ಬಾರೋ ಸಾಧಕತ ಕೇರಿಗೆ : ಅರಮನೆಯ ಶಿಶು ಗುಡಿಸಲಲ್ಲಿ ಬೆಳೆಯಿತು!


Team Udayavani, Oct 13, 2020, 8:00 PM IST

josh-tdy-5

ಚಳಿಗಾಲದ ಒಂದು ಮುಂಜಾನೆ. ನಸುಕಿನ ಬೆಳಕಿನಲ್ಲಿ ಪಾದ್ರಿಗಳು ಚರ್ಚಿನ ಬಾಗಿಲು ತೆರೆಯುವಷ್ಟರಲ್ಲಿ ಮೆಟ್ಟಿಲ ಮೇಲೆ ಒಂದು ನವಜಾತ ಶಿಶು ಮಲಗಿರುವುದನ್ನು ಕಂಡರು. ಸಣ್ಣದೊಂದು ಬುಟ್ಟಿಯಲ್ಲಿ ಮೆತ್ತನೆ ಬಟ್ಟೆಗಳನ್ನು ಹಾಸಿ ಆ ಕೂಸನ್ನು ಮಲಗಿಸಲಾಗಿತ್ತು. ಜಗತ್ತಿನ ಪರಿವೆಯಿಲ್ಲದೆ ನಿದ್ರೆಗೆ ಜಾರಿದ್ದ

ಆ ಮಗುವನ್ನು ಪಾದ್ರಿಗಳು ಎತ್ತಿಕೊಂಡರು. ಸಮೀಪದಲ್ಲಿದ್ದ ಅನಾಥಾಲಯಕ್ಕೆ ಮಗುವನ್ನು ಹಸ್ತಾಂತರಿಸಿದರು. ಸ್ಫುರದ್ರೂಪಿ ಕಂದ. ಸುತ್ತಿಟ್ಟ ಬಟ್ಟೆಗಳ್ಳೋ ಶ್ರೀಮಂತರ ಮನೆಯದೆಂದು ಸಾರಿಹೇಳುತ್ತಿತ್ತು. ಅದಾಗಿ ಕೆಲ ದಿನಗಳ ನಂತರ ಅನಾಥಾಲಯಕ್ಕೆ ದೇಶದ ಮುಖ್ಯ ಹುದ್ದೆಯಲ್ಲಿರುವ ಸೇನಾಧಿಕಾರಿಯೊಬ್ಬ ರಹಸ್ಯವಾಗಿ ಬಂದ. ಮಗುವಿನ ದೇಖ ರೇಖೀ ನೋಡಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಬೇಕೆಂದು ಅಲ್ಲಿನ ಆಡಳಿತ ನೋಡಿಕೊಳ್ಳುತ್ತಿದ್ದವರನ್ನು ಕೇಳಿಕೊಂಡ. ಆದರೆ ಮಗುವಿನೊಡನೆ ತನ್ನ ಯಾವ ಸಂಬಂಧವೂ ಎಲ್ಲೂ ಪ್ರಕಟವಾಗಬಾರದೆಂಬ ಷರತ್ತನ್ನೂ ಹಾಕಿದ. ಅನಾಥಾ ಲಯ, ತನ್ನ ನಿಯಮಾವಳಿಗಳಿಗೆ ತಕ್ಕಂತೆ ಮಗುವನ್ನು ಸಾಮಾನ್ಯ ಹೆಂಗಸೊಬ್ಬಳಿಗೆ ಹಸ್ತಾಂತರಿಸಿತು.ಆಕೆಯೋ ಗಾಜಿನ ಕೆಲಸ ಮಾಡುತ್ತಿದ್ದ ಓರ್ವ ಮಧ್ಯಮ ವರ್ಗದ

ಹೆಣ್ಣುಮಗಳು. ದೇಶದ ಸೇನೆಯ ಫಿರಂಗಿದಳದ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್‌ ಜನರಲನೇಆಮಗುವಿನ ಅಪ್ಪ; ದೇಶದ ಸಂಸತ್ತಿನ ಅಧ್ಯಕ್ಷನ ಮಗಳೇ ಆ ಮಗುವಿನ ಅಮ್ಮ – ಎಂಬ ಸತ್ಯ ಆಕೆಗಾದರೂ ಹೇಗೆ ತಿಳಿಯಬೇಕು? ಹೀಗೆ ಅರಮನೆಯಂಥ ಬಂಗಲೆಯಲ್ಲಿ ಹುಟ್ಟಿ ಬಾಲ್ಯವನ್ನು ಕಳೆಯಬೇಕಿದ್ದ ಹುಡುಗ ಬೆಳೆದದ್ದು ಒಬ್ಬ ಕಾರ್ಮಿಕ ಮಹಿಳೆಯ ಸಾಧಾರಣ ಮನೆಯಲ್ಲಿ. ಮಲಗಿದ್ದು ಚಾಪೆಯಲ್ಲಿ. ಬಾಲ್ಯದಲ್ಲಿ ಆಡಿದ್ದು ಬೀದಿಯ ಗೆಳೆಯರೊಂದಿಗೆ . ಓದಿದ ಶಾಲೆಯೂ ಸಾಧಾರಣವೇ! ಇಷ್ಟೆಲ್ಲ ಸಾಧಾರಣವಾದ ಬಾಲ್ಯವನ್ನು ಕಳೆದ ಆ ಹುಡುಗನ ಬುದ್ಧಿಮತ್ತೆ ಮಾತ್ರ ಅಸಾಧಾರಣವಾಗಿತ್ತು. ಗಣಿತ, ವಿಜ್ಞಾನ, ತತ್ವಜ್ಞಾನ, ಕಲೆ, ಸಂಗೀತ… ಎಲ್ಲದರಲ್ಲೂ ಅವನದ್ದು ಅಪರಿಮಿತ ಆಸಕ್ತಿ, ಅಭಿಜಾತ ಪ್ರತಿಭೆ.

ಆತ ಭೌತಶಾಸ್ತ್ರದಲ್ಲಿ ಹೊಸ ಸಂಗತಿಗಳನ್ನು ಸಂಶೋಧಿಸಿದ. ಡೈನಮಿಕ್ಸ್ ಕ್ಷೇತ್ರದಲ್ಲಿ ಹೊಸ ನಿಯಮಗಳನ್ನು ನಿರೂಪಿಸಿದ. ಬೀಜಗಣಿತದ ಮೂಲಭೂತ ಪ್ರಮೇಯ ಎಂದು ಹೆಸರಾದ ಪ್ರಮೇಯವನ್ನು ನಿರೂಪಿಸಿ ಸಾಧಿಸಿದ. ಧ್ವನಿವಿಜ್ಞಾನದಲ್ಲಿ ಸಾಕಷ್ಟು ಕೆಲಸ ಮಾಡಿದ. ಡಿಡೆರೋ ಎಂಬ, ಆ ಕಾಲದ ರಾಷ್ಟ್ರಮಟ್ಟದ ಶ್ರೇಷ್ಠ ಪಂಡಿತನ ಜೊತೆ ಸೇರಿ ವಿಶ್ವಕೋಶವನ್ನು ರಚಿಸುವ ಕೆಲಸವನ್ನು ಪೂರ್ಣಗೊಳಿಸಿದ. ಆ ಗ್ರಂಥಕ್ಕಾಗಿ ಈತ ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಬರೋಬ್ಬರಿ ಸಾವಿರ ಲೇಖನಗಳನ್ನು ಬರೆದ!

ಇಷ್ಟೆಲ್ಲ ಸಾಧನೆ ಮಾಡಿದ ಈ ವಿಶ್ವಪ್ರಸಿದ್ಧ ಗಣಿತಜ್ಞನ ಹೆಸರು ಡಲನ್ಬೇರ್‌ (ಪುಸ್ತಕಗಳಲ್ಲಿ ಡಿ’ಆಲಂಬರ್ಟ್‌ ಎಂದೂ ಬರೆದಿರುವುದುಂಟು). ಡಲನ್ಬೇರ್‌ತನ್ನಜೀವನದಐವತ್ತುವರ್ಷಗಳನ್ನುಕಳೆದದ್ದುಸಾಕುತಾಯಿಯ ಜೊತೆಗೇ. ಆತ ಹೆಸರುವಾಸಿಯಾಗಿ ಸಮಾಜದಲ್ಲಿ ಪ್ರವರ್ಧಮಾನಕ್ಕೆ ಬಂದ ಮೇಲೆ ಒಂದು ದಿನ ಆತ ಜನ್ಮಕೊಟ್ಟ ತಾಯಿ ಬಂದಳಂತೆ. ನಾನೇ ನಿನ್ನ ತಾಯಿ. ನನ್ನ ಜೊತೆ ಬಂದುಬಿಡು ಎಂದು ಬೇಡಿಕೊಂಡಳಂತೆ. ಡಲನ್ಬೇರ್‌ ಸಾಧ್ಯವಿಲ್ಲ. ನನ್ನ ತಾಯಿ ಅರಮನೆಯಲ್ಲಿ ವಾಸಮಾಡುವ ರಾಣಿ ಅಲ್ಲ. ಅವಳು ಗಾಜಿನ ಕೆಲಸ ಮಾಡುವ ಬಡ ಕೂಲಿಕಾರ್ತಿ ಎಂದು ಹೇಳಿ ಡಲನ್ಬೇರ್‌ ತನ್ನ ಸಾಕು ತಾಯಿಯ ಜೊತೆಗೇ ಉಳಿಯುವ ನಿರ್ಧಾರವನ್ನು ಪ್ರಕಟಿಸಿದನಂತೆ. ­

 

– ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.