ಕರಿಬೇವಿನ ಕಮಾಲ್
Team Udayavani, Dec 6, 2019, 4:58 AM IST
ಅಡುಗೆ ಆದ ನಂತರ ಅದಕ್ಕೆ ಮುಕ್ತಾಯ ಹಾಡಬೇಕಾದರೆ ಒಗ್ಗರಣೆಗೆ ಕರಿಬೇವು ಬೇಕೇ ಬೇಕು. ಅದರಲ್ಲಿರುವ ಪೌಷ್ಟಿಕಾಂಶದ ಅರಿವಿಲ್ಲದೆ ಊಟದ ಮಧ್ಯೆ ಸಿಗುವ ಕರಿಬೇವನ್ನು ಕಸದ ರೀತಿಯಲ್ಲಿ ಬಿಸಾಡುತ್ತಾರೆ. ಆದರೆ, ಈ ಕರಿಬೇವಿನ ಉಪಯೋಗವನ್ನು ಅರಿತರೆ ಆಶ್ಚರ್ಯಕರವಾಗಬಹುದು. ಅನೇಕ ಸಣ್ಣಪುಟ್ಟ ಕಾಯಿಲೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.
ವಾಂತಿ ನಿವಾರಣೆಗೆ
ಕರಿಬೇವಿನ ಕಡ್ಡಿ 5, ಬೇವಿನ ಕಡ್ಡಿ 5 ತೆಗೆದುಕೊಂಡು ನೀರಿನಲ್ಲಿ ಕುದಿಸಿ, ಅದಕ್ಕೆ ಚಿಟಿಕೆ ಉಪ್ಪು, ಸ್ವಲ್ಪ ಕರಿಮೆಣಸಿನ ಪುಡಿ ಹಾಕಿ ಆಗಾಗ ಸೇವಿಸಬೇಕು.
ಹೊಟ್ಟೆಯುಬ್ಬರ ಕಡಿಮೆಯಾಗಲು
ಒಂದು ಲೋಟ ನೀರಿಗೆ 20 ಕರಿಬೇವಿನ ಎಲೆ, 5ರಿಂದ 6 ಕಾಳುಮೆಣಸು, 1/2 ಚಮಚ ಶುಂಠಿ ಪುಡಿ, 1/2 ಚಮಚ ಜೀರಿಗೆ ಹಾಕಿ, ಕುದಿಸಿ ಕುಡಿಯಬೇಕು.
ಕಫ ಕೆಮ್ಮಿನ ತೊಂದರೆಗಳಿಗೆ
ಕರಿಬೇವಿನ ಎಲೆ 6, ಎರಡು ತುಳಸಿ ಎಲೆಗಳನ್ನು ತೆಗೆದುಕೊಂಡು ಚೂರು ಉಪ್ಪು ಹಾಕಿ, ಜಗಿದು ತಿಂದರೆ ಅಜೀರ್ಣತೆಯ ಜೊತೆಗೆ ಕಫ, ಕೆಮ್ಮು ಮಾಯವಾಗಿತ್ತದೆ.
ಮಧುಮೇಹ ನಿಯಂತ್ರಣಕ್ಕೆ
10-12 ಕರಿಬೇವಿನ ಎಲೆಯೊಂದಿಗೆ ಎರಡು ಬೆರಳುಗಳಲ್ಲಿ ಬರುವಷ್ಟು ಜೀರಿಗೆಯನ್ನು ಬರೀ ಹೊಟ್ಟೆಯಲ್ಲಿ ಬೆಳಿಗ್ಗೆ ತಿನ್ನುವುದರಿಂದ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಕರಿಬೇವಿನ ಎಲೆಗಳನ್ನು ತೊಳೆದು ನೆರಳಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿ ಮಾಡಿಟ್ಟು ಕೊಂಡು ದಿನಾಲು ಬೆಳಿಗ್ಗೆ ಒಂದು ಚಮಚ ಪುಡಿಯೊಂದಿಗೆ 1/2 ಚಮಚ ಜೀರಿಗೆ ಪುಡಿ ಸೇರಿಸಿ ತಿನ್ನಬಹುದು.
ಬಾಯಿ ರುಚಿ ಕೆಟ್ಟಿದ್ದಾಗ
ತುಂಬಾ ದಿನದಿಂದ ಜ್ವರ ಬಂದು ಬಾಯಿ ರುಚಿ ಕೆಟ್ಟಿದ್ದಾಗ ಕರಿಬೇವಿನ ಸೊಪ್ಪಿನ ಎಲೆಗಳಿಂದ ತಂಬುಳಿ ಮಾಡಿಕೊಂಡು, ಊಟ ಮಾಡುವುದರಿಂದ ಊಟ ಚೆನ್ನಾಗಿ ಸೇರುತ್ತದೆ. ಕರಿಬೇವಿನ ಎಲೆಗಳನ್ನು ಹಾಗೆಯೇ ತಿನ್ನಲು ಕಷ್ಟವಾದರೆ ಚಟ್ನಿಪುಡಿಗೆ ಜಾಸ್ತಿ ಎಲೆಗಳನ್ನು ಹಾಕಿ, ಮಾಡಿ ಉಪಯೋಗಿಸಬಹುದು.
ತಲೆ ಕೂದಲು ಕಪ್ಪಾಗಲು
ತೆಂಗಿನ ಎಣ್ಣೆಯೊಂದಿಗೆ ಕರಿಬೇವಿನ ಎಲೆಗಳನ್ನು ಹಾಕಿ ಕಾಯಿಸಿ, ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.
.ಕರಿಬೇವಿನಲ್ಲಿ ಕಬ್ಬಿಣದ ಅಂಶ ಸಾಕಷ್ಟಿರುವುದರಿಂದ ಸ್ತ್ರೀಯರ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ.
ಪುಷ್ಪಾ ಎನ್.ಕೆ. ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ