ಕಾಣಿಯೂರು: ಸ್ವಚ್ಛತಾ ಕಿಟ್ ವಿತರಣೆ
Team Udayavani, Jun 30, 2018, 3:22 PM IST
ಕಾಣಿಯೂರು: ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್ಶಿಪ್ ಪ್ರೋಗ್ರಾಂನ ಅಡಿಯಲ್ಲಿ ಕೇಂದ್ರ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು ಇದರ ಮೂಲಕ ನೋಂದಣಿಗೊಂಡಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ವಿಶ್ವಜ್ಞ ಯುವಕ ಮಂಡಲದ ಕಾಣಿಯೂರು ಇದರ ವತಿಯಿಂದ ಸ್ವಚ್ಛತೆಯ ಅರಿವು ಮೂಡಿಸುವಂತೆ ಅಂಗನವಾಡಿ ಕೇಂದ್ರಗಳಿಗೆ ಸ್ವಚ್ಛತ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಳಂದೂರು ಗ್ರಾಮದ ಅಬೀರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬೇಬಿ, ಕಾಣಿಯೂರು ಗ್ರಾಮದ ಕಾಣಿಯೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೋಹಿಣಿ ಆನಂದ ಸುವರ್ಣ ಅಬೀರ, ಕಾಯಿಮಣ ಗ್ರಾಮದ ಮರಕ್ಕಡ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸರೋಜಿನಿ ಇವರ ಮೂಲಕ ಫಿನಾಯಿಲ್, ಬ್ರಷ್, ಬಕೆಟ್ ಒಳಗೊಂಡ ಸ್ವತ್ಛತ ಕಿಟ್ ವಿತರಿಸಲಾಯಿತು. ಜತೆಗೆ ಯುವಕ ಮಂಡಲದ ವತಿಯಿಂದ ಮುದ್ರಣಗೊಂಡ ಡೆಂಗ್ಯೂ, ಚಿಕುನ್ಗುನ್ಯ, ನಿಫಾ ಜ್ವರ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಹಾಗೂ ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮಗಳ ಸಂಪೂರ್ಣ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ವಿತರಿಸಲಾಯಿತು.
ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಪದಾಧಿಕಾರಿಗಳಾದ ರಂಜಿತ್ ಹೊಸೊಕ್ಲು, ರಾಕೇಶ್ ಬನಾರಿ, ಪುರುಷೋತ್ತಮ್ ಬೈತಡ್ಕ, ಚಂದ್ರಶೇಖರ್ ಬನಾರಿ, ಸುಧಾಕರ್ ಕಾಣಿಯೂರು, ಲಕ್ಷ್ಮೀಶ್ ಬೆಳಂದೂರು, ಬಾಲಚಂದ್ರ ಬರೆಪ್ಪಾಡಿ, ಸಚಿನ್ ಅಬೀರ, ಪ್ರಜ್ವಲ್ ಅಬೀರ ಇವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು