ಮಮತೆಯ ಚಿತ್ರಕಲೆ

ಮರಳುಗಾಡಿನಲ್ಲಿ ಅರಳಿದ ಕಲಾಕುಸುಮ

Team Udayavani, Jul 24, 2019, 5:00 AM IST

x-5

ಮನಸ್ಸಿನ ಎಲ್ಲ ಭಾವನೆಗಳಿಗೂ ಬಣ್ಣ ನೀಡಿ, ಚಿತ್ರವಾಗಿಸಲು ಕಲಾಕಾರನಿಗೆ ಮಾತ್ರ ಸಾಧ್ಯ. ಕಲೆ, ಕೆಲವರಿಗೆ ರಕ್ತಗತವಾಗಿ ಒಲಿದರೆ, ಇನ್ನೂ ಕೆಲವರು ಅದನ್ನು ಪರಿಶ್ರಮದಿಂದ ಸಿದ್ಧಿಸಿಕೊಳ್ಳುತ್ತಾರೆ. ಹಾಗೆ, ಸಂಪೂರ್ಣ ಸಮರ್ಪಣಾ ಭಾವದಿಂದ ಕಲೆಗೆ ಶರಣಾಗಿರುವವರು ದುಬೈನ ಮಮತಾ ಕೋಟ್ಯಾನ್‌.

ಮೂಲತಃ ಮಂಗಳೂರಿನವರಾದ ಮಮತಾ, ಎಳವೆಯಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಶಾಲಾದಿನಗಳಲ್ಲಿ ಬಹುಮಾನಗಳನ್ನೂ ಗಳಿಸಿದ್ದರು. ಆದರೆ, ಹೆಚ್ಚಿನ ಮಾರ್ಗದರ್ಶನ, ತರಬೇತಿಗೆ ಪೂರಕ ವಾತಾವರಣವಿರಲಿಲ್ಲ. ಆದರೂ, ದೊಡ್ಡ ಚಿತ್ರಗಾರಳಾಗಬೇಕೆಂಬ ಮಹದಾಸೆ ಮಮತಾರ ಮನದಲ್ಲಿತ್ತು.

ಮದುವೆಯಾಗಿ ದುಬೈಗೆ ಹಾರಿದ ನಂತರ, ಮಮತಾರ ಕನಸಿಗೆ ಮತ್ತೆ ರೆಕ್ಕೆಪುಕ್ಕ ಮೂಡಿತು. ಅಲ್ಲಿನ ಮಕ್ಕಳಿಗೆ ಅವರದೇ ಶೈಲಿಯಲ್ಲಿ, ಚಿತ್ರಕಲೆ ಕಲಿಸತೊಡಗಿದರು. ಕಲಿಸುತ್ತಾ, ತಾವೂ ಕಲಿತರು. ಇವರ ಕಲಾ ನೈಪುಣ್ಯವನ್ನು ಕಂಡವರು, ಬಾವಿಯೊಗಿನ ಕಪ್ಪೆಯಂತೆ ಇರಬೇಡ. ನಿನ್ನ ಕಲೆಗೆ ಹೊರ ಪ್ರಪಂಚದಲ್ಲಿ ಮನ್ನಣೆ ಸಿಗುತ್ತದೆ ಎಂದು ಹುರಿದುಂಬಿಸಿದರು. ಆ ಮಾತುಗಳಿಂದ ಸ್ಫೂರ್ತಿ ಪಡೆದ ಮಮತಾ, ಹೆಚ್ಚಿನ ತರಬೇತಿಗಾಗಿ ಚಿತ್ರಕಲಾ ಕ್ಲಾಸ್‌ಗೆ ಸೇರಿದರು.

ಆ ನಂತರ ಮಮತಾ ಹಿಂತಿರುಗಿ ನೋಡಲಿಲ್ಲ, ಆಯಿಲ್‌ ಪೇಂಟಿಂಗ್‌, ಎಕ್ರಿಲಿಕ್‌,ವಾಟರ್‌ ಪೇಂಟಿಂಗ್‌ನಲ್ಲಿ ಸಾಧನೆ ಮಾಡಿದರು. 2013ರಲ್ಲಿ, ದುಬೈನಲ್ಲಿ ನಡೆದ ಮಮತಾರ ಮೊದಲ ಕಲಾ ಪ್ರದರ್ಶನ, ಅಪಾರ ಪ್ರಶಂಸೆಗೆ ಪಾತ್ರವಾಯಿತು.

ಮುಂದೆ, ದುಬೈನ ಕನ್ನಡ ಹಾಗೂ ತುಳು ಸಂಘಟನೆಗಳ ಕಾರ್ಯಕ್ರಮಗಳಲ್ಲಿ, ವಿಶ್ವ ತುಳು ಸಮ್ಮೇಳನದಲ್ಲಿಯೂ ಇವರು ಕಲಾ ಪ್ರದರ್ಶನ ನಡೆಸಿದ್ದರು.

ಸಕಲ ಕಲಾವಲ್ಲಭೆ
ಮಕ್ಕಳ ಚಿತ್ರಕಲಾ ಗುರುವಾಗಿ, ಅವರಿಂದಲೂ ಕಲಾಪ್ರದರ್ಶನ ನಡೆಸಿದ ಖ್ಯಾತಿ ಇವರದ್ದು. ಹೆಂಗಸರಿಗೆ ಉಚಿತವಾಗಿ ಎಂಬ್ರಾಯಿಡರಿ ತರಬೇತಿ ನೀಡುವ ಮಮತಾ, ಚಿತ್ರಕಲೆ ಮಾತ್ರವಲ್ಲದೆ, ಎಂಬ್ರಾಯxರಿ, ರಂಗೋಲಿ, ಅಡಿಕೆ ಹಾಳೆಯಿಂದ, ಭತ್ತದ ಪೈರಿನಿಂದ ಕಲಾಕೃತಿಗಳ ರಚನೆ, ಸುಲಭವಾಗಿ ಸಿಗುವ ವಸ್ತುಗಳಿಂದ ಕ್ರಾಫ್ಟ್, 3ಡಿ ಮಾಡೆಲಿಂಗ್‌ ಆರ್ಟ್‌, ಪೇಪರ್‌ ಫ್ಲವರಿಂಗ್‌ ,ಕ್ವಿಲ್ಲಿಂಗ್‌ ಕಲೆಯಲ್ಲೂ ಸಿದ್ಧ ಹಸ್ತರು. ಅಷ್ಟೇ ಅಲ್ಲದೆ, ಉಚಿತವಾಗಿ ಭಜನಾ ತರಗತಿ, ಶ್ಲೋಕ ಕ್ಲಾಸ್‌ಗಳನ್ನೂ ನಡೆಸುತ್ತಾರೆ.

ಈಕೆ, ಕದ್ರಿಯ ದೇವೇಂದ್ರ ಅಂಚನ್‌- ರೋಹಿಣಿ ಅಂಚನ್‌ರ ಮಗಳು. ಪತಿ ರವಿ ಕೋಟ್ಯಾನ್‌, ಭಾವಿಕ್‌, ದಕ್ಷ ಎಂಬ ಇಬ್ಬರು ಮಕ್ಕಳ ಸುಖೀ ಕುಟುಂಬ ಇವರದ್ದು. ಭವಿಷ್ಯದಲ್ಲಿ ಆರ್ಟ್‌ ಗ್ಯಾಲರಿ ಆರಂಭಿಸುವ ಕನಸು ಹೊಂದಿರುವ ಮಮತಾರ ಕುಂಚಕ್ಕೆ, ಬದುಕಿಗೆ ಇನ್ನಷ್ಟು ಬಣ್ಣಗಳು ತುಂಬಲಿ.

-ರಜನಿ ಭಟ್‌ ಕಲ್ಮಡ್ಕ

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.