ಜಿಲ್ಲಾ ಆಸ್ಪತ್ರೆ: ರಾಷ್ಟ್ರೀಯ ಗುಣಮಟ್ಟ ಪರಿಶೋಧನೆ ಸಂಪನ್ನ

ಅತ್ಯುತ್ತಮ ಸೇವೆ ನೀಡುತ್ತಿರುವ ವೈದ್ಯರು, ಸಿಬಂದಿಗೆ ಶಾಭಾಸ್‌ಗಿರಿ

Team Udayavani, Jun 15, 2019, 5:44 AM IST

14KSDE13

ಕಾಸರಗೋಡು: ಕಾಸರಗೋಡು ಜಿಲ್ಲಾ ಆಸ್ಪತ್ರೆಯ ನಿರ್ವಹಣೆಯ ಗುಣಮಟ್ಟವನ್ನು ನಿರ್ಣಯಿ ಸಲು ಆಗಮಿಸಿದ ರಾಷ್ಟ್ರೀಯ ಗುಣಮಟ್ಟ ಪರಿಶೋಧನೆ (ನ್ಯಾಶನಲ್‌ ಕ್ವಾಲಿಟಿ ಅಶೂರೆನ್ಸ್‌ ಸಿಸ್ಟಂ) ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿ ಸಂಪನ್ನಗೊಳಿಸಿದರು.

ಪರಿಶೋಧನೆ ನಡೆಸಿದ ಕೇಂದ್ರದ ತಜ್ಞರ ತಂಡ ಆಸ್ಪತ್ರೆಯ ನಿರ್ವಹಣೆ ಗುಣಮಟ್ಟದಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಂದೇ ಒಂದು ವೈದ್ಯಕೀಯ ಕಾಲೇಜು ಇಲ್ಲದ ಕಾಸರಗೋಡು ಜಿಲ್ಲೆಯಲ್ಲಿ ಆರೋಗ್ಯ ಸಂರಕ್ಷಣೆ ರಂಗದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆಯನ್ನು ಚಿಕಿತ್ಸೆಯನ್ನು ನೀಡುತ್ತಿರುವ ವೈದ್ಯರನ್ನು, ಸಿಬಂದಿಗಳನ್ನು ಕೇಂದ್ರ ತಂಡ ಅಭಿನಂದಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ನಿಯೋಗಿಸಿದ ಡಾ|ಕಣಿಕ ಜೈನ್‌(ದೆಹಲಿ), ಡಾ|ಪ್ರದೀಪ್‌ ಕುಮಾರ್‌ ಶರ್ಮ(ಪಂಜಾಬ್‌), ಪಾ|ರಮೇಶ್‌ ಚಂದರ ಆರ್ಯ (ಹರಿಯಾಣ) ಒಳಗೊಂಡ ತಜ್ಞ ವೈದ್ಯರ ತಂಡ ಕಾಸರಗೋಡು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೋಧಿಸಿತು. ಮೂರು ದಿನಗಳಲ್ಲಿ ಸುಮಾರು 1,500 ಕ್ಕೂ ಅಧಿಕ ಜನರನ್ನು ಈ ತಂಡ ತಪಾಸಣೆ ನಡೆಸಿತು.

ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ರಾಜ್ಯದಲ್ಲೇ ಕಾಸರಗೋಡು ಜಿಲ್ಲಾ ಆಸ್ಪತ್ರೆಯನ್ನು ಮಾತ್ರವೇ ಪರಿಶೋಧನೆಗೆ ಆಯ್ಕೆ ಮಾಡಿದೆ. ಗುಣಮಟ್ಟ ಪರಿಶೋಧಿಸಿದ ತಂಡ ಈ ಆಸ್ಪತ್ರೆಯನ್ನು ಉತ್ತಮ ಆಸ್ಪತ್ರೆಯಾಗಿ ಆಯ್ಕೆ ಮಾಡಿದರೆ ಪ್ರತೀ ವರ್ಷ ಈ ಆಸ್ಪತ್ರೆಗೆ ಕೇಂದ್ರ ಸರಕಾರದಿಂದ 40 ಲಕ್ಷ. ರೂ. ಅನುದಾನ ಲಭಿಸಲಿದೆ.

ಕೇಂದ್ರ ಸರಕಾರದಿಂದ ಅನುದಾನ ಲಭಿಸಿದಲ್ಲಿ ಇನ್ನಷ್ಟು ಉತ್ತಮ ಚಿಕಿತ್ಸೆ, ಸೇವೆಯನ್ನು ನೀಡಲು ಸಾಧ್ಯವಾಗಬಹುದು.

ಉತ್ತಮ ಗುಣಮಟ್ಟದ ಆಸ್ಪತ್ರೆಗಳ ಸಾಲಿಗೆ ಈ ಆಸ್ಪತ್ರೆಯನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ ಎಂದು ಆರ್‌.ಎಂ.ಒ. ಡಾ| ರಿಜಿತ್‌ ಕೃಷ್ಣನ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ತೃಪ್ತಿ ತಂದಿದೆ
ಕೇಂದ್ರ ಸರಕಾರದಿಂದ 40 ಲಕ್ಷ ರೂ. ಅನುದಾನ ಲಭಿಸಿದಲ್ಲಿ ಆಸ್ಪತ್ರೆಯಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಚಿಕಿತ್ಸೆ ಹಾಗೂ ಸೇವೆಯನ್ನು ಕಲ್ಪಿಸಲು ಸಾಧ್ಯವಾಗ ಲಿದೆ. ಕೇಂದ್ರದ ತಂಡ ಕಳೆದ ಮೂರು ದಿನಗಳಿಂದ ನಡೆಸಿದ ಪರಿಶೋಧನೆ ಯಲ್ಲಿ ತೃಪ್ತಿ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆ ಉತ್ತಮ ಗುಣಮಟ್ಟದ ಆಸ್ಪತ್ರೆ ಎಂಬ ಯಾದಿಯಲ್ಲಿ ಸೇರ್ಪಡೆಗೊಳ್ಳಲು ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ತಂಡ ಶಿಫಾರಸು ಮಾಡಬೇಕು.
ಡಾ| ಎಸ್‌. ಸ್ಟಾ ನ್ಲಿ
ಆಸ್ಪತ್ರೆ ಸುಪರಿಂಟೆಂಡೆಂಟ್‌.

ಟಾಪ್ ನ್ಯೂಸ್

25

Bramavara: ಚೇರ್ಕಾಡಿಗೆ ಬಂದಿದ್ದ ಬೆಂಗಳೂರಿನ ಕ್ಯಾಬ್‌ ಚಾಲಕ ಸಾವು

24

Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು

22

Gurupura: ಖಾಸಗಿ ಬಸ್ಸು, ಬೈಕ್‌ ಢಿಕ್ಕಿ ,ಸವಾರ ಸ್ಥಿತಿ ಗಂಭೀರ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

ಬಿತ್ತನೆ ಬೀಜ ದರ ಏರಿಕೆ ಸರ್ಕಾರದ ಘನ ಕಾರ್ಯ: ಎಚ್‌ಡಿಕೆ ಟೀಕೆ

ಬಿತ್ತನೆ ಬೀಜ ದರ ಏರಿಕೆ ಸರ್ಕಾರದ ಘನ ಕಾರ್ಯ: ಎಚ್‌ಡಿಕೆ ಟೀಕೆ

Result; ಕೆ-ಸೆಟ್‌ ಪರೀಕ್ಷೆ ಫ‌ಲಿತಾಂಶ ಪ್ರಕಟ: 6,675 ಮಂದಿ ಅರ್ಹ

Result; ಕೆ-ಸೆಟ್‌ ಪರೀಕ್ಷೆ ಫ‌ಲಿತಾಂಶ ಪ್ರಕಟ: 6,675 ಮಂದಿ ಅರ್ಹ

21-

Crime News: ಕಾಸರಗೋಡು ವಿಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

25

Bramavara: ಚೇರ್ಕಾಡಿಗೆ ಬಂದಿದ್ದ ಬೆಂಗಳೂರಿನ ಕ್ಯಾಬ್‌ ಚಾಲಕ ಸಾವು

24

Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು

23-

Mangaluru: ರೈಲು ನಿಲ್ದಾಣದ ಬಳಿ ವೈದ್ಯರ ಮೊಬೈಲ್‌ ಕಸಿದು ಪರಾರಿ 

22

Gurupura: ಖಾಸಗಿ ಬಸ್ಸು, ಬೈಕ್‌ ಢಿಕ್ಕಿ ,ಸವಾರ ಸ್ಥಿತಿ ಗಂಭೀರ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.