ಒಂದು ಟ್ರಿಪ್ಪಿನ ಕತೆ


Team Udayavani, Sep 27, 2019, 5:09 AM IST

k-14

ತುಮಕೂರಲ್ಲಿ ಡಿಗ್ರಿ ಮುಗಿಸಿಕೊಂಡು ಸ್ನಾತಕೋತ್ತರ ಅಧ್ಯಯನಕ್ಕೆಂದು ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಅಡ್ಮಿಶನ್‌ ಆಗಿ ಒಂದು ವಾರವಷ್ಟೇ ಕಳೆದಿತ್ತು. ಆಗಲೇ ತರಗತಿಗಳು ಆರಂಭವಾಗಲಿವೆ ಬನ್ನಿ ಎಂದು ಕಾಲೇಜ್‌ ಕಡೆಯಿಂದ ಒಂದು ಮೆಸೇಜ್‌ ಕೂಡ ಬಂತು. ಊರಲ್ಲಿ ಮಳೆಯಿನ್ನೂ ನಿಂತಿರಲಿಲ್ಲ. ಆದರೆ, ನಾನು ಕಾಲೇಜ್‌ಗೆ ಹೋಗಬೇಕಾದದ್ದು ಅನಿವಾರ್ಯ.

ಮನೆಯಲ್ಲಿ ನನ್ನನ್ನು ಹಾಸ್ಟೆಲ್‌ಗೆ ಬಿಟ್ಟು ಬರುವುದು ಯಾರೆಂಬ ಪ್ರಶ್ನೆ ಮೂಡಿದಾಗ ಒಬ್ಬ ಅಣ್ಣ, “ನಾನೇ ಬರುತ್ತೇನೆ’ ಎಂದ. ಜೊತೆಯಲ್ಲಿ ಇನ್ನೊಬ್ಬ ಅಣ್ಣನೂ, “ನಾನೂ ಬರ್ತೀನಿ’ ಎಂದು ದನಿ ಸೇರಿಸಿದ್ದ. ಹಾಗೆ ಹೋಗುತ್ತ ಜಾಲಿಯಾಗಿ ಈ ಮುಂಗಾರು ಮಳೆಯೊಂದಿಗೆ ಒಂದು ಸಣ್ಣ ಟ್ರಿಪ್‌ ಹೊಗೋಣ ಎಂಬ ಯೋಜನೆಯೂ ರೆಡಿ. ನಮ್ಮ ಜೊತೆ ಇನ್ನೂ ನಾಲ್ಕು ಜನರ ದಂಡು ರೆಡಿಯಾಯಿತು.

ಮೊದಲು ಉಜಿರೆಯಲ್ಲಿ ನನ್ನ ಲಗ್ಗೇಜ್‌ ಬ್ಯಾಗನ್ನು ಹಾಸ್ಟೆಲ್‌ನಲ್ಲಿ ಇಟ್ಟು ನಂತರ ಟ್ರಿಪ್‌ ಹೋಗೋಣ ಎಂದುಕೊಂಡಿದ್ದೆವು. ಆದರೆ, ಆಗಲಿಲ್ಲ. ಪ್ರವಾಸದ ಕೊನೆಯಲ್ಲಿ ನನ್ನನ್ನು ಹಾಸ್ಟೆಲ್‌ಗೆ ಬಿಡುವ ನಿರ್ಧಾರ ಅಂತಿಮವಾಯಿತು. ನಮ್ಮ ಈ ಪ್ರವಾಸದಲ್ಲಿ ಎಲ್ಲರ ಮೆಜಾರಿಟಿಯ ಪ್ರಕಾರ ಮಡಿಕೇರಿಗೆ ಜೈ ಎಂದಾಯಿತು. ಹೋಗುವ ದಾರಿಯಲ್ಲಿ ಮೊದಲು ಶ್ರವಣಬೆಳಗೊಳದ ನೂರಾರು ಮೆಟ್ಟಿಲಿಗೆ ನಮ್ಮ ಓಡುನಡಿಗೆಯ ಪಾದಸ್ಪರ್ಶ. ವಿರಾಟ್‌ ವಿರಾಗಿಗೊಂದು ನಮನ ಸಲ್ಲಿಸಿ ಅಲ್ಲಿನ ನಿಸರ್ಗ ಸೌಂದರ್ಯವನ್ನು ಕಣ್ಮನ ತುಂಬೆಲ್ಲ ಸವಿದೆವು.

ನಂತರ ಶನಿವಾರಸಂತೆಯಲ್ಲಿರುವ ಅಣ್ಣನ ಸ್ನೇಹಿತ ಸಾಗರ್‌ ಎಂಬವನ ಮನೆಗೆ ಹಾಜರ್‌. ಅಲ್ಲಿ ಅತಿಥಿದೇವೋಭವ ಎನ್ನುವ ಮಾತಿನಂತೆ ಚೆನ್ನಾಗಿ ನಮ್ಮನ್ನು ಉಪಚರಿಸಿದರು. ಅಲ್ಲಿ ತಿಂದ ಹೊಸರುಚಿಯ ಅಕ್ಕಿ ರೊಟ್ಟಿ , ಬೇಳೆಸೊಪ್ಪಿನ ಸಾರನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತಿದೆ. ಸಾಗರ್‌ ಸಲಹೆಯ ಮೇರೆಗೆ ಮುಂದೆ ಕುಶಾಲ್‌ನಗರದಲ್ಲಿರುವ ದುಬಾರೆಗೂ ದಾಳಿ ಇಟ್ಟಾಯಿತು. ಅಲ್ಲಿ ರಿವರ್‌ ರ್ಯಾಫ್ಟಿಂಗ್‌ನಲ್ಲಿ 7 ಕಿ. ಮೀ. ಪ್ರಯಾಣ ಬೆಳೆಸಿದೆವು.

ಮಳೆ ಮಾತ್ರ ಇನ್ನೂ ನಿಂತಿರಲಿಲ್ಲ. ­­­ಯೋಗ ರಾಜ ಭಟ್ಟರ ಚಿತ್ರದಲ್ಲಿ ಮಳೆಗೂ ಗಣೇಶ್‌ಗೂ ಇರುವ ನಂಟಿನಂತೆ ನಮಗೆ ಈ ಮುಂಗಾರು ಮಳೆ ಸ್ನೇಹಿತನಂತೆ ಕೊನೆಯವರೆಗೂ ಜೊತೆಯಲ್ಲೇ ಇದ್ದ.

ಭಾರತಿ ಸಜ್ಜನ್‌
ಪ್ರಥಮ ಎಂಸಿಜೆ, ಎಸ್‌ಡಿಎಂ ಕಾಲೇಜ್‌, ಉಜಿರೆ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.