ಮೃಗವಧೆಯ ಮೃಷ್ಟಾನ್ನ

ಮಲೆನಾಡ ಊಟಕ್ಕೆ ಮನಸೋತು...

Team Udayavani, Feb 22, 2020, 6:07 AM IST

mrugavadhe

ಈಶ್ವರನು ಶನಿಕಾಟದಿಂದ ಮುಕ್ತನಾದ ಸ್ಥಳ ಮತ್ತು ಶ್ರೀರಾಮನು ಮಾರೀಚ ಮೃಗವಧೆ ಮಾಡಿದ ಸ್ಥಳ ಎಂಬುದಾಗಿ ಸ್ಥಳಪುರಾಣವನ್ನು ಹೊಂದಿ, ನಾಡಿನ ಮೂಲೆಮೂಲೆಯಿಂದ ಭಕ್ತರನ್ನು ಆಕರ್ಷಿಸುವ, ಪ್ರಕೃತಿಯ ಮಡಿಲಲ್ಲಿ ಇರುವ ಪುಣ್ಯಧಾಮ ಮೃಗವಧೆ…

ತೀರ್ಥಹಳ್ಳಿ ತಾಲೂಕಿನ ಪುಟ್ಟ ಗ್ರಾಮ ಮೃಗವಧೆ. ಈಶ್ವರನು ಶನಿಕಾಟದಿಂದ ಮುಕ್ತನಾದ ಸ್ಥಳ ಮತ್ತು ಶ್ರೀರಾಮನು ಮಾರೀಚ ಮೃಗವಧೆ ಮಾಡಿದ ಸ್ಥಳ ಎಂಬುದಾಗಿ ಸ್ಥಳಪುರಾಣ ಹೊಂದಿ, ನಾಡಿನ ಮೂಲೆಮೂಲೆಯಿಂದ ಭಕ್ತರನ್ನು ಆಕರ್ಷಿಸುವ ಪುಣ್ಯಧಾಮ ಇದು.

ತೀರ್ಥಹಳ್ಳಿಯಿಂದ 25, ಕೊಪ್ಪದಿಂದ 18, ಶಿವಮೊಗ್ಗದಿಂದ 50 ಕಿ.ಮೀ. ದೂರದಲ್ಲಿದೆ. ಸರಿಯಾದ ಬಸ್‌ ವ್ಯವಸ್ಥೆ ಹಾಗೂ ಹೋಟೆಲ್‌ಗ‌ಳು ಇಲ್ಲದ ಕಾರಣ, ಮಧ್ಯಾಹ್ನದ ಊಟಕ್ಕೆ ಭಕ್ತಾದಿಗಳು ಪರದಾಡುವುದನ್ನು ಕಂಡಂಥ ಗ್ರಾಮದ ಹಿರಿಯರ ಮನಸ್ಸಿನಲ್ಲಿ ಅನ್ನಸಂತರ್ಪಣೆಯ ಯೋಚನೆ ಹಲವಾರು ಬಾರಿ ಬಂದರೂ, ಅದನ್ನು ಆರಂಭಿಸಿದ್ದು ದಿ||ಅನಂತಪದ್ಮನಾಭ ಭಟ್ಟರು, ದಿ|| ಸುಬ್ರಹ್ಮಣ್ಯಭಟ್ಟರು.

ತಾವೇ ಅಡುಗೆ ಮಾಡಿ ಬಡಿಸುವ ಇವರ ಉತ್ಸಾಹವನ್ನು ನೋಡಿ, ಸಂಚಾಲಕರಾದ ಎ.ಆರ್‌. ಉದಯಶಂಕರ್‌ ಅವರಿಗೂ ಸ್ಫೂರ್ತಿ ದೊರೆಯಿತು. ಮಲ್ಲಿಕಾರ್ಜುನ ಅಕ್ಷಯ ನಿತ್ಯ ಅನ್ನದಾನ ಸಮಿತಿಯ ಸ್ಥಾಪನೆಯೂ ಆಯಿತು. ಜಿ.ಎಸ್‌. ಚಿದಂಬರ ಗೌಡರ ಅಧ್ಯಕ್ಷತೆಯಲ್ಲಿ ನಿರಂತರ 14 ವರ್ಷಗಳಿಂದ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯುತ್ತಿದೆ.

ನಿತ್ಯ ಅನ್ನಸಂತರ್ಪಣೆ: ಸಾಂಪ್ರದಾಯಿಕ ಕಟ್ಟಿಗೆ ಒಲೆ ಮತ್ತು ಸಿಲಿಂಡರ್‌ ಗ್ಯಾಸ್‌ ಬಳಸಿ ಅಡುಗೆ ಮಾಡಲಾಗುತ್ತದೆ. ಪ್ರತಿನಿತ್ಯವೂ 150-200 ಜನ, ಶನಿ, ಭಾನು, ಸೋಮವಾರ­ಗಳಲ್ಲಿ 300ರಿಂದ 500 ಭಕ್ತಾದಿಗಳು ಅನ್ನಪ್ರಸಾದ ಸವಿಯುತ್ತಾರೆ. ಶ್ರಾವಣ ಶನಿವಾರ, ಕಾರ್ತಿಕ ಸೋಮವಾರ ರಥೋತ್ಸವ ಇತ್ಯಾದಿಗಳಲ್ಲಿ 2000 ಜನರ ತನಕ ಮಧ್ಯಾಹ್ನದ ಭೋಜನ ಸವಿದಿದ್ದಾರೆ. ಇಲ್ಲಿನ ಶುದ್ಧ ಮಲೆನಾಡ ಶೈಲಿಯ ಊಟಕ್ಕೆ ಸಾಕಷ್ಟು ಪ್ರಶಂಸೆ ಇದೆ.

ಚುರುಕು ಅಡುಗೆ: “ಇದು ಸಾಮಾನ್ಯ ಹಳ್ಳಿ. ಬೆಳಗ್ಗೆ ಬಂದ ಭಕ್ತರು ಮಧ್ಯಾಹ್ನ ಊಟಕ್ಕೆ ನಿಲ್ಲುತ್ತಾರೆ ಎಂದು ಹೇಳಲಾಗದು. ಕೆಲವೊಮ್ಮೆ 12.30ರ ನಂತರ ಬರುವ ನಾಲ್ಕಾರು ಬಸ್ಸುಗಳಲ್ಲಿ, ಭಕ್ತರು ಬರುವುದೂ ಉಂಟು. ಹಾಗೆ ಊಟದ ಹೊತ್ತಿನಲ್ಲಿ ಬಂದರೂ, ಅಡುಗೆ ತಯಾರಿ ಕಷ್ಟವೇನೂ ಆಗಿಲ್ಲ. ಮತ್ತೆ ಅಡುಗೆ ಮಾಡಿ, ಬಡಿಸಿದ ಉದಾಹರಣೆಗಳು ಇಲ್ಲಿ ಸಾಕಷ್ಟಿವೆ’ ಎನ್ನುತ್ತಾರೆ, ಅಡುಗೆ ಉಸ್ತುವಾರಿ ನೋಡಿಕೊಳ್ಳುವ ಎ.ವಿ. ವೆಂಕಟೇಶ್‌.

“ಹಾಲಿ ಭೋಜನಶಾಲೆಯಲ್ಲಿ ಒಮ್ಮೆಗೆ 300 ಜನ ಊಟ ಮಾಡಬಹುದು. ಹೊಸದಾಗಿ ನಿರ್ಮಾಣವಾಗಿ ಪೂರ್ಣ­ಗೊಳ್ಳುವ ಹಂತದಲ್ಲಿರುವ ಭೋಜನಶಾಲೆಯಲ್ಲಿ 400 ಭಕ್ತರು ಕೂರಬಹುದು’ ಎನ್ನುತ್ತಾರೆ, ಸಿಬ್ಬಂದಿ ಸಿ.ವಿ. ರವಿ.

ಹಳ್ಳಿಯ ತಾಜಾ ತರಕಾರಿ: ಇಲ್ಲಿನ ಇನ್ನೊಂದು ವಿಶೇಷ, ಮೃಗವಧೆ ಗ್ರಾಮದ ಮಹಿಳೆಯರು ಊಟ ಬಡಿಸಲು ಕೈಜೋಡಿಸುವುದು. ಭಕ್ತಾದಿಗಳು ಅಕ್ಕಿ, ತರಕಾರಿ, ತೆಂಗಿನಕಾಯಿ ಜೊತೆಗೆ ಹಣಕಾಸಿನ ನೆರವನ್ನೂ ನೀಡುವು­ದರೊಂದಿಗೆ, ಈ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿರುವುದು ಸಂತಸದ ವಿಚಾರವೇ ಆಗಿದೆ.

ಸಂಖ್ಯಾ ಸೋಜಿಗ
20- ಕಿಲೊ ಅಕ್ಕಿಯಿಂದ ಅನ್ನ
30- ಕಿಲೊ ತರಕಾರಿ ಬಳಕೆ
200- ಮಂದಿಗೆ ನಿತ್ಯ ಭೋಜನ (ಸರಾಸರಿ)
400- ಜನರ ಸಾಮರ್ಥ್ಯದ ಹೊಸ ಭೋಜನಶಾಲೆ
2000- ಮಂದಿಗೆ ಜಾತ್ರೆ ವೇಳೆ ಭೋಜನ

* ಅಭಿನಂದನ್‌ ಮೃಗವಧೆ

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.