ಚಾತುರ್ಮಾಸದಲ್ಲಿ ಶೂರ್ಪನಖಾ ಪ್ರಕರಣ


Team Udayavani, Nov 3, 2019, 12:34 AM IST

Udayavani Kannada Newspaper

ಶ್ರೀ ವೆಂಕಟರಮಣ ಯಕ್ಷಗಾನ ಕಲಾಸಮಿತಿ ಕಾರ್ಕಳ ಚಾತುರ್ಮಾಸದ ಅಂಗವಾಗಿ ಶೂರ್ಪನಖಾ ಪ್ರಕರಣ ತಾಳಮದ್ದಳೆ ಕೂಟ ನಡೆಯಿತು.

ರಾಮ, ಸೀತೆ, ಲಕ್ಷ್ಮಣರು ದಂಡಕಾರಣ್ಯವನ್ನು ಪ್ರವೇಶಿಸಿ ಅಲ್ಲಿ ಪಂಚವಟಿಯಲ್ಲಿ ಪರ್ಣಕುಟೀರವನ್ನು ಕಟ್ಟಿಕೊಂಡು ನೆಲೆ ನಿಲ್ಲುತ್ತಾರೆ.ಒಮ್ಮೆ ದಂಡಕಾರಣ್ಯದಲ್ಲಿದ್ದ ಋಷಿ ಮುನಿಗಳು ರಾಮನನ್ನು ಕಂಡು ಇಲ್ಲಿರುವ ರಕ್ಕಸರಿಂದ ತಮಗಾಗುತ್ತಿರುವ ಹಿಂಸೆ ಅನ್ಯಾಯಗಳನ್ನು ನಿವೇದಿಸಿ ರಕ್ಷಣೆಗಾಗಿ ಮೊರೆಯಿಡುತ್ತಾರೆ. ಆವಾಗ ಒಂದು ಹೆಣ್ಣು ರಕ್ಕಸಿಯ ಬೊಬ್ಬೆ,ಆರ್ಭಟ ಕೇಳಿ ಬರುತ್ತದೆ.ಇಲ್ಲಿಂದ ಶೂರ್ಪನಖಾ ಪ್ರಕರಣ ತೆರೆದುಕೊಳ್ಳುತ್ತದೆ.

ರಾಮನಾಗಿ ಡಾ| ಎಂ.ಪ್ರಭಾಕರ ಜೋಶಿಯವರು ಹಾಗೂ ಶೂರ್ಪನಖೀಯಾಗಿ ಉಜಿರೆ ಅಶೋಕ ಭಟ್ಟರ ನಡುವಿನ ಸಂವಾದವು ಒಗಟುಗಳ ಸುರಿಮಳೆ,ಪ್ರಾಸಬದ್ಧ ಮಾತಿನ ವಿನಿಮಯ ,ಸಿನೆಮಾ ಹಾಡಿನ ತುಣುಕುಗಳು,ನೆರೆದ ಪ್ರೇಕ್ಷಕರನ್ನು ರಂಜನೆಯೊಂದಿಗೆ ನಗೆಗೆಡಲಿನಲ್ಲಿ ತೇಲಿಸಿದಂತೂ ಸತ್ಯ.ಲಕ್ಷ್ಮಣನಾಗಿ ಅಪ್ಪು ನಾಯಕ್‌ ಅತ್ರಾಡಿಯವರು ಶೂರ್ಪನಖೀಯೊಂದಿಗೆ ವ್ಯವಹರಿಸುವಾಗ ಆಡಿದ ನಿಷ್ಠುರದ ಗಾಂಭೀರ್ಯದ ನುಡಿಗಳು ಶಹಬ್ಟಾಸ್‌ ಎನಿಸಿತು.ಹಿರಿಯ ಅರ್ಥದಾರಿ ಕೆ.ವಸಂತರವರು ಸೀತೆಯಾಗಿ ತನ್ನ ಧ್ವನಿ ಹೆಣ್ಣಿನ ಧ್ವನಿಗೆ ಸರಿಹೊಂದದಿದ್ದರೂ ರಾಮನ ಮಾಡದಿಯಾಗಿ,ಶೂರ್ಪನಖೀಯ ಬೊಬ್ಬೆಗೆ ಭಯಭೀತಿಯಿಂದ ಆತಂಕಕ್ಕೊಳಗಾದ ಸನ್ನಿವೇಶ ರಾಮನೊಂದಿಗಿನ ಸಂವಾದದಲ್ಲಿ ಉತ್ತಮವಾಗಿ ಅರ್ಥ ಹೇಳಿದರು. ಮುನಿಯಾಗಿ ದೈನ್ಯತೆಯಿಂದ ಮತ್ತು ಖರಾಸುರನಾಗಿ ಭೀತಿ ಹುಟ್ಟಿಸುವ ಪಾತ್ರದಿಂದ ಅರ್ಥಗಾರಿಕೆಯ ಪ್ರಭುದ್ಧತೆ ಮೆರೆದ ಎಸ್‌. ರಾಮ ಭಟ್ಟ ಕಾರ್ಕಳ ಪ್ರಶಂಸೆಗೆ ಪಾತ್ರರಾದರು.

ಒಟ್ಟಾರೆಯಾಗಿ ಕೊನೆಯವರೆಗೂ ಪ್ರೇಕ್ಷಕರನ್ನು ಎಲ್ಲ ಪಾತ್ರಧಾರಿಗಳೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಕೂಟದ ಯಶಸ್ಸಿಗೆ ಕಾರಣವಾಯಿತು.

ಇದೇ ವೇದಿಕೆಯಲ್ಲಿ ಹಿಂದೊಮ್ಮೆ ಶೂರ್ಪನಖಾ ಮಾನಭಂಗದ ಆಖ್ಯಾನದಲ್ಲಿ ಶೂರ್ಪನಖಾ ಭಂಡಾರಿಯೆಂದೇ ಖ್ಯಾತರಾಗಿದ್ದ ದಿವಂಗತ ಮಾರೂರು ಮಂಜುನಾಥ ಭಂಡಾರಿಯವರ ಶೂರ್ಪನಖಾ ಪಾತ್ರವನ್ನು ಆವಾಗ ಆನಂದಿಸಿ ಅನುಭವಿಸಿದ್ದ ಹಲವರು ಈ ಬಾರಿ ಮತ್ತೆ ಮತ್ತೇ ಅವರನ್ನು ನೆನಪಿಸಿಕೊಂಡದ್ದು ಕೂಟದ ಸಾರ್ಥಕತೆಯನ್ನು ಸಾರಿತು.

ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರರು ಸುಮಧುರವಾಗಿ ಭಾಗವತಿಕೆ ನಡೆಸಿದರು.ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಬ್ರಹ್ಮಾವರ,ಮದ್ದಳೆಯಲ್ಲಿ ನಾರಾಯಣ ಜಿ ಹೆಗ್ಡೆ ಉತ್ತಮ ನಿರ್ವಹಣೆ ತೋರಿದರು.

-ಎಂ.ರಾಘವೇಂದ್ರ ಭಂಡಾರ್‌ಕರ್‌

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.