ಇಂದಿನಿಂದ ಕಾಪು ತಾ| ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ


Team Udayavani, Dec 17, 2019, 5:49 AM IST

KAPU-A

ಶಿರ್ವ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾಪು ಘಟಕದ ಕಾಪು ತಾ| ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಸಂಶೋಧಕ, ಹಿರಿಯ ಜನಪದ ವಿದ್ವಾಂಸ ಕೆ.ಎಲ್‌. ಕುಂಡಂತಾಯ ಅವರ ಸರ್ವಾಧ್ಯಕ್ಷತೆಯಲ್ಲಿ ಡಿ. 17ರಂದು ಮೂಡುಬೆಳ್ಳೆ ಸಂತ ಲಾರೆನ್ಸ್‌ ಚರ್ಚ್‌ನ ಸೌಹಾರ್ದ ಸಭಾಭವನದಲ್ಲಿ ನಡೆಯಲಿದೆ.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಸಮ್ಮೇ ಳನವನ್ನು ಉದ್ಘಾಟಿಸಲಿದ್ದಾರೆ. ಮೂಡುಬೆಳ್ಳೆ ಚರ್ಚ್‌ ನ ಧರ್ಮಗುರು, ಸಮ್ಮೇಳನದ ಗೌರವಾಧ್ಯಕ್ಷ ವಂ| ಕ್ಲೆಮೆಂಟ್‌ ಮಸ್ಕರೇನಸ್‌ ಹಾಗೂ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಪಸ್ಥಿತರಿ ರುವರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದು, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಸ್ಮರಣ ಸಂಚಿಕೆ ಬಿಡುಗಡೆ, ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ ಧ್ವಜ ಹಸ್ತಾಂತರ, ಕಸಾಪ ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಧರ್ಮಸ್ಥಳ ಗ್ರಾ.ಯೋ. ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್‌, ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ತಾ.ಪಂ. ಸದಸ್ಯೆ ಸುಜಾತಾ ಸುವರ್ಣ, ಬೆಳ್ಳೆ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಶಿವಾಜಿ ಸುವರ್ಣ ಬೆಳ್ಳೆ, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಶಶಿಧರ  ಸಂತ ಲಾರೆನ್ಸ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲ ದೇವರಾಯ ಶಾನುಭೋಗ್‌, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧಿಕಾರಿ ವಲೇರಿಯನ್‌ ಮೆನೇಜಸ್‌, ಸಂಘಟನ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ ಉಪಸ್ಥಿತರಿರುವರು.

ಸಮಾರೋಪ ಸಮಾರಂಭ
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ಶ್ರೀಧರ ಮೂರ್ತಿ ಸಮಾರೋಪ ಭಾಷಣ ಮಾಡಲಿದ್ದು, ಕಾಪು ತಾ| ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಅದಾನಿ ಯುಪಿಸಿಎಲ್‌ನ ಪ್ರಾದೇಶಿಕ ಅಧ್ಯಕ್ಷ ಕಿಶೋರ್‌ ಆಳ್ವ ಸಾಧಕರ‌ನ್ನು ಸಮ್ಮಾನಿಸಲಿದ್ದಾರೆ.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಕಾಪು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಕರ್ನಾಟಕ ಬ್ಯಾಂಕ್‌ನ ಡಿಜಿಎಂ ಗೋಪಾಲಕೃಷ್ಣ ಸಾಮಗ, ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ| ವೈ. ಭಾಸ್ಕರ್‌ ಶೆಟ್ಟಿ, ಕೆಎಂಎಫ್‌ ರಾಜ್ಯ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಜೆರಾಲ್ಡ್‌ ಫೆರ್ನಾಂಡಿಸ್‌, ಬೆಳ್ಳೆ ಪಿಡಿಒ ವಸಂತಿ ಬಾಯಿ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್‌ ಕುಮಾರ್‌, ಕಸಾಪ ಜಿಲ್ಲಾ ಗೌ| ಕಾರ್ಯದರ್ಶಿ ಡಾ| ಸುಬ್ರಮಣ್ಯ ಭಟ್‌, ಸಂಘಟನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಉಪಸ್ಥಿತರಿರುವರು.

ಸಮ್ಮಾನ
ಹಿರಿಯ ದಾರುಶಿಲ್ಪಿ ಬಾಬು ಆಚಾರ್ಯ ಕಟ್ಟಿಂ ಗೇರಿ, ಪಾಡªನ ಕಲಾವಿದೆ ಅಪ್ಪಿ ಕೃಷ್ಣ ಪಾಣಾರ, ಪಾರಂಪರಿಕ ನಾಟಿವೈದ್ಯೆ ಶಾಲಿನಿ ಪೂಜಾರಿ, ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಸುಲತಾ ಕಾಮತ್‌ ಕಟಪಾಡಿ, ಹೊರನಾಡ ಕನ್ನಡಿಗ ಸಾಹಿತಿ ಉದ್ಯಮಿ ಕಟ್ಟಿಂಗೇರಿ ಸುಭಾಶ್ಚಂದ್ರ ಹೆಗ್ಡೆ, ಯಕ್ಷಗಾನ, ನಾಟಕ ಕಲಾವಿದ ವಾಸುದೇವ ರಾವ್‌ ಎರ್ಮಾಳ್‌, ಡೋಲುವಾದಕ ವಸಂತ ಪಡುಬೆಳ್ಳೆ, ಯಕ್ಷಗಾನ ಸಂಘಟಕ ವಿಠಲ್‌ ನಾಯಕ್‌, ನಾಗಸ್ವರ ವಾದಕ ಚಂದಯ್ಯ ಶೆೇರಿಗಾರ್‌ ಕಟಪಾಡಿ, ಪ್ರಗತಿಪರ ಕೃಷಿಕ ಲಾರೆನ್ಸ್‌ ಆಳ್ವ ತಬೈಲ್‌ ಅವರನ್ನು ಸಮ್ಮಾನಿಸಲಾಗುವುದು.
ಅಂದು ಬೆಳಗ್ಗೆ ಮೂಡುಬೆಳ್ಳೆ ಪೇಟೆಯಲ್ಲಿ ಭುವನೇಶ್ವರಿ ದೇವಿಯ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ. ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಾಪು ತಾ| ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮತ್ತು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ. ದೇವದಾಸ್‌ ಹೆಬ್ಟಾರ್‌ ತಿಳಿಸಿದ್ದಾರೆ.

ವಿವಿಧ ಗೋಷ್ಠಿಗಳು
ಸಮ್ಮೇಳನದಲ್ಲಿ ಮೂರು ಪ್ರಮುಖ ಗೋಷ್ಠಿಗಳು ನಡೆಯಲಿದ್ದು, ಬೆಳಗ್ಗೆ ಬೆಳ್ಳೆ ಕಟ್ಟಿಂಗೇರಿ ಐತಿಹಾಸಿಕ ಸಾಂಸ್ಕೃತಿಕ ಪರಂಪರೆ ವಿಷಯದಲ್ಲಿ ಪ್ರಧಾನ ಗೋಷ್ಠಿ ನಡೆಯಲಿದೆ. ನಿವೃತ್ತ ಪ್ರಾಧ್ಯಾಪಕ ಲ| ಪ್ರೊ| ವಿಲ್ಫೆ†ಡ್‌ ಆರ್‌. ಡಿ’ಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಅನು ಬೆಳ್ಳೆ (ರಾಘವೇಂದ್ರ ಬಿ. ರಾವ್‌) ಮತ್ತು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್‌ ಆಳ್ವ ವಿಷಯ ಮಂಡಿಸಲಿದ್ದಾರೆ.

ಕವಿಗೋಷ್ಠಿ
ಬಳಿಕ ಸಾಹಿತಿ ಕವಿ ರಂಗಕರ್ಮಿ ಗುರುರಾಜ ಮಾರ್ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಇಂದಿರಾ ಸುಬ್ಬಯ್ಯ ಹೆಗ್ಡೆ ಶಿರ್ವ, ಸುಧಾ ಭಟ್‌ ಉಚ್ಚಿಲ,ವೀಣೇಶ್‌ ಅಮೀನ್‌ ಸಾಂತೂರು, ದಿವ್ಯಾ ಭಟ್‌ ಮೂಡುಬೆಳ್ಳೆ, ವಂದನಾ ಕುಮಾರಿ ಕುತ್ಯಾರು, ವಾಲ್ಸ್‌ ಸ್ಟನ್‌ ಡೇಸಾ ಶಂಕರಪುರ, ಫಾತಿಮಾ ರಲಿಯಾ ಹೆಜಮಾಡಿ, ಲಕ್ಷ್ಮೀದೇವಿ ಪಿ. ಶೆಟ್ಟಿ ಶಿರ್ವ, ರೋಹಿಣಿ ಕಟಪಾಡಿ, ಎಚ್‌. ಮಲ್ಲಿಕಾರ್ಜುನ್‌ ರಾವ್‌ ಉಳಿಯಾರು ತಮ್ಮ ಕವನಗಳನ್ನು ವಾಚಿಸಲಿದ್ದಾರೆ.

ವಿದ್ಯಾರ್ಥಿಗೋಷ್ಠಿ
ಅಪರಾಹ್ನ ನಡೆಯುವ ವಿದ್ಯಾರ್ಥಿಗೋಷ್ಠಿಯ ಅಧ್ಯಕ್ಷತೆಯನ್ನು ದಂಡತೀರ್ಥ ಪ.ಪೂ. ಕಾಲೇಜಿನ ಉಪನ್ಯಾಸಕ ನೀಲಾನಂದ ನಾಯಕ್‌ ವಹಿಸಲಿದ್ದಾರೆ. ವರ್ಷಿತಾ ಸುವರ್ಣ ಮೂಡುಬೆಳ್ಳೆ ಸಂತ ಲಾರೆನ್ಸ್‌ ಪ.ಪೂ. ಕಾಲೇಜು, ಸ್ಫೂರ್ತಿ ಶಿರ್ವ ಹಿಂದೂ ಪ.ಪೂ. ಕಾಲೇಜು, ಸಂಜನಾ ಹೆಬ್ಟಾರ್‌ ಜ್ಞಾನಗಂಗಾ ಪ.ಪೂ. ಕಾಲೇಜು ನೆಲ್ಲಿಕಟ್ಟೆ, ದಿಶಾ ಆಚಾರ್ಯ ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌ ಕಾಪು, ಸರಸ್ವತಿ ಶಿರೂರು, ಎಸ್‌ವಿಎಸ್‌ ಪ.ಪೂ. ಕಾಲೇಜು ಕಟಪಾಡಿ, ರಕ್ಷಾ ಆರ್‌. ಪ್ರಭು ಸಂತ ಜಾನ್ಸ್‌ ಪ.ಪೂ.ಕಾಲೇಜು ಶಂಕರಪುರ, ಶಾಯಿರಾ ಬಾನು ಸರಕಾರಿ ಪ.ಪೂ. ಕಾಲೇಜು ಪಡುಬಿದ್ರಿ, ಛಾಯಾ ಬಲ್ಲಾಳ್‌ ದಂಡತೀರ್ಥ ಆಂಗ್ಲಮಾಧ್ಯಮ ಶಾಲೆ ಕಾಪು ಇಲ್ಲಿನ ವಿದ್ಯಾರ್ಥಿಗಳು “ನಾನು ಓದಿದ ಪುಸ್ತಕ’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.

ಟಾಪ್ ನ್ಯೂಸ್

1-qewqewqe

Bagalkote; ಬಾಗಿಲು ತೆರೆಯದ‌ ಮಹಿಳೆ: ಆ್ಯಸಿಡ್ ಎರಚಿದ ಪ್ರೇಮಿ!

20-

Kinnigoli: ಏಸ್‌ ಢಿಕ್ಕಿ: ಬುಲೆಟ್‌ ಸವಾರ ಸಾವು

Bhavani Revanna ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Bhavani Revanna ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

19-mng

Mangaluru: ಮೂಗುತಿ ರಿಪೇರಿಗೆ ಬಂದಾಕೆ ಚಿನ್ನ ಎಗರಿಸಿದಳು

Parameshwara ಮಾತು ಕೇಳಿಯೇ ತೀರ್ಮಾನ ಮಾಡುತ್ತೇವೆ: ಡಿಕೆಶಿ

Parameshwara ಮಾತು ಕೇಳಿಯೇ ತೀರ್ಮಾನ ಮಾಡುತ್ತೇವೆ: ಡಿಕೆಶಿ

CM, ಡಿಸಿಎಂ ಇಬ್ಬರೇ ನಿರ್ಧಾರ ತೆಗೆದುಕೊಳ್ಳಬಾರದು: ಡಾ.ಜಿ. ಪರಮೇಶ್ವರ್‌

CM, ಡಿಸಿಎಂ ಇಬ್ಬರೇ ನಿರ್ಧಾರ ತೆಗೆದುಕೊಳ್ಳಬಾರದು: ಡಾ.ಜಿ. ಪರಮೇಶ್ವರ್‌

18

Puttur: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-kaup

Kaup: ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿಗೆ ಢಿಕ್ಕಿ ಹೊಡೆದು ಪಲ್ಟಿ

6-shirva

Shirva: ನಿವೃತ್ತ ಶಿಕ್ಷಕ ಬೆಳಂಜಾಲೆ ಭಾಸ್ಕರ ಶೆಟ್ಟಿ ನಿಧನ

5-temple

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ಮಹಾ ಚಂಡಿಕಾಯಾಗ ಮಹಾ ಮಂತ್ರಕ್ಷತೆ ಸಂಪನ್ನ

4-kmc

KMC ಸಂತಾನೋತ್ಪತ್ತಿ ಔಷಧ,ಶಸ್ತ್ರಚಿಕಿತ್ಸೆ ವಿಭಾಗ: ಐವಿಎಫ್, ಫರ್ಟಿಲಿಟಿ ಕೇಂದ್ರಗಳಲ್ಲಿ ಒಂದು

ಪಕ್ಷ ವಿರೋಧಿ ಚಟುವಟಿಕೆ: 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-qewqewqe

Bagalkote; ಬಾಗಿಲು ತೆರೆಯದ‌ ಮಹಿಳೆ: ಆ್ಯಸಿಡ್ ಎರಚಿದ ಪ್ರೇಮಿ!

20-

Kinnigoli: ಏಸ್‌ ಢಿಕ್ಕಿ: ಬುಲೆಟ್‌ ಸವಾರ ಸಾವು

Bhavani Revanna ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Bhavani Revanna ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

19-mng

Mangaluru: ಮೂಗುತಿ ರಿಪೇರಿಗೆ ಬಂದಾಕೆ ಚಿನ್ನ ಎಗರಿಸಿದಳು

Parameshwara ಮಾತು ಕೇಳಿಯೇ ತೀರ್ಮಾನ ಮಾಡುತ್ತೇವೆ: ಡಿಕೆಶಿ

Parameshwara ಮಾತು ಕೇಳಿಯೇ ತೀರ್ಮಾನ ಮಾಡುತ್ತೇವೆ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.