ಗರಂ ಗರಂ ಸಾರುಗಳು


Team Udayavani, Nov 22, 2019, 4:27 AM IST

pp-23

ಚಳಿಗಾಲಕ್ಕೆ ನಾಲಗೆಗೆ ಹಿತವಾಗುವ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ಹೆಚ್ಚು ಖರ್ಚಿಲ್ಲದೆ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆರೋಗ್ಯಕರ ಸಾರುಗಳ ರೆಸಿಪಿ ಇಲ್ಲಿದೆ.

ದೊಡ್ಡಪತ್ರೆ ಸಾರು
ಬೇಕಾಗುವ ಸಾಮಗ್ರಿ: ತೊಳೆದು ಸಣ್ಣಗೆ ಹೆಚ್ಚಿದ 4-6 ದೊಡ್ಡ ಪತ್ರೆ ಎಲೆಗಳು, 1 ಈರುಳ್ಳಿ, 1 ಚಮಚ ಹುಳಿರಸ, 1 ಚಮಚ ಬೆಲ್ಲದ ಪುಡಿ, 1 ಚಮಚ ಉದ್ದಿನಬೇಳೆ, 1/4 ಚಮಚ ಜೀರಿಗೆ, 3-4 ಕಾಳುಮೆಣಸು, 2-3 ಕೆಂಪುಮೆಣಸು, 1/4 ಚಮಚ ಸಾಸಿವೆ, 1/4 ಚಮಚ ಜೀರಿಗೆ, 7-8 ಕರಿಬೇವಿನೆಲೆ, 1 ಚಮಚ ತುಪ್ಪ.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಈರುಳ್ಳಿ ಚೂರು, ದೊಡ್ಡಪತ್ರೆ ಎಲೆಯ ಚೂರು ಹಾಕಿ ಚೆನ್ನಾಗಿ ಹುರಿಯಿರಿ. ಉದ್ದಿನಬೇಳೆ, ಜೀರಿಗೆ, ಕಾಳುಮೆಣಸು, ಕೆಂಪುಮೆಣಸು ಇವಿಷ್ಟನ್ನು ಹುರಿದು ಪುಡಿ ಮಾಡಿ. ನಂತರ ಮೇಲಿನ ಈರುಳ್ಳಿ ಚೂರು, ದೊಡ್ಡಪತ್ರೆಯ ಮಿಶ್ರಣಕ್ಕೆ ಹಾಕಿ. ಉಪ್ಪು, ಹುಳಿ, ಬೆಲ್ಲ , ಸ್ವಲ್ಪ ನೀರು ಹಾಕಿ ಕುದಿಸಿ. ನಂತರ ಸಾಸಿವೆ, ಜೀರಿಗೆ, ಕರಿಬೇವಿನೆಲೆಯ ಒಗ್ಗರಣೆ ಕೊಡಿ. ಈಗ ಘಮಘಮಿಸುವ ಸಾರು ಸವಿಯಲು ಸಿದ್ಧ.

ಕರಿಮೆಣಸು ಸಾರು
ಬೇಕಾಗುವ ಸಾಮಗ್ರಿ: 2 ಚಮಚ ತುಪ್ಪ , 1 ಚಮಚ ಎಣ್ಣೆ, 1 ಟೇಬಲ್‌ ಚಮಚ ಕರಿಮೆಣಸು, 1 ಚಮಚ ಜೀರಿಗೆ, 4-5 ಮೆಂತೆಕಾಳು, 1/2 ಚಮಚ ಸಾಸಿವೆ, 1/2 ಕಪ್‌ ತೊಗರಿಬೇಳೆ, 1-2 ಟೊಮೆಟೊ, 1-2 ಬೆಳ್ಳುಳ್ಳಿ ಎಸಳು, 1 ಈರುಳ್ಳಿ , 2 ಕೆಂಪುಮೆಣಸು, 1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಜೀರಿಗೆ, ಕರಿಮೆಣಸು, ಮೆಂತೆಕಾಳು ಹಾಕಿ ಹುರಿಯಿರಿ. ತಣ್ಣಗಾದ ಮೇಲೆ ಪುಡಿ ಮಾಡಿ. ಟೊಮೆಟೊ ತೊಗರಿಬೇಳೆ ಸ್ವಲ್ಪ ನೀರು ಸೇರಿಸಿ ಕುಕ್ಕರಿನಲ್ಲಿಟ್ಟು ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ತುಪ್ಪ , ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಬೆಳ್ಳುಳ್ಳಿ ಎಸಳು, ನೀರುಳ್ಳಿ ಹಾಕಿ ಹುರಿದು, ಬೇಯಿಸಿದ ತೊಗರಿಬೇಳೆ, ಟೊಮೆಟೊ, ನೀರು, ಮಾಡಿಟ್ಟ ಪುಡಿ ಹಾಕಿ ಕುದಿಸಿ. ಉಪ್ಪು ಹಾಕಿ. 5-10 ನಿಮಿಷ ಕುದಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ಕರಿಮೆಣಸು ಸಾರು ಅನ್ನದೊಂದಿಗೆ ಸವಿಯಲು ಹಿತವಾಗಿರುತ್ತದೆ.

ತೊಗರಿಬೇಳೆ ಗರಂ ಸಾರು
ಬೇಕಾಗುವ ಸಾಮಗ್ರಿ: 1/2 ಕಪ್‌ ತೊಗರಿಬೇಳೆ, 2-3 ಟೊಮೆಟೊ ಹಣ್ಣು , 2 ಚಮಚ ಕೊತ್ತಂಬರಿ ಬೀಜ, 1/4 ಚಮಚ ಸಾಸಿವೆ, 1/4 ಚಮಚ ಜೀರಿಗೆ, 1/4 ಚಮಚ ಕಾಳುಮೆಣಸು, 2-3 ಒಣಮೆಣಸು, 2 ಎಸಳು ಕರಿಬೇವು, 2 ಚಮಚ ಎಣ್ಣೆ, ಚಿಟಿಕೆ ಇಂಗು, 1/2 ಚಮಚ ಬೆಲ್ಲ, 1/4 ಕಪ್‌ ತೆಂಗಿನತುರಿ, 1/4 ಚಮಚ ಕೆಂಪುಮೆಣಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೊಗರಿಬೇಳೆ ತೊಳೆದು, ಸ್ವಲ್ಪ ನೀರು ಸೇರಿಸಿ ಕುಕ್ಕರಿಗೆ ಹಾಕಿ ಬೇಯಿಸಿ. ಟೊಮೆಟೊ ಸಣ್ಣಗೆ ತುಂಡು ಮಾಡಿ. ಉಪ್ಪು , ಬೆಲ್ಲ, ಮೆಣಸಿನ ಪುಡಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಕೊತ್ತಂಬರಿ ಬೀಜ, ಸಾಸಿವೆ, ಮೆಂತೆ, ಜೀರಿಗೆ, ಕಾಳುಮೆಣಸು, ಒಣಮೆಣಸು ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನತುರಿ, ಸ್ವಲ್ಪ ನೀರು ಸೇರಿಸಿ ರುಬ್ಬಿ. ಬೆಂದ ಟೊಮೆಟೊಕ್ಕೆ ಬೆಂದ ಬೇಳೆ, ರುಬ್ಬಿದ ಮಿಶ್ರಣ, ಬೇಕಾದಷ್ಟು ನೀರು ಸೇರಿಸಿ ತೆಳ್ಳಗೆ ಮಾಡಿ ಕುದಿಸಿ. ಕರಿಬೇವು, ಕೊತ್ತಂಬರಿಸೊಪ್ಪು ಹಾಕಿ ಸಾಸಿವೆ, ಇಂಗಿನ ಒಗ್ಗರಣೆ ಕೊಡಿ.

ಮೆಂತೆಸೊಪ್ಪಿನ ಸಾರು
ಬೇಕಾಗುವ ಸಾಮಗ್ರಿ: 1/2 ಕಪ್‌ ತೊಗರಿಬೇಳೆ, 1 ಕಂತೆ ಮೆಂತೆ ಸೊಪ್ಪು, 2 ಚಮಚ ಸಾರಿನ ಪುಡಿ, 1/2 ಚಮಚ ಬೆಲ್ಲ, 1/2 ಚಮಚ ಹುಳಿರಸ, 1 ಚಮಚ ಸಾಸಿವೆ, 1 ಒಣಮೆಣಸು, ಸ್ವಲ್ಪ ಕರಿಬೇವಿನೆಲೆ, 1 ಚಮಚ ಎಣ್ಣೆ , ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ತೊಗರಿಬೇಳೆಗೆ ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿಟ್ಟು ಬೇಯಿಸಿ. ಮೆಂತೆಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ನಂತರ ಬೆಂದ ತೊಗರಿಬೇಳೆ, ಸಾರಿನಪುಡಿ, ಉಪ್ಪು , ಹುಳಿ, ಬೆಲ್ಲ, ಸಣ್ಣಗೆ ತುಂಡು ಮಾಡಿದ ಮೆಂತೆಸೊಪ್ಪು , ಬೇಕಾದಷ್ಟು ನೀರು ಸೇರಿಸಿ ತೆಳ್ಳಗೆ ಮಾಡಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನೆಲೆಯ ಒಗ್ಗರಣೆ ಕೊಡಿ.

ಪುನರ್ಪುಳಿ ಸಿಪ್ಪೆ ಸಾರು
ಬೇಕಾಗುವ ಸಾಮಗ್ರಿ: 1 ಕಪ್‌ ಒಣಗಿದ ಪುನರ್ಪುಳಿ ಸಿಪ್ಪೆ , 1/2 ಅಚ್ಚು ಬೆಲ್ಲ, 1/2 ಚಮಚ ಕೆಂಪುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಾಸಿವೆ, 1 ಕೆಂಪುಮೆಣಸು, 1 ಚಮಚ ಎಣ್ಣೆ.

ತಯಾರಿಸುವ ವಿಧಾನ: ಪುನರ್ಪುಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ 2 ಕಪ್‌ ನೀರು ಹಾಕಿ ಸಿಪ್ಪೆಯನ್ನು ಕಿವುಚಿ, ರಸ ತೆಗೆಯಿರಿ. ನಂತರ ಸಿಪ್ಪೆ ಎಸೆದು, ಉಳಿದ ನೀರಿಗೆ ಉಪ್ಪು, ಬೆಲ್ಲ, ಮೆಣಸಿನ ಪುಡಿ ಹಾಕಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸಿನ ತುಂಡು ಹಾಕಿ ಒಗ್ಗರಣೆ ಕೊಡಿ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.