ಕಲಹ ರಹಿತ ಬದುಕಿಗೊಂದು ಸುಂದರ ದಾರಿ!


Team Udayavani, Apr 6, 2019, 6:00 AM IST

e-3

ನನಗೆ ಯಾರ ಸಹವಾಸವೂ , ಸಹಯಾವೂ ಬೇಕಿಲ್ಲ ಎಂದು ಘೋಷಿಸಿ, ಏಕಾಂಗಿಯಾಗಿ ಹೊರಟುಬಿಡಲು ಸಾಧ್ಯವಿಲ್ಲ. ಆದರೆ ಕಲಹವಾಗುವ ಜಾಗವನ್ನು ಬಿಟ್ಟು ದೂರ ಹೋಗಬಹುದು. ಯಾವುದು ಕಲಹಕ್ಕೆ ಕಾರಣವಾಗುವುದೋ ಅಂತಹ ಸಂಗತಿಗಳನ್ನು ಅಲ್ಲಿಗೇ ಬಿಟ್ಟು ಬಿಡಬೇಕು.

ನಾನು ಇಂದಿನಿಂದ ಯಾರ ಜೊತೆಗೂ ಕಲಹ ಮಾಡುವುದಿಲ್ಲ ಅಂತ ಪ್ರತಿಜ್ಞೆ ಮಾಡಿಬಿಡುವುದು ತುಂಬಾ ಸುಲಭ. ಆದರೆ ಅದನ್ನು ಪಾಲಿಸುವುದು ಎಂದಿಗೂ ಸುಲಭವಲ್ಲ. ಮೌನದಿಂದಿರುತ್ತೇನೆ, ಆಗ ಕಲಹಕ್ಕೆ ಅವಕಾಶವೇ ಇರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೂ ಜನರ ಮಧ್ಯೆ ಮೌನವೂ ಕಲಹಕ್ಕೆ ಕಾರಣವಾಗುತ್ತದೆ. ಸಹಬಾಳ್ವೆ ಎಂಬುದು ದೇವರಿಂದಲೇ ನಿರ್ಮಿತವಾದುದು. ಪ್ರಕೃತಿಯ ನಿಯಮವೇ ಕ್ರಿಯೆ-ಪ್ರತಿಕ್ರಿಯೆಗಳನ್ನು ಪ್ರತಿಬಿಂಬಿಸುತ್ತಿರುವಾಗ ನಾವು ಮಾತನಾಡದೇ ಇದ್ದರೂ ಕೇಳಿದ್ದಕ್ಕಾದರೂ ಉತ್ತರ ಕೊಡಲೇ ಬೇಕಾಗುತ್ತದೆ. ನಾವು ಬಯಸುವುದು ಶಾಂತಿಯುತವಾದ ಬದುಕು. ಕಲಹ, ದ್ವೇಷಗಳು ಬೇಕಿಲ್ಲ. ಇವುಗಳಿಂದ ಸಾಧಿಸುವಂಥದ್ದೂ ಏನಿಲ್ಲ. ಆದರೂ ಕೂಡ ಜಗತ್ತಿನ ಅಶಾಂತಿಗೆ ಮೂಲವೇ ಈ ಕಲಹ. ಕಲಹಕ್ಕೆ ಮೂಲ ಕಾರಣ ಹೆಣ್ಣು, ಹೊನ್ನು ಮತ್ತು ಮಣ್ಣು ಎಂಬ ಮಾತಿದೆ. ಇದು ಹೊರಗಿನಿಂದಷ್ಟೇ ಸತ್ಯ. ಯಾಕೆಂದರೆ, ಕಲಹದಿಂದಲೇ ಹೆಣ್ಣನ್ನೊ ಮಣ್ಣನ್ನೋ, ಹೊನ್ನನ್ನೋ ಪಡೆದವನಿಗೂ ಕೊನೆಯಲ್ಲಿ ಇಷ್ಟಕ್ಕಾಗಿಯೇ ನಾನು ಕಲಹದಲ್ಲಿ ಕಾಲಹರಣ ಮಾಡಿದೆನಾ? ಅನ್ನಿಸುತ್ತದೆ. ಕೊನೆಗೂ ಅವನಿಗೆ ತೃಪ್ತಿಯಿಲ್ಲ. ನಿಜಕ್ಕೂ ತೃಪ್ತಿ ಯಾವುದು? ಅದೂ ಗೊತ್ತಿಲ್ಲ! ಎಲ್ಲವೂ ಕ್ಷಣಿಕವಾಗಿರುವಾಗ ಕಲಹ ಮಾತ್ರ ಶಾಶ್ವತವಾದ ಶಾಂತಿಯನ್ನು ಕೆಡಿಸಿಬಿಡುತ್ತದೆ. ಇದರಿಂದ ಹೊರಬರುವುದು ಹೇಗೆ?

ಶ್ರೀಮದ್ಭಾಗವತದ ಅವಧೂತೋಪಾಖ್ಯಾನದಲ್ಲಿ ಕಲಹವಿಲ್ಲದೆ ಬದುಕುವ ಬಗೆಯನ್ನು ಹೇಳಲಾಗಿದೆ. ಅವಧೂತರು ಇಲ್ಲೊಂದು ಕುಮಾರಿಯ ಕಥೆಯನ್ನು ಹೇಳುತ್ತಾರೆ. ಕುಮಾರಿಯೊಬ್ಬಳೇ ಮನೆಯಲ್ಲಿರುವಾಗ ಅತಿಥಿಗಳು ಬರುತ್ತಾರೆ. ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಆಕೆ ಅವರ ಭೋಜನಕ್ಕಾಗಿ ಏಕಾಂತದಲ್ಲಿ ಭತ್ತವನ್ನು ಕುಟ್ಟುತ್ತಿದ್ದಳು. ಆಗ ಅವಳ ಕೈಬಳೆಗಳು ಸದ್ದು ಮಾಡತೊಡಗಿದವು. ಈ ಶಬ್ದವನ್ನು ನಿಂದಿತವೆಂದು ಭಾವಿಸಿದ ಹುಡುಗಿ, ಎಲ್ಲಾ ಬಳೆಗಳನ್ನು ತೆಗೆದಿಟ್ಟು, ಎರಡು ಬಳೆಗಳನ್ನು ಮಾತ್ರ ಉಳಿಸಿಕೊಂಡು ಭತ್ತ ಕುಟ್ಟಲು ಆರಂಭಿಸಿದಳು. ಆ ಎರಡು ಬಳೆಗಳೂ ಶಬ್ದಮಾಡಲು ತೊಡಗಿದಾಗ ಮತ್ತೆ ಒಂದನ್ನು ತೆಗದಿಟ್ಟು ತನ್ನ ಕೆಲಸ ಮುಂದುವರಿಸುತ್ತಾಳೆ. ಆಗ ಯಾವ ಸದ್ದೂ ಉಂಟಾಗಲಿಲ್ಲ. ಇಲ್ಲೊಂದು ಪಾಠವಿದೆ. ಅನೇಕ ಜನರು ಒಂದೆಡೆ ಇದ್ದರೆ ಕಲಹ ಉಂಟಾಗುತ್ತದೆ. ಇಬ್ಬರು ಜೊತೆಯಲ್ಲಿದ್ದರೂ ವ್ಯರ್ಥವಾದ ಮಾತುಗಳು ನಡೆಯುತ್ತವೆ. ಅದಕ್ಕಾಗಿ ಆ ಹೆಣ್ಣುಮಗಳ ಒಂದೇ ಒಂದು ಬಳೆಯಂತೆ ಒಬ್ಬನೇ ಇದ್ದು ಬಿಡಬೇಕು ಎಂಬ ಪಾಠ ಈ ಕತೆಯಲ್ಲಿದೆ. ಇದನ್ನು ನಾನು ಕಲಿತೆ, ಇದು ಕಲಹ ನಿವಾರಣೆಗೆ ಸುಲಭ ಮಾರ್ಗ ಎನ್ನುತ್ತಾರೆ. ಎಷ್ಟು ಚಂದದ ಪಾಠ ನೋಡಿ. ಇದನ್ನೇ ನಮ್ಮ ಇವತ್ತಿನ ಬದುಕಿಗೆ ಅಳವಡಿಸಿ ನೋಡುವ.

ಸಂಸಾರಿ, ನಾಲ್ಕು ಜನರ ನಡುವೆಯೇ ಬದುಕ ಬೇಕಾದ ಅನಿವಾರ್ಯ ಇರುವುದರಿಂದ ನನಗೆ ಯಾರ ಸಹವಾಸವೂ , ಸಹಯಾವೂ ಬೇಕಿಲ್ಲ ಎಂದು ಘೋಷಿಸಿ, ಏಕಾಂಗಿಯಾಗಿ ಹೊರಟುಬಿಡಲು ಸಾಧ್ಯವಿಲ್ಲ. ಆದರೆ ಕಲಹವಾಗುವ ಜಾಗವನ್ನು ಬಿಟ್ಟು ದೂರ ಹೋಗಬಹುದು. ಯಾವುದು ಕಲಹಕ್ಕೆ ಕಾರಣವಾಗುವುದೋ ಅಂತಹ ಸಂಗತಿಗಳನ್ನು ಅಲ್ಲಿಗೇ ಬಿಟ್ಟು ಬಿಡಬೇಕು. ಇನ್ನೊಂದು ಒಳಾರ್ಥ ಇಲ್ಲಿದೆ. ಯಾವುದು ಸುಖಾಸುಮ್ಮನೆ ಶಬ್ದ ಅಂದರೆ ಕಲಹಕ್ಕೆ ಕಾರಣವಾಗುವುದೋ ಅವನ್ನು ಗಮನಿಸಬೇಕು. ಈ ಕಥೆಯಲ್ಲಿ ಆ ಕುಮಾರಿ ಮಾಡಿದಂತೆ. ಅಲ್ಲಿ ಭತ್ತ ಕುಟ್ಟುವ ಸದ್ದೂ ಇತ್ತು; ಬಳೆಗಳ ಶಬ್ದವೂ ಇತ್ತು. ಆದರೆ ಬಳೆಗಳು ಸದ್ದು ಅಗತ್ಯವಿಲ್ಲದ್ದು. ಅದನ್ನು ಆ ಕುಮಾರಿ ಹೇಗೆ ನಿವಾರಿಸಬೇಕೆಂಬುದನ್ನು ಅರಿತುಕೊಂಡಳು. ಅಂತೆಯೇ ಕೇವಲ ಮಾತು-ನಡೆಗಳು ಜಗಳಕ್ಕೆ ಕಾರಣವಾಗುವುದಿಲ್ಲ, ಯಾವುದು ಕಲಹಕ್ಕೆ ಕಾರಣವಾಗುವುದೋ ಅದು ಕೇವಲ ಮಾತಾಗಿ ಉಳಿದಿರುವುದಿಲ್ಲ. ಎಷ್ಟು ಅಗತ್ಯವೋ ಅಷ್ಟನ್ನೇ ಪ್ರೀತಿಯಿಂದ ಮನಕ್ಕೊಪ್ಪುವಂತೆ ಹೇಳುವ ಜಾಣ್ಮೆಯನ್ನು ಮತ್ತು ಬದುಕಿಗೆ ಎಷ್ಟು ಅಗತ್ಯವೋ ಅಷ್ಟನ್ನೇ ಹೊಂದಿಸಿಕೊಳ್ಳುವ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಲು ಈ ಪಾಠ ಮಾದರಿ. ಹೇಳುವ ಕಲೆಯೊಂದೇ ಅಲ್ಲ, ಕೇಳುವ ಕಲೆಯನ್ನೂ ಅರಿತಿರಬೇಕು; ಬದುಕು ಬಂಗಾರವಾಗಲು.

ಟಾಪ್ ನ್ಯೂಸ್

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.