ಸುಧಾಕರ ಆಚಾರ್ಯ ಕಲಾರಾಧನೆಯ ತ್ರಿಂಶತಿ


Team Udayavani, Aug 9, 2019, 5:00 AM IST

e-3

ಸ್ವಾತಂತ್ರ್ಯೋತ್ಸವವನ್ನು ವಿಶೇಷ ಕಲಾ ಕಾರ್ಯಕ್ರಮದ ಮೂಲಕ ಆಚರಿಸುವ ಪರಿಕಲ್ಪನೆಯೊಂದಿಗೆ 1990 ಆ. 14ರಂದು ಉಡುಪಿಯ ನಿಟ್ಟೂರು ಪ್ರೌಢಶಾಲೆಯಲ್ಲಿ ಆರಂಭಿಸಿದ ಸ್ವಾತಂತ್ರ್ಯೋತ್ಸವ ತಾಳಮದ್ದಳೆಗೆ ಇದೀಗ ಮೂವತ್ತರ ಸಂಭ್ರಮ.

ಐದನೇ ವರ್ಷದಲ್ಲಿ ಖ್ಯಾತ ಸಾಹಿತಿ, ವಿದ್ವಾಂಸರಾದ ಡಾ| ಅಮೃತ ಸೋಮೇಶ್ವರರ ಹಿರಿತನದಲ್ಲಿ ಮಲ್ಪೆ ರಾಮದಾಸ ಸಾಮಗರಿಗೆ “ವಾಗ್ಮಯ ವಿಶಾರದ’ ಪ್ರಶಸ್ತಿ ಪ್ರದಾನ, ದಶಮಾನೋತ್ಸವ ಸಂದರ್ಭದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ “ಕುಡಿಯನ ಕೊಂಬಿರೆಲ್‌’ ತುಳು ಯಕ್ಷಗಾನ ಕೃತಿ ಬಿಡುಗಡೆ ಮತ್ತು ಪ್ರದರ್ಶನ, 25ನೇ ವರ್ಷಾಚರಣೆ ಹೊತ್ತಿನಲ್ಲಿ 12 ತಾಸುಗಳ ನಿರಂತರ ಯಕ್ಷಾರಾಧನೆ ಜೊತೆಗೆ ಇನ್ನೊಂದು ಕವಲಾಗಿ ತೆಂಕುತಿಟ್ಟು ವೇದಿಕೆ ಉಡುಪಿ ಕಲಾ ಪ್ರೇಕ್ಷಕರಿಗಾಗಿ ಉದ್ಭವ ಸಮಾನ ಮನಸ್ಕರ ಸಹಕಾರದೊಂದಿಗೆ ಕಲಾ ಪ್ರೇಕ್ಷಕರಿಗಾಗಿ ವರ್ಷಕ್ಕೆ ಒಂದು ತೆಂಕು ಪೌರಾಣಿಕ ಯಕ್ಷಗಾನ ಪ್ರದರ್ಶನ ಹಾಗೂ ಹಿರಿಯ ಯಕ್ಷಗಾನ ಕಲಾವಿದರನ್ನು ಗೌರವನಿಧಿಯೊಂದಿಗೆ ಸಮ್ಮಾನಿಸುವ ವಾರ್ಷಿಕ ಆಯೋಜನೆಯ “ರಾತ್ರಿ ಆಟ’ ಅತ್ಯಲ್ಪ ಅವಧಿಯಲ್ಲಿಯೇ ಅಸಂಖ್ಯಾತ ಕಲಾ ಪ್ರೇಕ್ಷಕರ ಮೆಚ್ಚುಗೆಗೆ ಭಾಜನವಾಗಿದೆ.26ನೇ ವರ್ಷಾಚರಣೆಯಲ್ಲಿ ಯಕ್ಷಗಾನ ಸಂಬಂಧೀ ಸಾಧಕ 26 ಗಣ್ಯರಿಗೆ ಸಮ್ಮಾನವನ್ನು ಏರ್ಪಡಿಸಲಾಗಿತ್ತು.

ಇತಿಹಾಸದ ಮರುಸೃಷ್ಟಿ
1947-ಸ್ವರಾಜ್ಯ ವಿಜಯ-2016, 1948-ಹೈದರಾಬಾದ್‌ ವಿಜಯ-2017 ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆಗೆ ಪೂರಕವೋ ಎಂಬಂತೆ 1947ರ ಆಗಸ್ಟ್‌ 14ರ ರಾತ್ರಿ ಪ್ರಥಮ ಸ್ವಾತಂತ್ರ್ಯೋತ್ಸವದಂದು ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಜರಗಿದ್ದ ಹಿರಿಯ ಪತ್ರಕರ್ತ, ಸ್ವಾತಂತ್ರ ಯೋಧ ಎಂ.ವಿ. ಹೆಗ್ಡೆ ಅವರು ರಚಿಸಿ ಪ್ರಕಟಿಸಿದ್ದ “ಸ್ವರಾಜ್ಯ ವಿಜಯ’, 1948ರಂದು ಶ್ರೀ ಕೃಷ್ಣಮಠದ ಭೋಜನಶಾಲೆಯಲ್ಲಿ ನಡೆದಿದ್ದ “ಹೈದರಾಬಾದ್‌ ವಿಜಯ’ ತಾಳಮದ್ದಳೆಗಳಲ್ಲಿ ಉಪಸ್ಥಿತರಿದ್ದು ಹರಸಿದ್ದ ಪೇಜಾವರ ಶ್ರೀಗಳ ಪಂಚಮ ಐತಿಹಾಸಿಕ ಪರ್ಯಾಯದ ಸಂದರ್ಭದಲ್ಲಿ ಶ್ರೀಗಳ ಸಾನಿಧ್ಯದಲ್ಲಿಯೇ 70 ವರ್ಷಗಳ ಅನಂತರ ತಾಳಮದ್ದಳೆ ಕಲಾ ಪ್ರೇಮಿಗಳ ಮನದಾಳ ಮುಟ್ಟಿತು.

29ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆಯಲ್ಲಿ “ಪಂಚರತ್ನ ದೀಪಮಾಲಾ’ ಹಾಗೂ ತುಳು ಯಕ್ಷಗಾನ ವೈಭವ ಆರಂಭ. ಈ ಕಲಾರಾಧನೆಗೆ ಸ್ಫೂರ್ತಿದಾತರಾಗಿರುವ ಕೀರ್ತಿಶೇಷರಾದ ಶೇಣಿ ಗೋಪಾಲಕೃಷ್ಣ ಭಟ್‌, ಮಲ್ಪೆ ರಾಮದಾಸ ಸಾಮಗ, ಪೊಲ್ಯ ದೇಜಪ್ಪ ಶೆಟ್ಟಿ, ಕಪ್ಪೆಟ್ಟು ಬೋಳ ಪೂಜಾರಿ, ಸುಧೀರ್‌ ಎಸ್‌.ಎಲ್‌. ಭಟ್‌ ಅವರ ಸಂಸ್ಮರಣೆಯ ದ್ಯೋತಕವಾಗಿ “ಪಂಚರತ್ನ ದೀಪಮಾಲಾ’ ಪ್ರಜ್ವಲನೆ ಮಾಡಿ ತಾಳಮದ್ದಳೆಯೊಂದಿಗೆ ಎಳೆಯ ಪೀಳಿಗೆಗೆ ತುಳುನಾಡಿನ ಪುರಾಣ, ಇತಿಹಾಸ ಮತ್ತು ಸಂಸ್ಕೃತಿ ಸಂಪನ್ನತೆಗಳನ್ನು ಪರಿಚಯಿಸುವ ಪ್ರಯತ್ನದ ಅಂಗವಾಗಿ ತುಳು ಯಕ್ಷಗಾನ ಪ್ರದರ್ಶನವನ್ನು ಪ್ರಾರಂಭಿಸಲಾಯಿತು.

ತ್ರಿಂಶತಿ ಆಚರಣೆ
ಈ ಬಾರಿ ಸುಧಾಕರ ಆಚಾರ್ಯರ ಕಲಾರಾಧನೆಯ ಸ್ವಾತಂತ್ರ್ಯೋತ್ಸವದ ಮೂವತ್ತರ ವರ್ಷಾಚರಣೆಯನ್ನು ಉಡುಪಿಯ ಪಿಪಿಸಿ ಅಡಿಟೋರಿಯಂನಲ್ಲಿ ಮಧ್ಯಾಹ್ನ 1.30ರಿಂದ ಹೆಸರಾಂತ ಕಲಾವಿದರ ಸಮ್ಮಿಲದೊಂದಿಗೆ “ಅಂಬೆ’ ತಾಳಮದ್ದಳೆ ಹಾಗೂ ತುಳು ಯಕ್ಷಗಾನ-“ತುಳುನಾಡ ಬಲಿಯೇಂದ್ರ’ ಪ್ರದರ್ಶನಗೊಳ್ಳಲಿದೆ.

ತ್ರಿಂಶತಿ ಆಚರಣೆ ಪ್ರಯುಕ್ತ ಕಟೀಲು, ಸಾಲಿಗ್ರಾಮ ಮತ್ತು ಕೆರೆಮನೆ ಇಡಗುಂಜಿ ಮೇಳಗಳ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಪಳ್ಳಿ ಕಿಶನ್‌ ಹೆಗ್ಡೆ, ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಸಮ್ಮಾನಿಸಲಾಗುವುದು.

ಪ್ರಾರಂಭದ ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಭಾಗವಹಿಸಿದ್ದ ಕೀರ್ತಿಶೇಷ ಪೊಲ್ಯ ದೇಜಪ್ಪ ಶೆಟ್ಟಿ ಅವರ ಪುತ್ರ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮುಂಬಯಿ ಅವರು ತ್ರಿಂಶತಿ ಆಚರಣೆಯ ತುಳು ಯಕ್ಷಗಾನದಲ್ಲಿ ಭಾಗವತರಾಗಿ ಭಾಗವಹಿಸಲಿದ್ದು, ಅವರನ್ನು ಕಲಾ ಗೌರವ ನೀಡಿ ಅಭಿನಂದಿಸಲಾಗುವುದು.

ಎಸ್‌.ಜಿ.ನಾಯಕ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.