ಮುಟ್ಟಿದರೆ ಮುನಿಯುವಳು…


Team Udayavani, Feb 6, 2019, 12:30 AM IST

s-3.jpg

ಈ ಮದುವೆಯಲ್ಲಿ ಇರಲು ಸಾಧ್ಯವೇ ಇಲ್ಲವೆಂದು ಗಂಡ ಸಮೀರ್‌ (30) ಹಠಾತ್‌ ಆಗಿ ಮನೆ ಬಿಟ್ಟು ಬಿಟ್ಟು ಹೋಗಿರುವುದು ಲಲಿತಾಳಲ್ಲಿ ಆತಂಕ ಮೂಡಿಸಿದೆ. ಮದುವೆಯಾಗಿ ಇನ್ನೇನು ವರ್ಷವಾಗುತ್ತಾ ಬಂದರೂ, ಲಲಿತಾಗೆ (27) ಗಂಡನ ಸಾಮೀಪ್ಯವೇ ಹಿತವಾಗಿಲ್ಲ. ಮುಟ್ಟಕ್ಕೂ ಬಿಡದೇ ಕಾಡುತ್ತಾಳೆ. ಅವನಿಗೆ ಬೇರೆ ದಂಪತಿಯನ್ನು ನೋಡಿದಾಗ ಹೊಟ್ಟೆಕಿಚ್ಚು. ಸಾರ್ವಜನಿಕ ಸ್ಥಳದಲ್ಲಿ ಕೈ ಹಿಡಿದುಕೊಂಡರೆ ಮಿಸುಕಾಡುತ್ತಾಳೆ. ರಾತ್ರಿಯ ಹೊತ್ತು ಇವನೇನು ರೇಪ್‌ ಮಾಡಬಹುದು ಅನ್ನುವ ರೀತಿ, ಕೋಣೆಯ ಮೂಲೆಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು, ಗಡಗಡಾಂತ ನಡುಗಿದ್ದಾಳೆ. ಇವನಿಗೆ ಅವಳಿಂದ ತಿರಸ್ಕೃತನಾದಂತೆ ಅನಿಸುತ್ತದೆ. ಗಂಡನ ಸಂಕಷ್ಟ ಅರ್ಥವಾಗಿ, ಸಾಕಷ್ಟು ಪ್ರಯತ್ನ ಮಾಡಿದ್ದರೂ, ಇಬ್ಬರೂ ಸುಖೀಯಾಗಿಲ್ಲ.

ಮದುವೆ ನಿಶ್ಚಯವಾದ ಕೆಲವು ವಾರಗಳಲ್ಲಿ ಗಂಡು- ಹೆಣ್ಣು ಸರಸದಿಂದ ಮಾತನಾಡುತ್ತಾ ಹನಿಮೂನ್‌ ಬಗ್ಗೆ ಒಟ್ಟಿಗೆ ಕನಸು ಕಾಣುವುದು ಸಹಜ. ಆದರೆ, ಲಲಿತಾ ಅವನನ್ನು ಬಯ್ದಿದ್ದಾಳೆ. ಅವಳಿಗೆ ಆ ಚರ್ಚೆಯೆಲ್ಲಾ ಅಸಹ್ಯವಂತೆ!! ಇವಳು ಮಾಡಿದ ರಂಪಾಟಕ್ಕೆ ಹೆದರಿ, ಮಾವನವರಿಗೆ ಫೋನ್‌ ಮಾಡಿ, ಲಲಿತಾಗೆ ಮದುವೆ ಇಷ್ಟವಿಲ್ಲದಿದ್ದರೆ ತಿಳಿಸಿ ಎಂದು ಅವಲತ್ತುಕೊಂಡಿದ್ದ. ಸ್ವಲ್ಪ ನಾಚಿಕೆ ಇರಬಹುದು ಎಂದು ಮಾವ, ಸಮಾಧಾನ ಮಾಡಿದ್ದರು. ಲಲಿತಾ ಕಾನೂನು ಪದವೀಧರೆ, ಕೆಲಸದಲ್ಲಿದ್ದಾಳೆ. ನೋಡಲು ಮುದ್ದಾಗಿದ್ದಾಳೆ. ಮಾವನ ಮಾತಿಗೆ ಒಪ್ಪಿಕೊಂಡು ಸಮೀರ್‌ ಮುಂದುವರಿದ.

ಕೆಲವು ಹೆಣ್ಣುಮಕ್ಕಳಿಗೆ ಸೆಕ್ಸ್‌ ಬಗ್ಗೆ ಒಂದು ಮಟ್ಟದ ಮಡಿವಂತಿಕೆ ಸಹಜ. ಸತಿ- ಪತಿಗಳ ನಡುವೆ ಸರಸ ಸಲ್ಲಾಪವೇ ಇರದ, ಅಸಹಜ ಭಯಕ್ಕೆ ಚಿಕಿತ್ಸೆಯ ಅಗತ್ಯವಿದೆ. ಮೊದಲು ಸಮೀರನ ಮನಸ್ಸನ್ನು ಸಮಾಧಾನಕ್ಕೆ ತರಲು ನನ್ನ ಬಳಿ ಪ್ರತಿಯೊಂದು ಘಟನೆಯನ್ನೂ ವಿವರಿಸಿ ಹೇಳಿಕೊಳ್ಳಲು ಅನುವು ಮಾಡಿಕೊಟ್ಟೆ. ಇದನ್ನು venting out ಎನ್ನುತ್ತಾರೆ. ಈ ಮಧ್ಯ, ಲಲಿತಾ ಪ್ರಸೂತಿ ತಜ್ಞರ ಬಳಿ ಸಲಹೆಗೆ ಹೋದಳು. ಹಲವಾರು ಪರೀಕ್ಷೆ ಮಾಡಲಾಯಿತು. ನಂತರ sexologist ಬಳಿ ಇಬ್ಬರನ್ನೂ, ಸಲಹೆಗಾಗಿ ಕಳಿಸಿದೆ. ಲೈಂಗಿಕ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಕಲ್ಪನೆಯೂ ಇರದೇ, ಗಂಡನಿಗೆ ಎಷ್ಟು ನೋವಾಗಬಹುದೆಂದು ಕೌನ್ಸೆಲಿಂಗ್‌ ಮೂಲಕ ತಿಳಿದುಕೊಂಡಳು. ಸಂಬಂಧ ಸುಧಾರಿಸಿತು.

ಹುಡುಗಿಗೆ ಎದೆ ಕಡಿಮೆ ಇದ್ದಲ್ಲಿ, ತನ್ನ ದೈಹಿಕ ಆಕರ್ಷಣೆಯ ಬಗ್ಗೆ ಹೀನಭಾವವಿರಬಹುದು; ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಕಿರುಕುಳವಾಗಿರಬಹುದು; ತಂದೆ, ಮಗಳ ಬಗ್ಗೆ ಉತ್ಕಟ ಪ್ರೇಮ ಮತ್ತು ಕಾಳಜಿ ಹೊಂದಿದ್ದು, ತಾಯಿ- ಮಗಳ ಸಂಬಂಧ ಜಾಳು ಜಾಳಗಿದ್ದಲ್ಲಿ, ತಂದೆ- ತಾಯಿ ಸದಾ ಜಗಳವಾಡುತ್ತಿದ್ದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಉದ್ವಿಗ್ನತೆ ಇದ್ದಲ್ಲಿ, ಹೆಣ್ಣು ಗಂಡಿನ ಪಾಲಿಗೆ ಗಗನಕುಸುಮ ಆಗುತ್ತಾಳೆ. ಸರಿಯಾಗಿ ಗುರುತಿಸಿ, ಚಿಕಿತ್ಸೆ ನೀಡಬಹುದು.

ಹೆಣ್ಣು ಮಕ್ಕಳು ಚಿಕ್ಕವರಿರುವಾಗ ಪರೀಕ್ಷಾಭಯ ಹೊಂದಿದ್ದರೆ; ಟೀವಿ ನೋಡುವಾಗ ಪ್ರೇಮಗೀತೆಗಳ ಬಗ್ಗೆ ಅತೀ ನಾಚಿಕೆ ಹೊಂದಿದ್ದರೆ; ಕಾರಣವಿಲ್ಲದೆ ಅಳುತ್ತಿದ್ದರೆ; ಹಟಮಾರಿಗಳಗಿದ್ದರೆ ಮತ್ತು ಕೀಳರಿಮೆ ಇದ್ದಲ್ಲಿ ಒಮ್ಮೆ ಕೌನ್ಸೆಲಿಂಗ್‌ ಕೊಡಿಸಿ. ದೈಹಿಕ ವ್ಯಾಯಾಮವೂ ಅತ್ಯಗತ್ಯ.

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.