ವಾರೆನ್‌ ವಾರ್ನಿಂಗ್!‌

ಆಗರ್ಭ ಶ್ರೀಮಂತನ ಆರ್ಥಿಕ ಪಾಠ

Team Udayavani, Jun 1, 2020, 4:58 AM IST

eco lsson

ಆರ್ಥಿಕ ಮಹಾ ಕುಸಿತ ಇರಬಹುದು, ಸುನಾಮಿಯಂಥ ಪ್ರಾಕೃತಿಕ ವಿಕೋಪ ಎದುರಾದ ಸಮಯದಲ್ಲೇ ಇರಬಹುದು; ಆ ಎಲ್ಲಾ ಸವಾಲುಗಳನ್ನು ಮೆಟ್ಟಿ, ದೇಶಗಳ ಆರ್ಥಿಕತೆ ಬೆಳೆದಿದೆ. ಈಗಲೂ ಹಾಗೆಯೇ ಆಗುತ್ತದೆ.

ಜಗತ್ತಿನ ನಾಲ್ಕನೇ ಆಗರ್ಭ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾದವರು, ವಾರೆನ್‌ ಬಫೆಟ್‌ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಝಕರ್‌ಬರ್ಗ್‌ ರಂಥವರಿಗೆ, ಇವರು ಹಿತೈಷಿ ಕೂಡಾ ಹೌದು. ಹೂಡಿಕೆಯ ವಿಷಯದಲ್ಲಿ ವಾರೆನ್‌ ಬಫೆಟ್‌ ಹೇಳುವ ಮಾತುಗಳೇ ಅಂತಿಮ ಎಂದು ನಂಬುವವರ ದಂಡೇ  ಇದೆ. ಷೇರುಪೇಟೆಯಲ್ಲಿ ಹುಲ್ಲುಕಡ್ಡಿ ಅಲುಗಾಡಿದರೂ ಅದು ವಾರೆನ್‌ಗೆ ಕೇಳಿಸುತ್ತದೆ ಎನ್ನುವುದು, ಉದ್ಯಮವಲಯದಲ್ಲಿ ಚಾಲ್ತಿಯಲ್ಲಿರುವ ಮಾತು. ಇಂತಿಪ್ಪ ವಾರೆನ್‌ ಬಫೆಟ್‌, ಕೊರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೆಲ ಸಲಹೆಗಳನ್ನು ನೀಡಿದ್ದಾರೆ.

ಕೆಟ್ಟ ಪರಿಸ್ಥಿತಿಗೆ ಸಿದ್ಧರಾಗಿರಿ: ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ, ನಾಳೆ ಏನಾಗುತ್ತದೆಯೋ ಎಂದು ಹೇಳುವುದು ಕಷ್ಟ. ಹೀಗಾಗಿ, ಎಂಥ ಪ್ರತಿಕೂಲ ಪರಿಣಾಮ ಎದುರಾದರೂ ಅದನ್ನು ಎದುರಿಸಲು ಸಿದ್ಧರಿರಬೇಕು. ನಾಳಿನ  ಕಷ್ಟಕರ ಸಂದರ್ಭಗಳಿಗೆ ತಯಾರಾಗುವ ಉತ್ತಮ ಮಾರ್ಗ  ಎಂದರೆ, ಆರೋಗ್ಯ ವಿಮೆ ಮತ್ತು ಜೀವ ವಿಮೆ ಮಾಡಿಸುವುದು. ಈಗಿನ ದಿನದಲ್ಲಿ, ಯಾವುದೇ ವಿಮಾ ಪಾಲಿಸಿಯ ವಿವರ ಮತ್ತು ಅದು ನೀಡುವ ರಿಟರ್ನ್ಸ್‌ಗಳ ಕುರಿತಾದ  ಮಾಹಿತಿಯನ್ನು, ಇಂಟರ್‌ನೆಟ್‌ನಲ್ಲಿ ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ತಮಗೆ ಸರಿಹೊಂದುವ ವಿಮಾ ಪಾಲಿಸಿ ಆರಿಸಿಕೊಂಡರೆ, ಮುಂದೆ ಎದುರಾಗಬಹುದಾದ ಆಸ್ಪತ್ರೆ ಖರ್ಚಿನ ಚಿಂತೆ ಇಲ್ಲವಾಗುತ್ತದೆ. ವಾರ್ಷಿಕ 10,000 ರೂ.  ಪ್ರೀಮಿಯಂಗೆ, 5 ಲಕ್ಷದ ಕವರೇಜ್‌ ಅನ್ನು ಹೊಂದಬಹುದು.

ಕ್ರೆಡಿಟ್‌ ಕಾರ್ಡ್‌ ಸಾಲ ಮಾಡಬೇಡಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಒಬ್ಬರು, ವಾರೆನ್‌ ಬಫೆಟ್‌ ಬಳಿ ಸಲಹೆ ಕೇಳಲು ಬಂದಿದ್ದರಂತೆ. ವಿಚಾರಿಸಲಾಗಿ, ಅದರಲ್ಲಿ ಕ್ರೆಡಿಟ್‌ ಕಾರ್ಡ್‌ ಸಾಲದ ಪಾಲೇ ಸಾಕಷ್ಟಿತ್ತು. ಈ ಬಗ್ಗೆ ವಾರೆನ್‌  ಹೇಳುವುದಿಷ್ಟು: ತಮ್ಮ ಬಳಿ ಅಷ್ಟಿಷ್ಟು ಹಣ ಉಳಿದಿದ್ದರೆ, ಮೊದಲು ಅದನ್ನು ಕ್ರೆಡಿಟ್‌ ಕಾರ್ಡ್‌ ಸಾಲ ತೀರಿಸಲು ಬಳಸಿ. ಕ್ರೆಡಿಟ್‌ ಕಾರ್ಡ್‌ ಸಾಲ ಹೆಚ್ಚಿದ್ದಾಗ, ಅದನ್ನು ಪರ್ಸನಲ್‌ ಲೋನ್‌ ಆಗಿ ಮಾರ್ಪಡಿಸಿಕೊಳ್ಳಿ. ಏಕೆಂದರೆ, ಪರ್ಸನಲ್‌ ಲೋನ್‌ ಬಡ್ಡಿ, ಕ್ರೆಡಿಟ್‌ ಕಾರ್ಡ್‌ ಸಾಲದ ಬಡ್ಡಿಗಿಂತ ಕಡಿಮೆ ಇರುತ್ತದೆ. ಯಾವ ಕಾರಣಕ್ಕೂ ಕ್ರೆಡಿಟ್‌ ಕಾರ್ಡ್‌ ಸಾಲವನ್ನು ಉಳಿಸಿಕೊಳ್ಳಬೇಡಿ.

ದೂರದೃಷ್ಟಿ ಇರಲಿ: ಭವಿಷ್ಯತ್ತಿನ ಬಗ್ಗೆ ಚಿಂತನೆ ನಡೆಸಲು, ಒಳ್ಳೆಯ ಸಮಯ ಎಂಬುದು ಇರುವುದಿಲ್ಲ. ಹೆಚ್ಚಿನವರು ಸದ್ಯದ ಸುದ್ದಿಗಳು, ವಿದ್ಯಮಾನಗಳನ್ನು ಆಧರಿಸಿ ಭವಿಷ್ಯದ ಕಲ್ಪನೆ ಮಾಡುತ್ತಾರೆ. ಅದರ ಪ್ರಕಾರವೇ  ನಿರ್ಧಾರಗಳನ್ನುಕೈಗೊಳ್ಳುತ್ತಾರೆ. ಹಾಗೆ ನೋಡಿದರೆ ವಿಶ್ವ ಮಹಾಯುದ್ಧ ಇರಬಹುದು, ಆರ್ಥಿಕ ಮಹಾ ಕುಸಿತದ ಸಂದರ್ಭವಿರಬಹುದು, ಸುನಾಮಿಯಂಥ ಪ್ರಾಕೃತಿಕ ವಿಕೋಪ ಎದುರಾದ ಸಮಯದಲ್ಲೇ ಇರಬಹುದು;  ಆ ಎಲ್ಲಾ ಸವಾಲುಗಳನ್ನು ಮೆಟ್ಟಿ, ದೇಶಗಳ ಆರ್ಥಿಕತೆ ಬೆಳೆದಿದೆ. ಈಗಲೂ ಹಾಗೆಯೇ ಆಗುತ್ತದೆ. ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ, ನಮ್ಮೆಲ್ಲಾ ನಿರ್ಧಾರಗಳು ಸದಾ ದೂರದೃಷ್ಟಿತ್ವವನ್ನು ಹೊಂದಿರಬೇಕು ಅನ್ನುತ್ತಾರೆ ಬಫೆಟ್‌  ಹೀಗಾಗಿ  ಪ್ರಸ್ತುತ ವಿದ್ಯಮಾನಗಳು ಎಂಥ ಕೆಟ್ಟ ಸುದ್ದಿಯನ್ನು ತಂದರೂ, ಭವಿಷ್ಯದ ಬಗೆಗಿನ ಪ್ಲಾನಿಂಗ್‌ ಮರೆಯಬಾರದು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.