ಘಮ್ಮೆನ್ನುವ ಚಿಕ್ಕಬಳ್ಳಾಪುರದ ದೋಸೆ


Team Udayavani, Oct 9, 2017, 2:17 PM IST

09-27.jpg

ಬೆಂಗಳೂರು-ಹೈದರಾಬಾದ್‌ ನಡುವಿನ ರಾಷ್ಟ್ರೀಯ ಹೆದ್ದಾರಿ-7ಕ್ಕೆ ಅಂಟಿಕೊಂಡಿರುವ ಚಿಕ್ಕಬಳ್ಳಾಪುರದ ಬಿ.ಬಿ ರಸ್ತೆಗೆ ಹೊಂದಿಕೊಂಡಂತೆ ಪುಟ್ಟುರಾವ್‌ ಹೋಟೆಲ್‌ ಇದೆ. ಇಲ್ಲಿ ದೊರೆಯುವ ಬಿಸಿಬಿಸಿ ತುಪ್ಪದ ಮಸಾಲೆ ದೋಸೆ ಹಾಗೂ ಚಿತ್ರಾನ್ನ ಕಾಂಬಿನೇಷನ್‌ಗೆ ಎಂಥವರ ನಾಲಿಗೇನೂ ಚಡಪಡಿಸುತ್ತದೆ. 

ಇಡ್ಲಿ ವಡೆ, ಸಾಂಬಾರ್‌, ಉಪ್ಪಿಟ್ಟು, ಕೇಸರಿಬಾತ್‌ ಕಾಂಬಿನೇಷನ್‌ನ ನೀವು ನೋಡಿದ್ದೀರಿ. ತಿಂದಿದ್ದೀರಿ. ಆದರೆ ಚಿತ್ರಾನ್ನ-ಮಸಾಲೆ ದೋಸೆಯ ಕಾಂಬಿನೇಷನ್‌ ಖಂಡಿತ ವಿರಳ. ಅದು ಈ ಹೋಟೆಲಿನಲ್ಲಿದೆ. ಮಹಾನಗರದ ಐಷಾರಾಮಿ ಹೋಟೆಲ್‌ಗ‌ಳನ್ನು ನಾಚಿಸುವ ರೀತಿಯಲ್ಲಿ ಇಲ್ಲಿ ಘಮಿಘಮಿಸುವ ತುಪ್ಪದ ಖಾಲಿ ದೋಸೆ ಹಾಗೂ ಮಸಾಲೆ ದೋಸೆಗೆ ಸಾಥ್‌ ನೀಡುವ ನಿಂಬೆಹುಳಿಯ
ರುಚಿಕರವಾದ ಚಿತ್ರಾನ್ನದ ಸುವಾಸನೆ ಹೋಟೆಲ್‌ ಪ್ರವೇಶಿಸುತ್ತಿದ್ದಂತೆ ಮೂಗಿಗೆ ಬಡಿಯುತ್ತದೆ.

ನೆರೆಯ ಆಂಧ್ರಪ್ರದೇಶದ ಮಂತ್ರಾಲಯ, ಪುಟ್ಟಪರ್ತಿ, ಕದ್ರಿ, ಐತಿಹಾಸಿಕ ನಂದಿಗಿರಿಧಾಮದ ವೀಕ್ಷಣೆಗೆ ಬರುವ ಪ್ರವಾಸಿಗರು; ಅಷ್ಟೇ ಏಕೆ, ಬೆಂಗಳೂರು ಮಹಾನಗರದ ಜನತೆ ಚಿಕ್ಕಬಳ್ಳಾಪುರಕ್ಕೆ ಬಂದರೆ ಈ ಹೋಟೆಲ್‌ಗೆ ಭೇಟಿ ಕೊಡದೇ ಹೋಗುವುದಿಲ್ಲ. ಹೋಟೆಲ್‌ ಉದ್ಯಮ ನಡೆಸುವುದು ದುಬಾರಿ ಎನ್ನುವ ಈ ದಿನಗಳಲ್ಲಿ ಪುಟ್ಟುರಾವ್‌ ಹೋಟೆಲ್‌ಗೆ 60 ಸಂವತ್ಸರಗಳು ಪೂರ್ತಿಯಾಗಿವೆ. 60 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ವೆಂಕಟರಾಮ್‌, ಪುಟ್ಟರಾವ್‌ ಎಂಬ ಅಣ್ಣ ತಮ್ಮಂದಿರು ಸೇರಿ ಈ ಹೋಟೆಲ್‌ ಆರಂಭಿಸಿದರು. ಮೊದಲಿಗೆ ಇದಕ್ಕೆ ವೆಂಕಟೇಶ್ವರ ಹೋಟೆಲ್‌ ಅನ್ನೋ ಹೆಸರಿತ್ತು. ಈಗ ನಗರದ ಸಂತೆ ಮಾರುಕಟ್ಟೆ ಸಮೀಪ ಅಭಿಷೇಕ್‌
ಹೆಸರಿನಲ್ಲಿ ವೆಂಕಟರಾಮ್‌ ಹಾಗೂ ಅವರ ಮಗ ಸೀತಾರಾಮ್‌ ಹೋಟೆಲ್‌ ನಡೆಸುತ್ತಿದ್ದಾರೆ. 

ಈ ಹೋಟೆಲ್‌ನ ವಿಶೇಷ ಅಂದರೆ ರುಚಿ ಹಾಗೂ ಶುಚಿತ್ವದ ತತ್ವ. ದೋಸೆಗೆ ಇವರು ಅಕ್ಕಿಯಿಂದ ಸಿದ್ದಪಡಿಸುವ ಹಿಟ್ಟನ್ನು ಹದಗೊಳಿಸುವ ಪರಿ ವಿಭಿನ್ನವಾಗಿರುತ್ತದೆ. ದೋಸೆಗೆ ಸಾಥ್‌ ನೀಡುವ ಚೆಟ್ನಿ ತಯಾರಿಗೆ ಚಿಕ್ಕಬಳ್ಳಾಪುರದ್ದೇ ಮೆಣಸಿನಕಾಯಿ
ಬಳಕೆಯಾಗುತ್ತದೆ. ಈ ಹೋಟೆಲಿನಲ್ಲಿ ಬೆಳಗ್ಗೆಯಿಂದ ಸಂಜೆತನಕ ದೋಸೆ ಸಿಗುತ್ತದೆ.  

ಚಿತ್ರರಂಗದ ನಂಟು
ನಟರಾದ ದೊಡ್ಡಣ್ಣ, ಶ್ರೀನಿವಾಸಮೂರ್ತಿ ಮತ್ತಿತರ ನಟರು ನಂದಿ ಗಿರಿಧಾಮದಲ್ಲಿ ಚಿತ್ರೀಕರಣಕ್ಕೆ ಆಗಮಿಸಿದರೆ ಖಾಯಂ ಆಗಿ ಬೆಳಗಿನ ಉಪಹಾರಕ್ಕೆ ಪುಟ್ಟುರಾವ್‌ ಹೋಟೆಲ್‌ಗೆ ತಪ್ಪದೇ ಬರುತ್ತಿದ್ದರು. ಅವಳಿ ಜಿಲ್ಲೆಯ ಬಹುತೇಕ ಶಾಸಕರು, ಮಾಜಿ ಶಾಸಕರು,
ರಾಜಕೀಯ ಪಕ್ಷಗಳ ಧುರೀಣರು, ಅಧಿಕಾರಿಗಳು ಇಲ್ಲಿನ ತುಪ್ಪದ ಖಾಲಿ ಹಾಗೂ ಮಸಾಲೆ ದೋಸೆ ಮತ್ತು ಚಿತ್ರಾನ್ನದ ಕಾಂಬಿನೇಷನ್‌ನ ರುಚಿ ಕಂಡವರು. ಹೋಟೆಲ್‌ನ ಮತ್ತೂಂದು ವಿಶೇಷ ಕೈಗೆಟುಕುವ ದರದಲ್ಲಿ ತುಪ್ಪದ ದೋಸೆ, ಚಿತ್ರಾನ್ನ ಸಿಗುತ್ತದೆ. 18 ರೂ,ಗೆ ಖಾಲಿ ದೊಸೆ, 15 ರೂ,ಗೆ ಚಿತ್ರಾನ್ನ, 40 ರೂ,ಗೆ ತುಪ್ಪದ ಮಸಾಲೆ ದೋಸೆ ದೊರೆಯುತ್ತದೆ. 

ಯಶಸ್ಸಿನ ಗುಟ್ಟು
ಹೋಟೆಲ್‌ ಇಷ್ಟರಮಟ್ಟಿಗೆ ಖ್ಯಾತಿಯಾಗಲು ಏನು ಕಾರಣ ಅಂತ ಸೀತಾರಾಮ್‌ ರನ್ನು ಕೇಳಿದರೆ ಅವರು ಹೇಳಿದ್ದು ಹೀಗೆ: ಹೋಟೆಲ್‌
ಆರಂಭಗೊಂಡಾಗಿನಿಂದಲೂ ನಾಲ್ಕೈದು ಮಂದಿ ಕಾರ್ಮಿಕರು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಅಡುಗೆ ಭಟ್ಟರು ಇದ್ದಾರೆ.
ಅವರ ಪರಿಶ್ರಮದಿಂದ ಹೋಟೆಲ್‌ ಈ ಸ್ಥಿತಿಗೆ ಬಂದಿದೆ. ನಾವೂ ಅಷ್ಟೇ, ನಮ್ಮ ಕಾರ್ಮಿಕರನ್ನು ಸಂತೃಪ್ತಿಯಿಂದ ನೋಡಿಕೊಳ್ಳುತ್ತೇವೆ.
ಅವರಿಗೆ ಏನನ್ನೂ ಕಡಿಮೆ ಮಾಡುವುದಿಲ್ಲ. ಅವರು ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ ಎನ್ನುತ್ತಾರೆ. 

ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.