಂಡಿದ್ದ ರಾಹುಲ್‌ ಗೌರಮ್ಮನಂತಿದ್ದ ವಸುಮತಿಗೆ ಇಷ್ಟವಾಗಿದ್ದು ಹೇಗೆ ಎನ್ನುವುದು ಇಲ್ಲಿಯವರೆಗೂ ಅನೇಕರಿಗೆ ಬಿಡಿಸಲಾಗದ ಒಗಟು. ಎರಡು ವಿರುದ್ಧ ಧೃವಗಳು ಒಂದನ್ನೊಂದು ಆಕರ್ಷಿಸುತ್ತವೆ ಎನ್ನುವುದು ಅವರಿಬ್ಬರ ಪಾಲಿಗೆ ಸತ್ಯವಾದ ಮಾತಾಗಿತ್ತು. ಮದುವೆ ನಂತರ ರಾಹುಲ್‌, ಫೋನ್‌ನಲ್ಲಿ ಅವನ ಬಾಲ್ಯದ ಗೆಳತಿ ಚಿತ್ರಾ ಜೊತೆ ಮಾತಾಡುವುದನ್ನು ಕೇಳಿಸಿಕೊಂಡಿದ್ದಳು. ಅವರಿಬ್ಬರೂ ಬೆಸ್ಟ್‌ ಫ್ರೆಂಡ್ಸ್‌ ಎನ್ನುವುದು ವಸುಮತಿಗೆ ಗೊತ್ತಿತ್ತು. ಆದರೆ, ಬೇರೆ ಯಾರಾದರೂ ರಾಹುಲ್‌ನ ಮಾತನ್ನು ಕೇಳಿಸಿಕೊಂಡಿದ್ದರೆ ರಾಹುಲ್‌ ಬಗ್ಗೆ ಅಪಾರ್ಥ ಮಾಡಿಕೊಳ್ಳುವಂತಿತ್ತು ಅವನ ಮಾತುಕತೆ. ಆಗಲೂ ಅವರಿಬ್ಬರು ಕ್ಲೋಸ್‌ಫ್ರೆಂಡ್ಸ್‌ ಅಲ್ವಾ ಅಂತ ಸುಮ್ಮನಾಗಿದ್ದಳು ವಸುಮತಿ. ಆದರೆ, ರಾಹುಲ್‌ ಅನೇಕ ಮಹಿಳೆಯರೊಂದಿಗೆ ಅದೇ ರೀತಿ ಮಾತಾಡುವುದನ್ನು ಕಂಡಾಗ ವಸುಮತಿಗೆ ಆಘಾತವಾಗಿತ್ತು. ಆ ಮಹಿಳೆಯರು ತಮಗೆ ಇರಿಸು ಮುರಿಸಾದರೂ ತಡೆದುಕೊಂಡು ಸುಮ್ಮನಿದ್ದರು. ಇತ್ತ ತನ್ನ ದುಗುಡವನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ವಸುಮತಿ ಒಳಗೊಳಗೇ ಚಡಪಡಿಸುತ್ತಿದ್ದಳು. ತನ್ನ ಗಂಡ ಎಲ್ಲ ಹೆಂಗಸರೊಡನೆ ಫ್ಲರ್ಟ್‌ ಮಾಡುತ್ತಾನೆ ಎಂದು ಯಾವ ಹೆಣ್ಣು ತಾನೇ ಬಾಯಿಬಿಟ್ಟು ಹೇಳಿಕೊಳ್ಳುತ್ತಾಳೆ? ಅದೂ ಪ್ರೀತಿಸಿ ಮದುವೆಯಾದವಳು!

ಸಮಸ್ಯೆಯ ಮೂಲ
ವಸುಮತಿ ಸೀದಾ ಹೋಗಿದ್ದು ಮನೋವೈದ್ಯೆಯ ಬಳಿಗೆ. ತನ್ನ ನೋವೆಲ್ಲವನ್ನೂ ಅವರಲ್ಲಿ ಹೇಳಿಕೊಂಡು ಅತ್ತು ಕಣ್ಣೀರಾಗಿದ್ದಳು. ವೈದ್ಯರು ಅವಳ ಸಮಸ್ಯೆಯನ್ನು ಸಮಾಧಾನದಿಂದ ಆಲಿಸಿದರು. ಅವರಿಗೆ ಎರಡು ರೀತಿಯ ಸಮಸ್ಯೆಗಳು ಕಂಡುಬಂದವು. ಒಂದು ವಸುಮತಿಯ ಕಡೆಯಿಂದ, ಇನ್ನೊಂದು ರಾಹುಲ್‌ ಕಡೆಯಿಂದ. ವಸುಮತಿ ಮುಂಚಿನಿಂದಲೂ ಸ್ವಲ್ಪ ಪೊಸೆಸಿವ್‌, ಅಂದರೆ ತನ್ನ ವಸ್ತು ಬೇರೆ ಯಾರ ಪಾಲಾಗುವುದನ್ನೂ ಸಹಿಸಳು ಎನ್ನುವುದನ್ನು ವೈದ್ಯರು ತಿಳಿದುಕೊಂಡರು. ನಿಜ ಹೇಳಬೇಕೆಂದರೆ, ಪೊಸೆಸಿವ್‌ನೆಸ್‌ ಕಾಯಿಲೆ ಏನಲ್ಲ. ಭೂಮಿ ಮೇಲೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಪೊಸೆಸಿವ್‌ ಆಗಿರುತ್ತಾರೆ. ತನ್ನ ಗಂಡ ಎಲ್ಲಾ ಹೆಂಗಸರೊಡನೆ ಫ್ಲರ್ಟ್‌ ಮಾಡುತ್ತಾನೆ ಅನ್ನೋದು ವಸುಮತಿಯ ಮನಸ್ಸಿಗೆ ಘಾಸಿ ತಂದಿತ್ತು. ತನ್ನದೊಬ್ಬಳದೇ ಆಗಬೇಕಿದ್ದ ಸ್ವತ್ತು ಇತರರ ಪಾಲಾಗುತ್ತಿರುವುದರ ನೋವು ಒಂದೆಡೆಯಾದರೆ, ಓರಗೆಯ ಹೆಂಗಸರ ನಡುವೆ ತನ್ನ ಗಂಡ ಕೆಟ್ಟ ಹೆಸರು ಪಡೆಯುತ್ತಿದ್ದಾನಲ್ಲ ಎಂಬ ಆಘಾತ ಇನ್ನೊಂದೆಡೆ. 

ಪರಿಹಾರ ಸಿಕ್ಕಿತ್ತು!
ರಾಹುಲ್‌ನ ಫ್ಲರ್ಟಿಂಗ್‌ ಬಗ್ಗೆ ವಸುಮತಿ ಈ ಹಿಂದೆ ಅವನಲ್ಲಿ ಮಾತಾಡಿದ್ದರೂ ಅವನದನ್ನು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ. ಅವನ ಪ್ರಕಾರ ಅದು ಆರೋಗ್ಯಕರ, ಹಾಸ್ಯಭರಿತ ಮಾತುಕತೆ ಅಷ್ಟೇ. ಆದರೆ, ಅವನು ಒಂದು ವಿಚಾರವನ್ನು ಗಮನಿಸಲು ಸೋತಿದ್ದ. ತಮ್ಮ ಮಾತು ಇತರರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಗ್ರಹಿಸಲು ರಾಹುಲ್‌ ಸೋತಿದ್ದ. ಇದನ್ನು ಕಂಡುಕೊಂಡ ವೈದ್ಯರಿಗೆ ವಸುಮತಿಯ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ರಾಹುಲ್‌ನ ಜೋಕು, ಮಾತುಗಳನ್ನು ತನ್ನ ಗೆಳತಿಯರು, ಸಹೋದ್ಯೋಗಿ ಹೆಂಗಸರು ಕಾಮಿಡಿ ಎಂದು ಪರಿಗಣಿಸುತ್ತಿಲ್ಲ, ಅವರಿಗೆ ಇರಿಸುಮುರಿಸಾಗುತ್ತಿದೆ ಎನ್ನುವುದನ್ನು ಹೇಗಾದರೂ ಮಾಡಿ ವಸುಮತಿ ಸಾಬೀತು ಪಡಿಸಿದರೆ ರಾಹುಲ್‌ ಮುಂದೆಂದೂ ಆ ರೀತಿ ವರ್ತಿಸುವುದಿಲ್ಲ ಎನ್ನುವುದು ವೈದ್ಯರ ಸಲಹೆಯಾಗಿತ್ತು. ಅವರ ಸಲಹೆ ಸರಿಯಾಗಿ ಕೆಲಸ ಮಾಡಿತು. ರಾಹುಲ್‌ ಯಾರ ಬಳಿಯೂ ಆ ರೀತಿ ಮಾತಾಡುವುದಿಲ್ಲ. ನಾವು ಮನುಷ್ಯರು ರೇಡಿಯೋ ಥರ ಅಲ್ಲ. ರಿಸೀವರ್‌ಗೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಶಬ್ದತರಂಗಗಳನ್ನು ಬಿತ್ತರಿಸುತ್ತೇವೆ ಎನ್ನುವುದು ಕಡೆಗೂ ರಾಹುಲ್‌ಗೆ ಅರ್ಥವಾಗಿತ್ತು.

ಹವನ

ಟಾಪ್ ನ್ಯೂಸ್

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.