ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಸಪ್ತ ಭಾಗವತರ ಯಕ್ಷ ಸಪ್ತಸ್ವರ

ಸಪ್ತ ಸ್ವರ ನೃತ್ಯವರ್ಷ ದರ್ಶನ ತಾಳಮದ್ದಲೆ ಯಕ್ಷರಂಗ ಪ್ರಯೋಗ

Team Udayavani, Jun 14, 2019, 5:00 AM IST

u-3

ಸತೀಶ್‌ ಶೆಟ್ಟಿ ಪಟ್ಲ ಭಾಗವತರು ಸ್ಥಾಪಕಾಧ್ಯಕ್ಷರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ಮಂಗಳೂರಿನ ಅಡ್ಯಾರ್‌ನಲ್ಲಿ ಜೂ. 2ರಂದು ಜರಗಿದ ಯಕ್ಷಗಾನ ಪರಂಪರೆಯ ವಿವಿಧ ಕಾರ್ಯಕ್ರಮಗಳ ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ “ಯಕ್ಷ ಸಪ್ತ ಸ್ವರ’ದಲ್ಲಿ ಏಳು ಮಂದಿ ಪ್ರಸಿದ್ಧ ಭಾಗವತರು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಭಾಗವಹಿಸಿದರು. ಈ ಮೂಲಕ ಯಕ್ಷ “ಸಪ್ತ’ಸ್ವರವನ್ನು ಅಭಿಮಾನಿಗಳಿಗೆ ಅತ್ಯಪೂರ್ವ ಅನುಭವವಾಗಿ ಹರಿಸಿದರು.

ಭಾಗವತರು: ಹೊಳ್ಳ, ಅಮ್ಮಣ್ಣಾಯ, ಪುಣಿಂಚಿತ್ತಾಯ, ಕನ್ನಡಿಕಟ್ಟೆ, ಪ್ರಸಾದ್‌ ಬಲಿಪ (ತೆಂಕು), ನಗರ, ಹಿಲ್ಲೂರು (ಬಡಗು), ಚೌಕಿಪೂಜೆ, ಅಬ್ಬರ ತಾಳದ ಬಳಿಕ ಚೆಂಡೆ ಜುಗಲ್‌ ಬಂದಿ- ಪೀಠಿಕೆ ಸ್ತ್ರೀವೇಷ, ಉದ್ಘಾಟನಾ ಸಮಾರಂಭ. ಆ ಬಳಿಕ ಬಹು ನಿರೀಕ್ಷಿತ ಯಕ್ಷ ಸಪ್ತಸ್ವರ. ಪುಷ್ಪರಾಜ್‌ ಇರಾ ಅವರ ನಿರೂಪಣೆ ಈ ಸಪ್ತಸ್ವರಕ್ಕೆ ಸಕಾಲಿಕ ಹಿನ್ನೆಲೆ ಒದಗಿಸಿತು.

ತೆಂಕುತಿಟ್ಟಿನ ಐವರು ಭಾಗವತರು ನಾಟಿರಾಗದಲ್ಲಿ ಮುದದಿಂದ ನಿನ್ನ ಕೊಂಡಾಡುವೆ- ಗಣಪತಿ ಸ್ತುತಿಯನ್ನು ಪ್ರಸ್ತುತಪಡಿಸಿದರು.

ಇಲ್ಲಿ ಭಾಗವತರ ದ್ವಂದ್ವ ಹಾಡುಗಾರಿಕೆಗಳು ಯಕ್ಷಗಾನಾಭಿಮಾನಿಗಳಿಗೆ ವಿಶೇಷ ಕೊಡುಗೆಯಂತಾಯಿತು. ಅಮ್ಮಣ್ಣಾಯರು ಪಂಚವಟಿಯ ರಾಘವ ನರಪತಿ ಸುಣು ಮಾಮ ವಚನಂ ಹಾಡಿದರೆ ಬಲಿಪ ಪ್ರಸಾದರು ಮಧ್ಯಮಾವತಿಯಲ್ಲಿ ಪ್ರಸ್ತುತಪಡಿಸಿದ ವೀರ ದಶರಥ ನೃಪತಿ ಇನಕುಲವಾರಿಧಿಗೆ ಪ್ರತಿ ಚಂದ್ರಮ ಹಾಡು ಸ್ಮರಣೀಯವಾಯಿತು. ಪುಣಿಂಚಿತ್ತಾಯ- ಕನ್ನಡಿಕಟ್ಟೆ (ತೆಂಕು) ಅವರು ದ್ವಂದ್ವ ಭಾಗವತಿಕೆಯಲ್ಲಿ ಶಶಿಪ್ರಭಾ ಪರಿಣಯದ ಮಾತನಾಡು ಮತಿವಂತ ಪ್ರೀತ ಹಾಗೂ ನಗರ. ಹಿಲ್ಲೂರು ಅವರು (ಬಡಗು) ಧರ್ಮಾಂಗದ ದಿಗ್ವಿಜಯದ ಹರುಷವಾಯಿತು ನಿನ್ನ ವಚನವು ಹಾಡಿದರು.

ಆ ಬಳಿಕ ನೃತ್ಯವರ್ಷ ದರ್ಶನ. ಕಲಾವಿದರು ಅಷ್ಟದಿಕಾ³ಲಕ ವಂದನಂ ಪರಿಕಲ್ಪನೆಯನ್ನು ಇಲ್ಲಿ ಸಾಕಾರಗೊಳಿಸಿದರು. ಪುಣಿಂಚಿತ್ತಾಯ ಮತ್ತು ಕನ್ನಡಿಕಟ್ಟೆ ಭಾಗವತರು. ಇಲ್ಲಿ ಅಷ್ಟದಿಕಾ³ಲಕರ ಸ್ವರೂಪ, ಅವರ ಕರ್ತವ್ಯ ಸ್ಥಾನ ಮುಂತಾದ ವಿವರಗಳನ್ನು ನಾಟ್ಯಸಹಿತ ರಕ್ಷಿತ್‌ ಶೆಟ್ಟಿ ಬಳಗದವರು ಪ್ರಸ್ತುತಪಡಿಸಿದರು; ಮಾರ್ನಾಡ್‌, ನೆಲ್ಯಾಡಿ, ಪ್ರಶಾಂತ್‌ ಶೆಟ್ಟಿ, ನಿಟ್ಟೆ, ಅಡ್ಕ, ಉಚ್ಚಿಲ. ನಾಟ್ಯ ಸಹಿತವಾದ ವರ್ಣನೆಯು ಉಲ್ಲೇಖನೀಯ. ವಾಸುದೇವರಂಗ ಭಟ್‌ ಅವರು ಈ ಹಾಡುಗಳನ್ನು ಸಂಸ್ಕೃತದಿಂದ ಆಯ್ಕೆ ಮಾಡಿದ್ದರು. ಯಕ್ಷ- ನಾಟ್ಯ ಸಂಗಮದ ಈ ಅಭಿವ್ಯಕ್ತಿ ಹೊಸತನದ ಯಶಸ್ವೀ ಪ್ರಯೋಗವೆನಿಸಿತು.

ಅಪರಾಹ್ನದ ನಿರೀಕ್ಷಿತ ತಾಳಮದ್ದಲೆಯ ಪ್ರಸಂಗ ಇಂದ್ರಜಿತು ಕಾಳಗ. ಸುರೇಶ್‌ ಶೆಟ್ಟಿ, ಸಿರಿಬಾಗಿಲು ಅವರ ಭಾಗವತಿಕೆ. ಬೊಳಿಂಜಡ್ಕ, ವಗೆನಾಡು ಹಿಮ್ಮೇಳ. ಕಲ್ಚಾರ್‌, ಕುಕ್ಕುವಳ್ಳಿ, ಸದಾಶಿವ ಆಳ್ವ, ಬೊಳಂತಿಮೊಗರು, ವಿಜಯಶಂಕರ ಆಳ್ವ, ಪೆರ್ಮುದೆ ಅವರು ಅರ್ಥದಾರಿಗಳು. ಭಾಸ್ಕರ ರೈ ಅವರ ರಾಮನ ಪಾತ್ರದಲ್ಲಿ ಹೇಳಿದಂತೆ: “ಇಂದ್ರಜಿತು ಸಹಿತ ರಾಕ್ಷಸರ ಮಾಯಾ ವಿದ್ಯೆಯು ತಾಮಸಿ ಪ್ರಭಾವವನ್ನಷ್ಟೇ ಹೊಂದಿದೆ. ಇದು ಶಾಶ್ವತವಲ್ಲ. ಸಾತ್ವಿಕ ತೇಜಸ್ಸಿನ ಎದುರು ಈ ಅಸುರಶಕ್ತಿಗಳು ಸೋಲಲೇಬೇಕು’. ಇದು ಪ್ರಸಂಗ ದ ಆಶಯವೂ ಹೌದು. ಬಳಿಕ ಸಭಾ ಕಾರ್ಯಕ್ರಮ- ಡಾ| ಎಂ. ಪ್ರಭಾಕರ ಜೋಷಿ ಅವರಿಗೆ ಪಟ್ಲ ಪ್ರಶಸ್ತಿ ಪ್ರದಾನ.

ನಂತರ ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ಯಕ್ಷರಂಗ ಪ್ರಯೋಗ. ದೇರಾಜೆ ಸೀತಾರಾಮಯ್ಯ ಅವರ ರಚನೆ. ಕದ್ರಿ ನವನೀತ ಶೆಟ್ಟಿ ಅವರ ರಂಗ ಪರಿಕಲ್ಪನೆ, ನಿರೂಪಣೆ. ಕುರುಕ್ಷೇತ್ರದ ಘಟನಾವಳಿಯ ಸಮಗ್ರ ಮರು ವಿಶ್ಲೇಷಣೆ ಈ ಪ್ರಸಂಗದ ವೈಶಿಷ್ಟ್ಯ. ಭಾಗವತಿಕೆ: ಹೊಸಮೂಲೆ, ಪೊಳಲಿ, ಬಳ್ಳಮಂಜ, ತಲಪಾಡಿ, ಕಡಂಬಳಿತ್ತಾಯ, ನೆಕ್ಕರೆ ಮೂಲೆ, ಕೌಶಿಕ್‌.

ಆಯೋಗದ ಮುಂದೆ: ಸೂರಿಕುಮೇರು, ವಿಟ್ಲ, ಶೆಟ್ಟಿಗಾರ್‌, ಸರಪಾಡಿ, ಉಜಿರೆ, ಉಬರಡ್ಕ, ದಿವಾಣ, ಪೆರ್ಮುದೆ, ಕಟೀಲು, ಗೋಣಿಬೀಡು, ಧರ್ಮಸ್ಥಳ, ಅಮ್ಮುಂಜೆ, ಕಾವಳಕಟ್ಟೆ, ಕನ್ನಡಿಕಟ್ಟೆ, ನಿಟ್ಟೆ, “ಆಯೋಗ’ದ ನ್ಯಾಯಮೂರ್ತಿಗಳಾಗಿ ಶಾನಾಡಿ ಅಜಿತ್‌ಕುಮಾರ್‌ ಹೆಗ್ಡೆ.
ತಾಳಮದ್ದಲೆ ಮತ್ತು ಈ ಯಕ್ಷಗಾನದಲ್ಲಿ ಸಮಕಾಲೀನ ಪ್ರಸಿದ್ಧ ಕಲಾವಿದರ ಸಂಗಮ ಉಲ್ಲೇಖನೀಯ. ಬಳಿಕ ಕೊಳತ್ತಮಜಲು ಅವರ ಸಂಯೋಜನೆಯಲ್ಲಿ ಜರಗಿದ ಹಾಸ್ಯ ಕಾರ್ಯಕ್ರಮದಲ್ಲಿ ಬಂಟ್ವಾಳ, ಕಟೀಲು, ಉಜಿರೆ, ಕಡಬ, ಕೊಡಪದವು, ಬಂಗಾಡಿ ಅವರು ರಂಜಿಸಿದರು.

– ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.