ಯಾವ ಕಾಣಿಕೆ ನೀಡಲಿ ನಿನಗೆ…?
Team Udayavani, Sep 10, 2019, 5:02 AM IST
ನನ್ನ ಮುದ್ದು ಗೌರಮ್ಮನಿಗೆ, ನನ್ನ ಜಗತ್ತಿನ ಗೆಳತಿಗೆ, ಆತ್ಮಬಂಧುವಿಗೆ, ನನ್ನ ಪಾಲಿನ ಮಮತೆಗೆ, ನನ್ನ ಬದುಕಿನ ಪ್ರತಿ ಕ್ಷಣಗಳನ್ನೂ ಸಾರ್ಥಕವಾಗಿಸಿದ ನನ್ನೊಲುಮೆಯ ಬಂಗಾರದ ಹೃದಯದೊಡತಿಗೆ…
ಹೀಗೆ, ಏನೋ ಬರೆಯಲು ಕುಳಿತ ಈ ಬಿ.ಕೆ ನ ಜೋಳಿಗೆಯಲ್ಲಿ ನಿನ್ನಡೆಗಿನ ಆಕರ್ಷಣೆಯ ಜೊತೆಗೆ ಆರಾಧನೆಯಿದೆ, ಎಂದೂ ಮುಗಿಯದ ಪ್ರೇಮವಿದೆ, ಅದರ ಜೊತೆ ಜೊತೆಗೆ ಎಲ್ಲಿ ನನ್ನ ಕಣ್ಣಿಗೂ ಕಾಣಿಸದಷ್ಟು ದೂರವಾಗಿ ಬಿಡುತ್ತೀಯೋ ಎನ್ನುವ ದೊಡ್ಡ ತಲ್ಲಣವಿದೆ.
ಗೌರಮ್ಮ, ಕೆಲವೊಮ್ಮೆ ನಮ್ಮ ಕಣ್ಣೆದುರಿಗಿರುವ ಪ್ರೀತಿ ಕಾಣಿಸುವುದಿಲ್ಲ. ಶ್ರೀಮಂತರ ಮನೆಯ ತಿಜೋರಿಗಳಲ್ಲಿ, ರೂಪವಂತರ ಎದೆಯ ಗೂಡುಗಳಲ್ಲಿ, ಪ್ರೀತಿ ಹುಡುಕಲು ಹೊರಟುಬಿಡುತ್ತೇವೆ. ಆದರೆ, ಹಣದ ಋಣವಿಟ್ಟುಕೊಂಡು ಹುಟ್ಟುವ ಪ್ರೀತಿ – ಪ್ರೇಮಗಳಿಗೆ ಹೆಚ್ಚಿನ ಆಯುಷ್ಯವಿರುವುದಿಲ್ಲ.
ನಾನು ಒಮ್ಮೆಯಾದರೂ ನಿನ್ನ ಮುಂದೆ ಮಂಡಿಯೂರಿ ಕುಳಿತು ನಿನ್ನೆಡೆಗಿರುವ ನನ್ನ ಅಗಾಧ ಪ್ರೀತಿಯನ್ನು ಹೇಳಿಕೊಳ್ಳಲಾಗಲಿಲ್ಲವಲ್ಲ ಅಂದುಕೊಂಡು, ಈ ಕ್ಷಣಕ್ಕೂ ಕೊರಗುತ್ತಿದೇನೆ. ನಿನ್ನ ಬಳಿ ಹೇಳಿಕೊಳ್ಳುವ ಮನಸ್ಸು ನನಗೆ ಖಂಡಿತ ಬೆಟ್ಟದಷ್ಟಿತ್ತು. ಆದರೆ, ಹೇಳಿಕೊಂಡ ಮರುಕ್ಷಣವೇ ಎಲ್ಲಿ ನನ್ನಿಂದ ದೂರಾಗುತ್ತೀಯೋ ಎಂಬ ತಲ್ಲಣವೂ ಸಾಗರದಷ್ಟಿತ್ತು.
ನಾನು ಈಗ ಹೇಗೋ ಬದುಕುತ್ತಿರಬಹುದು, ಆದರೆ ಪ್ರತಿ ಕ್ಷಣವೂ ನಿನ್ನ ಬಗ್ಗೆನೇ ಯೋಚಿಸುತ್ತಾ, ನಿನಗೆ ಒಳಿತನ್ನೇ ಬಯಸುತ್ತಾ, ಆಗಾಗ ನಿನ್ನ ಆರೋಗ್ಯದ ಬಗ್ಗೆ ಪ್ರಾರ್ಥಿಸುತ್ತಾ, ಕೇವಲ ನಿನ್ನ ಸ್ನೇಹ – ಪ್ರೀತಿಯನ್ನೇ ಧ್ಯಾನಿಸುತ್ತ ಇದ್ದೇನೆ.
ನೀನು ನನಗಿಷ್ಟ ಎನ್ನುವ ಆರೂವರೆ ಅಕ್ಷರಗಳನ್ನು ಯಾವಾಗಲೂ ಹೇಳುತ್ತಿರುತ್ತೇನೆ, ಯಾಕೆ ಅಂತ ಗೊತ್ತಾ? ನಿನ್ನ ಮುಗ್ಧತೆಗೆ, ನಿನ್ನ ನಿಷ್ಕಲ್ಮಶವಾದ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೇ ಗೌರಮ್ಮ.
ನಿನ್ನ ಬಗೆಗಿನ ಈ ಸ್ನೇಹ – ಪ್ರೀತಿಯನ್ನು ಬರೆಸಿಕೊಳ್ಳುತ್ತಿರುವ ಈ ಅಕ್ಷರಗಳ ಋಣ ದೊಡ್ಡದಿದೆ. ಮದುವೆಗೆ ಆಹ್ವಾನಿಸಿದರೆ ನಿನಗೇನು ಉಡುಗೊರೆ ಕೊಡಬಲ್ಲೆ ಎನ್ನುವುದನ್ನು ಇನ್ನೂ ನಿರ್ಧರಿಸಲಾಗುತ್ತಿಲ್ಲ.
ಎಷ್ಟೇ ಜನ್ಮಗಳು ಕಳೆದರೂ ಅಷ್ಟೇ, ಈ ಬಡಪಾಯಿ ಹುಡುಗನ ಹೃದಯದಲ್ಲಿ ನಿಷ್ಕಲ್ಮಶವಾದ ಈ ಸ್ನೇಹ – ಪ್ರೀತಿ ಎಂದಿಗೂ ಕಡಿಮೆ ಆಗಲ್ಲ..
ನಿನ್ನ ಮುದ್ದಿನ ಬಿ.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಕ್ರಮ್ ಪುತ್ರನ ಜೊತೆ ಮಾರಿ ಸೆಲ್ವರಾಜ್ ಸಿನಿಮಾ: ʼಬೈಸನ್ʼ ಫಸ್ಟ್ ಲುಕ್ ಔಟ್
Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…
Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO
Casino Financial Institution Repayment Methods: A Comprehensive Guide
How to Play Roulette Free Online