ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ಈ ಸಲಹೆಗಳನ್ನು ಪಾಲಿಸಿ


Team Udayavani, Feb 18, 2020, 5:14 AM IST

baby-with-mom

ಮಗುವಿಗೆ ತಾಯಿಯ ಹಾಲು ಶ್ರೇಷ್ಠವಾದರೂ ಅದನ್ನು ಆರು ತಿಂಗಳವರೆಗೆ ಮಾತ್ರ ಕೊಡಬೇಕು. ಅನಂತರ ಮಗುವಿಗೆ ಹೆಚ್ಚಿನ ಆಹಾರದ ಆವಶ್ಯಕತೆ ಇರುವುದರಿಂದ ಎದೆ ಹಾಲಿನೊಂದಿಗೆ ಕೆಲವು ಲಘು ಆಹಾರವನ್ನು ನೀಡಲು ಪ್ರಾರಂಭಿಸಿದ್ದರೆ ಒಳಿತು. ಆದರೆ ಇದಕ್ಕಿಂತ ಮೊದಲು ಯಾವ ಆಹಾರ ಪದಾರ್ಥಗಳನ್ನು ನೀಡಬೇಕು, ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಉತ್ತಮ. ಹಾಗಾಗಿ ಮಗುವಿಗೆ ನೀಡಬಹುದಾದ ಆಹಾರ ಕ್ರಮದ ಮಾಹಿತಿ ಇಲ್ಲಿದೆ.

ಅಕ್ಕಿ ಗಂಜಿ
ಅಕ್ಕಿಯನ್ನು ಹುರಿದು ಮೂರರಿಂದ ನಾಲ್ಕು ಗಂಟೆ ನೆನೆಸಿ ಅನ್ನ ಮಾಡಿ ಅದರ ಮೇಲೆ ಬರುವ ಗಂಜಿಗೆ ಹಾಲು ಮತ್ತು ತುಪ್ಪ ಸೇರಿಸಿ ಎರಡು ಮೂರು ಚಮಚೆಯಷಮಗುವಿಗೆ ಆಹಾರ ಕೊಡಲು ಆರಂಭಿಸಿ. ಕ್ರಮೇಣ ಆಹಾರದ ಪ್ರಮಾಣ ಮತ್ತು ಅವಧಿಯನ್ನು ಹೆಚ್ಚಿಸುತ್ತ ಹೋಗಬೇಕೇ ವಿನಾ ದಿಢೀರ್‌ ಅಂತ ಹೆಚ್ಚು ಆಹಾರ ನೀಡಬಾರದು. ಇದಾದ ಒಂದು ವಾರದ ನಂತರ ರಾಗಿ ಆಹಾರ ಕೊಡಲು ಆರಂಭಿಸಿ.

ರಾಗಿ ಗಂಜಿ
ರಾಗಿಯನ್ನು ಚೆನ್ನಾಗಿ ತೊಳೆದು ಏಳೆಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಬಟ್ಟೆಯಲ್ಲಿ ಕಟ್ಟಿಡಿ. ಚೆನ್ನಾಗಿ ಮೊಳಕೆ ಬಂದ ರಾಗಿಯನ್ನು ಹತ್ತಿಯ ಬಟ್ಟೆಯಿಂದ ಮುಚ್ಚಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಬಟ್ಟೆಯಲ್ಲಿ ಸೋಸಿ ಡಬ್ಬದಲ್ಲಿ ತೆಗೆದಿಡಿ. ಈ ಹಿಟ್ಟನ್ನು ಹಾಲಿಗೆ ಬೆರೆಸಿ ಗಂಜಿ ಮಾಡಿ ಕೊಡಿ.

ಉತ್ತತ್ತಿ ಮತ್ತು ಬಾದಾಮ್‌
ಮಗುವಿಗೆ 8 ತಿಂಗಳಾದಾಗ ಉತ್ತತ್ತಿ, ನೆನಸಿದ ಬಾದಾಮ್‌ ಮತ್ತು ಹಾಲಿನ ಪೇಸ್ಟನ್ನು ಅನಂತರ ಕ್ರಮೇಣ ಸೊಪ್ಪು ಕುದಿಸಿದ ನೀರು, ಬೇಳೆಯ ಗಂಜಿಯನ್ನು ಮೆದು ಅನ್ನದೊಂದಿಗೆ ಕೊಡಿ.

ತರಕಾರಿ ಮತ್ತು ಹಣ್ಣು
9 ತಿಂಗಳ ಮಗುವಿಗೆ ಗಜ್ಜರಿ, ಕೆಂಪು ಗೆಡ್ಡೆ, ಸೇಬು ಹಣ್ಣನ್ನು ಹಬೆಯಲ್ಲಿ ಬೇಯಿಸಿ ಕೊಡಿ.10 ತಿಂಗಳಿಗೆ ಗೋಧಿ, ತೊಗರಿ, ಹೆಸರುಬೇಳೆ ನೆನೆಸಿ ಒಣಗಿಸಿದ ಪುಡಿಯನ್ನು ಗಂಜಿಯೊಂದಿಗೆ ಬೇಯಿಸಿ ಕೊಡಿ.

-ಮಗುವಿಗೆ ಬೇಸಗೆಯಲ್ಲಿ ಹಣ್ಣಿನ ರಸ ಮತ್ತು ಎಳನೀರು ಕೊಡಿ.
-ಶಿಶುವಿನ ದೈಹಿಕ ಪಚನಕ್ರಿಯೆಗೆ ಅನುಸಾರವಾದ ಆಹಾರ ನೀಡಿ.
-ಶೀತ, ಉಷ್ಣ, ಪಿತ್ತಕಾರಕ ಆಹಾರ ಕೊಡಬೇಡಿ.
-ಇಡ್ಲಿ, ದೋಸೆ, ರೊಟ್ಟಿಯನ್ನು
-ಹಾಲಿನೊಂದಿಗೆ ಮೆತ್ತಗೆ ಮಾಡಿ ಕೊಡಿ.
-ಆಯಾ ಕಾಲಕ್ಕೆ ಲಭ್ಯವಿರುವ ಹಣ್ಣುಗಳನ್ನು ಮಾತ್ರ ಕೊಡಿ.
-ಉಪ್ಪು, ಸಿಹಿಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ.
-ಮಗುವಿಗೆ ಶೀತವಾಗುವ, ಪಚನವಾಗದ ಮತ್ತು ಹುಳಿ ಆಹಾರ ನೀಡಬೇಡಿ.
-ಬೇಕರಿ ತಿಂಡಿ, ಬಿಸ್ಕಿಟ್‌, ಜಂಕ್‌ ಫ‌ುಡ್‌ಗಳನ್ನು ಕೊಡಬೇಡಿ.

ಟಾಪ್ ನ್ಯೂಸ್

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

3 students of Indian origin passed away in Georgia

Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು

ಎನ್‌ಇಪಿ ರದ್ದು, ರಾಜಕೀಯ ಪ್ರೇರಿತ: ಬೊಮ್ಮಾಯಿ

Bidar; ಎನ್‌ಇಪಿ ರದ್ದು ರಾಜಕೀಯ ಪ್ರೇರಿತ: ಬೊಮ್ಮಾಯಿ

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

Bangla MP who came to Kolkata goes missing

ಕೋಲ್ಕತಾಗೆ ಬಂದ ಬಾಂಗ್ಲಾ ಸಂಸದ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.