ಮನರಂಜನೆ-ಮಾಹಿತಿಯ ಕಣಜ ತುಳುನಾಡ  ಸಂಸ್ಕೃತಿ 


Team Udayavani, Jun 15, 2018, 6:00 AM IST

bb-14.jpg

ಜಾನಪದ ತಜ್ಞ ದಯಾನಂದ ಕತ್ತಲಸಾರ್‌ ನಿರೂಪಣೆ ಹಾಗೂ ನಾಗೇಶ್‌ ಕುಲಾಲ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮ ಸುಮಾರು ಮೂರು ತಾಸುಗಳ ಕಾಲ ಸಂಗೀತ, ನೃತ್ಯ, ಪುರಾಣ, ಇತಿಹಾಸ, ಸಂಸ್ಕೃತಿ ಹೀಗೆ ವಿವಿಧ ವಿಷಯಗಳಲ್ಲಿ ಮಾಹಿತಿಯ ಜತೆಗೆ ಮನೋರಂಜನೆಯನ್ನು ನೀಡಿತು.

ಶೀರೂರು ಶ್ರೀಗಳ ಜನ್ಮ ದಿನದ ಅಂಗವಾಗಿ ಜೂ. 8ರಂದು ಹಿರಿಯಡಕದ ಶ್ರೀವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಂಡ ಕಲಾಕುಂಭ ಕುಳಾಯಿ ಇವರ ತುಳುನಾಡ ಸಂಸ್ಕೃತಿ ಕಾರ್ಯಕ್ರಮವು ಕಣ್ಮನಗಳಿಗೆ ಮುದ ನೀಡಿತು. 
ಜಾನಪದ ತಜ್ಞ ದಯಾನಂದ ಕತ್ತಲ ಸಾರ್‌ ನಿರೂಪಣೆ  ಹಾಗೂ ನಾಗೇಶ್‌ ಕುಲಾಲ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮ ಸುಮಾರು ಮೂರು ತಾಸುಗಳ ಕಾಲ ಸಂಗೀತ, ನೃತ್ಯ, ಪುರಾಣ, ಇತಿಹಾಸ, ಸಂಸ್ಕೃತಿ ಹೀಗೆ ವಿವಿಧ ವಿಷಯಗಳಲ್ಲಿ ಮಾಹಿತಿಯ ಜತೆಗೆ ಮನೋರಂಜನೆಯನ್ನು ನೀಡಿತು. ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಎರಡನೇ ದೃಶ್ಯದಲ್ಲಿ ಇಡೀ ತುಳುನಾಡಿನ ಸಂಸ್ಕೃತಿ ಮೈದಳೆಯಿತು. ಪರಶುರಾಮನ ಸ್ತಬ್ಧ ಚಿತ್ರದ ಹಿನ್ನೆಲೆಯೊಂದಿಗೆ ಮೂಡಿ ಬಂದ ಈ ದೃಶ್ಯದಲ್ಲಿ ಭತ್ತ ಕುಟ್ಟುವುದು, ಮಡಕೆ ತಯಾರಿಸುವುದು, ಪೈರಿನಿಂದ ಭತ್ತ ಬೇರ್ಪಡಿಸುವುದು, ಚೆನ್ನೆ ಮಣೆ ಆಟ, ಬುಟ್ಟಿ ತಯಾರಿ, ಬಿತ್ತುವುದು … ಹೀಗೆ ತುಳುನಾಡಿನ ಸಂಸ್ಕೃತಿಯನ್ನು ಆಕರ್ಷಕ ಹಿನ್ನೆಲೆ ಹಾಡಿನೊಂದಿಗೆ ಪ್ರಸ್ತುತ ಪಡಿಸಲಾಯಿತು. 

ಅರುಣಾಸರ ಮರ್ದನ ದೃಶ್ಯದ ಮೂಲಕ ಕಟೀಲಿನ ಕಥೆಯನ್ನು ಕೂಡ ತಿಳಿಸಲಾಯಿತು. ಮೋಹಕ ಸ್ತ್ರೀಯಾಗಿ ಬರುವ ದೇವಿಯ ನೃತ್ಯ ಉತ್ತಮವಾಗಿತ್ತು. ವರದ ಪ್ರಭಾವದಿಂದ ಮೆರೆಯುತ್ತಿದ್ದ ಅರುಣಾಸುರನನ್ನು ದೇವಿ ವಜ್ರದುಂಬಿ ರೂಪ ತಾಳಿ ಕೊಲ್ಲುವ ದೃಶ್ಯ ಮನಮೋಹಕವಾಗಿತ್ತು. ಬಂಡೆಯಿಂದೆದ್ದು ಬಂದು ಅರುಣಾಸುರ ಸಂಹಾರ ಮಾಡುವ ಈ ಭಕ್ತಿ ಪ್ರಧಾನ ದೃಶ್ಯ ಖುಷಿ ಕೊಟ್ಟಿತು. ಇಲ್ಲಿ ಬಳಸಿದ ಈ ಸಿರಿತ ಬನ ಹಾಡು ಕೂಡಾ ಇಂಪಾಗಿ  ಮುದ ನೀಡಿತು. 

ರಾವಣ ಸಂಹಾರ ಮತ್ತು ಹನುಮಂತನ ಪ್ರತಾಪದ ದೃಶ್ಯದಲ್ಲಿ ಹನುಮಂತನ ಪಾತ್ರ ಮತ್ತು ಬಾಲ ರಾಮ ಲಕ್ಷ್ಮರು ಮತ್ತು ಸೀತೆ ಗಮನ ಸೆಳೆದರು. ಸೀತಾಪಹಾರ ಮತ್ತು ರಾವಣ ಸಂಹಾರವನ್ನು ಸಾಂಕೇತಿಕವಾಗಿ ತೋರಿಸಲಾಯಿತು. ಹನುಮಂತನು ರಾಮ ಲಕ್ಷ್ಮಣರನ್ನು ಹೆಗಲಲ್ಲಿ ಕೂರಿಸಿ ನೀಡಿದ ಫೋಸ್‌ ಮನಮೋಹಕವಾಗಿತ್ತು. ಪುರಾಣದ ದೃಶ್ಯಗಳ ಕಾಂಬಿನೇಷನ್‌. ಪುರಾಣದ ಪಾತ್ರಗಳನ್ನು ಮುಂದಿರಿಸಿಕೊಂಡು ಹನುಮಂತ ಮತ್ತು ರಾಮನನ್ನು ಸ್ತುತಿಸುವ ಆಧುನಿಕ ಹಾಡಿಗೆ ತಂಡ ಮಾಡಿದ ಫಿಲ್ಮಿ ಡ್ಯಾನ್ಸ್‌ ಮೋಹಕವಾಗಿತ್ತು.

ಕೋಟಿ – ಚೆನ್ನಯರ ಕಥೆಯನ್ನು ಸಾರುವ ಎರಡು ದೃಶ್ಯಗಳು ಉತ್ತಮವಾಗಿತ್ತು. ಅಕ್ಕ ಕಿನ್ನಿದಾರುವಿನ ಮನೆಗೆ ಕೋಟಿ ಚೆನ್ನಯರು ಬಳಿಕ ತಾಯಿ ಹೇಳಿದ್ದ ಹರಕೆಯನ್ನು ತೀರಿಸಲು ಬೆರ್ಮೆರೆ ಗುಡಿಗೆ ಹೋಗುವುದು, ಅಲ್ಲಿ ಕೆಮ್ಮಲೆತಾ ಬ್ರಹ್ಮ ಹಾಡಿನ ಮೂಲಕ ಗರ್ಭಗುಡಿಯ ಬಾಗಿಲು ತೆರೆಯುವಂತೆ ಮಾಡುವ ದೃಶ್ಯ ರೋಮಾಂಚನಗೊಳಿಸಿತು. ಬ್ರಹೆರ ರೂಪದಲ್ಲಿದ್ದ ಬಾಲಕ ಮತ್ತು ಇಂಪಾದ ಹಾಡು ಒಂದು ಕಡೆಯಾದರೆ, ಅದಕ್ಕೆ ಪೂರಕವಾಗಿ ಮತ್ತೂಂದು ತಂಡದಿಂದ ಆಧುನಿಕ ರೀತಿಯ ನೃತ್ಯ ಸಂಯೋಜನೆ ಮಾಡಲಾಗಿತ್ತು. ಇಂಥದ್ದೇ ಇನ್ನೊಂದು ದೃಶ್ಯದ ಮೂಲಕ ಅಬ್ಬಕ್ಕನ ಕಥೆಯನ್ನೂ ಸಾರಲಾಯಿತು. ಇಲ್ಲೂ ಸಣ್ಣದೊಂದು ಯುದ್ಧದ ದೃಶ್ಯ ಮತ್ತು ಆಧುನಿಕ ಶೈಲಿಯ ನೃತ್ಯವಿತ್ತು.

10 ವರ್ಷದ ಬಾಲಕಿ ಬ್ರಾಹ್ಮಿಯ ಆಕರ್ಷಕ ಯಕ್ಷಗಾನ ನೃತ್ಯ ಭೇಷ್‌ ಎನಿಸಿತು. ಹಿನ್ನೆಲೆಯಲ್ಲಿ ಪಟ್ಲ ಸತೀಶ್‌ ಶೆಟ್ಟರ ಹಾಡಿನ ಕ್ಯಾಸೆಟ್‌ ಬಳಸಲಾಗಿತ್ತು. ಈಕೆಯನ್ನು ಅಲ್ಲಿ ಉಪಸ್ಥಿತರಿದ್ದ ಶ್ರೀಗಳು ಶಾಲು ಹೊದೆಸಿ ಸಮ್ಮಾನಿಸಿ ಬೆನ್ನುತಟ್ಟಿದರು.
ದಶಾವತಾರ ದೃಶ್ಯದಲ್ಲಿ ಕೆಲವು ಅವತಾರಗಳನ್ನು ತೋರಿಸಲಾಯಿತು. ವಿಷ್ಣುವಿನ ಹಿನ್ನೆಲೆಯಲ್ಲಿ ಮತ್ಸಾವತಾರ, ಕೃಷ್ಣಾವತಾರ, ನರಸಿಂಹಾವತಾರ ಮುಂತಾದವು ತುಂಬಾ ಖುಷಿ ಕೊಟ್ಟಿತು. ನರಸಿಂಹನು ಹಿರಣ್ಯ ಕಶಿಪುವನ್ನು ಕೊಲ್ಲುವ ದೃಶ್ಯ ಅದ್ಬುತವಾಗಿತ್ತು. ಇಲ್ಲೂ ಆಧುನಿಕ ಶೈಲಿಯ ಡ್ಯಾನ್ಸ್‌ ಕಣ್ಣಿಗೆ ಖುಷಿ ಕೊಟ್ಟಿತು.

ತುಳುನಾಡಿನ ಜಾನ ಪದ ಕಲೆಯಾದ ಕಂಬಳದ ಪ್ರದರ್ಶನವೂ ಭರ್ಜರಿ ಚಪ್ಪಾಳೆ ಗಿಟ್ಟಿಸಿತು. ಸಭೆಯ ಮಧ್ಯದಿಂದಲೇ ವೇದಿಕೆ ಪ್ರವೇಶಿಸಿದ ಕೋಣ ಪಾತ್ರಧಾರಿಗಳು ಮತ್ತು ಕಂಬಳದ ಓಟಗಾರರು ಮತ್ತು ತಂಡ ವೇದಿಕೆ ಯಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ಸಫ‌ಲವಾಯಿತು. ಮಹಿಷಮರ್ದಿನಿ ದೃಶ್ಯದಲ್ಲಿ ಯಕ್ಷಗಾನದ ರೀತಿಯಲ್ಲೇ ಮಹಿಷಾಸುರ ಸಂಹಾರದ ದೃಶ್ಯವನ್ನು ತೋರಿಸಲಾಯಿತು. ಇಲ್ಲೂ ಸತೀಶ್‌ ಶೆಟ್ಟಿ ಅವರ ದೇವಿ ಮಹಾತ್ಮೆ ಪ್ರಸಂಗದ ಹಾಡಿನ ಧ್ವನಿ ಸುರುಳಿ ಬಳಸಲಾಗಿತ್ತು. 

ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

9-koratagere

Koratagere: ಜೂ.9 ರಂದು ಉಚಿತ ಸಾಮೂಹಿಕ ವಿವಾಹ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.