ಸಾಂಪ್ರದಾಯಿಕ ಮೀನುಗಾರಿಕೆ ಇಲ್ಲದೆ ಕಳೆಯುತ್ತ ಬಂತು ಯಾಂತ್ರೀಕೃತ ಮೀನುಗಾರಿಕೆ ರಜೆ


Team Udayavani, Jul 27, 2019, 5:33 AM IST

2607MLE7

ಮಲ್ಪೆ: ಉಡುಪಿ ಜಿಲ್ಲೆಯ ಕರಾವಳಿಯ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಇಲ್ಲದೆ ಈ ವರ್ಷ ಮಳೆಗಾಲದ ಯಾಂತ್ರೀಕೃತ ಮೀನುಗಾರಿಕೆ ರಜಾ ಅವಧಿ ಮುಗಿಯುವ ಲಕ್ಷಣ ಕಂಡು ಬರುತ್ತಿದೆ. ಆ.1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳಲಿರುವುದರಿಂದ ಮಳೆಗಾಲದ ನಾಡದೋಣಿ ಮೀನುಗಾರಿಕೆಗೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿದೆ. ಕರಾವಳಿಯಲ್ಲಿ ಮಳೆ ಬಿರುಸುಗೊಂಡ ಹಿನ್ನೆಲೆಯಲ್ಲಿ ಕಡಲ ಅಬ್ಬರ ಕೂಡ ಹೆಚ್ಚಾಗಿದೆ. ಪರಿಣಾಮ ಒಂದು ವಾರದಿಂದ ನಾಡದೋಣಿ ಮೀನುಗಾರಿಕೆಯೂ ಸ್ಥಗಿತಗೊಂಡಂತಾಗಿತ್ತು.

ತೂಫಾನ್‌ ಆದರೂ ಮೀನಿಲ್ಲ
ಸಾಮಾನ್ಯವಾಗಿ ಸಮುದ್ರದಲ್ಲಿ ತೂಫಾನ್‌ ಎದ್ದರೆ ಮಾತ್ರ ನಾಡದೋಣಿ ಮೀನುಗಾರರಿಗೆ ಮೀನು ಬೇಟೆಗೆ ಪೂರಕವಾಗಿರುತ್ತದೆ. ಆದರೆ ಈ ಬಾರಿ ತಡವಾಗಿ ತೂಫಾನ್‌ ಆಗಿದ್ದರೂ ಕಡಲಿಗಿಳಿದ ಮೀನುಗಾರರು ಸಮುದ್ರ ಜಾಲಾಡಿದರೂ ಮೀನು ಸಿಗುವ ಲಕ್ಷಣ ಕಂಡು ಬರುತ್ತಿಲ್ಲ.

ಇದೀಗ ಕಳೆದ ಮೂರ್‍ನಾಲ್ಕು ದಿನಗಳಿಂದ ಮೀನು ಗಾರಿಕೆ ತೆರದ ಮೀನುಗಾರರಿಗೆ ಮೀನು ಸಿಗದೇ ಬರಿಗೈಯಲ್ಲಿ ವಾಪಾಸಾಗುತ್ತಿದ್ದಾರೆ. ಒಂದಡೆ ಪ್ರತಿಕೂಲ ವಾತಾವರಣ ದಿಂದಾಗಿ ಕಡಲಿಗಿಳಿಯಲು ಸಾಧ್ಯವಾಗದ ನಾಡದೋಣಿ ಮೀನುಗಾರರಿಗೆ ಇನ್ನೊಂದಡೆ ಮತ್ಸéಕ್ಷಾಮ ಬಾಧಿಸಿದ್ದು ಆರ್ಥಿಕ ಹೊಡೆತವನ್ನು ನೀಡಿದೆ.ಇನ್ನು ಕೆಲವೇ ದಿನಗಳಲ್ಲಿ ಯಾಂತ್ರಿಕ ಮೀನುಗಾರಿಕೆ ಅವಧಿ ಆರಂಭಗೊಳ್ಳಲಿದೆ. ಈ ನಡುವೆ ಗಳಿಕೆಯ ಕನಸು ಕಂಡಿದ್ದ ನಾಡದೋಣಿ ಮೀನುಗಾರರು ನಿರಾಸೆ ಅನುಭವಿಸುತ್ತಿದ್ದಾರೆ.

ಕೋಟ್ಯಂತರ ರೂ. ನಷ್ಟ
ಈ ಬಾರಿ ಮಳೆಗಾಲದ ನಾಡದೋಣಿ ಮೀನುಗಾರಿಕೆ ಹಿನ್ನಡೆಯಾದ್ದರಿಂದ ಮೀನುಗಾರಿಕೆ ಉದ್ಯಮಕ್ಕೆ ಕೋಟ್ಯಂ ತರ ರೂಪಾಯಿ ನಷ್ಟವಾಗಿದೆ. ಕಳೆದ ಬಾರಿ ಇಷ್ಟೊತ್ತಿಗೆ ನಾಡದೋಣಿ ಮೀನುಗಾರರು ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸಿದ್ದರು. ಮಳೆಗಾಲದಲ್ಲಿ ಸಿಗುವ ಸಿಗಡಿ ಮೀನಿಗೆ ಉತ್ತಮ ಬೆಲೆ ಇರುತ್ತದೆ. ಆದರೆ ಈ ಬಾರಿ ನಾಡದೋಣಿ ಮೀನುಗಾರರು ಇನ್ನೂ ಮೀನು ದೊರಕದಿರುವುದು ಪ್ರತಿಯೊಂದು ದೋಣಿಗಳಿಗೆ ಕನಿಷ್ಟ 1.5ರಿಂದ 2 ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸಬೇಕಾಗಿದೆ.

ತಾಜಾ ಮೀನಿನ ಕೊರತೆ
ನಾಡದೋಣಿಗಳು ಕಡಲಿಗೆ ಇಳಿಯದ ಕಾರಣ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಕೊರತೆ ಉಂಟಾಗಿದೆ. ಮಂಗಳೂರು ಉಡುಪಿ ಮಾರುಕಟ್ಟೆಗೆ ದೂರದ ತಮಿಳುನಾಡು, ಮಹಾರಾಷ್ಟ್ರದ ರತ್ನಾಗಿರಿ ಯಿಂದ ಮೀನು ಸಂಸ್ಕರಣಾ ಘಟಕಗಳಿಂದ ಮೀನುಗಳನ್ನು ಆಮದು ಮಾಡಿ ಮಾರಾಟ ಮಾಡಲಾಗುತ್ತದೆ.

ಮೀನಿನ
ಛಾಯೆಯೇ ಇಲ್ಲ
ಈ ಸಲ ಇದುವರೆಗೂ ಗಾಳಿ ನೀರು ಮೀನುಗಾರಿಕೆಗೆ ಪೂರಕವಾಗಿ ಇರಲಿಲ್ಲ. ವಾರದ ಹಿಂದೆ ಕಡಲಲ್ಲಿ ಮೀನಿನ ಲಕ್ಷಣ ಕಂಡು ಬಂದಿದ್ದರೂ, ಅದನ್ನು ಹಿಡಿಯುವ ವೇಳೆ ಒಮ್ಮೆಲೆ ತೂಫಾನ್‌ ಆಗಿರುವ ಕಾರಣ ಆ ಮೀನು ವಲಸೆ ಹೋಗಿದೆ. ಇದೀಗ ಎಲ್ಲಿಯೂ ಮೀನಿನ ಛಾಯೆಯೇ ಕಾಣುತ್ತಿಲ್ಲ
– ಕೃಷ್ಣ ಎಸ್‌. ಸುವರ್ಣ, ಪಡುತೋನ್ಸೆ

ಸಂಪಾದನೆ ಇಲ್ಲ
ಜು. 31ರಂದು ಯಾಂತ್ರಿಕೃತ ಮೀನುಗಾರಿಕೆಯ ರಜೆ ಮುಗಿಯಲಿದೆ. ಸಾಂಪ್ರಾಯಿಕ ಮೀನುಗಾರರು ವರ್ಷದ ಎರಡು ತಿಂಗಳು ಒಂದಷ್ಟು ಅಧಿಕ ಸಂಪಾದನೆ ಗಳಿಸಲು ಅವಕಾಶವಿರುವ ಈ ಅವಧಿಯಲ್ಲಿ ಕೆಲವರು ಕಡಲಿಗೆ ಇಳಿದಿದ್ದರೂ ಸಂಪಾದನೆ ಆಗಿಲ್ಲ. ಹೆಚ್ಚಿನವರು ಕಡಲಿಗೆ ಇಳಿದೇ ಇಲ್ಲ.
-ರಮೇಶ್‌ ಕಾಂಚನ್‌, ವಾಸು ಕುಂದರ್‌,
ನಾಡದೋಣಿ ಮೀನುಗಾರರು

-ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

putturPuttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

Puttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

Madikeri ಅಪಾಯ ಆಹ್ವಾನಿಸುವ ಪ್ರವಾಸಿಗರ ಸೆಲ್ಫಿ , ರೀಲ್ಸ್‌ ಗೀಳು!

Madikeri ಅಪಾಯ ಆಹ್ವಾನಿಸುವ ಪ್ರವಾಸಿಗರ ಸೆಲ್ಫಿ , ರೀಲ್ಸ್‌ ಗೀಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

Udupi ಗ್ಯಾಂಗ್‌ವಾರ್‌ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

Udupi ಗ್ಯಾಂಗ್‌ವಾರ್‌ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

BJP, ಎನ್‌ಡಿಎ ಗೆಲುವು ತಪ್ಪಿಸಲಾಗದು: ವಿಜಯೇಂದ್ರ

BJP, ಎನ್‌ಡಿಎ ಗೆಲುವು ತಪ್ಪಿಸಲಾಗದು: ವಿಜಯೇಂದ್ರ

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.