ಬಾಲ್ಯವೇ ಮರಳಿ ಬಾ


Team Udayavani, Mar 20, 2020, 4:00 AM IST

ಬಾಲ್ಯವೇ ಮರಳಿ ಬಾ

ಸಮಯ ಕಾಲಿಗೆ ಚಕ್ರ ಕಟ್ಟಿಕೊಂಡಿದೆಯೇನೋ ಎಂಬತೆ ಓಡುತ್ತಿದೆ. ಅಯ್ಯೋ ಆ ಕಾಲವನ್ನೋ, ಸಮಯವನ್ನೋ ಒಮ್ಮೆ ತಡೆದು ನಿಲ್ಲಿಸುವಂತಿದ್ದರೆ ಎಷ್ಟು ಚೆನ್ನಾಗಿರುತಿತ್ತು!

ಬಾಲ್ಯ ಮುಗಿದು ಹೋಗಿದೆ. ಆದರೆ, ನೆನಪುಗಳು ಮುಗಿಯುವುದುಂಟೇ. ಉರುಳುತ್ತಿರುವ ಕಾಲಚಕ್ರವನ್ನು ಹಿಡಿದು ನಿಲ್ಲಿಸಿ ಹಿಂತಿರುಗಿ ನೋಡಿದರೆ ಕಳೆದಿರುವ ದಿನಗಳು ಅಲ್ಪ ಎನಿಸಿದರೂ, ಅಮೂಲ್ಯವಾದುದ್ದನ್ನೇ ಕಳೆದುಕೊಳ್ಳುತ್ತಿದ್ದೇವೇನೋ ಅನಿಸುತ್ತಿದೆ. ಹಿರಿಯರಿಗೆ, ಸಾಧಕರಿಗೆ, ಅತ್ಯುನ್ನತ ಹುದ್ದೆಗೇರಿದವರಿಗೆ ಬಾಲ್ಯವೆಂಬ ನೆನಪು ಇದ್ದೇ ಇರುತ್ತದೆ. ಅಮ್ಮನ ಜೋಗುಳ, ಕೈ ತುತ್ತಿನ ಜೊತೆಗೆ ಸಿಹಿಮುತ್ತು, ಅಪ್ಪನ ಬೆನ್ನ ಮೇಲಿನ ಕೂಸುಮರಿ, ಅಜ್ಜಿಯ ಕಟ್ಟು ಕಥೆಗಳು, ಸ್ವಲ್ಪ ಬುದ್ಧಿ ಬೆಳೆಯುತ್ತಿದ್ದಂತೆ ಸ್ನೇಹಿತರು- ಒಡಹುಟ್ಟಿದವರ ಜತೆಗೂಡಿ ಆಡಿದ ಮನೆಯಾಟ, ಮುಟ್ಟಾಟ, ಮರಕೋತಿ, ಕಣ್ಣಮುಚ್ಚಾಲೆ, ಕುಂಟೆಬಿಲ್ಲೆಯಂತಹ ಅಸಂಖ್ಯ ಬಾಲ್ಯದಾಟಗಳು ಬದುಕಿನ ಅಂತರ್ಜಲದಂತೆ ನೆನಪಿನ ಕೋಶದಲ್ಲಿ ಉಳಿದುಬಿಡುತ್ತವೆ.

ಒಂದಿಷ್ಟು ಜಗಳ, ಅಗಣಿತ ಪ್ರಶ್ನೆಗಳೊಂದಿಗೆ ಪ್ರಪಂಚವನ್ನೇ ಪರಿಶೋಧಿಸಲು ಹೊರಟು ಜೊತೆಯಲ್ಲಿರುವವರನ್ನು ಪೇಚಾಟಕ್ಕೆ ಸಿಲುಕಿಸಿ, ಅದೂ ತಿಳಿವಿಗೆ ಬಾರದೆ ತೋರುತ್ತಿದ್ದ ಮೊದ್ದುತನದ ಪ್ರಸಂಗಗಳು- ಹೀಗೆ ಪ್ರತಿಯೊಬ್ಬರ ಬಳಿಯೂ ಬಾಲ್ಯದ ನೆನಪುಗಳ ಸಂಪತ್ತು ಇದ್ದೇ ಇರುತ್ತವೆ. ನಿರಾಯಾಸವಾಗಿ ಅಪ್ಪಅಮ್ಮನ ಬೆಚ್ಚಗಿನ ಅಪ್ಪುಗೆಯಲ್ಲೋ, ಅಕ್ಕ-ಅಣ್ಣ, ತಮ್ಮ-ತಂಗಿ ಅಥವಾ ಸ್ನೇಹಿತರ ಗೊಡವೆಯಲ್ಲೋ ಕಳೆದ ಬದುಕಿನ ಅಮೂಲ್ಯ ಕ್ಷಣಗಳವು! ಇಂದಿನ ಸ್ಪರ್ಧಾತ್ಮಕ ಜಗತ್ತು, ಭೇದ-ಭಾವ, ತಾರತಮ್ಯ, ಗೊಂದಲಮಯ ಪ್ರಪಂಚದ ಪರಿವೇ ಇಲ್ಲದೆ, ಜೀವನದಲ್ಲಿ ಮತ್ತೆ ಬೇಕೆಂದರೂ ಬಾರದ ಕಳೆದುಹೋದ ದಿನಗಳವು. ಆದ್ದರಿಂದಲೇ ಮತ್ತೂಮ್ಮೆ ಬಾಲ್ಯದ ಲೋಕಕ್ಕೆ ಪಯಣಿಸಿ ಅಪ್ಪಅಮ್ಮನ ತೋಳುಗಳಲ್ಲಿ ಬೆಚ್ಚಗಿರಬೇಕು ಎನಿಸುತ್ತದೆ.

ಅಶ್ವಿ‌ನಿ ಶಾಸ್ತ್ರಿ
ಪ್ರಥಮ ಬಿ.ಎಡ್‌. ಡಾ. ಟಿ.ಎಂ.ಪೈ. ಶಿಕ್ಷಣ ಮಹಾವಿದ್ಯಾಲಯ, ಉಡುಪಿ

ಟಾಪ್ ನ್ಯೂಸ್

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.