ಪೆರ್ಮುದೆ: ಸಂಭ್ರಮದ ಹೋಳಿ ಆಚರಣೆ

ಪೆರ್ಮುದೆ: Permoode , ಸಂಭ್ರಮದ ಹೋಳಿ ಆಚರಣೆ, Holi Celebration -

Team Udayavani, Mar 30, 2019, 2:27 PM IST

30-March-5

ದೇವರ ಮೂರ್ತಿಯನ್ನು ವಾದ್ಯ, ಚೆಂಡೆ, ವಿವಿಧ ವೇಷಗಳೊಂದಿಗೆ ರಾಮ ಗುರಿಕಾರರ ಮನೆಗೆ ಮೆರವಣಿಗೆಯಲ್ಲಿ ತರಲಾಯಿತು.

ಕುಡುಬಿ ಜನಾಂಗದ ಸಂಸ್ಕೃತಿ, ಕಲೆ ಉಳಿಸುವ ಪರ್ವ ಬಜಪೆ : ಸಂಸ್ಕೃತಿ, ಪರಂಪರೆ, ಭಾಷೆ, ಕಲೆ ಉಳಿಸುವ ಪರ್ವ ಹೋಳಿ ಸಂಭ್ರಮವನ್ನು ಪೆರ್ಮುದೆ ಕುಡುಬಿ ಸಮಾಜದ ರಾಮಗುರಿಕಾರರ ಮನೆಯಲ್ಲಿ 9 ದಿನಗಳ ಕಾಲ ಆಚರಿಸಲಾಗುತ್ತದೆ.
ಶುಕ್ರವಾರ ಮಧ್ಯಾಹ್ನ ರಾಯಭಾರಿ ಹೊನ್ನಯ್ಯ ಗೌಡರ ಮನೆಯಿಂದ ಮಲ್ಲಿಕಾರ್ಜುನ ದೇವರ ಮೂರ್ತಿಯನ್ನು ವಾದ್ಯ, ಚೆಂಡೆ, ವಿವಿಧ ವೇಷಗಳೊಂದಿಗೆ ರಾಮ ಗುರಿಕಾರರ ಮನೆಗೆ ಮೆರವಣಿಗೆಯಲ್ಲಿ ತರಲಾಯಿತು. ಗುರಿಕಾರರ ಮನೆಯಲ್ಲಿ ಗುಮ್ಮಟೆ ಹಾಗೂ ಕೋಲಾಟ ಹಾಗೂ ವಿವಿಧ ವೇಷಗಳ ನೃತ್ಯ, ಚಿಕ್ಕ ಬಾಲಕರ ಯಕ್ಷಗಾನ ನೃತ್ಯ ಮೊದಲಾದ ವಿವಿಧ ವಿನೋಧವಾಳಿಗಳು ಶನಿವಾರ ಮುಂಜಾನೆಯ ತನಕ ನಡೆಯಲಿದೆ.
ಕೊನೆಯಲ್ಲಿ ಕುಡುಬಿ ಕೊಂಕಣಿ ಪದ್ಯದಲ್ಲಿ ಕೋಲಾಟದಲ್ಲಿಯೇ ಸೇತುಕಟ್ಟಿ ರಾವಣನ ಸಂಹಾರ ಮಾಡಿ ಸೀತೆಯನ್ನು ಕರೆದುಕೊಂಡು ಬರುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಆ ಬಳಿಕ ಎಲ್ಲರೂ ಹಾಕಿದ ಬಟ್ಟೆ ತೆಗೆದು ಬೆಂಕಿಗೆ ಹಾಕಿ ಸ್ನಾನ ಮಾಡಿ ಬರುತ್ತಾರೆ. ಇದು ಸೀತೆಯ ಪವಿತ್ರತೆಯ ಬಗ್ಗೆ ಹೇಳಲಾಗುತ್ತದೆ. ಇಲ್ಲಿಗೆ ಹೋಳಿ ಹಬ್ಬ ಸಂಪನ್ನಗೊಳ್ಳುತ್ತದೆ. ಜಿಲ್ಲೆಯಲ್ಲಿ ಮಿಜಾರು, ಎಡಪದವು, ಕೊಂಪದವು, ಮುಚ್ಚಾರು, ಬಜಪೆ, ಪೆರ್ಮುದೆ, ಎಕ್ಕಾರು, ಪುತ್ತಿಗೆ, ಕಡಂದಲೆ, ಸಿದ್ದಕಟ್ಟೆ, ಕೊಣಾಜೆ, ಕುತ್ತಾರಿನಲ್ಲಿ ಹೆಚ್ಚಾಗಿ ಕುಡುಬಿ ಸಮಾಜದವರನ್ನು ಕಾಣಬಹುದು.
ಶಿವರಾತ್ರಿ ದಿನ ಶುರುವಾಗುತ್ತದೆ ಹೋಳಿಗೆ ಪೂರ್ವ ತಯಾರಿ
ಒಂದು ವಾರ್ಡ್‌ಗೆ ಒಬ್ಬ ಗುರಿಕಾರ, ಒಬ್ಬ ರಾಯಭಾರಿ, 5 ಮಂದಿ ಮನೆತನದ ಮುಖ್ಯಸ್ಥರು ಇರುತ್ತಾರೆ. ಶಿವರಾತ್ರಿಯ ದಿನ ಗುರಿಕಾರನ ಮನೆಯಲ್ಲಿ ಈ 5 ಮಂದಿ ಸಮಾಜದ ಮನೆತನದ ಮುಖ್ಯಸ್ಥರಿಗೆ ಗುಮ್ಮಟೆಯನ್ನು ನೀಡಿ ಮಾರ್ಯಾದೆ ನೀಡಲಾಗುತ್ತದೆ. ಅದೇ ದಿನ ಹೋಳಿ ಶುರುವಾಗುತ್ತದೆ. ಅಂದಿನಿಂದ ಹುಣ್ಣಮೆ ತನಕ ಗುರಿಕಾರನ ಮನೆಯಲ್ಲಿ ಹಬ್ಬದ ಪೂರ್ವ ತಯಾರಿ ನಡೆಯುತ್ತದೆ.
ಮನೆಮನೆಯಲ್ಲಿ ಹೋಳಿ ಆಚರಣೆ
ಹುಣ್ಣಿಮೆ ದಿನದಿಂದ ಸಂಜೆಯ ವೇಳೆ ಮನೆಮನೆಗೆ ತೆರಳಿ ಗುಮ್ಮಟೆಯನ್ನು ಬಾರಿಸಿ ಹೋಳಿ ಆಚರಿಸುತ್ತಾರೆ. ಮನೆಮನೆಯಲ್ಲಿ ಇವರಿಗೆ ಬೆಲ್ಲ, ತೆಂಗಿನಕಾಯಿಯನ್ನು ಕೊಡುವ ಕ್ರಮ ಇದೆ.  ಅದೇ ದಿನ ಗುರಿಕಾರ ಮನೆಯಲ್ಲಿ ಹೋಳಿಯ ಹಬ್ಬ ಆಚರಣೆ ಬಗ್ಗೆ ದಿನ ನಿಗದಿ ಆಗುತ್ತದೆ. ಹುಣ್ಣಿಮೆಯಿಂದ ವಿವಿಧ ಕಡೆಗಳಲ್ಲಿ 3, 5, 7, 9 ಬೆಸ ಸಂಖ್ಯೆಯಲ್ಲಿ ಹೋಳಿಯ ದಿನ ಆಚರಣೆ ನಿಗದಿ ಮಾಡಲಾಗುತ್ತದೆ. ಸೀತೆ ಯನ್ನು ತಯಾರಿಯ ದ್ಯೋತಕವಾಗಿ 18 ವರ್ಷದ ಕೆಳಗಿನ ಹುಡುಗನನ್ನು ಸೀತೆಯನ್ನಾಗಿ ನೇಮಕ ಮಾಡಲಾಗುತ್ತದೆ.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.