ಪೂರ್ವಿಯ ಅಪೂರ್ವ ರಂಗ ಪ್ರವೇಶ


Team Udayavani, Nov 15, 2019, 3:59 AM IST

ff-4

ವಕೀಲ ವೃತ್ತಿಗೆ ಕಾಲಿಡುತ್ತಿರುವ ವಿ ದ್ಯಾರ್ಥಿನಿ. ಎಳೆಯ ವಯಸ್ಸಿನಿಂದಲೇ ಭರತನೃತ್ಯ ಮುಂತಾ ದ ಲಲಿತಕಲೆಗಳಲ್ಲಿ ಅಪಾರ ಆಸಕ್ತರು. ಹತ್ತು ವರ್ಷಗಳಿಂದ ಭರತ ನೃತ್ಯದಲ್ಲಿ ಮಾಡಿದ ಶ್ರದ್ಧೆಯ ಸಾಧನೆ ಫ‌ಲಶ್ರುತಿಯೇ ರಂಗ ಪ್ರವೇಶದ ಸಂಭ್ರಮ. ಬೆಳ್ತಂಗಡಿ ತಾಲೂಕಿನ ವೇಣೂರಿನ ಶಿಲಾ ಬಾಲಿಕೆ ಪೂರ್ವಿ ಹೆಗ್ಡೆಯವರ ಕಲಾ ಪ್ರದರ್ಶನ ನ.10ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ರಂಗಮಂಟಪದಲ್ಲಿ ಕಣ್ಮನಗಳಿಗೆ ಮಧುರ ಅನುಭವ ನೀಡಿತು.

ವಿ| ಡಾ| ಲಲಿತಾ ಶ್ರೀನಿವಾಸನ್‌ ಅವರ ಬಳಿ ಮೈಸೂರು ಶೈಲಿಯ ಭರತ ನೃತ್ಯ ಕಲೆಯನ್ನು ಕರಗತ ಮಾಡಿಕೊಂಡ ಪೂರ್ವಿ ಹೆಗ್ಡೆಯವರ ರಂಗ ಪ್ರವೇಶದ ಮೊದಲ ಕಾರ್ಯಕ್ರಮದಲ್ಲಿಯೇ ವೇಗದ ಗತಿ, ಭಾವ ಪ್ರದರ್ಶನ, ದಣಿವರಿಯದ ಹೆಜ್ಜೆಗಳ ಮೂಲಕ ಓರ್ವ ಪ್ರಬುದ್ಧ ಕಲಾವಿದೆ ರಂಗಕ್ಕಡಿಯಿಡುತ್ತಿರುವ ಎಲ್ಲ ಲಕ್ಷಣಗಳೂ ಗೋಚರಿಸಿದವು. ಗಣೇಶ ಮತ್ತು ಶಿವಸ್ತುತಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ. ನಾಟಿ ರಾಗ, ಆದಿ ತಾಳದಲ್ಲಿ ವಿಘ್ನೇಶ್ವರನಿಗೆ ಪುಷ್ಪಾಂಜಲಿ ಅರ್ಪಿಸುವ ಶ್ಲೋಕಕ್ಕೆ ಭಕ್ತಿ ಭಾವವನ್ನು ಶ್ರುತಪಡಿಸಿದ ರೀತಿ, ನಿಧಾನ ಗತಿಯ ಹೆಜ್ಜೆಗಳಿಗೆ ಮನ ಮುಟ್ಟುವ ಅಭಿವ್ಯಕ್ತಿಯ ಮೂಲಕ ಮನ ಗೆದ್ದಿತು.

ಜಯದೇವ ಕವಿಯ ಅಷ್ಟಪದಿಯನ್ನು ಜತಿಸ್ವರದ ಹೆಜ್ಜೆಗಳಿಗೆ ಆಯ್ದುಕೊಂಡ ಕಲಾವಿದೆ ವಸಂತ ರಾಗ, ಆದಿತಾಳದ ಗೀತೆಗೆ ಶೃಂಗಾರ ಭಾವವನ್ನು ಮೋಹಕವಾಗಿ ಕಣ್ಣುಗಳಲ್ಲಿ ಹೊರಚೆಲ್ಲುವ ಪರಿ ಅಮೋಘವಾಗಿತ್ತು. ವಿರಹ, ಸಾಮೀಪ್ಯಗಳ ರೋಮಾಂಚಕ ಸನ್ನಿವೇಶ, ರಾಧಾ – ಕೃಷ್ಣರ ಪ್ರಣಯದ ಭಾವಸ್ಪರ್ಶ ಮನ ಮುಟ್ಟಿತು, ಹೃದಯ ತಟ್ಟಿತು. ಬಳಿಕ ಸಾರಂಗ ಮತ್ತು ಯಮನ್‌ ಕಲ್ಯಾಣಿ ರಾಗಗಳಲ್ಲಿ ಪ್ರಸ್ತುತಪಡಿಸಿದ ಶ್ಲೋಕಗಳಿಗೆ ನರ್ತಿಸಿದ ಪರಿ ಕಲಾವಿದೆಯ ಪರಿಪುಷ್ಟ ಸಾಧನೆಯ ಸೊಬಗನ್ನು ಕಣ್ಮುಂದೆ ತಂದವು.

ಸಾವೇರಿ ರಾಗ ಆದಿತಾಳದ ವರ್ಣ, ಶುದ್ಧ ಧನ್ಯಾಸಿ ರಾಗ, ಆದಿ ತಾಳದ ಕೃತಿಗಳಲ್ಲಿ ದಣಿವರಿಯದ ಧ್ರುತಗತಿಯ ಹೆಜ್ಜೆಗಳ ಮೂಲಕ ಕಲೆಯ ರಸಪಾಕವನ್ನು ಹಂಚುತ್ತ ಹೋದ ಪೂರ್ವಿ ಅಟಾನಾ ರಾಗ, ಮಿಶ್ರಛಾಪು ತಾಳದ ದೇವರನಾಮದಲ್ಲಿ ಭಕ್ತಿ ರಸಭಾವದ ಪ್ರದರ್ಶನದಲ್ಲಿ ತನ್ಮಯಗೊಳಿಸಿದರು. ಬೇಹಾಗ್‌ ರಾಗ, ಆದಿ ತಾಳದಲ್ಲಿ ಜಾವಳಿ, ಕದನ ಕುತೂಹಲ ರಾಗ ಆದಿ ತಾಳದಲ್ಲಿ ತಿಲ್ಲಾನ, ಮಧ್ಯಮಾವತಿ ರಾಗದ ಭರತವಾಕ್ಯದ ಮೂಲಕ ಕೊನೆಗೊಂಡ ಕಾರ್ಯಕ್ರಮದಲ್ಲಿ ಪರಿಣತ ಕಲಾವಿದೆಯ ಗುಣ ಲಕ್ಷಣಗಳಿಂದ ಪ್ರದರ್ಶನದಲ್ಲಿ ಮಿಂಚಿದ ಪೂರ್ವಿ ಭವಿಷ್ಯದ ದಿನಗಳಲ್ಲಿ ಸಮರ್ಥ ಗುರುವಿನ ಪ್ರಬುದ್ಧ ಶಿಷ್ಯೆಯಾಗುವ ಎಲ್ಲ ಸೂಚನೆಗಳಿಂದ ಪರಿಪೂರ್ಣ ರಸ ರಂಜನೆಯನ್ನು ನೀಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ವಿ. ಕಾರ್ತಿಕ್‌ ಹೆಬ್ಟಾರ್‌(ಕೊಳಲು), ವಿ. ನಾರಾಯಣ ಸ್ವಾಮಿ(ವಯೊಲಿನ್‌), ವಿ. ದಯಾಕರ್‌(ವೀಣೆ) ಅವರೊಂದಿಗೆ ವಿ. ಕಾರ್ತಿಕ್‌ ಸಾತವಳ್ಳಿ(ಅಲಂಕಾರ), ಅರ್ಮುಗಮ್‌(ವಸ್ತ್ರ ವಿನ್ಯಾಸ) ಹಾಗೂ ಡಾ| ರೇಖಾ ರಾಜೀವ್‌ ಅವರ ಬೆಳಕಿನ ವ್ಯವಸ್ಥೆ ಪ್ರದರ್ಶನವನ್ನು ಸಂಪನ್ನಗೊಳಿಸುವಲ್ಲಿ ಪೂರಕವಾಗಿ ಸಹಕರಿಸಿತು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.