Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ
Team Udayavani, Apr 30, 2024, 7:51 PM IST
ಪಡುಬಿದ್ರಿ: ಹೆಜಮಾಡಿಯ ಬ್ರಹ್ಮಬೈದರ್ಕಳ ಗರಡಿ ಬಳಿ ನಿವಾಸಿ ಎ. ವಿಟ್ಠಲ ರಾವ್ (55) ಅವರು ವ್ಯವಹಾರದಲ್ಲಿನ ನಷ್ಟದಿಂದಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಎ. 29-30ರ ನಡುವೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಅವಿವಾಹಿತರಾಗಿದ್ದು, ಉಚ್ಚಿಲದಲ್ಲಿ ಶ್ರೀದೇವಿ ಆಯುರ್ವೇದಿಕ್ ಮೆಡಿಕಲ್ ಶಾಪ್ ನಡೆಸಿಕೊಂಡು ಬರುತ್ತಿದ್ದರು. ವ್ಯವಹಾರವು ನಷ್ಟದಲ್ಲಿ ಇದ್ದ ಪರಿಣಾಮ ಕಳೆದೊಂದು ವಾರದಿಂದ ಅಂಗಡಿಗೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.