ವೀರಾಪುರ ಜೋಡೆತ್ತಿಗೆ ಚಾಂಪಿಯನ್‌ಪಟ್ಟ : ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಸಂಪನ್ನ 


Team Udayavani, Feb 23, 2022, 7:21 PM IST

ವೀರಾಪುರ ಜೋಡೆತ್ತಿಗೆ ಚಾಂಪಿಯನ್‌ಪಟ್ಟ : ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಸಂಪನ್ನ 

ಬಾಗಲಕೋಟೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಅಂಗವಾಗಿ ಕಳೆದ 5 ದಿನಗಳ ಕಾಲ ನಡೆದ ವಿವಿಧ ತಳಿಯ ಜಾನುವಾರು ಪ್ರದರ್ಶನದಲ್ಲಿ ತಾಲೂಕಿನ ವೀರಾಪುರದ ಫಕೀರಪ್ಪ ಚವಡಿ ಅವರ ಜೋಡೆತ್ತುಗಳು ಜಾತ್ರಾ ಚಾಂಪಿಯನ್‌ ಪಡೆದವು. ಮಂಗಳವಾರ ನಗರದ ಹೊರವಲಯದ ಕಲಾದಗಿ ರಸ್ತೆಯ ಕೇಸನೂರ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಾತ್ರಾ ಚಾಂಪಿಯನ್‌ ಪಡೆದುಕೊಂಡ ಜೋಡೆತ್ತುಗಳಿಗ 11 ತೊಲಿ ಬೆಳ್ಳಿ ಕಡೆ ಹಾಗೂ ಪ್ರಶಸ್ತಿ ಪತ್ರ ನೀಡಲಾುತು.

ಹಾಲು ಹಲ್ಲಿನ ಹೋರಿ, ಎರಡು ಹಲ್ಲಿನ ಹೋರಿ, ನಾಲ್ಕು ಹಲ್ಲಿನ ಹೋರಿ, ಆರು ಹಲ್ಲಿನ ಹೋರಿ, ಜೋಡು ಎತ್ತುಗಳು, ಖೀಲ್ಹಾರಿ ಆಕಳುಗಳಿಗೆ ಪ್ರಥಮ 10 ತೊಲಿ ಬೆಳ್ಳಿ ಖಡೆ, ದ್ವಿತೀಯ 8 ತೊಲಿ ಬೆಳ್ಳಿ ಖಡೆ, ತೃತೀಯ 6 ತೊಲಿ ಬೆಳ್ಳಿ ಖಡೆ ಮತ್ತು ಪ್ರಶಸ್ತಿ ಪತ್ರ  ನೀಡಲಾಯಿತು.

ಹಾಲು ಹಲ್ಲಿನ ಹೋರಿ ಪ್ರದರ್ಶನದಲ್ಲಿ ನಕ್ಕರಗುಂದಿ ಗ್ರಾಮದ ಪರಸಪ್ಪ ಕುರಿ ಅವರ ಹೋರಿಗೆ (ಪ್ರಥಮ), ತುಳಸಿಗೇರಿಯ ಭೀಮಣ್ಣ ಜೈನಾಪುರ (ದ್ವಿತೀಯ), ಶಿರೂರಿನ ಸಿದ್ದಪ್ಪ ಗಾಳಿ
(ತೃತೀಯ), ಎರಡು ಹಲ್ಲಿನ ಹೋರಿ ಪ್ರದರ್ಶನದಲ್ಲಿ ಬಾಗಲಕೋಟೆಯ ಸಂಗಣ್ಣ ಯಮನಾಳ (ಪ್ರಥಮ), ನಿಂಗಾಪುರದ ರಂಗಪ್ಪ ಮಾದರ (ದ್ವಿತೀಯ), ಸೀಮಿಕೇರಿಯ ತಮ್ಮಣ್ಣಪ್ಪ ಪಿಂಡರಕಿ (ತೃತೀಯ), ನಾಲ್ಕು ಹಲ್ಲಿನ ಹೋರಿ ಪ್ರದರ್ಶನದಲ್ಲಿ ಹುನಗುಂದನ ಪರಸಪ್ಪ ಆಲೂರ (ಪ್ರಥಮ), ಮುದ್ದೇಬಿಹಾಳದ ಸುಭಾಸ್‌ ಮಾದಗುಂಡಿ (ದ್ವಿತೀಯ), ನಿಂಗಾಪುರದ
ಮಹಾಂತೇಶ ಎಮ್ಮಿ ಅವರ ಹೋರಿ (ತೃತೀಯ) ಸ್ಥಾನ ಪಡೆದುಕೊಂಡವು.

ಆರು ಹಲ್ಲಿನ ಹೋರಿ ಪ್ರದರ್ಶನದಲ್ಲಿ ನಿಂಗಾಪುರದ ಸಂಗಪ್ಪ ಸಂಗಮದ ಹೋರಿ (ಪ್ರಥಮ), ಜಮ್ಮನಕಟ್ಟಿಯ ನಿಂಗಪ್ಪ ಕೋಳ್ಳಿ (ದ್ವಿತೀಯ), ತುಳಸಿಗೇರಿಯ ಮಳಿಯಪ್ಪ ಕೆಂಗಲಗುತ್ತಿ (ತೃತೀಯ), ಜೋಡು ಎತ್ತುಗಳ ಪ್ರದರ್ಶನದಲ್ಲಿ ಹಿರೇಮಾಗಿಯ ಬಾಲಪ್ಪ ಹೊಸೂರ ಎತ್ತುಗಳು (ಪ್ರಥಮ), ಶಿರೂರಿನ ನಾಗಪ್ಪ ಅಚನೂರ (ದ್ವಿತೀಯ), ದಾದನಟ್ಟಿಯ ರಮೇಶ ರಾಜನಾಳ (ತೃತೀಯ), ಖೀಲ್ಹಾರಿ ಆಕಳು ಪ್ರದರ್ಶನದಲ್ಲಿ ಹಂಚಿನಾಳಿನ ವಿಠಲ ಅಂಬಿಗೇರ  ಆಕಳು (ಪ್ರಥಮ), ಮುತ್ತಲದಿನ್ನಿಯ ಮಲ್ಲಪ್ಪ ಕಲ್ಲಾರಿ (ದ್ವಿತೀಯ) ಹಾಗೂ ಮನ್ನಿಕಟ್ಟಿ ಗ್ರಾಮದ
ಪರಸಪ್ಪ ಕೊಳಮಲಿ ಆಕಳು ತೃತೀಯ ಸ್ಥಾನ ಪಡೆದುಕೊಂಡವು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಸಹಾಯಕ ನಿರ್ದೇಶಕ ಎಸ್‌.ಎನ್‌. ಪತ್ತಾರ ಮಾತನಾಡಿ, 5 ದಿನಗಳ ಕಾಲ ಉತ್ತಮ ರೀತಿಯಲ್ಲಿ ಜಾನುವಾರು
ಜಾತ್ರೆ ನಡೆದಿದೆ. ಜಾತ್ರೆ ಹಮ್ಮಿಕೊಳ್ಳುವ ಉದ್ದೇಶ ಜಾನುವಾರುಗಳ ಸಂಪತ್ತು ಹೆಚ್ಚಿಸುವುದಾಗಿದೆ. ಇನ್ನಷ್ಟು ಜನರು ಜಾನುವಾರು ಜಾತ್ರೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಎಪಿಎಂಸಿ ನಿರ್ದೇಶಕ ಮಲ್ಲು ದ್ಯಾವನ್ನವರ, ಮುರುಗೆಪ್ಪ ವೈಜಾಪುರ ಮಾತನಾಡಿದರು. ಮುರನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವ್ವ ತೆಗ್ಗಿ, ಯಲ್ಲಪ್ಪ ಅಮಾತಗೌಡ್ರ, ಕೃಷ್ಣಪ್ಪ ನಾಯಕ, ನಾಗಪ್ಪ ಸೊನ್ನದ, ಶೇಖಪ್ಪ ಹೆರಕಲ್ಲ, ಎಂ.ಎಂ.ಹುಲ್ಲೂರ, ಶೀತಮ್ಮ ಮೇಟಿ, ಪ್ರಗತಿಪರ ರೈತ ಚನಬಸಪ್ಪ ಲಾಗಲೋಟಿ, ಸಂಗಮೇಶ ಯಮನಾಳ, ಶ್ರೀಶೈಲ ಗೌರಿ, ಕೋಟಿಕಲ್‌, ಪಶು ಇಲಾಖೆಯ ಸಹಾಯಕ ನಿರ್ದೇಶಕ ಪಾಗದ, ಎಪಿಎಂಸಿ ಕಾರ್ಯದರ್ಶಿ ಎನ್‌.ಎ. ಲಕ್ಕುಂಡಿ, ಸಹಾಯಕ ಕಾರ್ಯದರ್ಶಿ ಆರ್‌.ಎಸ್‌. ದಂಡಿನ, ಬಗಲಿ ಮುಂತಾದವರು
ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Sandalwood; 2ಘಟನೆ ಒಂದೇಪರಿಣಾಮ: ಇವರು ಗೆದ್ದು ಸೋತವರಾ? ಸೋತು ಗೆದ್ದವರಾ? ನೀವೇ ನಿರ್ಧರಿಸಿ

Sandalwood; 2ಘಟನೆ ಒಂದೇಪರಿಣಾಮ: ಇವರು ಗೆದ್ದು ಸೋತವರಾ? ಸೋತು ಗೆದ್ದವರಾ? ನೀವೇ ನಿರ್ಧರಿಸಿ

Panaji: ಪರವಾನಿಗೆ ಇಲ್ಲದೆ ದೋಣಿ ವಿಹಾರ… ಮಾಲೀಕ, ನಿರ್ವಾಹಕನ ವಿರುದ್ಧ ಪ್ರಕರಣ

Panaji: ಪರವಾನಿಗೆ ಇಲ್ಲದೆ ದೋಣಿ ವಿಹಾರ… ಮಾಲೀಕ, ನಿರ್ವಾಹಕನ ವಿರುದ್ಧ ಪ್ರಕರಣ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

‘Politics is a thousand times greater’ in Team India; What did Rahul say to Langer?

ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

Dog Stolen: ನ್ಯಾಯಾಧೀಶರ ಮನೆಯಿಂದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Dog Stolen: ನ್ಯಾಯಾಧೀಶರ ಮನೆಯಲ್ಲಿದ್ದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

ತಿರುಪತಿಗೆಂದು ಹೋಗುತ್ತಿದ್ದವರ ಕಾರು ಪಲ್ಟಿ; ನಾಲ್ವರು ಸಾವು, ಆರು ಮಂದಿಗೆ ಗಾಯ

Ranebennur; ತಿರುಪತಿಗೆಂದು ಹೋಗುತ್ತಿದ್ದವರ ಕಾರು ಪಲ್ಟಿ; ನಾಲ್ವರು ಸಾವು, ಆರು ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

Elephant Census: ನಾಗರಹೊಳೆಯಲ್ಲಿ ಗಜ ಗಣತಿಗೆ ಚಾಲನೆ, 300 ಸಿಬ್ಬಂದಿಗಳು ಭಾಗಿ

Elephant Census: ನಾಗರಹೊಳೆಯಲ್ಲಿ ಗಜ ಗಣತಿಗೆ ಚಾಲನೆ, 300 ಸಿಬ್ಬಂದಿಗಳು ಭಾಗಿ

Pen drive case: ತಾರಕಕ್ಕೇರಿದ ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟ

Pen drive case: ತಾರಕಕ್ಕೇರಿದ ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟ

40

Prajwal Revanna: ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗೆ  ಕೇಂದ್ರ ಪ್ರಕ್ರಿಯೆ ಆರಂಭ; ಜೋಷಿ

37

Prajwal Revanna: ಶೀಘ್ರದಲ್ಲೇ ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ರದ್ದು ?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Sandalwood; 2ಘಟನೆ ಒಂದೇಪರಿಣಾಮ: ಇವರು ಗೆದ್ದು ಸೋತವರಾ? ಸೋತು ಗೆದ್ದವರಾ? ನೀವೇ ನಿರ್ಧರಿಸಿ

Sandalwood; 2ಘಟನೆ ಒಂದೇಪರಿಣಾಮ: ಇವರು ಗೆದ್ದು ಸೋತವರಾ? ಸೋತು ಗೆದ್ದವರಾ? ನೀವೇ ನಿರ್ಧರಿಸಿ

Panaji: ಪರವಾನಿಗೆ ಇಲ್ಲದೆ ದೋಣಿ ವಿಹಾರ… ಮಾಲೀಕ, ನಿರ್ವಾಹಕನ ವಿರುದ್ಧ ಪ್ರಕರಣ

Panaji: ಪರವಾನಿಗೆ ಇಲ್ಲದೆ ದೋಣಿ ವಿಹಾರ… ಮಾಲೀಕ, ನಿರ್ವಾಹಕನ ವಿರುದ್ಧ ಪ್ರಕರಣ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

‘Politics is a thousand times greater’ in Team India; What did Rahul say to Langer?

ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

Dog Stolen: ನ್ಯಾಯಾಧೀಶರ ಮನೆಯಿಂದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Dog Stolen: ನ್ಯಾಯಾಧೀಶರ ಮನೆಯಲ್ಲಿದ್ದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.