ದೇವರನ್ನೇ ನಂಬದವನು, ಕಷ್ಟವಿಲ್ಲದೇ ಬಾಳಲು ಹೇಗೆ ಸಾಧ್ಯ?


Team Udayavani, Feb 2, 2019, 12:30 AM IST

101.jpg

ಆಸ್ತಿಕತೆ ಎಂಬುದು ಕೇವಲ ದೇವರನ್ನು ನಂಬುವುದು ಎಂಬುದಕ್ಕೆ ಸೀಮಿತವಾದುದಲ್ಲ. ನಮ್ಮ ಮನಸ್ಸಿನ ನಿಗ್ರಹ ಮತ್ತು ಸದ್ವಿನಿಯೋಗ ಮಾಡುವುದು ಮುಖ್ಯವಾಗಿ ಆಸ್ತಿಕತೆ. ಅಂದರೆ ಧನಾತ್ಮಕವಾಗಿ, ನಿರಂತರವಾಗಿ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು, ಮನಸ್ಸು ಸಂಸ್ಕಾರಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು.

ಪರಮ ನಾಸ್ತಿಕನೊಬ್ಬ ದೇವರನ್ನು ಭಜಿಸದೆ, ಪೂಜಿಸದೇ ಇದ್ದರೂ ಆತ ಮತ್ತು ಆತನ ಕುಟುಂಬ ಯಾವುದೇ ಸಮಸ್ಯೆಯಿಲ್ಲದೆ ಬದುಕುತ್ತಿದೆ. ಅಂದರೆ ಆಸ್ತಿಕರಿಗೆ ಮಾತ್ರ ಕಷ್ಟ ಕಾರ್ಪಣ್ಯಗಳೇ? ಹೀಗೇಕೆ? ಎಂಬುದು ಕೆಲವರ ಪ್ರಶ್ನೆ. ಆದರೆ ಇÇÉೊಂದು ನಾವು ಅರಿಯದ ಸತ್ಯವಿದೆ. ನಾಸ್ತಿಕ ದೇವರನ್ನು ನಂಬುವುದಿಲ್ಲವೆನ್ನುತ್ತಲೇ, ಅವನಿಗೆ ಅರಿವಿಲ್ಲದೇ ದೇವರನ್ನು ಪೂಜಿಸುತ್ತಾನೆ…

ಆಸ್ತಿಕತೆ ಎಂದರೇನು? ಎಂದು ಕೇಳಿದಾಕ್ಷಣ ಹೊಳೆಯುವ ಉತ್ತರ: ದೇವರನ್ನು ನಂಬುವುದು, ಪೂಜಿಸುವುದು ಮತ್ತು ಭಜಿಸುವುದು ಇತ್ಯಾದಿ. ದೇವರನ್ನು ನಂಬದೇ ಇರುವುದೇ ನಾಸ್ತಿಕತೆ ಎಂಬ ಸರಳವಾದ ತಿಳುವಳಿಕೆ ಎಲ್ಲರಲ್ಲಿಯೂ ಇದೆ. ಆದರೆ, ಆಸ್ತಿಕತೆ ಎಂಬುದು ಕೇವಲ ದೇವರನ್ನು ನಂಬುವುದು ಎಂಬುದಕ್ಕೆ ಸೀಮಿತವಾದುದಲ್ಲ. ನಮ್ಮ ಮನಸ್ಸಿನ ನಿಗ್ರಹ ಮತ್ತು ಸದ್ವಿನಿಯೋಗ ಮಾಡುವುದು ಮುಖ್ಯವಾಗಿ ಆಸ್ತಿಕತೆ. ಅಂದರೆ ಧನಾತ್ಮಕವಾಗಿ, ನಿರಂತರವಾಗಿ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು, ಮನಸ್ಸು ಸಂಸ್ಕಾರಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ದೇವರು ಮೆಚ್ಚುವುದು ಶುದ್ಧ ಮನಸ್ಸನ್ನು. ಅದನ್ನು ಸಾಧಿಸುವ ರೀತಿ ಹೇಗೇ ಇರಲಿ, ಸನ್ಮಾರ್ಗದಲ್ಲಿದ್ದರೆ ಸಾಕು. ದೇವರ ಅಭಯ ಅವನ ಜೊತೆಗಿದ್ದೇ ಇರುತ್ತದೆ.

ಮನಸ್ಸನ್ನು ನಿಗ್ರಹಿಸುವುದೇ ದೇವರನ್ನು ಕಾಣಲು ಇರುವ ಸುಲಭ ಮಾರ್ಗ. ಪರಮನಾಸ್ತಿಕನೊಬ್ಬನಿಗೆ ತನ್ನೂರಿನಲ್ಲಿರುವ ಅರಳೀಕಟ್ಟೆಗೆ ಜನರೆಲ್ಲ ಮುಗಿಬಿದ್ದು ಪೂಜಿಸುವುದನ್ನು ಕಂಡು ಕೋಪ ಬರುತ್ತಿತ್ತು. ಹಾಗಾಗಿ ಆತ, ಯಾರೂ ಇಲ್ಲದಾಗ ಆ ಮರವನ್ನು ಕಡಿದು ಮುಗಿಸಬೇಕೆಂದು ನಿರ್ಧರಿಸಿದ. ಪ್ರತಿಗಳಿಗೆಯೂ ಆ ಬಗ್ಗೆ ಯೋಚನೆ-ಯೋಜನೆಯನ್ನು ಹಾಕುತ್ತಾ ಕಾಲ ಕಳೆಯತೊಡಗಿದ. ಅದನ್ನೇ ಚಿಂತಿಸುತ್ತ ಅವನ ಮನಸ್ಸು ಏಕಾಗ್ರತೆಯತ್ತ ಸಾಗುತ್ತ ಶುದ್ಧವಾಗುತ್ತ ಹೋಯಿತು. ಕೊನೆಯ ತನಕವೂ ಅವನಿಗೆ ಆ ಮರವನ್ನು ಕಡಿಯಲಾಗಲಿಲ್ಲ. ಆದರೆ ಅದರ ಬಗೆಗೆ ಚಿತ್ತವನ್ನಿಟ್ಟದ್ದ ಆತನ ಮನಸ್ಸು ಕೆಟ್ಟಕಾರ್ಯಗಳಿಗೆ ಮುಂದಾಗಲಿಲ್ಲ. ಅಂದರೆ, ಅವನಿಗರಿವಿಲ್ಲದೆಯೇ ಆತ ಆಸ್ತಿಕನಾಗಿದ್ದ. ಅಂದರೆ ಮನಸ್ಸು ಅಲ್ಲಿ ಕೇಂದ್ರೀಕೃತವಾಗಿದ್ದರಿಂದ ಕೆಟ್ಟಯೋಚನೆಗಳು ಬಾರದೆ ಸನ್ಮಾರ್ಗದಲ್ಲಿಯೇ ಬದುಕಿದ.

ಆದ್ದರಿಂದ ಆತ ನಾಸ್ತಿಕನಾಗಿದ್ದರೂ ಸುಖಜೀವನ ನಡೆಸಿದ್ದ. ಇದು, ಉದಾಹರಣೆಗೆ ಹೆಣೆದ ಕತೆ. ಆದರೆ ಸತ್ಯವೂ ಅದೇ. ನಾಸ್ತಿಕ ಎನಿಸಿಕೊಂಡವನು ದೇವರಿಲ್ಲ..ದೇವರಿಲ್ಲ ಎನ್ನುತ್ತಲೇ ಅದರ ಪ್ರತಿಪಾದನೆಯಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸಿದುದರಿಂದ ಪಂಚೇಂದ್ರಿಯಗಳೂ, ಆಮೂಲಕ ಕರ್ಮೇಂದ್ರಿಯಗಳೂ ವಿಚಲಿತವಾಗದೇ ಸನ್ಮಾರ್ಗದಲ್ಲಿಯೇ ನಡೆದುದರಿಂದ ಆತ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಹಾಗಾಗಿ, ನನ್ನ ಪ್ರಕಾರ ನಾಸ್ತಿಕತೆ ಎಂಬುದೂ ಆಸ್ತಿಕತೆಯೇ. ಆಸ್ತಿಕತೆಯ ಮೂಲಸ್ವರೂಪ ಏಕಾಗ್ರತೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ದೇಹವನ್ನು ನಿಯಂತ್ರಿಸುವುದೇ ಆಸ್ತಿಕತೆ. ಇದನ್ನೇ ಸರಳ ಮತ್ತು ಸುಲಭವಾಗಿ ದೇವರ ಬಗೆಗೆ ನಂಬಿಕೆ ಎಂದು ಹೇಳಿಕೊಳ್ಳುತ್ತೇವೆ. ಕಿಟಕಿಯ ಮೂಲಕ ಕಸವನ್ನೋ ಸಣ್ಣ ಕಲ್ಲನ್ನೋ ಬಿಸಾಡುವಾಗ ಅದು ಹೆಚ್ಚಾಗಿ ಆ ಕಿಟಕಿಯ ಸರಳಿಗೇ ತಾಗುವುದನ್ನು ನಾವು ಗಮನಿಸಿರುತ್ತೇವೆ. ಏಕೆಂದರೆ, ನಾವು ಹೊರಗೆ ಬಿಸಾಡುವ ತವಕದಲ್ಲಿ ಮನಸ್ಸನ್ನು ನಮಗರಿವಿಲ್ಲದೇ ಸರಳಿನ ಮೇಲೆ ಕೇಂದ್ರೀಕರಿಸಿರುತ್ತೇವೆ. ಹಾಗಾಗಿ ಆ ಕಲ್ಲು ನೇರವಾಗಿ ಸರಳನ್ನು ತಟ್ಟುತ್ತದೆ.

ನಾಸ್ತಿಕತೆಯೂ ಹೀಗೆಯೇ. ಇಲ್ಲವೆನ್ನುತ್ತ ಮನವನ್ನು ಕೇಂದ್ರೀಕರಿಸಿದರೂ ದೇವರ ಸಾûಾತ್ಕಾರವಾಗಿಯೇ ಆಗುತ್ತದೆ. ಏಕಾಗ್ರತೆಯ ಮಾರ್ಗ: ನಾಸ್ತಿಕತೆ ಎಂಬುದು ಆಸ್ತಿಕತೆಯ ಇನ್ನೊಂದು ಹೆಸರು. ಏಕಾಗ್ರತೆಗೆ ಮತ್ತೂಂದು ದಾರಿ. ಆಚಾರ ಬದಲಿರಬಹುದು. ಮಾರ್ಗ ಬೇರೆಯದ್ದೇ ಇರಬಹುದು. ಚಿತ್ತಶುದ್ಧಿಗೆ ದಾರಿ ಸಾವಿರಾರು.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.