ಶಾಸ್ತ್ರದ ಶಿಸ್ತಿನಲ್ಲೊಂದು ಭಾವೋತ್ಕರ್ಷದ ಅನ್ವೇಷಣೆ


Team Udayavani, Mar 8, 2019, 12:30 AM IST

q-5.jpg

ಮಾತು ಮತ್ತು ಧಾತು ಸಮಪಾಕದಲ್ಲಿ ಮೇಳೈಸಿದಾಗ ಮಾತ್ರ ಸಂಗೀತದಲ್ಲಿ ರಸಾನುಭಾವ ಪರಾಕಾಷ್ಠೆಯನ್ನು ತಲುಪುತ್ತದೆ ಎಂಬುದನ್ನು ಪಟ್ಟಾಭಿರಾಮ ಪಂಡಿತರ ಕಛೇರಿ ಶ್ರುತಪಡಿಸಿತು. 34ನೇ ಆಲಂಪಾಡಿ ವೆಂಕಟೇಶ ಶಾನುಭಾಗ ಸ್ಮಾರಕ ಸಂಗೀತೋತ್ಸವದಲ್ಲಿ ಪ್ರಧಾನ ಕಛೇರಿ ನೀಡಿದ ಅವರು ಮಾತು – ಧಾತುಗಳನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಂಡು ಕೇಳುಗರ ಮನಸ್ಸಿನಲ್ಲಿ ಗಾಢವಾದ ಪರಿಣಾಮವನ್ನುಂಟು ಮಾಡಲು ಶಕ್ತರಾದರು. ಪರಸ್ಪರ ಸ್ಪರ್ಧಾತ್ಮಕವಾಗಿ ಮೂಡಿಬಂದು ರಂಜಿಸಿದ ಹಿಮ್ಮೇಳ ಧಾತುವಿಗೆ ಜೀವಂತಿಕೆಯ ಕಳೆಯನ್ನಿತ್ತುದುದು ಕಛೇರಿಯ ಸರ್ವಾಂಗೀಣ ಯಶಸ್ಸಿಗೆ ಕಾರಣವಾಯಿತು.

ಅಖೀಲಾಂಡೇಶ್ವರಿ ರಕ್ಷಮಾಂ-ದ್ವಿಜಾವಂತಿಯ ದೀಕ್ಷಿತರ ಕೀರ್ತನೆಯೊಂದಿಗೆ ಕಛೇರಿ ಆರಂಭಿಸಿದ ಪಂಡಿತ ಶೋಭಿಲ್ಲು ಸಪ್ತಸ್ವರದಲ್ಲಿ ತೆಗೆದ ವೇಗ ಜಗನ್ಮೋಹಿನಿಯ ಭಾವಗಳನ್ನು ಪೋಷಿಸಿಕೊಳ್ಳುತ್ತಾ ಒಂದು ಗಟ್ಟಿತನವನ್ನು ನಿರ್ಮಿಸಿ ಕಛೇರಿಯ ಯಶಸ್ಸಿಗೆ ಭದ್ರ ಬುನಾದಿಯನ್ನು ನಿರ್ಮಿಸಿತು. ರವಿಚಂದ್ರಿಕೆ ಒಂದು ವಿಸ್ತಾರವಾದ ಮನೋಧರ್ಮದೊಂದಿಗೆ ಮಾಕೇಲರಾ ವಿಚಾರಮು ಕೃತಿಯಲ್ಲಿ ಪ್ರಸ್ತುತವಾಯಿತು. ಹೃಸ್ವ ಆಲಾಪನೆಯಿಂದ ಸ್ವಾತಿ ತಿರುನಾಳರ ಪದವರ್ಣ ಸುಮ ನಾಯಕ ಕಾಪಿಯಲ್ಲ ಚರಣ ಸ್ವರಗಳ ಬಳಿಕ ರಾಗಮಾಲಿಕೆಯಾಗಿ ಕಲ್ಯಾಣಿ, ಬಮಾಸ್‌, ವಸಂತ ಮೊದಲಾದ ರಾಗಗಳನ್ನು ಹಾಡಿದರು. ವಿಸ್ತಾರದ ಪ್ರಸ್ತುತಿಗೆ ಮುಂದಕ್ಕೆ ಕಾಮವರ್ಧಿನಿಯನ್ನು ಆಯ್ದುಕೊಂಡರು. ಸುಖನಾದದ ಆಲಾಪನೆ, ಭಾವಪೂರ್ಣ ನೆರವಲ್‌ ಮನೋಧರ್ಮಗಳೊಂದಿಗೆ ಆರೈಕೆಗೊಂಡ ತ್ಯಾಗರಾಜರ ವಾದೇರ ದೈವವು ಮಾನಸ ಕೃತಿ ತನ್ಮಯಗೊಳಿಸಿತು. ಬಳಿಕ ಪ್ರಧಾನ ಕೃತಿಯಾಗಿ ತ್ಯಾಗರಾಜರ ಮೋಹನರಾಮ ಮೂಡಿಬಂತು. ಆಲಾಪನೆಯಿಲ್ಲವಾದರೂ ವಿಸ್ತಾರವಾದ ಮನೋಧರ್ಮದಿಂದ ಮೋಹನದ ಎಳೆಎಳೆಯನ್ನು ಮೊಗೆದು ಕೊಟ್ಟ ಪಂಡಿತ್‌ ಗುರುಗಳಾದ ಪಾಲ್ಗಾಟ್‌ ಕೆ.ವಿ. ನಾರಾಯಣ ಸ್ವಾಮಿಯವರ ಬಾನಿಯನ್ನು ನೆನಪಿಸಿದರು. ರಾಮ ರಾಮ ರಾಮ ಸೀತಾರಾಮ (ತಿಲಾಂಗ್‌, ರೂಪಕ) ಹರಿಹರ ನಿನ್ನನ್ನು ಮೆಚ್ಚಿಸಬಹುದು (ಸಿಂಧುಭೈರವಿ, ಆದಿ) ಜಗದೋದ್ಧಾರನ (ಹಿಂದೂಸ್ತಾನಿ ಕಾಪಿ, ಆದಿ), ಪುರಂದರದಾಸರ ಕೀರ್ತನೆಗಳ ಬಳಿಕ ರಾಮನಾಥ್‌ ಶ್ರೀನಿವಾಸ ಅಯ್ಯಂಗಾರರ ಪೂರ್ಣಚಂದ್ರಿಕದ ತಿಲ್ಲಾನ ಹಾಡಿ ಎರಡೂವರೆ ತಾಸುಗಳ ಕಛೇರಿಗೆ ಮಂಗಳ ಹಾಡಿದರು.ವೇಣುಗೋಪಾಲ ಶಾನುಭಾಗ ವಯೋಲಿನ್‌ನಲ್ಲಿ ಮಿಂಚಿದರು. ಮೃದಂಗದಲ್ಲಿ ಡಾ| ಶಂಕರರಾಜ್‌, ಘಟಂನಲ್ಲಿ ಕುರುಚಿತ್ತಾನಂ ಆನಂದಕೃಷ್ಣನ್‌ ಸಹಕರಿಸಿ ಒಂದು ಸೊಗಸಾದ ತನಿ ಆವರ್ತನವನ್ನಿತ್ತರು.

ಇದರ ಮೊದಲು ನಡೆದ ಸಂಗೀತಾರಾಧನಾ ಕಾರ್ಯಕ್ರಮದಲ್ಲಿ ರಾಧಾಮುರಳೀಧರ್‌, ಡಾ| ಶೋಭಿತಾ ಸತೀಶ್‌, ಡಾ| ಇಂಚರಾ, ಪ್ರಭಾಕರ ಕುಂಜಾರು, ನಯನಾರಾಜ್‌, ಪುರುಷೋತ್ತಮ ಪುಣಿಂಚಿತ್ತಾಯ, ಗೋವಿಂದನ್‌ ನಂಬ್ಯಾರ್‌, ಬಡಗಕ್ಕರೆ ಶ್ರೀಧರ ಭಟ್‌ ಮೊದಲಾದವರು ಭಾಗವಹಿಸಿದರು. 

ಸುಕುಮಾರ ಆಲಂಪಾಡಿ

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.