ಬಾರೋ “ಮಳೆ’ನಾಡಿಗೆ…
Team Udayavani, Jun 9, 2018, 3:11 PM IST
ಮಳೆಯೆಂದರೆ ಪುಳಕ, ರೋಮಾಂಚನ, ಹಳೆಯ ನೆನಪುಗಳ ಮೆರವಣಿಗೆ, ಖುಷಿ, ಸಡಗರ. ಮಳೆಗಾಲ ತನ್ನ ಜೊತೆಗೆ ನೂರಾರು ಸಂಭ್ರಮಗಳನ್ನು ಹೊತ್ತು ತರುತ್ತದೆ. ಬೆಂಗಳೂರಿನ ಜಂಜಾಟದಲ್ಲಿ ಮುಳುಗೆದ್ದವರಿಗೆ, ಪ್ರಕೃತಿಯ ಕಡೆಗೆ ಮುಖ ಮಾಡುವ ತವಕ. ಈಗಾಗಲೇ ನಿಮ್ಮಲ್ಲಿ ಹಲವರು, ವಾರಾಂತ್ಯದಲ್ಲಿ ಚಾರಣ ಹೊರಡುವ ಪ್ಲ್ರಾನ್ ಮಾಡಿಕೊಳ್ಳುತ್ತಿರಬಹುದು. ಅಂಥವರು “ರೈನಥಾನ್’ನಲ್ಲಿ ಭಾಗವಹಿಸಬಹುದು. ರೈನಥಾನ್ ಎಂದರೆ, ಮ್ಯಾರಥಾನ್ ರೀತಿಯಲ್ಲಿಯೇ, ಮಳೆಯಲ್ಲಿ 15-20 ಕಿ.ಮೀ. ನೆನೆಯುತ್ತಾ ನಡೆದುಕೊಂಡು ಹೋಗುವುದು. ಅದಕ್ಕಾಗಿ ಮಳೆ ಹೆಚ್ಚು ಬರುವ ಪ್ರದೇಶಗಳನ್ನು ಆಯ್ದುಕೊಳ್ಳಲಾಗುತ್ತದೆ. ಕಳೆದ ಹತ್ತು ವರ್ಷಗಳಿಂದ “ರೈನಥಾನ್’ ನಡೆದುಕೊಂಡು ಬರುತ್ತಿದೆ.
ಒಂದಿಡೀ ದಿನ ಮಳೆಯಲ್ಲಿ ನೆನೆಯುತ್ತಾ, ನಡೆಯುವ ನಡಿಗೆ ಕಾರ್ಯಕ್ರಮವಾಗಿದ್ದು, ಛತ್ರಿ , ಟೋಪಿ, ರೈನ್ ಕೋಟ್ನಂಥ ಯಾವುದೇ ರಕ್ಷಣೆಯನ್ನು ಬಳಸುವಂತಿಲ್ಲ. ತಂಡದವರೆಲ್ಲರೂ ಬೆರೆತು ಆಡುತ್ತ, ಹರಟುತ್ತ, ತಿನ್ನುತ್ತಾ ನಡೆದು ಗುರಿ ಮುಟ್ಟಬೇಕು. ಆಸಕ್ತರು ಆನ್ಲೈನ್ ನೋಂದಣಿ ಮೂಲಕ ರೈನಥಾನ್ ತಂಡದಲ್ಲಿ ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗೆ: www.rainathon.com
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ