ಪ್ರಸವಾನಂತರದ ಮಾನಸಿಕ ಖನ್ನತೆ

ಕಾಯಿಲೆಯ ಬಗೆಗಿನ ಅಪನಂಬಿಕೆಗಳು ಮತ್ತು ಪರಿಹಾರಗಳು

Team Udayavani, Dec 22, 2019, 4:59 AM IST

cd-14

ಮೊನ್ನೆ ಕ್ಲಿನಿಕ್‌ಗೆ ಬಂದ ರೋಗಿಯ ಪೋಷಕರೋರ್ವರು ತನ್ನ ಮಗಳ ಸಮಸ್ಯೆಯ ಬಗ್ಗೆ ಹೇಳುತ್ತಿದ್ದರು. “ಡಾಕ್ಟರೇ ಹೋದ ವಾರದ ತನಕ ಚೆನ್ನಾಗಿದ್ದ ನನ್ನ ಮಗಳು ಪ್ರಸವದ ಅನಂತರ ಒಂಥರಾ ಮಾಡುತ್ತಿದ್ದಾಳೆ. ಅದೇನೋ ಒಬ್ಬಳೇ ಅಳ್ತಾಳೆ, ಯಾವುದೂ ಬೇಡ ಅಂತಾಳೆ, ಮಗುವನ್ನು ಕಣ್ಣೆತ್ತಿ ಕೂಡ ನೋಡ್ತಾ ಇಲ್ಲ. ಸರಿಯಾಗಿ ನಿದ್ದೆ ಆಗಲಿ ಅಥವಾ ಊಟ ಆಗಲಿ ಮಾಡ್ತಾ ಇಲ್ಲ. ಒಂಚೂರೂ ನೋಡಿ ಡಾಕ್ಟ್ರೇ’

ಪ್ರಸವಾನಂತರದ ಮಾನಸಿಕ ಖನ್ನತೆಯು ಮಗುವನ್ನು ಹೆತ್ತ ಬಳಿಕ ಮಹಿಳೆಯರನ್ನು ಕಾಡಬಲ್ಲ ಒಂದು ಭಾವನಾತ್ಮಕ ಸಮಸ್ಯೆ. ಭಾರತದಲ್ಲಿ ಶೇ.22ರಷ್ಟು ಚೊಚ್ಚಲ ತಾಯಂದಿರು ಈ ಸಮಸ್ಯೆಯಿಂದ ಬಳಲುತ್ತಾರೆ. ಮಗುವನ್ನು ಹೆತ್ತ ಬಳಿಕ ಶೇ.60ರಿಂದ 80ರಷ್ಟು ಮಹಿಳೆಯರು ಚಿಂತೆ, ಅಸಂತೋಷ, ದಣಿವು ಇತ್ಯಾದಿಗಳನ್ನು ಅನುಭವಿಸುತ್ತಾರೆ; ಇದು ಒಂದೆರಡು ವಾರಗಳ ಕಾಲ ಇದ್ದು ಆ ಬಳಿಕ ತಂತಾನೆ ಮಾಯವಾಗುತ್ತದೆ. ಆದರೆ ಪ್ರಸವಾನಂತರದ ಖನ್ನತೆಯಿಂದ ಬಳಲುವ ತಾಯಂದಿರು ತೀವ್ರ ದುಃಖ, ಆತಂಕ, ಉದ್ವಿಗ್ನತೆ ಮತ್ತು ಕಂಗಾಲುತನದಂತಹ ಸಮಸ್ಯೆಗಳಿಂದ ಬಳಲುತ್ತಿದ್ದು, ತನ್ನ ಅಥವಾ ಇತರರಿಗಾಗಿನ ದೈನಿಕ ಚಟುವಟಿಕೆಗಳನ್ನು ನಡೆಸುವಲ್ಲಿ ತೊಂದರೆ ಎದುರಿಸುತ್ತಾರೆ. ಇದು ಹಲವು ಅಂಶಗಳಿಂದಾಗಿ ಉಂಟಾಗುವ ಸಂಕೀರ್ಣ ಸಮಸ್ಯೆ. ಪ್ರಸವಾನಂತರದ ಖನ್ನತೆಯು ಏಕ ಕಾರಣದಿಂದ ಉಂಟಾಗುವ ತೊಂದರೆಯಲ್ಲ; ದೈಹಿಕ ಮತ್ತು ಮಾನಸಿಕವಾದ ಹಲವು ಅಂಶಗಳ ಒಟ್ಟಾರೆ ಫ‌ಲವಾಗಿರುವ ಸಾಧ್ಯತೆಯೇ ಅಧಿಕ.

ಪ್ರಸವಾನಂತರದ ಮಾನಸಿಕ ಖನ್ನತೆ: ಕಾರಣಗಳೇನು?
ಮಗುವನ್ನು ಹೆತ್ತ ಬಳಿಕ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟರಾನ್‌ ಹಾರ್ಮೋನ್‌ಗಳ ಪ್ರಮಾಣವು ಹಠಾತ್ತಾಗಿ ಕುಸಿತ ಕಾಣುತ್ತದೆ. ಇದರಿಂದಾಗಿ ಆಕೆಯ ಮಿದುಳಿನಲ್ಲಿ ರಾಸಾಯನಿಕ ಪ್ರತಿಸ್ಪಂದನಗಳು ಉಂಟಾಗುತ್ತವೆ ಮತ್ತು ಇದರ ಪರಿಣಾಮವಾಗಿ ಭಾವನಾತ್ಮಕ ಏರುಪೇರುಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಅನೇಕ ಮಹಿಳೆಯರಿಗೆ ಪ್ರಸವದ ಬಳಿಕ ಚೇತರಿಸಿಕೊಳ್ಳುವುದಕ್ಕೆ ಅತ್ಯಗತ್ಯವಾಗಿರುವ ಸಂಪೂರ್ಣ ವಿಶ್ರಾಂತಿ ಲಭ್ಯವಾಗುವುದಿಲ್ಲ. ಮಗುವಿನ ಆರೈಕೆಯ ಕಾರಣ ಅಥವಾ ಇನ್ನಾéವುದೋ ಕಾರಣಗಳಿಂದ ಸತತ ನಿದ್ರಾಭಂಗ ಉಂಟಾಗುವುದರಿಂದ ದೈಹಿಕ ದಣಿವು ಮತ್ತು ಕಂಗಾಲುತನ ಆಕೆಯನ್ನು ಕಾಡುತ್ತವೆ. ಇವುಗಳು ಕೂಡ ಪ್ರಸವಾನಂತರದ ಮಾನಸಿಕ ಖನ್ನತೆಯುಂಟಾಗುವುದಕ್ಕೆ ಕೊಡುಗೆ ನೀಡುತ್ತವೆ.

ಭಾವನಾತ್ಮಕ/ ಒತ್ತಡಯುಕ್ತ ಘಟನೆಗಳಿಂದ ಅಥವಾ ದೈಹಿಕವಾಗಿ ಉಂಟಾಗುವ ಬದಲಾವಣೆಯಿಂದ ಮಿದುಳಿನ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಕಾಣಿಸಿಕೊಳ್ಳುವ ಅಸಮತೋಲನ ಯಾ ಇವೆರಡರಿಂದಲೂ ಖನ್ನತೆಯು ಉಂಟಾಗಬಹುದು.

ಪ್ರಸವಾನಂತರದ ಮಾನಸಿಕ ಖನ್ನತೆ:
ಮಹಿಳೆ ಅನುಭವಿಸುವ ಸಾಮಾನ್ಯವಾದ ಲಕ್ಷಣಗಳಾವುವು?
 ದುಃಖ, ಹತಾಶೆ, ಶೂನ್ಯ ಅಥವಾ ಸಂತೋಷದ ಅನುಭವ
 ಸಾಮಾನ್ಯವಾದ್ದಕ್ಕಿಂತ ಹೆಚ್ಚು ಅಥವಾ ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ಅಳುವುದು
 ವಿನಾಕಾರಣ ದುಗುಡ ಅಥವಾ ಅತಿಯಾದ ಉದ್ವಿಗ್ನತೆ
 ಭಾವನಾತ್ಮಕ ಏರುಪೇರು, ಕಿರಿಕಿರಿಯಾಗುವುದು, ಚಡಪಡಿಕೆ
 ಅತಿಯಾದ ನಿದ್ದೆ ಅಥವಾ ಮಗು ನಿದ್ರಿಸಿದ್ದಾಗಲೂ ನಿದ್ದೆ ಮಾಡುವುದಕ್ಕೆ ಆಗದೆ ಇರುವುದು
 ಏಕಾಗ್ರತೆಯ ಕೊರತೆ, ವಿವರಗಳನ್ನು ನೆನಪಿರಿಸಿಕೊಳ್ಳುವುದಕ್ಕೆ, ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟವಾಗುವುದು
 ಸಾಮಾನ್ಯವಾಗಿ ಸಂತೋಷ ತರುವ ಚಟುವಟಿಕೆಗಳನ್ನು ನಡೆಸುವ ಆಸಕ್ತಿಯನ್ನು ಕಳೆದುಕೊಳ್ಳುವುದು
 ಆಗಾಗ ತಲೆನೋವು, ಹೊಟ್ಟೆಯ ಸಮಸ್ಯೆಗಳು ಮತ್ತು ಸ್ನಾಯು ನೋವು ಸಹಿತ ದೈಹಿಕವಾದ ನೋವು, ಬೇನೆಗಳನ್ನು ಅನುಭವಿಸುವುದು
 ಅತಿಯಾಗಿ ತಿನ್ನುವುದು ಅಥವಾ ಏನೂ ತಿನ್ನದೆ ಇರುವುದು
 ಕುಟುಂಬ ಮತ್ತು ಗೆಳೆಯ ಗೆಳತಿಯರಿಂದ ದೂರ ಇರುವುದು
 ಮಗುವಿನ ಜತೆಗೆ ಆಪ್ತತೆ, ಬಂಧವನ್ನು ಬೆಸೆದುಕೊಳ್ಳುವಲ್ಲಿ ಹಿಂದೆ ಬೀಳುವುದು
 ಮಗುವನ್ನು ನೋಡಿಕೊಳ್ಳುವುದಕ್ಕೆ, ಲಾಲನೆ ಪಾಲನೆ ಮಾಡುವುದಕ್ಕೆ ತನ್ನಿಂದ ಸಾಧ್ಯವೇ ಎಂಬ ಅನುಮಾನ
 ತನಗೆ ಅಥವಾ ಮಗುವಿಗೆ ಹಾನಿ ಉಂಟು ಮಾಡುವ ಆಲೋಚನೆಗಳು

ಡಾ| ಸೋನಿಯಾ ಶೆಣೈ,
ಅಸಿಸ್ಟೆಂಟ್‌ ಪ್ರೊಫೆಸರ್‌, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.