ಈ ವರ್ಷ ತಬ್ಲಿಘ್ ನ 2,100 ವಿದೇಶಿ ಅನುಯಾಯಿಗಳು ಭಾರತಕ್ಕೆ

ನಿಜಾಮುದ್ದೀನ್‌ ಅವಘಡಕ್ಕೆ ವಿದೇಶಿ ಮೊಹರು!; ತಾಲಿಬಾನ್‌ ಮಾದರಿ ಕೃತ್ಯ : ಸಚಿವ ನಖ್ವೀ ಆರೋಪ

Team Udayavani, Apr 1, 2020, 3:51 PM IST

ಈ ವರ್ಷ ತಬ್ಲಿಘ್ ನ 2,100 ವಿದೇಶಿ ಅನುಯಾಯಿಗಳು ಭಾರತಕ್ಕೆ

ಎಲ್‌ಎನ್‌ಜೆಪಿ ಆಸ್ಪತ್ರೆ ಆವರಣದಲ್ಲಿ ಸೋಂಕಿತರ ಪರೀಕ್ಷೆ ನಡೆಸಲಾಯಿತು.

ನವದೆಹಲಿ: ಇಸ್ಲಾಂ ಧರ್ಮ ಪ್ರಚಾರಕ ಸಂಘಟನೆಯಾದ ತಬ್ಲಿಘ್-ಎ-ಜಮಾತ್‌ನ ನಾನಾ ಕಾರ್ಯಕ್ರಮಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 2,100 ವಿದೇಶೀಯರು ಭಾರತಕ್ಕೆ ಬಂದು ಹೋಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ದೆಹಲಿಯ ನಿಜಾಮುದ್ದೀನ್‌ ಪ್ರಾಂತ್ಯದಲ್ಲಿ ಮಾ. 13-15ರಂದು ಜರುಗಿದ ತಬ್ಲಿಘ್-ಎ-ಜಮಾತ್‌ ಸಂಘಟನೆಯ ಅಂತಾರಾಷ್ಟ್ರೀಯ ಸಮಾವೇಶದಿಂದ ಕೋವಿಡ್ 19 ವೈರಸ್ ಈಗ ಮತ್ತಷ್ಟು ದೇಶವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನೀಡಿರುವ ಈ ಮಾಹಿತಿ ಮಹತ್ವ ಪಡೆದುಕೊಂಡಿದೆ.

824 ವಿದೇಶಿಗರು ಭೇಟಿ: ಇದೇ ವರ್ಷ ಮಾ. 21ರ ಹೊತ್ತಿಗೆ, ದೇಶದೆಲ್ಲೆಡೆ ಇರುವ ತಬ್ಲಿಘ್-ಎ-ಜಮಾತ್‌ ಸಂಘಟನೆಯ ಶಾಖಾ ಕಚೇರಿಗಳಿಗೆ ಆ ಸಂಘಟನೆಯ ಕಟ್ಟಾ ಬೆಂಬಲಿಗರಾದ ಸುಮಾರು 824 ವಿದೇಶಿಗರು ಭೇಟಿ ನೀಡಿದ್ದರು. ಇವರಲ್ಲಿ 216 ವಿದೇಶಿ ಬೆಂಬಲಿಗರು ನವದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಲ್ಲೇ ಉಳಿದುಕೊಂಡಿದ್ದರು.

ಉಳಿದ ವಿದೇಶಿಗರು, ಮಾ. 24ರಂದು ಪ್ರಧಾನಿ ಮೋದಿಯವರಿಂದ ಹೊರಬಿದ್ದ 21 ದಿನಗಳ ಲಾಕ್‌ಡೌನ್‌ ಘೋಷಣೆಗೂ ಮುನ್ನವೇ ದೇಶ ತೊರೆದಿರಬಹುದು ಎಂದು ಗೃಹ ಇಲಾಖೆ ಹೇಳಿದೆ.

ಕಾರ್ಯಕರ್ತರು ಆಸ್ಪತ್ರೆಗೆ: ನಿಜಾಮುದ್ದೀನ್‌ ಪ್ರದೇಶ ಭಾರತದ ಕೋವಿಡ್ 19 ಹಾಟ್‌ಸ್ಪಾಟ್‌ ಎಂದು ಪರಿಗಣಿಸಲ್ಪಟ್ಟ ಮೇಲೆ ನಡೆಸಿದ ಸಮುದಾಯ ಪರೀಕ್ಷೆಗಳಿಂದ ತಬ್ಲಿಘ್ ನ 1,300 ಕಾರ್ಯಕರ್ತರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ. ಅವರೆಲ್ಲರನ್ನೂ ನರೇಲಾ, ಸುಲ್ತಾನ್‌ಪುರಿ ಹಾಗೂ ಬಕ್ಕಾರ್‌ವಾಲಾ ಆಸ್ಪತ್ರೆಗಳಲ್ಲಿರುವ ಪ್ರತ್ಯೇಕ ನಿಗಾ ಘಟಕಗಳಿಗೆ ಹಾಗೂ ದೆಹಲಿಯ ಎಲ್‌ಎನ್‌ಜೆಪಿ, ಆರ್‌ಜಿಎಸ್‌ಎಸ್‌, ಜಿಟಿಬಿ, ಡಿಡಿಯು ಆಸ್ಪತ್ರೆಗಳಿಗೆ ಮತ್ತು ಹರ್ಯಾಣದ ಝಜ್ಜರ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸದಾಗಿ, ಅದೇ ಸಂಘಟನೆಯ 303 ಕಾರ್ಯಕರ್ತರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ಅವರನ್ನು ಕೂಡ ನವದೆಹಲಿಯ ನಾನಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಗೃಹ ಇಲಾಖೆ ಹೇಳಿದೆ.

ತನಿಖೆಗೆ ಆದೇಶ
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್‌ ಸಮಾವೇಶಕ್ಕೆ ಗುಜರಾತ್‌ನಿಂದ ಕೆಲ ಮುಸ್ಲಿಮರು ಹೋಗಿರುವ ಖಚಿತ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಗುಜರಾತ್‌ ಪೊಲೀಸರು ಬಲೆ ಬೀಸಿದ್ದಾರೆ. ಸಮಾವೇಶಕ್ಕೆ ಭಾವನಗರದ ಕೆಲವು ನಿವಾಸಿಗಳು ಹೋಗಿರುವುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ. ಅವರ ನಿಖರ ವಿಳಾಸ ಪತ್ತೆ ಹಚ್ಚಿ ಅವರನ್ನು ತಕ್ಷಣವೇ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಗುಜರಾತ್‌ನ ಡಿಜಿಪಿ ಶಿವಾನಂದ ಝಾ ತಿಳಿಸಿದ್ದಾರೆ.

ತೆಲಂಗಾಣದಿಂದ 1 ಸಾವಿರ ಮಂದಿ
ನವದೆಹಲಿಯಲ್ಲಿ ನಡೆದ ನಿಜಾಮುದ್ದೀನ್‌ ಸಮಾವೇಶಕ್ಕೆ ತೆಲಂಗಾಣದಿಂದ ಕನಿಷ್ಠ 1,000 ಜನರು ಹೋಗಿದ್ದಾರೆ ಎಂದು ತೆಲಂಗಾಣ ಸರಕಾರ ತಿಳಿಸಿದೆ. ಅವರನ್ನು ಶೀಘ್ರವೇ ಪತ್ತೆ ಮಾಡಿ, ಅವರನ್ನು ಹಾಗೂ ಅವರ ಆಪ್ತರನ್ನು ಪರೀಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಮಾವೇಶಕ್ಕೆ ಹೋಗಿ ಬಂದು ಮೃತರಾಗಿರುವ ವ್ಯಕ್ತಿಗಳ ಕುಟುಂಬಸ್ಥರನ್ನು ಈಗಾಗಲೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ ಎಂದು ತೆಲಂಗಾಣ ಅಬಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ 32 ಲಿಂಕ್‌
ತಮಿಳುನಾಡಿನಲ್ಲಿ ಮಂಗಳವಾರ ಏಳು ಹೊಸ ಕೋವಿಡ್ 19 ವೈರಸ್ ಸೋಂಕಿತರು ಪತ್ತೆಯಾಗಿದ್ದು , ಈ ಮೂಲಕ ಅಲ್ಲಿ ಸೋಂಕಿತರ ಸಂಖ್ಯೆ 74ಕ್ಕೇರಿದೆ. ಇವರಲ್ಲಿ ಕನಿಷ್ಟ 32 ಜನರು ದೆಹಲಿಯ ನಿಜಾಮುದ್ದೀನ್‌ ಸಮಾವೇಶದ ಮೂಲಕ ಹರಡಿರುವ ಸೋಂಕಿತರ ಜೊತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಂಟು ಹೊಂದಿರುವವರಾದ್ದಾರೆ ಎಂದು ತಮಿಳುನಾಡು ಸರಕಾರ ತಿಳಿಸಿದೆ. ದೆಹಲಿ ಸಮಾವೇಶಕ್ಕೆ ತಮಿಳುನಾಡಿನ 1,500 ಜನರು ಹೋಗಿದ್ದಾಗಿ ಅಲ್ಲಿನ ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.

ತಬ್ಲಿಘ್-ಎ-ಜಮಾತ್‌ ಸಂಘಟನೆಯ ಸದಸ್ಯರು ಮಾಡಿರುವುದು ತಾಲಿಬಾನಿಗಳ ಮಾದರಿಯ ದುಷ್ಕೃತ್ಯ . ಕೋವಿಡ್ 19 ವೈರಸ್ ವಿರುದ್ಧ ಇಡೀ ದೇಶವೇ ಸಮರ ಸಾರಿದ್ದಾಗ ಇವರು ಕೋವಿಡ್ 19 ವೈರಸ್ ಹರಡಿರುವುದು ಕ್ರಿಮಿನಲ್‌ ಅಪರಾಧ.
ಮುಕ್ತಾರ್‌ ಅಬ್ಟಾಸ್‌ ನಖ್ವೀ, ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ

ಟಾಪ್ ನ್ಯೂಸ್

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

ಕೊಕ್ಕಡದಲ್ಲಿ ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Kokkada ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ

Brahmavar ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mehbooba Mufti: ನೀತಿ ಸಂಹಿತೆ ಉಲ್ಲಂಘನೆ ಆರೋಪ… ಮೆಹಬೂಬಾ ಮುಫ್ತಿ ವಿರುದ್ಧ ಕೇಸು

Mehbooba Mufti: ನೀತಿ ಸಂಹಿತೆ ಉಲ್ಲಂಘನೆ ಆರೋಪ… ಮೆಹಬೂಬಾ ಮುಫ್ತಿ ವಿರುದ್ಧ ಕೇಸು

TDS ಹೊರೆ ತಪ್ಪಿಸಬೇಕಂದ್ರೆ ಮೇ. 31ರೊಳಗೆ ಪ್ಯಾನ್‌ – ಆಧಾರ್‌ ಲಿಂಕ್‌ ಮಾಡಿ

TDS ಹೊರೆ ತಪ್ಪಿಸಬೇಕಂದ್ರೆ ಮೇ. 31ರೊಳಗೆ ಪ್ಯಾನ್‌ – ಆಧಾರ್‌ ಲಿಂಕ್‌ ಮಾಡಿ

Panaji: ಜೂ. 4, 5ಕ್ಕೆ ಗೋವಾ ರಾಜ್ಯಕ್ಕೆ ಮುಂಗಾರು ಪ್ರವೇಶ!

Panaji: ಜೂ. 4, 5ಕ್ಕೆ ಗೋವಾ ರಾಜ್ಯಕ್ಕೆ ಮುಂಗಾರು ಪ್ರವೇಶ

school

School Reopen: ಈ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಫಲಿತಾಂಶ ದಿನದಂದೇ ಶಾಲಾ ಕಾಲೇಜು ಆರಂಭ…

Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ

Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

ಕೊಕ್ಕಡದಲ್ಲಿ ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Kokkada ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.