ಕೊರೊನಾ ಭೀತಿ ಓಡಿಸಲು ಕೋಳಿ ತಿಂದ್ರು!
Team Udayavani, Mar 1, 2020, 7:10 AM IST
ಹೈದರಾಬಾದ್: ತೆಲಂಗಾಣದ ಸಚಿವರು ಹೈದರಾಬಾದ್ನಲ್ಲಿ ವೇದಿಕೆ ಮೇಲೆ ಸಾಲಾಗಿ ನಿಂತು ಚಿಕನ್ ಪೀಸ್ಗಳನ್ನು ಗಬಗಬನೆ ತಿಂದುಹಾಕಿದ್ದಾರೆ!
ಅರೇ, ಇವರಿಗೇನಾಗಿದೆ? ಇವರೇನು ಕೋಳಿ ಮಾಂಸ ನೋಡಿಯೇ ಇಲ್ಲವೇ ಎಂದು ಯೋಚಿಸುತ್ತಿದ್ದೀರಾ? ಅವರು ವೇದಿಕೆ ಮೇಲೆ ಕೋಳಿಮಾಂಸ ತಿಂದಿದ್ದು “ಹಸಿವಾಗಿರುವ’ ಕಾರಣಕ್ಕಲ್ಲ. ಕೊರೊನಾವೈರಸ್ಗೆ ಹೆದರಿ ಜನರು ಕೋಳಿ ಮಾಂಸ ತಿನ್ನುವುದಕ್ಕೆ ಹಿಂದೇಟು ಹಾಕುತ್ತಿರುವ ಕಾರಣ, ಜನರಲ್ಲಿ ನಂಬಿಕೆ ಹುಟ್ಟಿಸಲು ಈ ರೀತಿಯ “ಸಾಹಸ’ ಮಾಡಿದ್ದಾರೆ.
ಸಚಿವರಾದ ಕೆ.ಟಿ.ರಾಮ ರಾವ್, ಎಟೆಲ ರಾಜೇಂದರ್, ತಲಸಾನಿ ಶ್ರೀನಿವಾಸ್ ಯಾದವ್ ಸೇರಿದಂತೆ ಅನೇಕರು ವೇದಿಕೆ ಯಲ್ಲೇ ಚಿಕನ್ ಸೇವಿಸಿದ್ದಾರೆ. ಚೀನಾದ ಪ್ರಾಣಿಗಳ ಮಾರಾಟದಿಂದ ಕೊರೊನಾ ಹುಟ್ಟಿಕೊಂಡಿದ್ದು ಎಂಬ ವರದಿ ಹಿನ್ನೆಲೆಯಲ್ಲಿ, ಜಾಗೃತಿ ಮೂಡಿಸಲು ನಾಯಕರು ಕೋಳಿ ಭಕ್ಷ್ಯ ಸೇವಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ