ಆನ್‌ಲೈನ್‌ ಶಿಕ್ಷಣ ಶಿಕ್ಷಣಾಸಕ್ತರಿಗೆ ಹೊಸ ದಾರಿ


Team Udayavani, Sep 11, 2019, 5:08 AM IST

t-41

21ನೇ ಶತಮಾನದಲ್ಲಿ ಎಲ್ಲವೂ ಆನ್‌ಲೈನ್‌. ವಿದ್ಯುತ್‌ ಬಿಲ್ನಿಂದ ಹಿಡಿದು ತಿನ್ನುವ ಆಹಾರಗಳನ್ನು ಕೂಡ ಇಂಟರ್ನೆಟ್ ಮುಖೇನ ಆರ್ಡರ್‌ ಮಾಡುತ್ತೇವೆ. ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದ ಕಾಲದಿಂದ, ದೂರ ಶಿಕ್ಷಣ ವ್ಯವಸ್ಥೆ ಬಂತು. ಇದೀಗ ಗುರುವಿನ ಸಹಾಯವಿಲ್ಲದೇ ಇಂಟರ್ನೆಟ್ ಮೂಲಕ ಜ್ಞಾನಿಗಳಾಗುವ ಕಾಲ ಬಂದಿದೆ. ಇಲ್ಲಿ ಇಂರ್ಟನೆಟ್ ನಮ್ಮ ಗುರುವಾಗಿ ಬದಲಾಗಿದೆ. ಅಲ್ಲದೆ ಸ್ವಯಂ ಕಲಿಕೆಗೆ ಇಂದೊಂದು ಉತ್ತಮ ದಾರಿ.

ಇಂಟರ್ನೆಟ್ ಯುಗ ಬಲಶಾಲಿಯಾಗಿ ಬೆಳೆಯುತ್ತಿದ್ದಂತೆ ಎಲ್ಲ ವ್ಯವಹಾರಗಳೂ ಆನ್‌ಲೈನ್‌ ಮಯವಾಗಿವೆ. ವಿಶೇಷವೆಂದರೆ ಶಿಕ್ಷಣವನ್ನೂ ಆನ್‌ಲೈನ್‌ ಮುಖಾಂತರ ಪಡೆಯುವಂತಹ ಯುಗ ಇದಾಗಿದೆ. ಯೂಟ್ಯೂಬ್‌ ಚಾನೆಲ್ಗಳ ಮುಖಾಂತರ, ವಿವಿಧ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್‌ಗಳ ಮುಖಾಂತರ ಆನ್‌ಲೈನ್‌ ಶಿಕ್ಷಣ ಪಡೆದು ಪಳಗಲು ಸಾಧ್ಯವಾಗುತ್ತಿದೆ. ಇದು 21ನೇ ಶತಮಾನದ ಬಹುದೊಡ್ಡ ಕೊಡುಗೆಯೂ ಆಗಿದೆ.

ದೂರ ಶಿಕ್ಷಣದ ಮಾದರಿಯಲ್ಲೇ ಹಲವು ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ ಕಲಿಯುವುದು ಮತ್ತು ಕ್ಷೇತ್ರವೊಂದರ ಬೇಸಿಕ್‌ ಜ್ಞಾನ ಪಡೆಯುವುದು ಇದರ ಉದ್ದೇಶ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಪಾವಧಿ ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿವೆ. ಆದರೆ ಇದಕ್ಕೆ ಯಾವುದೇ ಮಾನ್ಯತೆಗಳಿರುವುದಿಲ್ಲ. ಆದರೆ ಕೆಲವು ವಿವಿಗಳೂ ಕೂಡಾ ಆನ್‌ಲೈನ್‌ ಕೋರ್ಸ್‌ಗಳಿಗೆ ಅವಕಾಶ ಕಲ್ಪಿಸಿರುವುದು ಕಲಿಕಾ ಹಸಿವಿನಿಂದ ಬಳಲುವವರಿಗೆ ಚೇತೋಹಾರಿ ಆಹಾರವಾಗಿ ಪರಿಣಮಿಸಿದೆ.

ಆನ್‌ಲೈನ್‌ನಲ್ಲಿ ಕನ್ನಡ ಕಲಿಕೆ
ಆನ್‌ಲೈನ್‌ ಮೂಲಕವೇ ಕನ್ನಡ ಕಲಿಸುವ ಪರಿಪಾಠವೂ ಪ್ರಸ್ತುತ ನಡೆಯುತ್ತಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವು ಈ ಕಲಿಕೆಯ ಹಾದಿ ಯನ್ನು ತೋರಿಸಿಕೊಟ್ಟಿದೆ. ವೆಬ್‌ಸೈಟ್ವೊಂದರ ಮೂಲಕ ಕನ್ನಡ ಕಲಿಕೆ ಕೋರ್ಸ್‌ನ್ನು ಈ ಸಂಸ್ಥೆ ನೀಡುತ್ತಿದ್ದು, ಕನ್ನಡ ಕಲಿಕಾಸಕ್ತ ಕನ್ನಡೇತರ ರಿಂದ ಉತ್ತಮ ಪ್ರತಿಕ್ರಿಯೆಯೂ ಈ ಕೋರ್ಸ್‌ಗಿದೆ.

ಕಲಿಯುವ ಮುನ್ನ..
ಆನ್‌ಲೈನ್‌ ಶಿಕ್ಷಣ ಜನಪ್ರಿಯವಾಗುತ್ತಿದ್ದರೂ, ಸಾಂಪ್ರದಾಯಿಕ ಶಿಕ್ಷಣದ ಮಹತ್ವ ಅದಕ್ಕಿಲ್ಲ. ಆದ್ದರಿಂದ ವೃತ್ತಿ ಬದುಕಿಗೆ ಆಸರೆಯಾಗಿ ಆನ್‌ಲೈನ್‌ ಶಿಕ್ಷಣ ಪಡೆಯದಿರುವುದು ಒಳಿತು. ಕೇವಲ ಕಲಿಕಾಸಕ್ತಿ ಅಥವಾ ಸಮಯದ ಅಭಾವವಿದ್ದಲ್ಲಿ ಮಾತ್ರ ಆನ್‌ಲೈನ್‌ ಶಿಕ್ಷಣಕ್ಕೆ ಮುಂದಾಗುವುದು ಉತ್ತಮ. ಕೆಲವೊಂದು ಶಿಕ್ಷಣ ಸಂಸ್ಥೆಗಳೂ ಕೂಡ ಆನ್‌ಲೈನ್‌ ಶಿಕ್ಷಣಕ್ಕೆ ಮೊರೆ ಹೋಗಿವೆ. ಕಾಲೇಜಿಗೆ ಬರಲು ಸಾಧ್ಯವಾಗದವರಿಗೆ ನೆರವಾಗಲು ಶಿಕ್ಷಣ ಸಂಸ್ಥೆಗಳು ಈ ವ್ಯವಸ್ಥೆಯನ್ನು ಪರಿಚಯಿಸಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್‌, ವಾಸ್ತುಶಿಲ್ಪ, ಫಿಸಿಯೋಥೆರಪಿ ಕೋರ್ಸ್‌ ಗಳನ್ನು ಆನ್‌ಲೈನ್‌ನಲ್ಲಿ ಕಲಿಯುವ ಬದಲು ಸಾಂಪ್ರದಾಯಿಕ ತರಗತಿ ಶಿಕ್ಷಣ ಮತ್ತು ಪ್ರಾಯೋಗಿಕ ಶಿಕ್ಷಣದ ಮೂಲಕವೇ ಗಳಿಸಿಕೊಳ್ಳಬೇಕು.

ತಾಂತ್ರಿಕ ಶಿಕ್ಷಣವೂ ಆನ್‌ಲೈನ್‌ನಲ್ಲಿ
ತಾಂತ್ರಿಕ ಶಿಕ್ಷಣವನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲೂ ಇಂದು ಸಾಧ್ಯವಾಗುತ್ತಿದೆ. ಕೋಟ್ ಅಕಾಡೆಮಿ ಉಚಿತ ಕೋಡಿಂಗ್‌ ತರಗತಿಗಳನ್ನು 12 ಪ್ರೋಗ್ರಾಮಿಂಗ್‌ ಮತ್ತು ಮಾರ್ಕ್‌ ಅಪ್‌ ಭಾಷೆಗಳಲ್ಲಿ ಪಡೆಯುವ ಅವಕಾಶವಿದೆ. ಪೈಥಾನ್‌, ರುಬಿ, ಜಾವಾ ಸ್ಕ್ರಿಪ್ಟ್, ಎಚ್ಟಿಎಂಎಲ್ ಸೇರಿದಂತೆ ನಾನಾ ತಾಂತ್ರಿಕ ಕೌಶಲಗಳನ್ನು ಇದರಿಂದ ಗಳಿಸಬಹುದು. ವೆಬ್‌ ಡೆವಲಪ್‌ಮೆಂಟ್ ಬೇಸಿಕ್‌ ವಿಷಯಗಳ ಬಗ್ಗೆ ಡ್ಯಾಶ್‌ ಜನರಲ್ ಎಸೆಂಬ್ಲಿಯಲ್ಲಿ ಕಲಿಯುವ ಅವಕಾಶವಿದೆ.

ಪದವಿ, ಸ್ನಾತಕೋತ್ತರ ಪದವಿ…
ದೇಶದ ಅತ್ಯಂತ ಹಳೆಯ ವಿವಿಗಳಲ್ಲಿ ಒಂದಾದ ಮೈಸೂರು ವಿವಿಯು ಮ್ಯಾಸಿವ್‌ ಓಪನ್‌ ಆನ್‌ಲೈನ್‌ ಕೋರ್ಸ್‌ ಗಳಿಗೆ ‘ಸ್ವಯಂ’ ವೇದಿಕೆಯ ಮೂಲಕ ಅವಕಾಶ ಕಲ್ಪಿಸಿದೆ. ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಸ್ವಯಂ ಆನ್‌ಲೈನ್‌ ಶಿಕ್ಷಣ ಮೂಲಕ ಯಾರು ಬೇಕಾದರೂ, ದೇಶದ ಯಾವ ಮೂಲೆಯಿಂದಲೂ ಆನ್‌ಲೈನ್‌ ಮೂಲಕ ಅಲ್ಪ ಖರ್ಚಿನಲ್ಲಿ ಕೋರ್ಸ್‌ಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರದಲ್ಲಿ ಈ ಆನ್‌ಲೈನ್‌ ಕೋರ್ಸ್‌ಗಳು ರೂಪಿತವಾಗಿವೆ. ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಪಿಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ನ 55 ವಿವಿಧ ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ.

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

1-wqewqeqw

Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.