ಬಿಡು ಬಿಡು.. ಕೋಪವಾ…


Team Udayavani, Oct 13, 2020, 7:49 PM IST

josh-tdy-4

ಹೋಯ್‌ ಸಿಟ್ಟಿನ ಸಿಡುಕ, ಅದೇನು ಕೋಪವೋ ಮಾರಾಯ ನಿಂಗೇ. ನಿನ್ನ ಆ ಮುದ್ದುಕೋಪಕ್ಕೇ ನಿನ್ನನ್ನು ಇನ್ನೂ ಇನ್ನೂ ಹೆಚ್ಚು ಹೆಚ್ಚು ಹುಚ್ಚಾಗಿ ಪ್ರೀತಿಸಬೇಕೆಂದು ಅನಿಸುತ್ತದೆ ನೋಡು. ಪ್ರೀತಿಯಿರುವಕಡೆಯೇ ಕೋಪವೂ ಇರುತ್ತದೆ ಎನ್ನುವುದು ಸುಳ್ಳಲ್ಲ. ಮೊನ್ನೆ ಮಾತ್ರ ತುಂಬಾ ಕೋಪ ಬಂದಿತ್ತು ನಿನ್ನ ಮೇಲೆ. ಅದ್ಯಾರೋ ಫೇಸ್ಬುಕ್ಕಿನಲ್ಲಿ ನನ್ನ ಫೋಟೋಕ್ಕೆ ಹಾಕಿರುವಕಮೆಂಟ್‌ ನೋಡಿ, ಅಂತವರನ್ಯಾಕೆ ಫ್ರೆಂಡ್‌ ಮಾಡಿಕೊಂಡಿದ್ದೀ ಅಂತಾ ವಾಟ್ಸಪ್ಪಿನಲ್ಲಿ ಮುಖ ಊದಿಸಿದ ಈಮೋಜಿ ಕಳಿಸಿದ್ದೆ.

ನೋಡು, ನನಗೂ ಕೋಪ ತಡೆಯಲಾರದೆ ಯಾರ್ಯಾರ ಬುದ್ಧಿ ಹೇಗೆ ಅಂತ ನನಗೇನು ಗೊತ್ತಿರುತ್ತೆ? ಯಾರ ಜೊತೆಗೂ ನನಗೆ ಪರ್ಸನಲ್‌ ಚಾಟಿಂಗ್‌ ಇಲ್ಲ ತಿಳ್ಕೋ ಅಂದಿದ್ದಕ್ಕೆ, ನೀನೇನೋ ಸಿಟ್ಟಾಗಿ ಕೈಮುಗಿವ ಇಮೋಜಿ ಕಳಿಸಿ ತಣ್ಣಗೆಕುಳಿತುಬಿಟ್ಟೆ. ಆದರೆ ನನ್ನಕಥೆ ಹೇಳು, ಆಮೇಲೆ ಎಷ್ಟು ಒದ್ದಾಡಿದೆ ಗೊತ್ತಾ? ನಿನ್ನ ಪ್ರೀತಿ,ಕಾಳಜಿ ನನಗೆ ಅರ್ಥವಾಗುತ್ತದೆಕಣೋ. ನಾನೂ ಹಾಗೆ ಖಡಕ್‌ ಉತ್ತರ ಕೊಡಬಾರದಿತ್ತು…ಸಾರಿ… ವ್ಯಾಲೆಂಟೈನ್‌ ದಿವಸ ಜ್ಯೂನಿಯರ್‌ ಒಬ್ಬ ಡೈರಿಮಿಲ್ಕ್ ಕೊಟ್ಟಿದ್ದನ್ನು ನನಗೆ ತಿನ್ನಲು ಬಿಡದೆ ನೀನೇ ತಿಂದು, ನನಗೆ ಬೇರೆಕೊಡಿಸಿದ್ದು ನೆನಪಾದರೆ ನಗು ಬರುತ್ತದೆ. ಬಸ್ಸಿನಲ್ಲಿ ನನಗಾಗಿ ಹುಡುಗನೊಬ್ಬ ಬದಿಗೆ ಸರಿದು ಜಾಗ ಮಾಡಿಕೊಟ್ಟದ್ದನ್ನು ದೂರದಿಂದಲೇ ಗಮನಿಸಿ ಮುಖ ಸಿಂಡರಿಸಿದ ನೀನು, ಅಲ್ಲಿ ಕುಳಿತು ಕೊಳ್ಳಲೂ ಬಿಡದೆ ಮುಂದಿನ ಸ್ಟಾಪಿನಲ್ಲಿ ಇಳಿಸಿ ಬೇರೆ ಬಸ್‌ ಹತ್ತಿಸಿಕೊಂಡು ಹೋದಾಗ ನಿನ್ನ ಪೆದ್ದು ಪ್ರೀತಿಗೊಂದು ಗುದ್ದು ಕೊಡಬೇಕು ಎನಿಸಿತ್ತು. ಸ್ಯಾರಿಡೇ ದಿನವಂತೂ,ಕಣ್ಣುಗಳಲ್ಲೇ ನನ್ನನ್ನು ಇಡಿಯಾಗಿ ತುಂಬಿಕೊಂಡು ಬಿಟ್ಟಿಹೆಯೇನೋ ಎನಿಸಿದ್ದು ಸುಳ್ಳಲ್ಲ. ಕಾರ್ಯಕ್ರಮ ಮುಗಿದ ಮೇಲೆ ಮನೆಯ ತನಕ ಡ್ರಾಪ್‌ ಮಾಡಿದವ, ಹೋಗಿ ದೃಷ್ಟಿ ತೆಗೆಸಿಕೋ ಎಂದು, ತಿರುಗಿ ನೋಡದೆ ಹೋಗಿದ್ದು ಅಚ್ಚರಿ.

ಇನ್ನೂ ಸ್ವಲ್ಪ ಹೊತ್ತು ನಿನ್ನನ್ನು ಹಾಗೆಯೇ ನೋಡುತ್ತಿದ್ದರೆ ಹುಚ್ಚನಾಗಿ ಹೋಗುತ್ತಿದ್ದೆ ಎಂದು ನೀಮೆಸೇಜ್‌ ಮಾಡಿದಾಗ, ನಾ ಪದೇ ಪದೆ ಆಮೆಸೇಜನ್ನು ಮುದ್ದಿಸಿದ್ದು ಸುಳ್ಳಲ್ಲ. ಒಂದು ವಿಷ್ಯ ತಿಳ್ಕೋ;ನೀನೆಷ್ಟೇಕೋಪ ಮಾಡಿಕೊಂಡರೂ ನನಗೆ ಮುದ್ದುದ್ದೇ ನೀನು. ನಿನ್ನ ಪ್ರೀತಿಯನ್ನು ಅರಿತರೂ ಅರಿಯಲಾರದವಳಂತೆ, ಗೊತ್ತಾದರೂ ಗೊತ್ತಿಲ್ಲದಂತೆ ನಟಿಸಿ, ನನ್ನ ಮನದಾಳದ ಮಾತುಗಳನ್ನುಕೇಳಲು ಚಾತಕ ಪಕ್ಷಿಯಂತೆಕಾಯುತ್ತಿರುವ ನಿನಗೆ ಹೇಳದೆ ಸತಾಯಿಸುತ್ತಾ,ಮಾಮೂಲಿ ಬೈಗುಳ ಇದ್ದೇ ಇದೆಯಲ್ಲ, ಅದನ್ನು ಅಂದರೆ ಮಾತ್ರ ನಿನ್ನ ರಿಪ್ಲೈ ಗ್ಯಾರಂಟೀ ಅಂತಾ ಗೊತ್ತು. ಹೇಳಲಾ……ಕಂಜೂಸ್‌… ಕಂಜೂಸ್‌…ಕಂಜೂಸ್‌

 

-ನಳಿನಿ. ಟಿ. ಭೀಮಪ್ಪ, ಧಾರವಾಡ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.