ಕಲಾರಸಿಕರಿಗೆ ರಸದೌತಣ ನೀಡಿದ ಸುಮನಸಾ ರಂಗಹಬ್ಬ 


Team Udayavani, Mar 23, 2018, 6:00 AM IST

8.jpg

(ಕಳೆದ ವಾರದಿಂದ)
ಗೋಕುಲ ನಿರ್ಗಮನ 
ಕನ್ನಡದ ಮೇರು ಕವಿ ಪು.ತಿ.ನ. ಅವರ “ಗೋಕುಲ ನಿರ್ಗಮನ’ ಕೃತಿಯನ್ನು ವಿದ್ದು ಉಚ್ಚಿಲ್‌ ನಿರ್ದೇಶನದಲ್ಲಿ ರಂಗರೂಪಕ್ಕಿಳಿಸಿದವರು ಮಂಗಳೂರಿನ “ನಂದಗೋಕುಲ’ ತಂಡದವರು. ನಾಟಕದ ಬಹುಭಾಗ ಗೀತಗಾಯನದಲ್ಲಿ ಪ್ರಸ್ತುತಗೊಂಡಿದ್ದು ಕಿವಿಗಿಂಪಾದ ಸಂಗೀತ ಹಾಗೂ ಗಾಯನ ನಾಟಕಕ್ಕೆ ಕಳೆ ನೀಡಿತು. ಬೆಳಕಿನ ಕಣ್ಣು ಮುಚ್ಚಾಲೆಯಂತೂ ಒಂದು ಭ್ರಮಾಲೋಕವನ್ನೇ ಸೃಷ್ಟಿಸಿತು. ಗೋಪಿಕಾ ಸ್ತ್ರೀಯರೊಡನೆ ರಂಗಿನಾಟ ಆಡುತ್ತಿದ್ದ ಕೃಷ್ಣನನ್ನು ಬಲರಾಮ ಹಾಗೂ ಅಕ್ರೂರ ಬಲವಂತದಿಂದ ಗೋಕುಲದಿಂದ ಮಥುರಾ ಪಟ್ಟಣಕ್ಕೆ ಕರೆದೊಯ್ಯುವ ಜನಜನಿತವಾದ ಕಥೆ ಇದಾದರೂ ನಾಟಕದುದ್ದಕ್ಕೂ ನಿರ್ದೇಶಕನ ಚಾಕಚಕ್ಯತೆ ಹಾಗೂ ಸಂಕೇತಾನುಸರಣಿ ಗಮನಾರ್ಹವಾಗಿತ್ತು. 

ಸುಮಾರು 35ಕ್ಕೂ ಹೆಚ್ಚಿನ ಕಲಾವಿದರೆಲ್ಲರೂ ಸ್ತ್ರೀಯರೇ (ಪುರುಷ ಪಾತ್ರ ಸೇರಿ) ಆಗಿದ್ದುದು ನಾಟಕದ ಲಾಲಿತ್ಯವನ್ನು ಹೆಚ್ಚಿಸಿತು.ಕೃಷ್ಣ ತನ್ನ ಪ್ರಾಣಸಖೀ ರಾಧೆ ಅದಕ್ಕಿಂತಲೂ ಪ್ರಾಣ ಪ್ರಿಯವಾದ ಕೊಳಲನ್ನು ತೊರೆದು ಗೋಕುಲದಿಂದ ನಿರ್ಗಮಿಸುವ ದೃಶ್ಯ ಹೃದಯಂಗಮವಾಗಿತ್ತು. ರಾಧಾ-ಕೃಷ್ಣರ ಪ್ರಣಯ ಪ್ರಸಂಗ, ಕೊಳಲಿನೊಂದಿಗೆ ರಾಧೆಯ ಹೋಲಿಕೆ, ವಿರಹ , ಬಲಭದ್ರನು ಕೃಷ್ಣನ ಪೌರುಷವನ್ನು ಜಾಗೃತಗೊಳಿಸಲು ಬಳಿಸಿದ ಮೊನಚಾದ ಮಾತುಗಳ ಕೂರಂಬುಗಳು ನಾಟಕದ ಒಟ್ಟಂದವನ್ನು ಹೆಚ್ಚಿಸಿದವು ಎನ್ನಲಡ್ಡಿಯಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ನಡೆದ ನಾಟಕ ಮುಂದೆ ತೀವ್ರತೆ ಪಡೆದುಕೊಂಡು ಪ್ರೇಕ್ಷಕರನ್ನು ರಂಜಿಸಿತು.

ರಥಯಾತ್ರೆ 
ರಂಗಹಬ್ಬದ ಸಮಾರೋಪ ರೂಪದಲ್ಲಿ ಏಳನೆಯ ಕಲಾಕುಸುಮವಾಗಿ ಕೊಡವೂರು “ಸುಮನಸಾ’ ತಂಡದವರಿಂದ ರವೀಂದ್ರನಾಥ ಟಾಗೋರರ ಕೃತಿ ಆಧಾರಿತ “ರಥಯಾತ್ರೆ’ ನಾಟಕ ಗುರುರಾಜ್‌ ಮಾರ್ಪಳ್ಳಿ ಇವರ ನಿರ್ದೇಶನದಲ್ಲಿ ಮೂಡಿಬಂತು. ನಾಟಕದಲ್ಲಿ ಪ್ರಧಾನವಾಗಿ ಅಂದಿನ ಕಾಲದಲ್ಲಿರಬಹುದಾದ ಇಂದಿನ ಕಾಲಕ್ಕೆ ಅಪ್ರಸ್ತುತವೆನಿಸುವ ಅಸ್ಪಶ್ಯತೆಯನ್ನು ವೈಭವೀಕರಿಸಲಾಗಿದೆ. ಇನ್ನುಳಿದ ವಿಷಯಗಳಲ್ಲೂ ಬದಲಾವಣೆ ಅನಿವಾರ್ಯ ಎನ್ನುವ ಆಶಯವನ್ನು ನಾಟಕದುದ್ದಕ್ಕೂ ಬಿಂಬಿಸಲಾಗಿದೆ. 

ಮಹಾಕಾಲನ ರಥವನ್ನು ಸಂಕೇತವಾಗಿರಿಸಿಕೊಂಡು ಬದಲಾದ ಸನ್ನಿವೇಶದಲ್ಲಿ ವಿವಿಧ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ವರ್ತಮಾನಕ್ಕೆ ಸ್ಪಂದಿಸಿ ಮುನ್ನಡೆಯ ಬೇಕಾದ ಅನಿವಾರ್ಯತೆಯನ್ನು ನಾಟಕದಲ್ಲಿ ಪ್ರತಿಪಾದಿಸಲಾಗಿದೆ. ಕಥೆಯನ್ನು ನಿರೂಪಿಸಲು ಒಬ್ಬ ನಿರೂಪಕ, ಅವನೊಂದಿಗೆ ಮೇಳದವರು ಮತ್ತು ವಚನ ಸಾಹಿತ್ಯದ ಭರಪೂರ ಬಳಕೆ ನಾಟಕದ ಪರಿಪೂರ್ಣತೆಗೆ ಮೆರುಗು ನೀಡಿದವು. ಪ್ರಮುಖ ಪಾತ್ರಗಳಾದ ಮಂತ್ರಿ, ಶೆಟ್ಟಿ, ದಲಿತ ನಾಯಕರ ಪಾತ್ರ ನಿರ್ವಹಣೆ ಗಮನಾರ್ಹವಾಗಿತ್ತು. ಒಳ್ಳೆಯ ಸಂಗೀತ, ಹಿನ್ನಲೆ ಗಾಯನ ಹಾಗೂ ಹಿತಮಿತ ಬೆಳಕು ನಾಟಕವನ್ನು ಇನ್ನಷ್ಟು ಎತ್ತರಕ್ಕೇರಿಸಿತು. 

ವಿವಿಧ ಅಭಿರುಚಿಯ ವಿಭಿನ್ನ ಕಥಾ ವಸ್ತುಗಳನ್ನೊಳಗೊಂಡ ನಾಟಕೋತ್ಸವ ಮನರಂಜನೆ ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಸಫ‌ಲವಾಯಿತು. 
                     
ಜನನಿ ಭಾಸ್ಕರ್‌ ಕೊಡವೂರು 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.