ಗಂಡ ಪಕ್ಕದಲ್ಲಿದ್ದಾಗ ಸ್ನೇಹಿತ ನೆನಪಾಗಿದ್ದ…


Team Udayavani, Aug 22, 2018, 6:00 AM IST

3.jpg

ಇಪ್ಪತ್ತೆಂಟು ವರ್ಷದ ರೇಖಾಗೆ ಮದುವೆಯಾಗಿ ಏಳು ತಿಂಗಳಾಗಿದೆ. ಮಿಲನವಾಗಿಲ್ಲ. ಗಂಡ ರಜಿತ್‌ ಬೋರ್‌ ಎನಿಸತೊಡಗಿದ್ದಾನೆ. ರಜಿತ್‌ ಅವಳನ್ನು ಒಲಿಸಿಕೊಳ್ಳಲು ಏನು ಮಾಡಿದರೂ ತಪ್ಪು ಎನಿಸುತ್ತದೆ. ಅವನನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ಸೆಕ್ಸ್‌ ಮಾಡಲು ಎಕ್ಸ್‌ಫ್ಯಾಕ್ಟರ್‌ ಇರಬೇಕು ಅಂತ ಹೇಳಿದ ಮೇಲೆ ಅವನು ತನ್ನ ತಾಯಿಯ ಹತ್ತಿರ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಅತ್ತೆ ಇಬ್ಬರನ್ನೂ ನನ್ನ ಬಳಿ ಸಮಾಲೋಚನೆಗೆ ಕಳಿಸಿದ್ದರು.

  ರೇಖಾಗೆ ಮದುವೆಯಲ್ಲಿ ನಿರಾಸಕ್ತಿಯ ಕಾರಣ ಕಾಲೇಜಿನಲ್ಲಿ ಓದುವಾಗ ರೇಖಾಗಿದ್ದ ಫ‌ಟಿಂಗ ಸ್ನೇಹಿತನ ನೆನಪು. ಮಸ್ತಿ- ಮೋಜಿನ ಹುಡುಗ. ಇವಳೇ ಪಂಚಪ್ರಾಣ ಎಂಬಂತಿದ್ದರೂ ಬೇರೆ ಹುಡುಗಿಯರ ಗೀಳೂ ಇತ್ತು. ರೇಖಾಗೆ ಸ್ನೇಹಿತನ ಜೊತೆ ಪ್ರೇಮವೆಷ್ಟು- ಕಾಮವೆಷ್ಟು ಗೊತ್ತಿರಲಿಲ್ಲ (ಕೆಲವು ಹುಡುಗರಿಗೆ ಸಂಬಂಧಗಳಿಗಿಂತ ಸ್ನೇಹದಲ್ಲಿ ನಂಬಿಕೆ ಜಾಸ್ತಿ. ಸ್ನೇಹ ಎಂದರೆ ದೈಹಿಕ ಸಂಪರ್ಕ ಕೂಡ ಇರುತ್ತದೆ. ಹುಡುಗಿಯರನ್ನು ಮಿಲನಕ್ಕೆ ಒಪ್ಪಿಸಲು ಚೆಂದವಾಗಿ ರಮಿಸುತ್ತಾರೆ. ಅದೇ ಪ್ರೇಮವಲ್ಲ). ಮನಸ್ಸಿಲ್ಲದೇ ಕಾಮಕ್ಕೊಡಿªದ ಸಂಬಂಧದಲ್ಲಿ ಹುಡುಗಿಯರಿಗೆ ಕೋಪ ಜಾಸ್ತಿ. ಆದರೂ ಹುಡುಗನ ಗೀಳು. ಜಗಳವಾಗಿ ಇವಳೇ ಅವನ ಸಹವಾಸ ತೊರೆದು ಅಪ್ಪ ಹುಡುಕಿದ ರಜಿತ್‌ ಜೊತೆ ಮದುವೆಯಾಗಿದ್ದಳು.

  ರಜಿತ್‌ ನನ್ನ ಬಳಿ ಸಮಾಲೋಚನೆಗೆ ಬಂದಾಗ ಬಹಳ ನೊಂದಿದ್ದರು. ಆತ್ಮವಿಶ್ವಾಸ ಕಡಿಮೆಯಾಗಿತ್ತು. ರೇಖಾ ಅವರ ಮೊದಲ ಗೆಳತಿ- ಪತ್ನಿ. ಮದುವೆಗೆ ಮುಂಚೆ ಒಡನಾಡಲು ಏಳು ತಿಂಗಳಿದ್ದರೂ ಕರೆದಾಗಲೆÇÉಾ ಕೆಲಸದ ನೆಪ ಒಡ್ಡಿ¨ªಾಳೆ. ಮದುವೆಯ ಮೊದಲ ರಾತ್ರಿ ರಜಿತ್‌ ಅವಳನ್ನು ಮುಟ್ಟಲು, ಚೀರಿ ಗಲಾಟೆ ಮಾಡಿ, ಪ್ರಾಣಿಯಂತೆ ಆಡಬೇಡಿ ಎಂದು ಬಯ್ದು, ಶಾರೀರಿಕ ಸಂಪರ್ಕ ಈಗಲೇ ಬೇಡವೆಂದುಬಿಟ್ಟಿದ್ದಳು. ಮೊದಲು ಮನಸ್ಸು ಹೊಂದಿಕೊಳ್ಳಬೇಕು ಎಂಬ ಚಿಂತನೆಗೆ ಅವರೂ ಒಪ್ಪಿಕೊಂಡು ಮಾತಾಡಲು ಶುರುಮಾಡಿದಾಗ ನಿದ್ರೆ ನೆಪ. ಅವಳಿಗೆ ಬಹಳ ಅಹಂಕಾರವಿದೆಯೆಂದು ಕೊನೆಗೆ ರಜಿತ್‌ ವಿಚ್ಛೇದನಕ್ಕೂ ರೆಡಿಯಾಗಿದ್ದರು.

  ರೇಖಾಳಲ್ಲಿ ತಪ್ಪಿತಸ್ಥ ಭಾವನೆಯಿತ್ತು. ರಜಿತ್‌ ಅವರಿಗೆ ಮೋಸಮಾಡಿದ್ದೇನೆಂದು ಬಹಳ ಅತ್ತುಬಿಟ್ಟಳು. ಬುದ್ಧಿವಂತೆಯಾದರೂ ಸ್ನೇಹಿತನಿಂದ ಮೋಸ ಹೋದೆನಲ್ಲಾ ಎಂಬ ಪೆದ್ದುತನದ ಛಾಯೆ ವ್ಯಕ್ತಿತ್ವದಲ್ಲಿ ಮನೆಮಾಡಿತ್ತು. ಇಬ್ಬರ ಕೋಪವನ್ನೂ ಇಳಿಸಿದೆ. ಆಡಿದ ಮಾತಿಗೆÇÉಾ ತಿರುಗೇಟು ಕೊಡುವ ರೇಖಾಳ ಚಟವನ್ನು ಕಡಿಮೆ ಮಾಡಿಸಿ, ಡ್ಯಾನ್ಸ್ ತರಗತಿಗೆ ಸೇರಲು ಇಬ್ಬರನ್ನೂ ಪ್ರೇರೇಪಿಸಿದೆ. ಚಾರಣ ಮಾಡಲು ಕೆಲವು ಐಡಿಯಾ ಕೊಟ್ಟೆ. ಉಚಿತ ನೇತ್ರ ಶಿಬಿರದಲ್ಲಿ ಒಟ್ಟಿಗೇ ಕಾರ್ಯಕರ್ತರಾಗಿ ಕೆಲಸ ಮಾಡಿದರು. ಸಾಮಾಜಿಕ ನೆಲೆಗಟ್ಟಿನಲ್ಲಿ ಒಬ್ಬರನ್ನೊಬ್ಬರು ಅರಿತು ತೃಪ್ತರಾಗಿ ಹನಿಮೂನ್‌ ನಡೆಯಿತು. ತಿಂಗಳಿಗೊಮ್ಮೆ ಇಬ್ಬರ ಅಮ್ಮಂದಿರೂ ಇವರೊಟ್ಟಿಗೆ ಬಂದಿರಲು ಸಲಹೆ ನೀಡಿದೆ. ಅಮ್ಮಂದಿರು ಹೊಂದಿಕೊಂಡರೆ ಮನೆಯಲ್ಲಿ ಮಾನಸಿಕ ನೆಮ್ಮದಿ ನೆಲೆಸುತ್ತದೆ. ನಾಲ್ವರಲ್ಲೂ ಗೆಳೆತನ ಮೂಡಿತು. ಮನೆ- ಮನ ಸ್ವತ್ಛವಾಯಿತು.

  ಹಳೆಯ ಸಹವಾಸ- ಸ್ನೇಹ- ಸಂಬಂಧದ ಭೂತವನ್ನು ಮದುವೆಗೆ ಮುಂಚೆ ಬಿಡಿಸಿಕೊಳ್ಳಿ. 

ಶುಭಾ ಮಧುಸೂದನ್‌

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.