ಯೋಗಕ್ಕೆ ಬೇಕಿರುವುದು ಪೂರಕ ವಾತಾವರಣ; ಪ್ರಚಾರವಲ್ಲ


Team Udayavani, Jun 20, 2017, 3:09 PM IST

hub3.jpg

ಹುಬ್ಬಳ್ಳಿ: ವಿಶ್ವಕ್ಕೆ ಯೋಗದ ಕೊಡುಗೆ ನೀಡಿದ್ದೇ ಭಾರತ. ಯೋಗಕ್ಕೆ ಬೇಕಾಗಿರುವುದು ಪ್ರಚಾರವಲ್ಲ, ಪೂರಕ ವಾತಾವರಣ. ದೇಶದಲ್ಲಿ ಯೋಗ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ನಾವು ವಿಫ‌ಲರಾಗಿದ್ದೇವೆ. ಅಂತಾರಾಷ್ಟ್ರೀಯ ಯೋಗ ದಿನ ಮಾತ್ರ ಯೋಗಮಯವಾದರೆ ಸಾಲದು, ಪ್ರತಿದಿನವೂ ಯೋಗ ಮಾಡುವ ಪರಿಪಾಠ ಬೆಳೆಯಬೇಕು. 

ಭಾರತದ ಮೂಲ ಯೋಗವನ್ನಿಟ್ಟುಕೊಂಡು ಪಾಶ್ಚಾತ್ಯರು ಸಂಶೋಧನೆ ಮೂಲಕ ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ಯೋಗವನ್ನು ಬೆಳೆಸುತ್ತಿದ್ದಾರೆ, ಬಳಸುತ್ತಿದ್ದಾರೆ. ಬಾಲ್‌ ಯೋಗ,  ಯೋಗ ವಿತ್‌ ಸ್ಟಿಕ್‌, ಕಾರ್ಡಿಯೋ ಯೋಗ, ಥಾಯ್‌ ಯೋಗ ಮಸಾಜ್‌, ಫ್ಲೈಯಿಂಗ್‌ ಯೋಗ, ಹೂಪ್‌ ಹಾಗೂ ರೋಪ್‌ ಯೋಗ ಈ ರೀತಿ ಯೋಗಕ್ಕೆ ವಿವಿಧ ರೂಪಗಳನ್ನು ನೀಡಿ ದೇಹ ದಂಡನೆಗೆ ಮನಸು ನಿಯಂತ್ರಣಕ್ಕೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ.

ನಮ್ಮಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯೋಗದಲ್ಲಿ ಸಂಶೋಧನೆ ನಡೆಯುತ್ತಿಲ್ಲ. ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಯೋಗವನ್ನು ವೃತ್ತಿಯಾಗಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಯೋಗ ಮತ್ತು ನ್ಯಾಚುರೋಪಥಿ ಕಲಿಯಲು ಆಸಕ್ತಿಯಿಲ್ಲ. ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಯೋಗಕ್ಕೆ ಸ್ನಾತಕೋತ್ತರದಲ್ಲಿ ಅವಕಾಶವಿಲ್ಲ. ರಾಜ್ಯದಲ್ಲಿ ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಾತ್ರ ಅವಕಾಶವಿದ್ದು, ಕೆಲವು ವಿಶ್ವವಿದ್ಯಾಲಯಗಳು ಕೇವಲ ಡಿಪ್ಲೋಮಾ ಕೋರ್ಸ್‌ಗೆ ಮಾತ್ರ ಯೋಗವನ್ನು ಸೀಮಿತಗೊಳಿಸಿವೆ.

ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಯೋಗ ಅಧ್ಯಯನ ಪೀಠ ಆರಂಭಿಸಬೇಕು. ಶಾಲೆಗಳ ದೈಹಿಕ ಶಿಕ್ಷಕರಿಗೆ ಯೋಗ ತರಬೇತಿ ನೀಡುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಸ್ನಾತಕೋತ್ತರ, ಪಿಎಚ್‌ಡಿ ಪಡೆದ ತಜ್ಞ ಯೋಗಗುರುಗಳನ್ನು ನೇಮಕ ಮಾಡಿ ಶಾಲೆಗಳ ದೈಹಿಕ ಶಿಕ್ಷಕರಿಗೆ ತರಬೇತಿ ಕೊಡಿಸಲು ಸರ್ಕಾರ ಮುಂದಾಗಬೇಕಿದೆ.  

ಸಿಬ್ಬಂದಿಗೆ ಯೋಗಾಭ್ಯಾಸ: ಕೇವಲ ಗಿನ್ನಿಸ್‌ ದಾಖಲೆಗಾಗಿ ಕೆಲ ನಿಮಿಷ ಯೋಗಾಸನ ಮಾಡಿಸಿದರೆ ಯೋಗ ಪ್ರಚಾರವಾಗುವುದಿಲ್ಲ. ಇದು ಸಂಸ್ಥೆಗಳ ಪ್ರಚಾರಕ್ಕೆ ಮಾಡುವ ಗಿಮಿಕ್‌ ಅಷ್ಟೇ. ಪ್ರತಿ ನಿತ್ಯ ಜನರು ಯೋಗ ಮಾಡುವಂತಾಗಬೇಕು. ವಿದೇಶಗಳಲ್ಲಿ ಕಾರ್ಪೋರೇಟ್‌ ಕಂಪನಿಗಳು ತಮ್ಮ ಸಿಬ್ಬಂದಿಗಳ ಒಳಿತಿಗಾಗಿ ಯೋಗಗುರುಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

ಯೋಗಾಭ್ಯಾಸದಿಂದ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚುತ್ತಿರುವುದನ್ನು ಕಂಪನಿಗಳು ಮನಗಂಡಿವೆ. ಇತ್ತೀಚಿಗೆ ನಮ್ಮ ದೇಶದ ಕೆಲ ಕಂಪನಿಗಳು ಎಚ್ಚೆತ್ತುಕೊಂಡು ಪಾಶ್ಚಾತ್ಯರನ್ನು ಅನುಕರಿಸುತ್ತಿವೆ. ವಿದೇಶಗಳಲ್ಲಿ ಯಾರೇ ಹೊಸ ಯೋಗ ಗುರುಗಳು ಬಂದರೂ ಅವರಿಂದ ಕಲಿಯುತ್ತಾರೆ. 

ಹೊಸದನ್ನು ಕಲಿಸುತ್ತಾರೆಂಬ ಕುತೂಹಲಕ್ಕಾಗಿ ಹಣ ವ್ಯಯಿಸುತ್ತಾರೆ. ಭಾರತದಲ್ಲಿ ಯೋಗದ ನೆಪ ಮಾಡಿಕೊಂಡು ವ್ಯಾಪಕ ಪ್ರಚಾರ ಪಡೆದು ಹಣ ಗಳಿಸುತ್ತಿರುವವರ ಬಗ್ಗೆ ಪಾಶ್ಚಾತ್ಯರು ಜಾಗರೂಕರಾಗಿದ್ದಾರೆ. ಶೇ.100 ಯೋಗದಲ್ಲಿ ತೊಡಗಿಸಿಕೊಂಡವರಿಂದ, ತಜ್ಞರಿಂದ ಕಲಿಯಲು ಅವರು ಬಯಸುತ್ತಾರೆ. 

ಹಾಟ್‌ ಯೋಗ ಪ್ರಸಿದ್ಧಿ: 6-8 ತಿಂಗಳು ವಿಪರೀತ ಚಳಿಯಿರುವ ಪಾಶ್ಚಾತ್ಯ ದೇಶಗಳಲ್ಲಿ ಹಾಟ್‌ ಯೋಗ ಪ್ರಸಿದ್ಧಿ ಪಡೆದಿದೆ. ವಿಕ್ರಮ್‌ ಚೌಧರಿ ಸಂಶೋಧನೆ ಮಾಡಿ, ಇದನ್ನು ವಿನ್ಯಾಸಗೊಳಿಸಿ ಪೇಟೆಂಟ್‌ ಪಡೆದುಕೊಂಡಿದ್ದಾರೆ. ವಿಪರೀತ ಚಳಿ ಸಂದರ್ಭದಲ್ಲಿ ಯೋಗ ಮಾಡುವುದು ಕಷ್ಟ. 

ಇದೇ ಕಾರಣಕ್ಕಾಗಿ ಹೀಟರ್‌ಗಳನ್ನಿಟ್ಟುಕೊಂಡು ಅಂಥ ವಾತಾವರಣದಲ್ಲಿ ದೇಹದ ಉಷ್ಣತೆ ಕಾಪಾಡಿಕೊಳ್ಳುವ, ಉಸಿರಾಟ ಸರಾಗಗೊಳ್ಳುವ ದಿಸೆಯಲ್ಲಿ ಯೋಗ ಮಾಡಲಾಗುತ್ತದೆ. ನೂತನ ಯೋಗ ತರಬೇತಿಯಿಂದ ವಿಕ್ರಮ್‌ ಚೌಧರಿ ಕೋಟ್ಯಾಧೀಶರಾಗಿದ್ದಾರೆ. 

ಕರ್ನಾಟಕದ ಯೋಗ ಪಟು ಬಿ.ಕೆ.ಎಸ್‌. ಅಯ್ಯಂಗಾರ್‌ ಹಾಗೂ ಪಟ್ಟಾಭಿ ಜೋಯಿಸ್‌ ಅವರು ಹೇಳಿಕೊಟ್ಟ ಯೋಗ ಭಂಗಿಗಳನ್ನೇ ಹೆಚ್ಚಾಗಿ ಪಾಶ್ಚಾತ್ಯ ದೇಶಗಳಲ್ಲಿ ಇಂದಿಗೂ ಅನುಕರಿಸಲಾಗುತ್ತದೆ. ಯೋಗ ಜ್ಞಾನಕ್ಕಾಗಿ ಅವರ ಪುಸ್ತಕಗಳನ್ನು ಅಧ್ಯಯನ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಯೋಗಕ್ಕೆ ಪೂರಕ ವಾತಾವರಣವಿಲ್ಲ.

ಯೋಗವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಕೇಂದ್ರ ಸರ್ಕಾರ ಯೋಗ ಉತ್ತೇಜನಕ್ಕಾಗಿ ಅನುಷ್ಠಾನಗೊಳಿಸಿದ ಯೋಜನೆಗಳು ಜನರಿಗೆ ತಲುಪಬೇಕು. ಪ್ರಧಾನಮಂತ್ರಿ ಕೌಶಲ್‌ ಯೋಜನೆಯಲ್ಲಿ ಯೋಗ ಉತ್ತೇಜನಕ್ಕೂ ಆದ್ಯತೆ ನೀಡಲಾಗಿದೆ. ಇದರ ಸಮರ್ಪಕ ಅನುಷ್ಠಾನವಾಗಬೇಕಿದೆ. 

* ವಿಶ್ವನಾಥ ಕೋಟಿ 

ಟಾಪ್ ನ್ಯೂಸ್

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!

Ananthapura Temple ಪೂರ್ಣ ದರ್ಶನ ತೋರಿದ ಬಬಿಯಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

prahlad-joshi

CM ಸಿದ್ದರಾಮಯ್ಯ ಬುಡಕ್ಕೆ ನೀರು ಬಂದಿದ್ದಕ್ಕೆ ಯಡಿಯೂರಪ್ಪ ಗುರಿ: ಕೇಂದ್ರ ಸಚಿವ ಜೋಶಿ

ಸ್ಥಾವರ ಸಂಸ್ಕೃತಿಗೆ ಮೊರೆ ಹೋಗುವುದು ಸಲ್ಲ: ಸಾಣೇಹಳ್ಳಿ ಶ್ರೀ

Dharwad; ಸ್ಥಾವರ ಸಂಸ್ಕೃತಿಗೆ ಮೊರೆ ಹೋಗುವುದು ಸಲ್ಲ: ಸಾಣೇಹಳ್ಳಿ ಶ್ರೀ

ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ: ಸಚಿವ ಎಂ.ಬಿ. ಪಾಟೀಲ

POCSO Case; ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ: ಸಚಿವ ಎಂ.ಬಿ. ಪಾಟೀಲ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.