ಕೆಲಸಕ್ಕೆ ಸೇರಿದ ಮೊದಲ ದಿನವೇ ದುರಂತ ಕಾದಿತ್ತು!


Team Udayavani, Feb 16, 2018, 12:51 PM IST

kelasakke.jpg

ಬೆಂಗಳೂರು: ಆ ಹುಡುಗ ಗುರುವಾರವಷ್ಟೇ ಕೂಲಿ ಕೆಲಸಕ್ಕೆ ಸೇರಿದ್ದ. ಮೊದಲ ದಿನವೇ ಕುಸಿದ ಕಟ್ಟಡದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಆತ, ಸ್ವತಃ ಮನೆಯವರಿಗೆ ಕರೆ ಮಾಡಿ, ತನ್ನನ್ನು ರಕ್ಷಿಸುವಂತೆ ಅಂಗಲಾಚಿದ. ಧಾವಿಸಿಬಂದ ಸಂಬಂಧಿಕರು ಅವಶೇಷಗಳ ಮುಂದೆಯೇ ನಿಂತಿದ್ದಾರೆ. ಆತನ ಮೊಬೈಲ್‌ ಕೂಡ ರಿಂಗಣಿಸುತ್ತಿದೆ. ಆದರೆ, ಆತ ಮಾತ್ರ ಕಳೆದುಹೋಗಿದ್ದಾನೆ!

ಮಧ್ಯಪ್ರದೇಶ ಗೋರಖ್‌ಪುರದ ಸದಾನಂದ ಅವಶೇಷಗಳಡಿ ಕಳೆದುಹೋಗಿದ್ದಾನೆ. ಆತನನ್ನು ಹುಡುಕಿಕೊಂಡು ಎಚ್‌ಎಸ್‌ಆರ್‌ ಲೇಔಟ್‌ನಿಂದ ಬಂದ ಸಂಬಂಧಿಕ ಪ್ರೇಮಪ್ರಕಾಶ್‌, “ತನ್ನನ್ನು ಬದುಕಿಸಿ’ ಎಂದು ಕರೆ ಬಂದ ಮೊಬೈಲ್‌ ಸಂಖ್ಯೆಗೆ ಮರುಕರೆ ಮಾಡುತ್ತಿದ್ದಾರೆ. ಆದರೆ, ಅತ್ತಕಡೆಯಿಂದ ಉತ್ತರವಿಲ್ಲ.

ಪೆಟ್ಟಾಗಿ ರಕ್ತಬರುತ್ತಿದೆ ರಕ್ಷಿಸಿ…: ಸಂಜೆ 5 ಗಂಟೆಗೆ ಸದಾನಂದ ಅವರು ಗೋರಖ್‌ಪುರದಲ್ಲಿರುವ ಕುಟುಂಬದ ಸದಸ್ಯರಿಗೆ ಕರೆ ಮಾಡಿ, “ನಾನು ಕೆಲಸ ಮಾಡುತ್ತಿರುವ ಕಟ್ಟಡ ಕುಸಿದಿದೆ. ನನ್ನ ಕಾಲಿನ ಮೇಲೆ ಕಟ್ಟಡದ ಅವಶೇಷ ಬಿದ್ದಿದೆ. ಸೊಂಟದ ಭಾಗಕ್ಕೂ ಪೆಟ್ಟಾಗಿದೆ. ಸಿಕ್ಕಾಪಟ್ಟೆ ರಕ್ತಬರುತ್ತಿದೆ. ದಯವಿಟ್ಟು ನನ್ನನ್ನು ರಕ್ಷಣೆ ಮಾಡಿ,’ ಎಂದು ಸುಮಾರು ಅಂಗಲಾಚಿದ್ದಾರೆ. ಆತಂಕಗೊಂಡ ಮನೆಯವರು, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಪ್ರೇಮಪ್ರಕಾಶ್‌ಗೆ ಸುದ್ದಿಮುಟ್ಟಿಸಿದ್ದಾರೆ. 

ಪ್ರೇಮಪ್ರಕಾಶ್‌ ಮಾರ್ಗದುದ್ದಕ್ಕೂ ನಿರಂತರವಾಗಿ ಕರೆ ಮಾಡುತ್ತಲೇ ಬಂದಿದ್ದಾರೆ. ಸುಮಾರು 40ರಿಂದ 45 ನಿಮಿಷಗಳ ಅಂತರದಲ್ಲಿ ಏಳೆಂಟು ಬಾರಿ ಸದಾನಂದ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಈ ಮೂಲಕ ಅವರು ಜೀವಂತವಾಗಿರುವುದನ್ನು ಪ್ರೇಮಪ್ರಕಾಶ್‌ ಖಾತ್ರಿಪಡಿಸಿಕೊಂಡಿದ್ದಾರೆ. ನಂತರ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅದೇ ಸಮಯಕ್ಕೆ ಸದಾನಂದ ಕೂಡ ತಲುಪಿದ್ದಾರೆ. ಆದರೆ, ಈಗ ಮೊಬೈಲ್‌ಗೆ ಕರೆ ಮಾಡಿದಾಗ ರಿಂಗಣಿಸುತ್ತಿದೆ. ಆದರೆ, ಸ್ವೀಕರಿಸುತ್ತಿಲ್ಲ ಎಂದು ಪ್ರೇಮಪ್ರಕಾಶ್‌ ತಿಳಿಸಿದರು. 

“ಸದಾನಂದ ಅವಶೇಷಗಳಡಿ ಸಿಲುಕಿದ್ದು ಸುದ್ದಿ ತಿಳಿದ ತಕ್ಷಣ ಅವನಿಗೆ ಕರೆ ಮಾಡಿದೆ. ಆಗ, ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‌ನಲ್ಲಿಯ ಕಟ್ಟಡ ಕುಸಿದಿದ್ದು, ಅದರಡಿ ನಾನು ಸಿಲುಕಿದ್ದೇನೆ. ನನಗೆ ತೀವ್ರ ಗಾಯಗಳಾಗಿವೆ. ದಯವಿಟ್ಟು ನನ್ನನ್ನು ರಕ್ಷಣೆ ಮಾಡಿ’ ಎಂದು ಅಂಗಲಾಚಿದ. ಇದಾದ ನಂತರ ನಾನು ಮಾರ್ಗದುದ್ದಕ್ಕೂ ನಿರಂತರವಾಗಿ ಹಲವು ಬಾರಿ ಕರೆ ಮಾಡಿದೆ. ಆಗೆಲ್ಲಾ, “ಇನ್ನೂ ಅವಶೇಷಗಳಡಿ ಸಿಕ್ಕಿದ್ದೇನೆ. ಹೊರಬರಲು ಆಗುತ್ತಿಲ್ಲ. ಬೇಗ ಬನ್ನಿ ಕಟ್ಟಡ ಇನ್ನೂ ಕುಸಿಯುವ ಸಾಧ್ಯತೆ ಇದೆ’ ಎಂದು ಕಣ್ಣೀರಿಡುತ್ತಿದ್ದ,’ ಎಂದು ಪ್ರಾಮಪ್ರಕಾಶ್‌ ವಿವರಿಸಿದರು.

ಕಣ್ಣು ಕಳೆದುಕೊಂಡ ಕಾರ್ಮಿಕ: ಕಟ್ಟಡದ 3ನೇ ಮಹಡಿಯಲ್ಲಿ ಕಾಪೆìಂಟರ್‌ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರಮೇಶ್‌ ಎಂಬುವವರ ಮೇಲೆ ಕಟ್ಟಡ ಅವಶೇಷ ಬಿದ್ದ ಪರಿಣಾಮ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಬಲಗೈ ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ರಮೇಶ್‌ ಮೊಬೈಲ್‌ ಕೂಡ ಕಳೆದಿದ್ದು, ಮನೆಯವರಿಗೆ ತಾನು ಗಾಯಗೊಂಡಿರುವ ವಿಷಯ ತಿಳಿಸಲು ಸಾಧ್ಯವಾಗಿಲ್ಲ. ಕಟ್ಟಡ ದುರಂತದಲ್ಲಿ ಗಾಯಗೊಂಡ ಒಂಬತ್ತು ಮಂದಿಯನ್ನು ಸಮೀಪದ ಸ್ಟಾಂಡ್‌ ಫೋರ್ಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರಿಗೆ ಗಂಭೀರ ತರಹದ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಗಾಯಾಳುಗಳನ್ನು ನೋಡಿಕೊಳ್ಳು ತ್ತಿರುವ ವೈದ್ಯರು ತಿಳಿಸಿದ್ದಾರೆ.

ಮೇ 3ರಂದು ಮದುವೆ ಇದೆ: ಮೂರು ತಿಂಗಳ ಹಿಂದಷ್ಟೇ ಸದಾನಂದ ಅವರ ಮದುವೆ ನಿಶ್ಚಯವಾಗಿದ್ದು, ಮೇ 3ರಂದು ಅವರು ಸಪ್ತಪದಿ ತುಳಿಯಲಿದ್ದಾರೆ. ಬದುಕು ಕಟ್ಟಿಕೊಳ್ಳುವ ಆಸೆಯಿಂದ ಮೂರ್‍ನಾಲ್ಕು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಕಸವನಹಳ್ಳಿಯಲ್ಲಿ ಕೆಲಸ ಇರುವುದನ್ನು ಖಾತ್ರಿಪಡಿಸಿಕೊಂಡು, ಗುರುವಾರ ಬೆಳಗ್ಗೆಯಷ್ಟೇ ಕೆಲಸಕ್ಕೆ ಹಾಜರಾಗಿದ್ದರು ಎಂದು ಸಂಬಂಧಿಕರು ಅಲವತ್ತುಕೊಂಡರು. ತಡರಾತ್ರಿವರೆಗೂ ರಕ್ಷಣಾ ಕಾರ್ಯ ಮುಂದುವರಿದಿತ್ತು. ರಕ್ಷಿಸಿದವರ ಪಟ್ಟಿಯಲ್ಲಿ ಬುಡ್ಡ, ದೇವವ್ವ, ಮದೀನಾ, ಮೊಹರಂ, ಹಜರತ್‌, ಬಿರಾವು ಇದ್ದಾರೆ. ಸದಾನಂದ ಹೆಸರು ಇರಲಿಲ್ಲ.

ಟಾಪ್ ನ್ಯೂಸ್

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

1-qeewqewqewe

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

1-reaa

I.N.D.I.A. ಸಭೆ; ಜೂ.1ರಂದು ಫ‌ಲಿತಾಂಶ ಬಳಿಕದ ಕಾರ್ಯತಂತ್ರ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Bengaluru: ಮೊಬೈಲ್‌ ದೋಚುತ್ತಿದ್ದ ಇಬ್ಬರ ಬಂಧನ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

4

Arrested: ಬೀದಿಬದಿ ಮಲಗಿದ್ದವರ ಹತ್ಯೆ: ಸರಣಿ ಹಂತಕನ ಸೆರೆ

7

Rave Party: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

sensex

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

arrested

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.