ಕೋವಿಡ್ ಟೈಮಲ್ಲಿ ಫೈನಾನ್ಷಿಯಲ್‌ ಪ್ಲ್ಯಾನಿಂಗ್‌


Team Udayavani, Apr 20, 2020, 4:26 PM IST

ಕೋವಿಡ್ ಟೈಮಲ್ಲಿ ಫೈನಾನ್ಷಿಯಲ್‌ ಪ್ಲ್ಯಾನಿಂಗ್‌

ಸಾಂದರ್ಭಿಕ ಚಿತ್ರ

ಕೋವಿಡ್ ವೈರಸ್‌, ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ಬೀರುತ್ತಲೂ ಇದೆ. ದೇಶದ ಆರ್ಥಿಕತೆ ಮೇಲೆ ಮಾತ್ರವಲ್ಲ, ನಮ್ಮೆಲ್ಲರ ಮನಸಿನಲ್ಲಿ ಆತಂಕ, ದುಗುಡಗಳನ್ನೂ ಹುಟ್ಟುಹಾಕಿದೆ. ನಮ್ಮೆಲ್ಲರಲ್ಲೂ, ನಾಳೆ ಹೇಗಿರುವುದೋ ಎಂಬುದರ ಯೋಚನೆ ಸುಳಿದಾಡುತ್ತಿದೆ. ಆದರೆ, ಚಿಂತಿಸುವುದಕ್ಕೆ ಇದು ಸಮಯವಲ್ಲ. ನಾಳಿನ ಅನಿಶ್ಚಿತತೆಗೆ ತಯಾರಾಗಬೇಕಿದೆ. ಅದಕ್ಕಾಗಿ ಫೈನಾನ್ಷಿಯಲ್‌ ಪ್ಲ್ಯಾನಿಂಗ್‌ನ ಜರೂರತ್ತಿದೆ.

ಫೈನಾನ್ಷಿಯಲ್‌ ಪ್ಲ್ಯಾನಿಂಗ್‌ನ ಮೊದಲ ನಿಯಮ ಏನು ಗೊತ್ತಾ? ಪ್ರಿಪೇರ್‌, ಬಟ್‌ ಡೋಂಟ್‌ ಪ್ರಿಡಿಕ್ಟ್ ಸಿದ್ಧರಾಗಿ, ಭವಿಷ್ಯದ ಬಗ್ಗೆ ಊಹಿಸಬೇಡಿ. ಮೊದಲನೆಯದಾಗಿ, ನಿಮ್ಮ ಬಳಿ ಮನೆಯ ದೈನಂದಿನ ಖರ್ಚುಗಳಿಗೆ ಸಾಕಾಗುವಷ್ಟು ಹಣ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದು ಎಮರ್ಜೆನ್ಸಿ ಫ‌ಂಡ್‌ (ಕಂಟಿಂಜೆನ್ಸಿ ಕಾರ್ಪಸ್‌) ಅನ್ನು ಸಿದ್ಧಪಡಿಸಿ. ಕನಿಷ್ಠ ಮೂರು ತಿಂಗಳ ಮನೆಯ ಖರ್ಚುಗಳನ್ನು ನಿಭಾಯಿಸಲು ಬೇಕಾಗುವಷ್ಟು ಹಣವನ್ನು, ಎಮರ್ಜೆನ್ಸಿ ಪ್ಲ್ಯಾನ್‌ ಹೊಂದಿರಬೇಕು. ಇದು ಕಷ್ಟಕಾಲದಲ್ಲಿ ನೆರವಿಗೆ ಬಂದೇ ಬರುತ್ತದೆ. ಎಮರ್ಜೆನ್ಸಿ ಫ‌ಂಡ್‌ ಗಿಂತಲೂ ಮೊದಲ ಪ್ರಾಶಸ್ತ್ಯ ಇ.ಎಂ.ಐ. ಪಾವತಿಗಳಿಗೆ ಕೊಡಿ. ನಿಮ್ಮ ಇನ್ಶೂರೆನ್ಸ್‌ ಏಜೆಂಟರಿಗೆ ಕರೆ ಮಾಡಿ, ನೀವು ಮಾಡಿಸಿರುವ ಇನ್ಷೊರೆನ್ಸ್‌, ಕೊರೊನಾವನ್ನು ಕವರ್‌ ಮಾಡುತ್ತದೆಯೇ
ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಕೋವಿಡ್ ಸೋಂಕನ್ನು “ಪಾಂಡೆಮಿಕ್‌’ (ಜಾಗತಿಕ ಮಟ್ಟದಲ್ಲಿ ಹಬ್ಬಿರುವ ಕಾಯಿಲೆ) ಎಂದು ಘೋಷಣೆ ಮಾಡಿದ್ದಾರೆ. ನಿಮ್ಮ ವಿಮೆಯಲ್ಲಿ, ಪಾಂಡೆಮಿಕ್‌ ಕುರಿತಾದ ನಿಲುವು ಏನಿದೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಮನೆಯವರೊಂದಿಗೆ, ತುಂಬಾ ಹತ್ತಿರದ ನಂಬಿಕಸ್ಥರೊಂದಿಗೆ ನಿಮ್ಮ ಹೂಡಿಕೆಗಳು ಮತ್ತು ವ್ಯವಹಾರಗಳ ಕುರಿತು ಮಾಹಿತಿ ಹಂಚಿಕೊಳ್ಳಿ. ಹೀಗೆ ಮಾಡುವುದರಿಂದ, ಅಕಸ್ಮಾತ್‌ ನಾಳೆ ನೀವೇನಾದರೂ ಅನಾರೋಗ್ಯಪೀಡಿತರಾದರೆ, ಅವರು ನಿಮ್ಮ ವ್ಯವಹಾರಗಳನ್ನು ಮುಂದುವರಿಸಬಲ್ಲರು. ಮಾರ್ಕೆಟ್‌ನಲ್ಲಿ,
ಒಳ್ಳೆಯ ಟೈಮ್‌ಗಾಗಿ ಈಗ ಹುಡುಕಾಟ ನಡೆಸಬೇಡಿ. ಹೂಡಿಕೆದಾರರು ಸದಾ ತಮ್ಮಲ್ಲಿರುವ ಷೇರುಗಳನ್ನು ಮಾರಲು ಅಥವಾ ಬೇರೆ ಷೇರುಗಳನ್ನು ಕೊಳ್ಳಲು ಒಳ್ಳೆಯ ಟೈಮನ್ನು ಅರಸುತ್ತಿರುತ್ತಾರೆ. ಆದರೆ, ಮಾರುಕಟ್ಟೆಯ ಸ್ಥಿತಿ ಈಗ ನಿಶ್ಚಿತವಾಗಿ ಹೇಳಲು ಬಾರದಿರುವ ಹಂತದಲ್ಲಿದೆ. ಹಾಗಾಗಿ, ಯಾವುದೇ ರೀತಿಯ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್ ಮೆಂಟ್‌ ಪ್ಲ್ಯಾನ್‌ (ಎಸ್‌.ಐ.ಪಿ) ಮಾಡಲು ಮುಂದಾಗದಿರುವುದೇ ಒಳಿತು.

ಟಾಪ್ ನ್ಯೂಸ್

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.