ಟಿ-20 ರ್‍ಯಾಂಕಿಂಗ್‌ಇಮಾದ್‌ ವಾಸಿಮ್‌ ನಂ.1 ಬೌಲರ್‌


Team Udayavani, Jun 28, 2017, 3:35 AM IST

27-SPORTS-1.jpg

ದುಬಾೖ: ಪಾಕಿಸ್ಥಾನದ ಎಡಗೈ ಸ್ಪಿನ್ನರ್‌ ಇಮಾದ್‌ ವಾಸಿಮ್‌ ಟಿ-20 ಕ್ರಿಕೆಟಿನ ನೂತನ ನಂಬರ್‌ ಬೌಲರ್‌ ಆಗಿ ಮೂಡಿಬಂದಿದ್ದಾರೆ. ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹಿರ್‌ ಮೂರಕ್ಕೆ ಇಳಿದಿದ್ದಾರೆ. ಇದರಿಂದ ಭಾರತದ ಜಸ್‌ಪ್ರೀತ್‌ ಬುಮ್ರಾ ದ್ವಿತೀಯ ಸ್ಥಾನಕ್ಕೆ ಏರುವಂತಾಯಿತು.

ಇಮ್ರಾನ್‌ ತಾಹಿರ್‌ ಕಳೆದ ಜನವರಿಯಿಂದಲೂ ನಂಬರ್‌ ವನ್‌ ಟಿ-20 ಬೌಲರ್‌ ಆಗಿದ್ದರು. ಆದರೆ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ವೈಫ‌ಲ್ಯ ಅನುಭವಿಸುವುದರೊಂದಿಗೆ ಅಗ್ರಸ್ಥಾನದಿಂದ ಜಾರಬೇಕಾಯಿತು. ಈ ಸರಣಿಯ ವೇಳೆ ಎಸೆಯಲಾದ ಕೊನೆಯ 7 ಓವರ್‌ಗಳಲ್ಲಿ ತಾಹಿರ್‌ 75 ರನ್‌ ಬಿಟ್ಟುಕೊಟ್ಟು ಬಹಳ ದುಬಾರಿಯಾಗಿದ್ದರು. ಉರುಳಿಸಿದ್ದು ಒಂದೇ ವಿಕೆಟ್‌.

ಇಮಾದ್‌ ವಾಸಿಮ್‌ ಟಿ-20 ಕ್ರಿಕೆಟಿನ ಟಾಪ್‌ ಬೌಲರ್‌ ಎನಿಸಿಕೊಳ್ಳುತ್ತಿರುವುದು ಇದೇ ಮೊದಲು. ಬುಮ್ರಾ ಹೊರತುಪಡಿಸಿ ಟಾಪ್‌-10 ಯಾದಿಯಲ್ಲಿರುವ ಭಾರತದ ಮತ್ತೂಬ್ಬ ಬೌಲರ್‌ ಆರ್‌. ಅಶ್ವಿ‌ನ್‌. ದಕ್ಷಿಣ ಆಫ್ರಿಕಾದ ಕ್ರಿಸ್‌ ಮಾರಿಸ್‌ 32 ಸ್ಥಾನಗಳ ಭರ್ಜರಿ ನೆಗೆತ ಕಂಡಿದ್ದು, 29ನೇ ಸ್ಥಾನಕ್ಕೆ ಬಂದಿದ್ದಾರೆ. ಇಂಗ್ಲೆಂಡಿನ ಲಿಯಮ್‌ ಪ್ಲಂಕೆಟ್‌ ಕೂಡ ಭಾರೀ ಪ್ರಗತಿ ಸಾಧಿಸಿದ್ದು, 26 ಸ್ಥಾನಗಳ ಏರಿಕೆಯೊಂದಿಗೆ 38ನೇ ಸ್ಥಾನ ತಲುಪಿದ್ದಾರೆ.

ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ನಂಬರ್‌ ವನ್‌ ಸ್ಥಾನದಲ್ಲಿ ಮುಂದುವರಿದಿದ್ದು, ಆರನ್‌ ಫಿಂಚ್‌ ಹಾಗೂ ಕೇನ್‌ ವಿಲಿಯಮ್ಸನ್‌ ಅನಂತರದ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್‌ ಟೀಮ್‌ ರ್‍ಯಾಂಕಿಂಗ್‌ ಯಾದಿಯ ದ್ವಿತೀಯ ಸ್ಥಾನದಲ್ಲಿ ಒಂಟಿಯಾಗಿ ಕಾಣಿಸಿಕೊಂಡಿತು. 3 ಪಂದ್ಯಗಳ ಈ ಸರಣಿಗೂ ಮುನ್ನ ಇಂಗ್ಲೆಂಡ್‌ ಪಾಕಿಸ್ಥಾನದೊಂದಿಗೆ ಜಂಟಿ ದ್ವಿತೀಯ ಸ್ಥಾನದಲ್ಲಿತ್ತು. ನ್ಯೂಜಿಲ್ಯಾಂಡ್‌ ಅಗ್ರಸ್ಥಾನ ಉಳಿಸಿಕೊಂಡಿದೆ.

ಟಾಪ್‌-10 ಟಿ-20 ಬೌಲರ್: 1. ಇಮಾದ್‌ ವಾಸಿಮ್‌ (780), 2. ಜಸ್‌ಪ್ರೀತ್‌ ಬುಮ್ರಾ (764), 3. ಇಮ್ರಾನ್‌ ತಾಹಿರ್‌ (744), 4. ರಶೀದ್‌ ಖಾನ್‌ (717), 4. ಸಾಮ್ಯುಯೆಲ್‌ ಬದ್ರಿ (717), 6. ಮುಸ್ತಫಿಜುರ್‌ ರೆಹಮಾನ್‌ (695), 7. ಜೇಮ್ಸ್‌ ಫಾಕ್ನರ್‌ (688), 8. ಸುನೀಲ್‌ ನಾರಾಯಣ್‌ (652), 9. ಶಕಿಬ್‌ ಅಲ್‌ ಹಸನ್‌ (648), 10. ಆರ್‌. ಅಶ್ವಿ‌ನ್‌ (644).

ಟಾಪ್ ನ್ಯೂಸ್

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

1-qeewqewqewe

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

1-reaa

I.N.D.I.A. ಸಭೆ; ಜೂ.1ರಂದು ಫ‌ಲಿತಾಂಶ ಬಳಿಕದ ಕಾರ್ಯತಂತ್ರ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwqewewq

French Open-2024: ರಫೆಲ್‌ ನಡಾಲ್‌, ಮರ್ರೆ ಮನೆಗೆ

1-wqq2q342

FIH ಪ್ರೊ ಲೀಗ್‌ ಹಾಕಿ : ಆರ್ಜೆಂಟೀನಾ ವಿರುದ್ಧ ರೋಚಕ ಜಯ

1-aasasas

West Indies 3-0 ಪರಾಕ್ರಮ: ದಕ್ಷಿಣ ಆಫ್ರಿಕಾಕ್ಕೆ ವೈಟ್‌ವಾಶ್‌

1-aaaaaaa

Insults ; ಮತ್ತೆ ಆರ್ ಸಿಬಿ, ಕೊಹ್ಲಿಗೆ ಟಾಂಗ್ ನೀಡಿ ಆಕ್ರೋಶಕ್ಕೆ ಗುರಿಯಾದ ರಾಯುಡು

IPL 2024: full list of award winners and prize money

IPL 2024: ಯಾರಿಗೆ ಸಿಕ್ತು ಯಾವ ಅವಾರ್ಡ್?; ಕ್ಯಾಚ್ ಆಫ್ ದಿ ಸೀಸನ್ ವಿಡಿಯೋ ನೋಡಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

sensex

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

arrested

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.