ಪ್ರೀತಿ ಮಾಡೋಕ್‌ ಪುರುಸೊತ್ತಿದೆಯಾ?


Team Udayavani, Jul 31, 2018, 6:00 AM IST

11.jpg

ನಾನ್‌ ಪಕ್ಕಾ ಲೋಕಲ್‌. ನಾನು ಇರೋದೇ ಹೀಗೆ. ನಾನು ಬದುಕೋದು ನನಗೋಸ್ಕರ ಮಾತ್ರ. ಇನ್ನೊಬ್ರನ್ನ ಮೆಚ್ಚಿಸೋಕೆ ನಾನು ಬದಲಾಗೋದಿಲ್ಲ. ನನ್ನ ನೇಚರ್‌, ನನ್ನ ಬಿಹೇವಿಯರ್‌, ನನ್ನ ಮನ್ಸು, ಕನ್ಸು ಎಲ್ಲಾರಿಗೂ ವಿಚಿತ್ರವಾಗೇ ಕಾಣ್ಸುತ್ತೆ. ಮೊದಲೆಲ್ಲ ಲೂಸು, ಮೆಂಟ್ಲು, ಅಂತ ನಿಕ್‌ ನೇಮ್‌ ಇಟ್ಟಿದ್ದ ಫ್ರೆಂಡ್ಸು ಈಗ “ವಿಚಿತ್ರಾ’ ಅಂತ ಬೇರೆ ಮಡ್ಗವ್ರೆ. 

ನನ್ಗೆ ಫ್ರೆಂಡ್ಸ್‌ ಅಂದ್ರೆ ಹೆಣ್ಣು-ಗಂಡು ಅನ್ನೋ ಭೇದ ಇಲ್ಲ. ನನಗೆ ಎಲ್ರೂ ಒಂದೇ. ಎಲ್ಲರ ಹಾಗೆ ಫ್ರೆಂಡ್‌ಗೆ ಹಾಯ್‌ ಹೇಳಿ, ಶೇಕ್‌ ಹ್ಯಾಂಡ್‌ ಮಾಡಿ, ಹಲ್ಲು ಕಿಸಿದು ನಾನು ಮಾತಾಡ್ಸಲ್ಲ. ನೇರವಾಗಿ ಎದೆಗೆ ಹೊಡೆದೇ ಮಾತಿಗಿಳಿಯೋದು. ನನ್ನ ಫ್ರೆಂಡ್ಸ್‌ ಎಲ್ರೂ ಹೇಳ್ತಾರೆ: “ಆ ರೀತಿ ಎಲ್ಲರ ಜೊತೆ ನಗುನಗುತ್ತಾ ಮಾತಾಡಬೇಡ. ಹುಡುಗರು ಅದನ್ನೇ ಅಪಾರ್ಥ ಮಾಡ್ಕೊತಾರೆ. ನಿನ್ನ ಮಾತಿಂದ ಕೆಲವರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಆಗಿ, ಲವ್ವು-ಗಿವ್ವು ಅಂತ ಏನೇನೋ ಕನಸು ಕಟ್ಕೊಂಡು ಮನ್ಸಲ್ಲಿ ಮಂಡ್ಗಿ ತಿಂದ್ಕೊಂಡು ಹಾಳಾಗಿ ಹೋದ್ರೆ ಆ ಅಪವಾದ ಬೇರೆ ನಿನಗೇ’.. ಹೀಗೆಲ್ಲಾ ಹೇಳಿದ್ರೂ, ಐ ಡೋಂಟ್‌ ಕೇರ್‌. ನಾನ್‌ ಈ ಥರಾ ಅಂತ ಗೊತ್ತಿದ್ದೂ ನಮ್ಮ ಕ್ಲಾಸ್‌ಮೇಟ್ಸು ಬಂದು ಪ್ರಪೋಸ್‌ ಮಾಡಿ ಹೋಗಿದ್ದಾರೆ. ನಾನು ಅವರಿಗೆ ಕೊಟ್ಟಿರೋ ರಿಯಾಕ್ಷನ್‌ಗೆ ಮತ್ತೆ ನನ್ನ ಕಡೆ ಅವ್ರು ತಿರುಗಿ ಕೂಡ ನೋಡಿಲ್ಲ. ನನಗಂತೂ ಈ ಪ್ರೀತಿ-ಗೀತಿ ಇತ್ಯಾದಿ ಕಡೆ ಯಾಕೋ ಅಟ್ರ್ಯಾಕ್ಷನ್ನೇ ಆಗಲಿಲ್ಲ. ನಾನಾಯ್ತು, ನನ್ನ ಡಿಫ್ರೆಂಟ್‌ ಲೈಫಾಯ್ತು, ಹಾಗಿದ್ದೆ. ಇಟ್ಸ್‌ ಓಕೆ. ಅದ್ನ ಬಿಟಾಕು. ಈಗ, ನನ್ನಷ್ಟಕ್ಕ ನಾನೇ ಬದಲಾಗಿದ್ದೀನಿ. ಯಾಕೆ ಅಂತ ಮಾತ್ರ ಗೊತ್ತಿಲ್ಲ. 

ನೇರವಾಗಿ ವಿಷಯಕ್ಕೆ ಬರ್ತೀನಿ. ನನ್ನ ಬಗ್ಗೆ ನಿನಗೆಷ್ಟು ಗೊತ್ತಿದೆಯೋ ಕಾಣೆ. ಆದ್ರೆ, ನಿನ್ನ ಬಗ್ಗೆ ನನಗೆ ಸಾಕಷ್ಟು ಗೊತ್ತಿದೆ. ನೀನು, ನಿನ್ನ ಇನೋಸೆನ್ಸ್‌, ಫ್ರೆಂಡ್ಸ್‌ ಜೊತೆ ನಿನ್ನ ಕಮ್ಯುನಿಕೇಶನ್ನು, ಕ್ಲಾಸಲ್ಲಿ ನಿನ್ನ ಪಾರ್ಟಿಸಿಪೇಶನ್‌, ನಿನ್ನ ಹೆಲ್ಪಿಂಗ್‌ ನೇಚರ್‌, ಪರ್ಸನಾಲಿಟಿ, ಕ್ಯಾರೆಕ್ಟರ್‌ ಎಲ್ಲಾ ಸಿಕ್ಕಾಪಟ್ಟೆ ಇಷ್ಟ ಆಗ್ಬಿಟ್ಟಿದೆ. ಇಷ್ಟೆಲ್ಲದರ ಮಧ್ಯೆ, ನಿನಗೆ ನನ್ನ ಪ್ರೀತಿ ಮಾಡೋಕ್‌ ಪುರುಸೊತ್ತಿದೆಯಾ? ಇದೆ ಅಂದ್ರೆ ಹಿಂದೆ-ಮುಂದೆ ನೋಡ್ದೆ ಒಪ್ಕೋಡ್‌ ಬಿಡು. ನನ್ಗೆ ಜಾಸ್ತಿ ಟೈಮಿಲ್ಲ. ಅಪರೂಪಕ್ಕೆ ನನ್ನ ಮನಸ್ಸಿನಲ್ಲಿ ಈ ಪ್ರೀತಿ ಅನ್ನೋದು ಹುಟ್ಕೊಂಡಿದೆ. ಬಹುಶಃ ಆ ಪ್ರೀತಿಗೂ ನನ್ನ ಮೇಲೆ ಲವ್ವಾಗಿದೆ ಅನ್ಸುತ್ತೆ! ಇನ್ನು ನಿನಗೆ ಆಗೋಲ್ವಾ? ಆಗೇ ಆಗುತ್ತೆ ಅನ್ನೋ ಹುಚ್ಚು ಭರವಸೇಲಿ ನಿನ್ನ ಉತ್ತರಕ್ಕಾಗಿ ಕಾಯ್ತಾ ಇರೋ ಮೆಂಟಲ್‌ ಹುಡ್ಗಿ…

ವಿಚಿತ್ರಾ

ಟಾಪ್ ನ್ಯೂಸ್

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.