ಜೀವಸಂಕುಲದ ಉಳಿವಿಗೆ  ಓಝೋನ್‌ ಪದರ ರಕ್ಷಿಸೋಣ


Team Udayavani, Sep 16, 2021, 6:20 AM IST

ಜೀವಸಂಕುಲದ ಉಳಿವಿಗೆ  ಓಝೋನ್‌ ಪದರ ರಕ್ಷಿಸೋಣ

ವಾಯುಮಂಡಲದಲ್ಲಿರುವ “ಓಝೋನ್‌ ಪದರ’ ಭೂಮಿಯಲ್ಲಿನ ಸಕಲ ಜೀವರಾಶಿಗಳ ಸಂರಕ್ಷಕ  ಎಂದೇ ಕರೆಯಲ್ಪಡುತ್ತದೆ.

ವಾಯುಮಂಡಲದಲ್ಲಿ ಈ ರಕ್ಷಣಕವಚ ಇಲ್ಲದೇ ಹೋಗಿದ್ದಲ್ಲಿ ಸೂರ್ಯನಿಂದ ಹೊರಸೂಸಲ್ಪಡುವ ಅತಿನೇರಳೆ ಕಿರಣಗಳಿಗೆ ಎಲ್ಲ ಜೀವಸಂಕುಲ ಬಲಿಯಾಗಬೇಕಿತ್ತು. ಆದರೆ ಪ್ರಕೃತಿದತ್ತವಾಗಿ ಈ ಪದರ ಮಹಾಕಂಟಕದಿಂದ ಜೀವರಾಶಿಯನ್ನು ಪಾರುಮಾಡಿದೆ. ಆದರೆ ಜಾಗತೀಕರಣ, ಅಭಿವೃದ್ಧಿಯ ಹೆಸರಿನಲ್ಲಿ ಮಾನವನು ಪ್ರಕೃತಿಯ ಮೇಲೆ ನಿರಂತರವಾಗಿ ಎಸಗುತ್ತಿರುವ ದೌರ್ಜನ್ಯದಿಂದ ಈ ಪದರ ಕೂಡ ಹಾನಿಗೀಡಾಗುತ್ತಿದೆ. ಈಗಾಗಲೇ ಪದರದಲ್ಲಿ ರಂಧ್ರ ಕಾಣಿಸಿಕೊಂಡಿದ್ದು ವರ್ಷಗಳುರುಳಿದಂತೆ ಇದು ದೊಡ್ಡದಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಅತಿಯಾದ ಕೈಗಾರಿಕೀಕರಣದ ಪರಿಣಾಮ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿದ್ದು ಇದರಿಂದಾಗಿ ಓಝೋನ್‌ ಪದರ ಸವೆಯತೊಡಗಿದೆ.  ಓಝೋನ್‌ ಪದರ ಸವೆತವ‌ನ್ನು ತಡೆಗಟ್ಟುವ ಮತ್ತು ಅದನ್ನು ಸಂರಕ್ಷಿಸುವ ಸಲುವಾಗಿ ಪ್ರತೀ ವರ್ಷ  ಸೆ. 16ರಂದು ವಿಶ್ವಾದ್ಯಂತ ಓಝೋನ್‌ ದಿನವನ್ನು ಆಚರಿಸಲಾಗುತ್ತದೆ.

ಓಝೋನ್‌ ಪದರ ಎಂದರೇನು? :

ಓಝೋನ್‌ ಎನ್ನುವುದು ಆಮ್ಲಜನಕದ ಒಂದು ರೂಪ, ವಾತಾವರಣದ ಒಂದು ಭಾಗವಾಗಿದೆ. ಭೂಮಿಯ ಮೇಲೈಯಿಂದ ವಾಯುಮಂಡಲ ದಲ್ಲಿ ಸುಮಾರು 15 ರಿಂದ 35 ಕಿ.ಮೀ. ಮೇಲ್ಪಟ್ಟ ಪ್ರದೇಶದಲ್ಲಿ ಓಝೋನ್‌ ಪದರವಿದೆ. 1839ರಲ್ಲಿ ಭೂಮಿಯ ರಕ್ಷಾಕವಚವಾಗಿ ವಾತಾವರಣದ ನೈಸರ್ಗಿಕ ಅನಿಲವೆಂದು ಇದನ್ನು ಪರಿಗಣಿಸ ಲಾಗಿದೆ. ಓಝೋನ್‌ ಪದರದ ರಕ್ಷಣೆಗಾಗಿ ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ಸಾಗುತ್ತಿವೆಯಾ ದರೂ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ವಿಶ್ವಮಟ್ಟದ ಪ್ರಯತ್ನ :

ದಿನದಿಂದ ದಿನಕ್ಕೆ ಓಝೋನ್‌ ಪದರ ಹಾನಿಗೀಡಾಗುತ್ತಿದ್ದು ಇದನ್ನು ಸಂರಕ್ಷಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಓಝೋನ್‌ ಪದರಕ್ಕೆ ಹಾನಿ ಉಂಟು ಮಾಡುವ ವಸ್ತುಗಳ ಬಳಕೆಗೆ ಕಡಿವಾಣ ಮತ್ತು ಮುನ್ನೆ ಚ್ಚ ರಿಕೆ ಕ್ರಮ ವನ್ನು ಅನು ಸರಿಸುವ ನಿಟ್ಟಿ ನಲ್ಲಿ 1987ರ ಸೆ. 16ರಂದು ವಿಯೆನ್ನಾ ದಲ್ಲಿ ಓಝೋನ್‌ ಪದರ ರಕ್ಷಣೆಯ ಕುರಿತಾಗಿ ನಡೆದ ಮೊದಲ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ವಿಶ್ವಸಂಸ್ಥೆಯ 45 ದೇಶಗಳು “ಮಾಂಟ್ರಿಯಲ್‌ ಪ್ರೊಟೋಕಾಲ್‌’ಗೆ ಸಹಿ ಹಾಕಿದವು. ಆ ಬಳಿಕ 1994ರ ಡಿಸೆಂಬರ್‌ 19ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷ ಸೆ. 16ರಂದು ವಿಶ್ವ ಓಝೋನ್‌ ದಿನವನ್ನಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಪ್ರಸ್ತುತ 197 ರಾಷ್ಟ್ರಗಳು “ಮಾಂಟ್ರಿಯಲ್‌ ಪ್ರೊಟೋಕಾಲ್‌’ ಅನ್ನು ಸಾರ್ವತ್ರಿಕ ವಾಗಿ ಅಂಗೀಕರಿಸಿವೆ. ಓಝೋನ್‌ ಪದರಕ್ಕೆ ಹಾನಿಕಾರಕ ವಾದ ವಸ್ತುಗಳು ಮತ್ತು ಅನಿಲಗಳ ಉತ್ಪಾದನೆ ಮತ್ತು ಬಳಕೆಗೆ ಕಡಿವಾಣ ಹಾಕುವುದು ಈ ಪ್ರೊಟೋಕಾಲ್‌ನ ಮುಖ್ಯ ಉದ್ದೇಶವಾಗಿದೆ. ಕ್ಲೋರೋಫ್ಯೂರೋ, ಇಂಗಾಲದಂತಹ ರಾಸಾಯನಿಕಗಳಿಂದಾಗಿ ಓಜೋನ್‌ ಪದರ ತೆಳುವಾಗುತ್ತಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದು ಇನ್ನೂ ಹೆಚ್ಚು ಹಾನಿಯಾಗದಂತೆ ಪೂರ್ವ ನಿರ್ಧರಿತ ಕ್ರಮ ಅನುಸರಿಸುವಂತೆ ವಿಶ್ವದೆಲ್ಲೆಡೆಯಿಂದ ಒಕ್ಕೊರಲ ಆಗ್ರಹ ಕೇಳಿ ಬರುತ್ತಿದೆ.

ಓಝೋನ್‌ ಪದರ ಹಾನಿಯಾಗಲು ಮುಖ್ಯ ಕಾರಣಗಳು :

  • ವಾಹನಗಳು ಹೊರಸೂಸುವ ಹೊಗೆ
  • ಕೈಗಾರಿಕ ಬೆಳವಣಿಗೆ
  • ಕಾರ್ಖಾನೆಯಿಂದ ಹೊರಹೊಮ್ಮುವ ವಿಷಕಾರಿ ಅನಿಲಗಳು
  • ಬ್ರೋಮಿನ್‌, ಹೈಡ್ರೋ ಫ್ಲೋರೋ ಕಾರ್ಬನ್‌, ಕ್ಲೋರೋಫ‌ೂÉರೋ ಕಾರ್ಬನ್‌, ಮಿಥೇನ್‌ ಮುಂತಾದ ಅನಿಲಗಳು.
  • ಹವಾಮಾನ ವೈಪರೀತ್ಯ
  • ಪರಿಸರ ನಾಶ

ಸಂಕಲ್ಪ  :

ಓಝೋನ್‌ ಪದರದ ಸಂರಕ್ಷಣೆ ಸಂಪೂರ್ಣ ಮನು ಕುಲದ ಹೊಣೆಗಾರಿಕೆ ಯಾಗಿದೆ. ಮಾತ್ರ ವ ಲ್ಲ ದೆ ಮುಂದಿನ ಪೀಳಿಗೆಗೆ ಈ ಭೂಮಂಡಲವನ್ನು ಜತನ ದಿಂದ ರಕ್ಷಿಸಿ ಬಳುವಳಿ ಯಾಗಿ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವೂ ಕೂಡ.

ಹಾನಿ ತಡೆಗಟ್ಟುವುದು ಹೇಗೆ? :

  • ಪರಿಸರಸಹ್ಯ ವಸ್ತುಗಳ ಬಳಕೆಗೆ ಹೆಚ್ಚಿನ ಉತ್ತೇಜನ.
  • ಸಾಧ್ಯವಾದಷ್ಟು ವಸ್ತುಗಳ ಪುನರ್‌ ಬಳಕೆಗೆ ಒತ್ತು.
  • ಪ್ರಾಕೃತಿಕ ಸಂಪನ್ಮೂಲವನ್ನು ಉಳಿಸುವುದು.
  • ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು
  • ಕನಿಷ್ಠ ಮಟ್ಟಕ್ಕೆ ಇಳಿಸುವುದು.

ಇಂಗಾಲ ಹೊರಸೂಸುವಿಕೆ: ಮುಂಚೂಣಿಯಲ್ಲಿ ಚೀನ :

ಸದ್ಯ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಚೀನವು ಓಝೋನ್‌ ಪದರಕ್ಕೆ ಮಾರಕವಾಗುವ ಇಂಗಾಲದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಅಮೆರಿಕ ಎರಡನೇ ಮತ್ತು ಭಾರತವು ಮೂರನೇ ಸ್ಥಾನದಲ್ಲಿದೆ. ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ರಷ್ಯಾ, ಜಪಾನ್‌, ಜರ್ಮನಿ, ಸೌದಿ ಅರೇಬಿಯಾ ಸಹಿತ ಇತರ ರಾಷ್ಟ್ರಗಳು ಸೇರಿವೆ.

ವಿಶ್ವದಲ್ಲಿ ಅತೀ ಹೆಚ್ಚು ಇಂಗಾಲದ ಡೈಆಕ್ಸೆ„ಡ್‌ನ್ನು ಹೊರಸೂಸುವ

ಟಾಪ್‌ 10 ದೇಶಗಳು :

ದೇಶ     ಪ್ರಮಾಣ (ಗಿಗಾ ಟನ್‌)

ಚೀನ     9.3

ಅಮೆರಿಕ             4.8

ಭಾರತ 2.2

ರಷ್ಯಾ   1.5

ಜಪಾನ್‌               1.1

ಜರ್ಮನಿ             0.7

ದಕ್ಷಿಣ ಕೊರಿಯಾ            0.6

ಇರಾನ್‌ 0.6

ಕೆನಡಾ 0.5

ಸೌದಿ ಅರೇಬಿಯಾ           0.5

ಟಾಪ್ ನ್ಯೂಸ್

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ

Exam 2

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.