ಅನಾರೋಗ್ಯಕ್ಕೆ ಕಾರಣ


Team Udayavani, Aug 29, 2019, 5:02 AM IST

u-62

ವಿಂಧ್ಯ ಪರ್ವತದ ಬಳಿಯ ರಾಜ್ಯವನ್ನು ಆಳುತ್ತಿದ್ದ ಚಂದ್ರಸೇನ ಮಹಾರಾಜ ಪದೇ ಪದೆ ಅನಾರೋಗ್ಯ ಪೀಡಿತರಾಗುತ್ತಿದ್ದರು. ಉಸಿರಾಡಲು ಸ್ವಚ್ಛ ಗಾಳಿ ಇಲ್ಲದೇ ಇದ್ದುದು ಅದಕ್ಕೆ ಕಾರಣವಾಗಿತ್ತು. ಏಕೆಂದರೆ, ಅರಮನೆ ಸನಿಹ ಹೂದೋಟ ಇರಲಿಲ್ಲ. ಮಂತ್ರಿಗಳು, ಮಹಾರಾಣಿಯವರು ಅರಮನೆಯ ಅಂಗಳದಲ್ಲಿ ಒಂದು ಉದ್ಯಾನವನವನ್ನು ಬೆಳೆಸಬೇಕು ಎಂದು ಸಲಹೆ ಇತ್ತರೂ ಅದೇಕೋ ಮಹಾರಾಜರು ನಿರ್ಲಕ್ಷ್ಯ ವಹಿಸಿದ್ದರು. ರಾಜರಿಗೆ ದೇಶ- ವಿದೇಶಗಳಿಂದ ತರಿಸುತ್ತಿದ್ದ ಕರಕುಶಲ ವಸ್ತುಗಳ ಮೇಲಿದ್ದ ಪ್ರೀತಿ, ಆಸಕ್ತಿ ಗಿಡ ಮರಗಳ ಮೇಲೆ ಇರಲಿಲ್ಲ.

ಒಮ್ಮೆ ಚಂದ್ರಸೇನ, ಕೆಲಸದ ಮೇರೆಗೆ ನೆರೆ ರಾಜ್ಯದ ಮಹಾರಾಜನೂ, ಸ್ನೇಹಿತನೂ ಆದ ನಂದಿ ವರ್ಮನ ಅರಮನೆಗೆ ಭೇಟಿ ನೀಡಿದರು. ಒಂದು ದಿನ ವಿಶ್ರಾಂತಿಗೆಂದು ಅಲ್ಲಿಯೇ ತಂಗಿದ್ದರು. ಚಂದ್ರಸೇನರಾಜ ನಸುಕಿನ ಜಾವ ಎದ್ದು, ಉಪಹಾರಗಳನ್ನೆಲ್ಲ ಮುಗಿಸಿ ಹೊರಡಲು ಅಣಿಯಾದರು. ನಂದಿವರ್ಮನ ಅರಮನೆಯನ್ನೂ ಮತ್ತು ಅದನ್ನು ಸಿಂಗರಿಸಿದ ಆತನ ಕಲಾರಸಿಕತೆಯನ್ನೂ ಕೊಂಡಾಡುತ್ತಾ ಅರಮನೆಯ ಹೊರಗೆ ಬಂದರು. ಅರಮನೆಯ ಹೊರಗಡೆ ನೋಡಿದರೆ ಪುಟ್ಟದಾದ ಕಾಡೊಂದು ತಲೆಯೆತ್ತಿ ನಿಂತಿತ್ತು.

ಅರಮನೆಯ ಸುತ್ತ, ಎಲ್ಲಿ ನೋಡಿದರಲ್ಲಿ ಹೂದೋಟ, ಬಲಾಡ್ಯವಾದ ವೃಕ್ಷಗಳು ಮತ್ತು ಹಣ್ಣಿನ ಮರಗಳು. ಬೆಳಗಿನ ಜಾವದಲ್ಲಿ ಹೊರಸೂಸುವ ತಂಗಾಳಿ, ಹಕ್ಕಿಗಳ ಚಿಲಿಪಿಲಿ, ಹೂಹಣ್ಣುಗಳ ಸುವಾಸನೆಯಿಂದ ಚಂದ್ರಸೇನ ರಾಜನಿಗೆ ಹೊಸದೊಂದು ಉನ್ಮಾದ ಮೂಡಿತ್ತು. ತನ್ನ ಅರಮನೆಗಿಂತ ಬಹುಪಾಲು ಚಿಕ್ಕದಾದ ನಂದಿವರ್ಮನ ಅರಮನೆಯು ಗಿಡಮರಗಳಿಂದ ಸುತ್ತುವರಿದು ಸೊಬಗಿನಿಂದ ಕಂಗೊಳಿಸುತ್ತಿತ್ತು.

ತನ್ನ ರಾಜ್ಯಕ್ಕೆ ಮರಳಿದ ಚಂದ್ರಸೇನರಾಜನು ಮಂತ್ರಿಗಳನ್ನು ಕರೆಯಿಸಿ ಕೂಡಲೇ ಅರಮನೆಯ ಸುತ್ತ ಕಾಡನ್ನು ನಿರ್ಮಿಸಲು ಆಜ್ಞೆಯಿತ್ತನು. ಮಂತ್ರಿಯೂ ಅತ್ಯಂತ ಆನಂದ ಭರಿತನಾಗಿ ರಾಜನ ಆಜ್ಞೆಯಂತೆ ಗಿಡಮರಗಳ ಕೆಲಸ ಕಾರ್ಯದಲ್ಲಿ ಚುರುಕಾದನು. ಕೆಲವೇ ವರ್ಷಗಳಲ್ಲಿ ಅರಮನೆಯು ಆಲಂಕೃತಗೊಂಡ ಗಿಡಮರಗಳಿಂದ ರಾರಾಜಿಸುತ್ತಿತ್ತು. ರಾಜಭವನದ ಸೌಂದರ್ಯ ಹಿಂದೆಂದಿಗಿಂತಲೂ ದ್ವಿಗುಣಗೊಂಡಿತ್ತು. ಅರಮನೆಯು ಶ್ರೀಕೃಷ್ಣನ ಬೃಂದಾವನವನ್ನೇ ಜ್ಞಾಪಿಸುವಂತಿತ್ತು. ರಾಜನಿಗೆ ಮುದನೀಡುವ ಆಹ್ಲಾದಕರ ವಾತಾವರಣ ನಿರ್ಮಾಣಗೊಂಡಿತ್ತು. ಅಲ್ಲದೆ ಉಸಿರಾಡಲು ಸ್ವಚ್ಛ ಗಾಳಿ ಸಿಕ್ಕಿ ಮಹಾರಾಜನ ಅನಾರೋಗ್ಯ ಕೊನೆಯಾಗಿತ್ತು.

– ಶಿಲ್ಪಾ ಕುಲಕರ್ಣಿ

ಟಾಪ್ ನ್ಯೂಸ್

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.