ದಕ್ಷಿಣ ದಿಕ್ಕು ಒಂದಲ್ಲಾ ಒಂದು ಬಾರಿ ಪೀಡೆಗೆ ಕಾರಣವಾಗುತ್ತದೆಯೇ?…


Team Udayavani, Mar 26, 2018, 6:23 PM IST

7.jpg

ನೆನಪಿಡಿ, ದಕ್ಷಿಣ ದಿಕ್ಕು ಮಾನವನ ಜೀವನದ ( ಜೀವ ಜಾತ್ರೆಯ) ಪರಿ ಸಮಾಪ್ತಿಯ ಕಡೆಗಿನ ದಿಕ್ಕು. ಇದರ ಅರ್ಥ ಕೇವಲ ಸಾವಿಗಾಗಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ದುರ್ಭರ ಹಿಡಿತವನ್ನು ಹಾಕಿ ಹೊಸಕಿ ಹಾಕುತ್ತದೆ ಎಂದು ಅರ್ಥವಲ್ಲ. ಒಟ್ಟಿನಲ್ಲಿ ಈ ದಿಕ್ಕಿನ ದೋಷ ಶನಿ, ರಾಹು, ಕುಜ, ಕೇತು ಅಥವಾ ಸೂರ್ಯರ ವೈಪರಿತ್ಯಗಳ ಸಂದರ್ಭ ಆಯಾ ವ್ಯಕ್ತಿಯ ಮುಖ್ಯ ವೇದಿಕೆಯಲ್ಲಿ ( ಜೀವನದ ಯಶಸ್ವಿನ ಸಂದರ್ಭಗಳಲ್ಲಿ ಎಂದು ಸೂಕ್ಷ್ಮವಾಗಿ ಈ ವೇದಿಕೆ ಎನ್ನುವ ಶಬ್ದವನ್ನು ಅರ್ಥೈಸಿಕೊಳ್ಳೋಣ) ಕೆಟ್ಟ ಹೆಸರನ್ನು, ಆರೋಗ್ಯದ ವೈಪರಿತ್ಯಗಳನ್ನು ದಿಢೀರನೆ ಸಲ್ಲದ ಕಾರ್ಯತಂತ್ರಗಳನ್ನು ಸಂಯೋಜಿಸುವ ದುಬುìದ್ಧಿಯನ್ನು, ಯುದ್ಧದಂಥ ಅನಿಷ್ಟಗಳಿಗೆ ಮುಂದಾಗುವ ನಿರ್ಣಯಗಳನ್ನು ಪರಿಣಾಮಗಳ ಯೋಚನೆಗಳಿರದ ಸರ್ರನೆ ಕಾರ್ಯೋನ್ಮುಖರಾಗುವ ಅವಸರಗಳನ್ನು, ಕೈಗೆಟುಕಲಾರದ ಕನಸಿನ ಗೋಪುರದ ಶಿಖರಕ್ಕೆ ಕೈ ಚಾಚುವುದನ್ನು, ನಿರಪರಾಧಿಗಳನ್ನು ಶಿಕ್ಷಿಸಿ ಕರ್ಮವನ್ನು ಸುತ್ತಿಕೊಳ್ಳುವ ದುರ್ಭರತೆಗಳನ್ನು, ಭಯೋತ್ಪಾದಕ ಘಟನೆಗಳಿಗೆ ಬಲಿಯಾಗುವ ಅತಂತ್ರಗಳನ್ನು, ಮಕ್ಕಳಿಂದಲೇ ಗೋಳಿಗೆ ಸಿಲುಕುವ ಮಿಸುಕಾಟಗಳನ್ನು ಒದಗಿಸಬಹುದು. ಕಟ್ಟಡಗಳಿಗೂ ದುಷ್ಟ ಗ್ರಹಗಳ ಬಾಧೆಯೆ ಎಂಬ ವಿಚಾರ ಆಶ್ಚರ್ಯವಾಗಬಹುದು. ಆದರೆ ಸತ್ಯ. ಕಟ್ಟಡಗಳಿಗೂ ತೊಂದರೆ ಉದ್ಭವಿಸುತ್ತದೆ. 2001 ಸೆಪ್ಟೆಂಬರ್‌ನಲ್ಲಿ ಉರುಳಿದ ಅಮೇರಿಕಾದ ವಲ್ಡ್‌ ಟ್ರೇಡ್‌ ಸೆಂಟರ್‌ ಅವಳಿ ಕಟ್ಟಡಗಳನ್ನು ನೆನಪಿಸಿಕೊಳ್ಳಲು ಕಟ್ಟಡದ ದಕ್ಷಿಣ ದಿಕ್ಕಿನ ವಾಸ್ತು ಸಂಯೋಜನೆಗಳು ಅಗ್ನಿತತ್ವಕ್ಕೆ ವೈರುಧ್ಯದಿಂದ ಕೂಡಿದ ಪ್ರಮಾಣದೊಂದಿಗೆ ಸಮತೋಲನ ತಪ್ಪಿದ್ದವು. ತಗ್ಗಿನ ಹೊರ ಆವರಣ ಕಟ್ಟಡಗಳ ದಕ್ಷಿಣ ಭಾಗದಲ್ಲಿ ವಿಸ್ತೃತವಾಗಿ ಹಿಗ್ಗಿಕೊಂಡಿದ್ದರಿಂದ ಉತ್ತರ ದಿಕ್ಕಿನ ಅಮೃತ ಸ್ಪಂದನಗಳನ್ನು ಅದು ಘರ್ಷಿಸುತ್ತಲೇ ಇತ್ತು. ಹೀಗಾಗಿ ಶನೈಶ್ಚರನು ಮೂಲದ (ಜನನ ಸಂದರ್ಭದಲ್ಲಿ ) ಬುಶ್‌ ರಾಹುವಿನ ಜಾಗಗೆ ಬಂದಾಗ (ಜ್ಯೂನಿಯರ್‌) ಚಾರ್ಜ್‌ ಬುಶ್‌ ಅಧಿಕಾರದ ಪ್ರಥಮ ಅವಧಿಯ ಸಂದರ್ಭದಲ್ಲಿ, ಅಷ್ಟಮ ಶನಿಕಾಟದ ವೇಳೆಯಲ್ಲಿ ಒಸಮಾ ಬಿನ್‌ ಲಾಡೆನ್‌ ಅಪಾಯಕಾರಿ ಯೋಜನೆ ರೂಪಿಸುವುದರಲ್ಲಿ, ದಕ್ಷಿಣ ದಿಕ್ಕಿನ ದೋಷದ ಅಂಶವನ್ನು ವಾಸ್ತು ವಿಚಾರದಲ್ಲಿ ಹೊಂದಿದ್ದ ವಲ್ಡ್‌ ಟ್ರೇಡ್‌ ಅವಳ ಕಟ್ಟಡಗಳು ಕುಸಿದುಬಿದ್ದದ್ದು. ಈ ಭಯೋತ್ಪಾದಕ ಚಟುವಟಿಕೆ ಈ ಇಷ್ಟು ದೊಡ್ಡ ಅಗಾಧ ಪರಿಣಾಮ, ಹಾನಿ ನಿರ್ಮಿಸಿದಾಗ ಜಗತ್ತಿಗೇ ಭಯೋತ್ಪಾದನೆಯ ಕರಾಳ ಸ್ವರೂಪದ ರೂಪು ರೇಷಗಳು ಯುಕ್ತವಾಗಿ ಅರ್ಥವಾದದ್ದು. ಭಾರತದಲ್ಲಿ 1983ರ ಮುಂಬಯಿ ನ್ಪೋಟಗಳು ಭಯೋತ್ಪಾದಕತೆಯ ನಿಕೃಷ್ಣ ಕ್ರೂರ ಮನಸ್ಸಿನ ವಿಕಟ ಹಾಸ್ಯವಾಗಿದ್ದರೂ, ಅವಳಿಕಟ್ಟಡಗಳು ಬೆಂಕಿ ಹೊತ್ತಿ ಉರಿದೆದ್ದು ಬೆಂಕಿ ಜ್ವಾಲೆಯ ತಾಂಡವ ನೃತ್ಯ ನಡೆದಾಗ ಜಗತ್ತಿನ ಇತಿಹಾಸಕ್ಕೆ ಹೊಸ ರೂಪ ಒದಗಿ, ಜಾಗತಿಕ ಹೋರಾಟದ ವ್ಯಾಖ್ಯೆ, ಭಯೋತ್ಪಾದಕತೆಯ ವಿರುದ್ಧ ಹೊಸ ರೂಪ ಪಡೆಯಿತು. ವಾಸ್ತು ದೋಷದ ಪರಿಣಾಮವು ಒಂದು ಅವಳಿ ಕಟ್ಟಡಗಳ ಕಾರಣದಿಂದಾಗಿ ಜಾಗತಿಕ ವರ್ತಮಾನದ ತಲ್ಲಣಗಳಿಗೆ ಕಾರಣವಾಗುವ ಕ್ರಿಯೆ ಅನೂಹ್ಯ. 

  ನಾವು ಕಟ್ಟುವ ಕಟ್ಟಡಗಳು, ವಸತಿ ಸಂಕೀರ್ಣ, ಮನೆ ಅಥವಾ ಏನೇ ಕಟ್ಟೋಣಗಳಿರಲಿ ಎಡವಟ್ಟಾದ ಸ್ವರೂಪದಲ್ಲಿ ಆಗ್ನೇಯ ದಿಕ್ಕು ವಿಸ್ತರಿಸಿಕೊಳ್ಳಬಾರದು. ಎಪ್ಪತ್ತರ ( ಹಿಂದಿನ ಶತಮಾನದ) ದಶಕದ ಜನಪ್ರಿಯ ಚಲನಚಿತ್ರರಂಗ ಆವರೆವಿಗೆ ಕಂಡರಿಯದ ಸೂಪರ್‌ ಸ್ಟಾರ್‌ ತನ್ನ ಅರಮನೆಯ ಸದೃಶವಾದ ಬಂಗ್ಲಾದಲ್ಲಿ ಎಷ್ಟು ಎತ್ತರಕ್ಕೆ ಏರಿದ್ದು ಸತ್ಯವೋ, ಹಾಗೇ ಇನ್ನಿಲ್ಲದ ರೀತಿಯಲ್ಲಿ ಕುಸಿದದ್ದೂ ಕೂಡ ಅಷ್ಟೇ ಸತ್ಯ. ಈ ಕಟ್ಟಡದ ವಿಚಾರದಲ್ಲಿನ ವಾಸ್ತು ದೋಷಗಳು ತನಗೆ ದುರ್ಭರ ದಿನಗಳನ್ನು ತಂದವು ಎಂಬುದನ್ನು ಈ ಪ್ರಸಿದ್ಧ ನಟರೇ ಅವರ ಸಂದರ್ಶನ ಒಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಪತ್ನಿಯೊಡನೆ ಹೊಂದಿಕೊಂಡು ಹೋಗಲಾಗದ ಶನಿ ದಶಾ ಸಂದರ್ಭವೂ ಈ ನಟ ಡೈವೋರ್ಸ ಪಡೆದು ಒಂಟಿಯಾಗುವಂತಾಯಿತು. ಅನೇಕ ರೀತಿಯ ತಾಪತ್ರಯ, ಸಾಲಗಳು ಕಷ್ಟಗಳಿಗೆ ವೇದಿಕೆ ಒದಗಿಸಿತು. 

  ದಕ್ಷಿಣ ದಿಕ್ಕು ಮೂಲಭೂತವಾಗಿ ಅಗ್ನಿಯನ್ನು ಸಂಕೇತಿಸುವ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡಿರುತ್ತದೆ. ಅಗ್ನಿಯು ಶುಭಕಾರಕನಾದಾಗ ಅವನೇ ವೈಶ್ಚಾನರ. ಸ್ವರ್ಗ ಹಾಗೂ ಭೂಮಿಯನ್ನು ಕೂಡಿಸುವ ಹವ್ಯವಾಹನ. ನಮ್ಮ ಪ್ರಾರ್ಥನೆಗಳು, ನಮ್ಮ ಸಮರ್ಪಣೆಗಳು ದೈವೀಕವಾದ ಅನನ್ಯ ಶಕ್ತಿ ಧಾತುವನ್ನು ಮುಟ್ಟುತ್ತದೆ. ಬೆಂಕಿ ಮುನಿದಾಗ ಅದು ಕಾಳ್ಗಿಚ್ಚು. ಅದು ತಿತೆಯ ದಾರುಣತೆಗೆ ಕಾರಣವಾಗುವ ಸರಕು. 

 ದಕ್ಷಿಣ ದಿಕ್ಕು ವಾಸ್ತು ದೋಷ ಹೊಂದಿದ್ದರೆ ದುರ್ಗಾದೇವಿಯನ್ನು ನೆನೆಯಬೇಕು. ಸ್ತುತಿಸಬೇಕು. ಇದರಿಂದ ಅಗ್ನಿ ಭೀತಿಯ, ಅಗ್ನಿ ದಾರುಣತೆಯ ಶಮನಗಳಿಗೆ ದಾರಿ ಲಭ್ಯ. ಮಲಿನತೆಗಳು ದಕ್ಷಿಣ ದಿಕ್ಕಿನಲ್ಲಿ ಬೇರೂರುವಂತೆ ಆಗದಿರಲಿ. ನಿಮ್ಮ ಪ್ರಯತ್ನ ಈ ದಿಸೆಯಲ್ಲಿ ನಡೆದುದಾದರೆ ಕೊಂಚ ಮಟ್ಟಗಿನ ನಿರಾಳತೆ ಸಾಧ್ಯ. 

ಅನಂತಶಾಸ್ತ್ರಿ

ಟಾಪ್ ನ್ಯೂಸ್

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.