ದಿಲ್ಲಿ ಹಿಂಸಾಚಾರ ಸಂತ್ರಸ್ತರಿಗೆ ನ್ಯಾಯ ಸಿಗಲಿ


Team Udayavani, Mar 3, 2020, 5:18 AM IST

Delhi

ನಾಗರಿಕ ಸಮಾಜ ಹಿಂಸಾಚಾರದ ಸಂದರ್ಭದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಆಘಾತಕಾರಿ ಆಗಿದೆ. ಇಂಥ ಲೋಪದೋಷಗಳಿರುವ ಒಂದು ವ್ಯವಸ್ಥೆ ಮತ್ತು ಸಮಾಜವನ್ನಿಟ್ಟುಕೊಂಡು ದೇಶದ ಭವಿಷ್ಯ ಹೇಗೆ ಉಜ್ವಲವಾಗಬಹುದು ಎನ್ನುವುದು ಅಂತಿಮವಾಗಿ ಉಳಿಯುವ ಪ್ರಶ್ನೆ.

ಕಳೆದ ವಾರ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದಿಲ್ಲಿ ಈಗ ಶಾಂತವಾಗಿರಬಹುದು. ಆದರೆ ಈ ಹಿಂಸಾಚಾರ ಅನೇಕ ಪ್ರಶ್ನೆಗಳನ್ನು ಉಳಿಸಿಹೋಗಿದೆ. ಮುಖ್ಯವಾಗಿ ಗಲಭೆಯಲ್ಲಿ ನಮ್ಮ ರಾಜಕೀಯ ನಾಯಕರು ವಹಿಸುತ್ತಿರುವ ಪಾತ್ರಗಳು ಕಳವಳಕಾರಿಯಾಗಿದೆ. ಎರಡನೆಯದಾಗಿ ಇಂಥ ಒಂದು ಹಿಂಸಾಚಾರ ನಡೆಯುವ ಸಂಭವವಿದೆ ಎನ್ನುವುದು ಮೊದಲೇ ಗೊತ್ತಿದ್ದರೂ ಇಡೀ ಪೊಲೀಸ್‌ ವ್ಯವಸ್ಥೆ ವಿಫ‌ಲಗೊಂಡ ರೀತಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಮೂರನೆಯದಾಗಿ ನಾಗರಿಕ ಸಮಾಜ ಹಿಂಸಾಚಾರದ ಸಂದರ್ಭದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಆಘಾತಕಾರಿ ಆಗಿದೆ. ಇಂತಹ ‌ಲೋಪದೋಷಗಳಿರುವ ಒಂದು ವ್ಯವಸ್ಥೆ ಮತ್ತು ಸಮಾಜವನ್ನಿಟ್ಟುಕೊಂಡು ದೇಶದ ಭವಿಷ್ಯ ಹೇಗೆ ಉಜ್ವಲವಾಗಬಹುದು ಎನ್ನುವುದು ಅಂತಿಮವಾಗಿ ಉಳಿಯುವ ಪ್ರಶ್ನೆ.

ರಾಜಕೀಯ ಮುಖಂಡರಾದ ಕಪಿಲ್‌ ಮಿಶ್ರ, ವಾರಿಸ್‌ ಪಠಾಣ್‌, ತಾಹಿರ್‌ ಹುಸೈನ್‌, ಅನುರಾಗ್‌ ಠಾಕೂರ್‌ ಮುಂತಾದವರೆಲ್ಲ ಯಾವ ರೀತಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದರು ಎನ್ನುವುದನ್ನು ಇಡೀ ದೇಶ ನೋಡಿದೆ. ಕಪಿಲ್‌ ಮಿಶ್ರ ನೀಡಿದ ಎಚ್ಚರಿಕೆಯಾಗಲಿ, ವಾರಿಸ್‌ ಪಠಾಣ್‌ರ 100 ಕೋಟಿ ಹಿಂದುಗಳಿಗೆ 15 ಕೋಟಿ ಮುಸ್ಲಿಮರು ಸಾಕು ಎಂಬ ಹೇಳಿಕೆಯಾಗಲಿ, ಗಲಭೆಯಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪ ಎದುರಿಸುತ್ತಿರುವ ತಾಹಿರ್‌ ಹುಸೈನ್‌ ಆಗಲಿ ಇವರೆಲ್ಲ ಆಡುತ್ತಿರುವ ಆಟ ಬಹಳ ಅಪಾಯಕಾರಿಯಾಗಿದೆ. ತಾಹಿರ್‌ ಹುಸೈನ್‌ ಮನೆಯಲ್ಲಿ ಕಲ್ಲುಗಳ ರಾಶಿ, ಪೆಟ್ರೋಲು ಬಾಂಬ್‌ಗಳು ಮತ್ತಿತರ ಮಾರಕ ವಸ್ತುಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ಈ ನಾಯಕರ ವಿರುದ್ಧ ಅವರ ಪಕ್ಷಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪರೋಕ್ಷವಾಗಿ ಅವರನ್ನು ಬೆಂಬಲಿಸಿದಂತೆ ಆಗುತ್ತದೆ. ಏಕೆ ಇಂಥ ನಾಯಕರನ್ನು ಪಕ್ಷದಲ್ಲಿಟ್ಟುಕೊಳ್ಳಬೇಕು ಎನ್ನುವುದನ್ನು ಆಯಾಯ ಪಕ್ಷಗಳು ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ತಿಳಿಸುವ ಅಗತ್ಯವಿದೆ.

ಗಲಭೆಯಲ್ಲಿ ಎರಡೂ ಸಮುದಾಯಗಳಿಗೆ ಹಾನಿಯಾಗಿದೆ. ಎರಡೂ ಸಮುದಾಯಗಳ ಜನರು ಸತ್ತಿದ್ದಾರೆ. ಅಂಕಿತ್‌ ಶರ್ಮ ಎನ್ನುವ ಗುಪ್ತಚರ ಪಡೆಯ ಅಧಿಕಾರಿಯನ್ನು ಕೊಂದಿರುವ ರೀತಿ ಬೆಚ್ಚಿ ಬೀಳಿಸುವಂತಿದೆ. ಕನಿಷ್ಠ 400 ಇರಿತದ ಗಾಯಗಳು ಅವರ ಮೈಮೇಲೆ ಇದ್ದವು ಎನ್ನುತ್ತಿದೆ ಮರಣೋತ್ತರ ಪರೀಕ್ಷೆಯ ವರದಿ. ಈ ಹತ್ಯೆಯಲ್ಲಿ ತಾಹಿರ್‌ ಹುಸೈನ್‌ ನೇರವಾದ ಕೈವಾಡವಿದೆ ಎನ್ನಲಾಗುತ್ತಿದ್ದರೂ ಪೊಲೀಸರು ಇನ್ನೂ ಅವರನ್ನು ಬಂಧಿಸಿಲ್ಲ. ಆಮ್‌ ಆದ್ಮಿ ಪಕ್ಷದವರ್ಯಾರಾದರೂ ಗಲಭೆಯಲ್ಲಿ ಭಾಗಿಗಳಾಗಿದ್ದರೆ ಇಮ್ಮಡಿ ಶಿಕ್ಷೆ ನೀಡಿ ಎಂದು ಹೇಳಿ ದಿಲ್ಲಿಯ ಮುಖ್ಯಮಂತ್ರಿ ತಮ್ಮ ಜವಾಬ್ದಾರಿಯಿಂದ ಕಳಚಿಕೊಂಡಿದ್ದಾರೆ. ನಾಗರಿಕ ಸಮಾಜವೊಂದು ಇಷ್ಟು ಕ್ರೂರಿಯಾಗಬಹುದೆ? ಹಾಗಾದರೆ ನಾವು ನಿತ್ಯ ಬೋಧಿಸುವ ಶಾಂತಿ, ಸೌಹಾರ್ದ, ಸಹಬಾಳ್ವೆಗಳೆಲ್ಲ ಬರೀ ಬೋಧನೆಗೆ ಮಾತ್ರ ಸೀಮಿತವೆ? ಈ ಪ್ರಶ್ನೆಗಳಿಗೆ ಸಮಾಜವೇ ಉತ್ತರ ಕಂಡುಕೊಳ್ಳಬೇಕು.

ಸುಮಾರು ಎರಡೂವರೆ ತಿಂಗಳಿಂದಲೇ ದಿಲ್ಲಿಯಲ್ಲಿ ಅಸಹನೆ ಹೊಗೆಯಾಡುತ್ತಿತ್ತು. ಅದು ಸ್ಫೋಟಗೊಳ್ಳಲು ಒಂದು ಕಿಡಿಯನ್ನು ಕಾಯುತ್ತಿತ್ತು. ಇದು ಗೊತ್ತಿದ್ದೂ ಪೊಲೀಸರೇಕೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಿಲ್ಲ? ಇಂಥ ಪ್ರಕರಣ ಸಂಭವಿಸಿದಾಗಲೆಲ್ಲ ಪೊಲೀಸ್‌ ಮುಖ್ಯಸ್ಥರನ್ನು ವರ್ಗಾಯಿಸುವ ಅಥವಾ ಅಮಾನತುಗೊಳಿಸುವಂಥ ಕಣ್ಣೊರೆಸುವ ತಂತ್ರ ಇನ್ನೆಷ್ಟು ಕಾಲ ಮುಂದುವರಿಯಬಹುದು?

ಸಾಮಾಜಿಕ ಮಾಧ್ಯಮಗಳೂ ಹಿಂಸಾಚಾರ ಭುಗಿಲೇಳಲು ಸಾಕಷ್ಟು ಕೊಡುಗೆ ನೀಡಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ದ್ವೇಷದ, ಕುಮ್ಮಕ್ಕು ನೀಡುವಂಥ ಸಂದೇಶಗಳನ್ನು ಸೃಷ್ಟಿಸಿ ಹರಿಯಬಿಡುವ ವ್ಯವಸ್ಥೆ ಇದೆ ಎನ್ನುವುದು ಆಡಳಿತಕ್ಕೂ ಗೊತ್ತಿದೆ, ಪೊಲೀಸರಿಗೂ ಗೊತ್ತಿದೆ. ಆದರೆ ಹಿಂಸಾಚಾರ ತಾಂಡವವಾಡುತ್ತಿರುವಾಗಲೂ ಇಂಥ ಸಂದೇಶಗಳನ್ನು ತಡೆಯುವ ಪ್ರಯತ್ನವಾಗಲಿಲ್ಲ.

ದೇಶ ಅನೇಕ ಬಾರಿ ಇಂಥ ಹಿಂಸಾಚಾರಗಳನ್ನು ಕಂಡಿದೆ. 1984ರ ಸಿಕ್ಖ್ ಹತ್ಯಾಕಾಂಡ, 1999ರ ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ, 1993ರ ಮುಂಬಯಿ ಹಿಂಸಾಚಾರ, 1987ರ ಹಾಶಿಮ್‌ಪುರ ಗಲಭೆ, 2002ರ ಗುಜರಾತ್‌ ಗಲಭೆ ಹೀಗೆ ಅನೇಕ ಉದಾಹರಣೆಗಳಿವೆ. ಬಹುತೇಕ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ನ್ಯಾಯಾಂಗ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಸಿಕ್ಖ್ ಹತ್ಯಾಕಾಂಡದ ಸಂತ್ರಸ್ತರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟ ಮುಗಿದಿಲ್ಲ. ಇದೀಗ ದಿಲ್ಲಿ ಹಿಂಸಾಚಾರದ ಸಂತ್ರಸ್ತರಿಗೂ ಇದೇ ಗತಿಯಾಗಬಾರದು. ಕನಿಷ್ಠ ಕ್ಷಿಪ್ರವಾಗಿ ನ್ಯಾಯ ಸಿಗುವಂತೆ ಮಾಡುವ ಮೂಲಕ ವ್ಯವಸ್ಥೆಯಲ್ಲಿ ಅವರಿಗೆ ವಿಶ್ವಾಸ ಮೂಡುವಂತೆ ಮಾಡುವ ಕೆಲಸವನ್ನಾದರೂ ಈಗ ಎಲ್ಲರೂ ಸೇರಿ ಮಾಡಬೇಕು.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.