ಭವಂತಿ ಸ್ಟ್ರೀಟ್ : ಹಳೆ ಕಟ್ಟಡ ತೆರವು
Team Udayavani, Jun 22, 2018, 12:40 PM IST
ಮಹಾನಗರ : ನಗರದ ಭವಂತಿಸ್ಟ್ರೀಟ್ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಹಳೆ ಕಟ್ಟಡವನ್ನು ಮಹಾನಗರ ಪಾಲಿಕೆ ಗುರುವಾರ ತೆರವುಗೊಳಿಸಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನಗರದ ಭವಂತಿ ಸ್ಟ್ರೀಟ್ ಬಳಿಯ ಜಾನಕಿ ಕಟ್ಟಡದ ಎದುರಿನ ಭಾಗ ಕುಸಿದು ಬಿದ್ದಿತ್ತು. ಮತ್ತೆ ಸುರಿದ ಮಳೆಯಿಂದ ನೀರು ಹೀರಿ ಕಟ್ಟಡ ಕುಸಿಯುವ ಹಂತದಲ್ಲಿತ್ತು. ಇದು ಅಪಾಯಕಾರಿ ಸ್ಥಿತಿಯಲ್ಲಿದೆ ಇದೆ ಎಂದು ಸಾರ್ವಜನಿಕರು ಪಾಲಿಕೆಗೆ ಮಾಹಿತಿ ನೀಡಿದ್ದರು. ಇದೀಗ ಪಾಲಿಕೆ ಹಳೆ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಮಾಡಿದೆ. ಇದರೊಂದಿಗೆ ಅದೇ ರಸ್ತೆಯಲಿದ್ದ ಸುರೇಂದ್ರ ಹೆಗ್ಗಡೆ ಎನ್ನುವವರಿಗೆ ಸೇರಿದ ಕಟ್ಟಡವನ್ನು ಮಾಲಕರೇ ಪಾಲಿಕೆ ನೆರವಿನೊಂದಿಗೆ ತೆರವು ಮಾಡಿದ್ದಾರೆ.
ಸುದಿನ ಈ ಹಿಂದೆ ವರದಿ ಮಾಡಿತ್ತು
ಉದಯವಾಣಿ ಸುದಿನ ಈ ಹಿಂದೆ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಸ್ಥಳೀಯಾಡಳಿತ ಎಂಬ ಶೀರ್ಷಿಕೆಯಲ್ಲಿ ಜೂ. 10ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಈ ವೇಳೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪ್ರತಿಕ್ರಿಯಿಸಿ ನಗರದಲ್ಲಿ ಶಿಥಿಲಾವಸ್ಥೆಯ ಅನೇಕ ಕಟ್ಟಡಗಳಿವೆ. ಅದರ ಜತೆಗೆ ಅಪಾಯಕ್ಕೆ ಎಡೆಮಾಡುವ ಅನೇಕ ಮರಗಳಿದ್ದು, ಇವುಗಳನ್ನು ಗುರುತಿಸಿ ತೆರವು ಮಾಡಲು ಪಾಲಿಕೆಗೆ ತಿಳಿಸಲಾಗಿದೆ ಎಂದು ಹೇಳಿದ್ದರು. ಅದೇ ರೀತಿ ಪಾಲಿಕೆ ಇದೀಗ ಕಟ್ಟಡ ತೆರವುಗೊಳಿಸಲು ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhruva Sarja; 10 ವರ್ಷಗಳ ನಂತರ ‘ಬಹದ್ದೂರ್’ ಮತ್ತೆ ರಿಲೀಸ್
PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?
ZAP-X Radiosurgery; ಬ್ರೈನ್ ಟ್ಯೂಮರ್ ನೋವುರಹಿತ ಚಿಕಿತ್ಸೆಗೆ ಝ್ಯಾಪ್- ಎಕ್ಸ್
Uppinangady: ಮಹಿಳೆ ಸಾವು; ಕೊಲೆ ಶಂಕೆ
Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.