ಮೆಲುದನಿಯ ಗಾಯಕ


Team Udayavani, Oct 20, 2018, 3:04 PM IST

325.jpg

ರಾತ್ರಿ ವೇಳೆಯೇ ಹೆಚ್ಚಾಗಿ ಸಂಚರಿಸುವ ಹಕ್ಕಿಯಿದು. ಸಾಮಾನ್ಯವಾಗಿ, ಕಾಂಡ್ಲಾ ಹುಲ್ಲಿನ ಅಥವಾ ಜೊಂಡು ಹುಲ್ಲಿನ ಪೊದೆಯಲ್ಲಿ ಅಡಗಿಕೊಂಡಿರುತ್ತದೆ. ಕಾವು ಕೊಡುವ ಸಂದರ್ಭದಲ್ಲಿ ಮೆಲುದನಿಯಲ್ಲಿ ಹಾಡುವುದು ಇದರ ವಿಶೇಷ…
 
Black bittern (Dupetor flavicollis  (Latham) R, RM -Indian Pond heron+, Village hen

ಕಪ್ಪು ಜವಳು ಹಕ್ಕಿ, ಕರಿ ಗಜನಿ ಹಕ್ಕಿ, ಕರಿ ಗುಪ್ಪಿ, ಕಪ್ಪು ಗೂನು ಹಕ್ಕಿ- ಹೀಗೆ ವಿವಿಧ ಹೆಸರಿನಿಂದ ಈ ನೀರು ಹಕ್ಕಿಯನ್ನು ಕರೆಯುತ್ತಾರೆ. ಇದು 58 ಸೆಂ.ಮೀ ಉದ್ದ ಇರುವ ಕೊಕ್ಕರೆಗುಪ್ಪಿ. ಬೆನ್ನು ಬಗ್ಗಿಸಿ, ಕುತ್ತಿಗೆಯನ್ನು ಕುಗ್ಗಿಸಿ ಮುದುಡಿ ಕುಳಿತುಕೊಳ್ಳುವುದರಿಂದ ಇದನ್ನು “ಗುಪ್ಪಿ’ ಎಂದೂ ಕರೆಯಲಾಗಿದೆ.

  ಇದು ಹುಲ್ಲು ಜೊಂಡು, ಇಲ್ಲವೇ ಚಿಕ್ಕ ಜಲಸಸ್ಯಗಳ ಪೊದೆಯಲ್ಲಿ ಅಡಗಿರುತ್ತದೆ. ಇಂಗ್ಲಿಷ್‌ನಲ್ಲಿ ಇದನ್ನು “ಬಿಟರಿನ್‌’ ಎಂದು ಕರೆಯುವುದುಂಟು. ಈ ಕುಟುಂಬಕ್ಕೆ ಸೇರಿದ ಇನ್ನೂ ಮೂರು ವಿಧದ ಹಕ್ಕಿಗಳಿವೆ.
  ಈ ಹಕ್ಕಿಗಳೆಲ್ಲಾ ಆಳವಿಲ್ಲದ ಜಲ ಪ್ರದೇಶದಲ್ಲಿ- ಅಂದರೆ, ನದಿ ತೀರ, ಗಜನಿ ಪ್ರದೇಶ- ಉಪ್ಪು ಬೆಳೆಯುವ, ಉಪ್ಪು ನೀರು ತುಂಬುವ, ತೇಲುವ ಜಲ ಪ್ರದೇಶಗಳಲ್ಲಿ ಓಡಾಡಿಕೊಂಡು- ಕಪ್ಪೆ, ಮೀನು, ಸೀಗಡಿ, ರೆಕ್ಕೆ ಹುಳ, ಮಿಡತೆ, ಬಸವನ ಹುಳು, ಕಪ್ಪೆಚಿಪ್ಪಿನ ಮಾಂಸ ತಿನ್ನುತ್ತವೆ. ಹಸಿರು ಗುಪ್ಪಿ, ಕೆಸರು ಗುಪ್ಪಿ, ರಾತ್ರಿ ಗುಪ್ಪಿ, ಹಳದಿ ಗುಪ್ಪಿ ಎಂದು ಈ ಹಕ್ಕಿಗಳನ್ನು ಬಣ್ಣ ವ್ಯತ್ಯಾಸದಿಂದ ಗುರುತಿಸಲಾಗುತ್ತದೆ. ಇದು ಹಗಲಿನಲ್ಲಿ ಸಂಚರಿಸುವುದು ಕಡಿಮೆ. ರಾತ್ರಿ ವೇಳೆ ಇದರ ಸಂಚಾರ ಅಧಿಕ.

  ಈ ಹಕ್ಕಿ ಸದಾ ಏಕಾಂಗಿಯಾಗಿರುತ್ತದೆ. ಇತರ ಗುಪ್ಪಿಗಳಂತೆ ಇದೂ ಕಾಂಡ್ಲಾ ಗಿಡಗಳ ಪೊದೆ ಇಲ್ಲವೇ ಜೊಂಡು ಹುಲ್ಲಿನ ಪೊದೆಗಳ ನಡುವೆ ಅಡಗಿಕೊಂಡಿರುತ್ತದೆ. ಏಕಾಗ್ರತೆಯಿಂದ ಕಾದು ಕುಳಿತು, ಬಳಿ ಬಂದ ಬೇಟೆಯನ್ನು ಚಕ್ಕನೆ ಹಿಡಿದು ತಿನ್ನುತ್ತವೆ. ಹೆಣ್ಣು ಹಕ್ಕಿ, ಗಂಡಿಗಿಂತ ಹೆಚ್ಚು ಬೆಳ್ಳಗಿರುತ್ತದೆ. ಇದರ ಕಾಲು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಉದ್ದನೆಯ ಕಾಲುಗಳನ್ನು ಹೊಂದಿರುವುದರಿಂದ, ನೀರಿನಲ್ಲಿರುವ ಹುಳು, ಮೀನುಗಳನ್ನು ಬೇಟೆಯಾಡಲು ಅನುಕೂಲಕರ. ಹೆಣ್ಣು ಹಕ್ಕಿಯ ಹೊಟ್ಟೆ ಭಾಗದಲ್ಲಿ ದಟ್ಟ ತಿಳಿಹಳದಿ ಬಣ್ಣ ಇದೆ.

  ಕಾವು ಕೊಡುವ ಸಮಯದಲ್ಲಿ ಇದರ ಹಾಡು ಮಂದ್ರವಾಗಿರುತ್ತದೆ. ಕೆಲವೊಮ್ಮೆ “ವೂØ ಉ-ಉ-ಉ-ಊ’ ಎಂದೂ ಕೂಗುವುದು. ಸಂಗಾತಿಯನ್ನು ಕರೆಯಲು ಮತ್ತು ಓಲೈಸಲು ಹಾಗೂ ತನ್ನ ಇರುನೆಲೆ ಇದೇ ಎಂದು ಘೋಷಿಸಲು, ತನ್ನ ವೈರಿಗಳು ಬಂದಾಗ ವೈವಿಧ್ಯಮಯವಾಗಿ ಕೂಗಿ, ಮುನ್ಸೂಚನೆ ನೀಡುತ್ತದೆ. ಜೊಂಡು ಹುಲ್ಲು ಮತ್ತು ತೇಲು ಜಲಸಸ್ಯ ಇರುವ ಜಾಗ, ಇದರ ಗೂಡಿಗೆ ಒಳ್ಳೆಯ ಸ್ಥಳ.

  ಮೊದಲು ಕಾಂಡ್ಲಾ ಅಥವಾ ಇತರ ಗಿಡಗಳ ಕೋಲನ್ನು ಸೇರಿಸಿ ಅಟ್ಟಣಿಗೆ ಕಟ್ಟುತ್ತದೆ. ಅದರ ಮೇಲೆ ಜಲಸಸ್ಯಗಳ ಎಲೆ, ಇಲ್ಲವೇ ಜೊಂಡು ಹುಲ್ಲು ಹಾಕಿ, ಅದರ ಮಧ್ಯದಲ್ಲಿ ಮೆತ್ತನೆ ಹಾಸನ್ನು ಎಲೆ ಮತ್ತು ಹುಲ್ಲಿನಿಂದ ನಿರ್ಮಿಸುತ್ತದೆ. ಹಾಸಿಗೆಯಂಥ ಈ ಜಾಗದಲ್ಲಿ ಐದು ಮೊಟ್ಟೆಗಳನ್ನು ಇಡುತ್ತದೆ. ಗಂಡು ಹೆಣ್ಣು ಸೇರಿ ಕಾವು ಕೊಡುತ್ತವೆ.

ಪಿ.ವಿ.ಭಟ್‌ ಮೂರೂರು

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.