Mangaluru; ಚರಂಡಿ ತೋಡಿಗೆ ಬಿದ್ದ ಆಟೋ ರಿಕ್ಷಾ; ಚಾಲಕ ಸಾವು


Team Udayavani, May 25, 2024, 11:15 AM IST

Mangaluru; ಚರಂಡಿ ತೋಡಿಗೆ ಬಿದ್ದ ಆಟೋ ರಿಕ್ಷಾ; ಚಾಲಕ ಸಾವು

ಮಂಗಳೂರು: ಮಳೆನೀರು ತುಂಬಿ ಹರಿಯುತ್ತಿದ್ದ ರಸ್ತೆ ಬದಿಯ ತೋಡಿಗೆ (ರಾಜಕಾಲುವೆ) ಆಟೋರಿಕ್ಷಾ ಬಿದ್ದು ಚಾಲಕ ಮೃತಪಟ್ಟ ಘಟನೆ ಕೊಟ್ಟಾರಚೌಕಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಕೊಟ್ಟಾರಚೌಕಿ ನಿವಾಸಿ ದೀಪಕ್‌ ಆಚಾರ್ಯ (42) ಮೃತಪಟ್ಟವರು. ಘಟನೆ ವೇಳೆ ರಿಕ್ಷಾದಲ್ಲಿ ಒಬ್ಬರೇ ಇದ್ದರು. ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರ ಚೌಕಿಯಿಂದ ಸುಮಾರು 1 ಕಿ.ಮೀ. ದೂರದ ಒಳಭಾಗದ ರಸ್ತೆಯಲ್ಲಿ ರಾತ್ರಿ 11.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ದೀಪಕ್‌ ಬಾಡಿಗೆ ಮುಗಿಸಿ ಕೊಟ್ಟಾರದಲ್ಲಿರುವ ತನ್ನ ಮನೆಯ ಕಡೆಗೆಂದು ಬರುತ್ತಿದ್ದಾಗ ಭಾರೀ ಮಳೆ ಸುರಿಯುತ್ತಿತ್ತು. ತೋಡು ತುಂಬಿ ಹರಿಯುತ್ತಿದ್ದ ಕಾರಣ ರಸ್ತೆ ಕಾಣಿಸದೆ ನಿಯಂತ್ರಣ ಕಳೆದುಕೊಂಡು ರಿಕ್ಷಾ ತೋಡಿಗೆ ಜಾರಿತು. ಸರಿಸುಮಾರು ಒಂದು ತಾಸಿನ ಬಳಿಕ ಸಾರ್ವಜನಿಕರು ಗಮನಿಸಿ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದ್ದರು.ಮೇಲಕ್ಕೆತ್ತಿದಾಗ ರಿಕ್ಷಾದಡಿ ನೀರಿನೊಳಗೆ ದೀಪಕ್‌ ಮೃತಪಟ್ಟಿದ್ದರು.

ನೆರೆಯೆಂದು ದಾರಿ ಬದಲಿಸಿದ್ದರು!
ದೀಪಕ್‌ ಪ್ರತಿದಿನವೂ ಬಾಡಿಗೆ ಮುಗಿಸಿ ಮುಖ್ಯರಸ್ತೆಯಿಂದ ಮನೆಗೆ ನೇರವಾಗಿ ಸಂಪರ್ಕಿಸುವ ರಸ್ತೆಯಲ್ಲಿಯೇ ಬರುತ್ತಿದ್ದರು. ಆದರೆ ಶುಕ್ರವಾರ ರಾತ್ರಿ ಭಾರೀ ಮಳೆಯ ಹಿನ್ನೆಲೆಯಲ್ಲಿ ತನ್ನ ಮನೆಗೆ ನೇರವಾಗಿ ಬರುವ ರಸ್ತೆ ನೆರೆಯಿಂದ ಆವೃತವಾಗಿರುವ ಮಾಹಿತಿ ಪಡೆದು ಮತ್ತೂಂದು ಮಾರ್ಗದಲ್ಲಿ ಬರಲು ನಿರ್ಧರಿಸಿರಬೇಕು ಎಂದು ಮನೆಯವರು ಹೇಳಿದ್ದಾರೆ.

ನೀರು ಇಳಿದಿತ್ತು… ಪ್ರಾಣ ಹಾರಿತ್ತು
ಘಟನೆ ಸಂಭವಿಸಿದ ಸ್ಥಳಕ್ಕೂ ದೀಪಕ್‌ ಅವರ ಮನೆಗೂ ಕೆಲವೇ ಮೀಟರ್‌ಗಳ ಅಂತರ. ಶುಕ್ರವಾರ ಸುರಿದ ಭಾರೀ ಮಳೆಗೆ ಅವರ ಮನೆಗೂ ನೀರು ನುಗ್ಗಿತ್ತು. ಶನಿವಾರ ಬೆಳಗ್ಗೆ ನೀರು ಇಳಿದುಹೋಗಿತ್ತು. ಆದರೆ ದೀಪಕ್‌ ಪ್ರಾಣ ಹಾರಿಹೋಗಿತ್ತು. “ಪ್ರತೀ ಮಳೆಗಾಲಕ್ಕೂ ನಮ್ಮ ಪರಿಸರದಲ್ಲಿ ನೀರು ಮೇಲೇರುತ್ತದೆ. ಆದರೆ ಈ ಬಾರಿ ಪ್ರಾಣವನ್ನೇ ಕಿತ್ತುಕೊಂಡು ಹೋಗಿದೆ’ ಎಂದು ಮನೆಯವರು ರೋದಿಸಿದರು. ಅವಘಡ ಸಂಭವಿಸಿದ ತೋಡಿನಲ್ಲೂ ಶನಿವಾರ ನೀರಿನ ಪ್ರಮಾಣ ಕಡಿಮೆಯಾಗಿತ್ತು.

ಆಟೋರಿಕ್ಷಾ ನೀರಿನಲ್ಲಿ ಬಹುತೇಕ ಮುಳುಗಿತ್ತು. ಧಾರಾಕಾರ ಮಳೆ, ಗಾಢ ಕತ್ತಲಿನಲ್ಲಿ ರಿಕ್ಷಾದಲ್ಲಿ ರಿವರ್ಸ್‌ಗೇರ್‌ ಲೈಟ್‌ ಉರಿಯುತ್ತಿತ್ತು. ಆಟೋರಿಕ್ಷಾ ರಸ್ತೆ ಬಿಟ್ಟು ಬದಿಗೆ ಸರಿಯುತ್ತಿದೆ ಎಂದು ಗೊತ್ತಾದ ಕೂಡಲೇ ದೀಪಕ್‌ ರಿವರ್ಸ್‌ ಗೇರ್‌ ಹಾಕಿ ರಕ್ಷಿಸಿಕೊಳ್ಳಲು ಯತ್ನಿಸಿದ್ದರು. ಆಗ ರಿಕ್ಷಾ ಚರಂಡಿಗೆ ಬಿದ್ದಿರಬೇಕು ಎಂದು ಹೇಳಲಾಗಿದೆ.

ವಿದೇಶಕ್ಕೆ ಹೋಗುವವರಿದ್ದರು
“ದೀಪಕ್‌ ಈ ಹಿಂದೆ ಮಂಗಳೂರಿನಲ್ಲೇ
ಆಟೋ ಓಡಿಸುತ್ತಿದ್ದರು. ಬಳಿಕ ವಿದೇಶಕ್ಕೆ ತೆರಳಿದ್ದರು. ಅನಂತರ ಊರಿಗೆ ಬಂದು ಕೆಲವು ವರ್ಷಗಳಿಂದ ಆಟೋ ಓಡಿಸುತ್ತಿದ್ದರು. ಮುಂದಿನ ತಿಂಗಳು ಮತ್ತೆ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು’ ಎಂದು ಗೆಳೆಯ ವಿಜಯ್‌ ನೋವು ಹಂಚಿಕೊಂಡಿದ್ದಾರೆ.

ಮನೆಯ ಆಧಾರಸ್ತಂಭ
ದೀಪಕ್‌ ತನ್ನ ಅನಾರೋಗ್ಯಪೀಡಿತ ತಾಯಿ ಮತ್ತು ಸಹೋದರನೊಂದಿಗೆ ಕೊಟ್ಟಾರದಲ್ಲಿ ವಾಸವಾಗಿದ್ದರು. ಅಕ್ಕನಿಗೆ ಮದುವೆಯಾಗಿದೆ. ದೀಪಕ್‌ ಈ ಹಿಂದೆ ನಗರದಲ್ಲಿ ಆಟೋ ಓಡಿಸುತ್ತಿದ್ದರು. ಅನಂತರ ವಿದೇಶಕ್ಕೆ ತೆರಳಿದ್ದರು. ಐದಾರು ವರ್ಷಗಳಿಂದ ಮತ್ತೆ ನಗರದಲ್ಲಿ ಬೇರೊಬ್ಬರ ಮಾಲಕತ್ವದ ರಿಕ್ಷಾದಲ್ಲಿ ಚಾಲಕನಾಗಿದ್ದರು.

ಪಾಲಿಕೆ ವಿರುದ್ಧ ಪ್ರಕರಣ
ಮುಂಜಾಗ್ರತ ಕ್ರಮವಾಗಿ ತೋಡಿಗೆ ತಡೆಗೋಡೆ ನಿರ್ಮಿಸದಿರು ವುದರಿಂದ, ತೋಡನ್ನು ಸ್ವತ್ಛ ಗೊಳಿಸದೇ ಇದ್ದ ಕಾರಣ ಮಳೆ ನೀರು ತುಂಬಿನಿಂತು ಅವಘಡ ಸಂಭವಿಸಿದ್ದು ಇದಕ್ಕೆ ಪಾಲಿಕೆಯೇ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಾಲಿಕೆಯ ಅಧಿಕಾರಿಗಳ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳುಚೀಲ, ರಿಫ್ಲೆಕ್ಟರ್‌ ಅಳವಡಿಕೆ
ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಗೆ ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ರಾಜಕಾಲುವೆಗಳು ರಸ್ತೆಗೆ ಸಮಾನಾಂತರವಾಗಿರುವುದರಿಂದ ಹೆಚ್ಚು ಅಪಾಯಕಾರಿಯಾಗಿವೆ. ಅವುಗಳು 7ರಿಂದ 8 ಕಿ.ಮೀ. ವರೆಗೂ ಉದ್ದ ಇರುವುದರಿಂದ ಶಾಶ್ವತವಾಗಿ ತಡೆಗೋಡೆ ನಿರ್ಮಾಣ ಅಸಾಧ್ಯ. ಹಾಗಾಗಿ ಸದ್ಯ ತಾತ್ಕಾಲಿಕ ಕ್ರಮವಾಗಿ ಸುಮಾರು 20ರಿಂದ 30 ಕಡೆ ರಾಜಕಾಲುವೆಗಳ ಬಳಿ ಮರಳು ಚೀಲ, ರಿಫ್ಲೆಕ್ಟರ್‌ ಟೇಪ್‌ ಅಳವಡಿಸಲಾಗುತ್ತಿದೆ. ಕೊಟ್ಟಾರಚೌಕಿಯಲ್ಲಿ ನಡೆದಿರುವ ದುರಂತ ನೋವನ್ನುಂಟು ಮಾಡಿದೆ. ಇದು ಸ್ವಲ್ಪ ಒಳಪ್ರದೇಶವಾಗಿರುವುದರಿಂದ ಇಲ್ಲಿನ ರಾಜಕಾಲುವೆಯ ಅಪಾಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಾರದಿರುವ ಸಾಧ್ಯತೆ ಇದೆ. ಇನ್ನು ಮುಂದೆ ಪ್ರತೀ ಸಂಜೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಸಾರ್ವಜನಿಕರು ಕೂಡ ಮಳೆಗಾಲದ ಸಂದರ್ಭ, ಮುಖ್ಯವಾಗಿ ರಾತ್ರಿ ವೇಳೆ ಹೆಚ್ಚು ಜಾಗರೂಕತೆ ವಹಿಸಬೇಕು.
-ಆನಂದ್‌ ಸಿ.ಎಲ್‌., ಆಯುಕ್ತರು, ಮನಪಾ

ಟಾಪ್ ನ್ಯೂಸ್

1-sadsad

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

Mangaluru ಗಾಂಜಾ ಸೇವನೆ: ಯುವಕನ ಬಂಧನ

Mangaluru ಗಾಂಜಾ ಸೇವನೆ: ಯುವಕನ ಬಂಧನ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-sadsad

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.