ಗುಡ್ಡವನ್ನು ಕಡಿದು ಕೃಷಿಯ “ಗುಡಿ’ ಮಾಡಿದ ಗುಂಡಪ್ಪ


Team Udayavani, Sep 10, 2018, 8:50 PM IST

8.jpg

ತಮ್ಮ ಪಾಲಿಗೆ ಬಂದ ಕಲ್ಲಿನ ಗುಡ್ಡವನ್ನೇ ಸಮತಟ್ಟು ಮಾಡಲು ಮುಂದಾದರು. ಸತತ 5 ವರ್ಷಗಳ ಕಾಲ ಗುಡ್ಡವನ್ನು ಅಗೆದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಬಗೆದರು. ಬುಟ್ಟಿಗಟ್ಟಲೇ ಮಣ್ಣು ಹೊತ್ತು ಹಾಕಿದರು. ನಂತರ ಕೃಷಿಗೆ ಮುಂದಾದಾಗ ಎದುರಾಗಿದ್ದು ನೀರಿನ ಸಮಸ್ಯೆ. ಆಗ ತಾವೇ ಸುಮಾರು 12-14 ಅಡಿ ಆಳ, 6 ಅಡಿ ಅಗಲದ ವಿಸ್ತೀರ್ಣದ ಬಾವಿ ತೆಗೆದರು. 

ಸುತ್ತಲೂ ಕಲ್ಲಿನ ಗುಡ್ಡ. ಸಮರ್ಪಕ ರಸ್ತೆ, ವಿದ್ಯುತ್‌ ಸಂಪರ್ಕ ಇಲ್ಲ. ಅಲ್ಲಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್‌ ಹೋಗುವಂತಿಲ್ಲ. ಇನ್ನು ಆ ಪ್ರದೇಶ ತಲುಪಲು ಅರ್ಧ ಕಿ.ಮೀ. ನಡೆದುಕೊಂಡೇ ಹೋಗಬೇಕು. ಇಂಥ ಕಲ್ಲು-ಮುಳ್ಳುಗಳಿಂದ ಕೂಡಿದ ಗುಡ್ಡವನ್ನೇ ಕಡಿದು ಹೊಲವನ್ನಾಗಿ ಪರಿವರ್ತಿಸಿಕೊಂಡ ರೈತನೊಬ್ಬ ಸಮಗ್ರ ಕೃಷಿ ಪದ್ಧತಿಯಡಿ ವಿವಿಧ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಾವಿರಾರು ರೂ. ಆದಾಯ ಗಳಿಸುತ್ತಿದ್ದಾನೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೋಟೇಕಲ್‌ ಗ್ರಾಮದ ಹೊರ ವಲಯದ ಗುಡ್ಡವೊಂದರಲ್ಲಿ ತಮ್ಮದೇ ಆದ ನವೀನ ತಾಂತ್ರಿಕತೆಯನ್ನು ರೂಢಿಸಿಕೊಂಡು ಉಳುಮೆ ಮಾಡಿ, ಉತ್ತಿ-ಬಿತ್ತಿ, ನೀರು ಹರಿಸಿ, ಬೆಳೆಗಳ ಆರೈಕೆಯೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡ ಅನ್ನದಾತನ ಯಶೋಗಾಥೆ ಇದು. 

ಇವರ ಹೆಸರು ಮಹಾಗುಂಡಪ್ಪ ಹುಚ್ಚಪ್ಪ ಕಮತರ. ಓದಿದ್ದು ಪಿಯುಸಿ. ಕೃಷಿಯಲ್ಲಿ ಹೆಚ್ಚು ಆಸಕ್ತಿ. ಕಷ್ಟವಾದರೂ ಇಷ್ಟಪಟ್ಟು ಕೆಲಸ ಮಾಡುವ ಮನೋಭಾವ. ಹಿಡಿದ ಕೆಲಸವನ್ನು ಛಲದಿಂದ ಪೂರೈಸುವ ಹುಮ್ಮಸ್ಸು. ಇವೆಲ್ಲದರ ಫಲವಾಗಿ ಕೃಷಿಯಲ್ಲಿ ಖುಷಿ ಕಂಡುಕೊಂಡ ಸಾರ್ಥಕತೆ. ಇದೆಲ್ಲ ಸಾಧ್ಯವಾಗಿರುವುದು ಕೇವಲ ಒಂದು ಎಕರೆ ಭೂಮಿಯಲ್ಲಿ ಮಾತ್ರ ಎಂದರೆ ನೀವು ನಂಬಲೇಬೇಕು.

ಗುಡ್ಡವಾಯ್ತು ಹೊಲ
 ಗುಡ್ಡದ ಬಳಿ  ಕೃಷಿ ಮಾಡುತ್ತಿದ್ದ ಮಹಾಗುಂಡಪ್ಪ ಕಮತರ 2005ರಲ್ಲಿ ಪಿತ್ರಾರ್ಜಿತ ಆಸ್ತಿ ಕೃಷಿ ಜಮೀನಿನ ನೋಂದಣಿಗೆ ಮುಂದಾದರು. ಸರ್ವೆಯ ವೇಳೆ ಇವರ ಜಮೀನು ಬೇರೆಡೆ ಗುರುತಿಸಲ್ಪಟ್ಟಿತ್ತು. ಪರಿಣಾಮವಾಗಿ, ಕೃಷಿ ಕಾಯಕವನ್ನೇ ನಿಲ್ಲಿಸಬೇಕಾಯಿತು. ಇದರಿಂದ ಮಹಾಗುಂಡಪ್ಪ ವಿಚಲಿತರಾದರೂ  ಕೃಷಿ ಬಗ್ಗೆ ಇವರಿಗಿರುವ ಆಸಕ್ತಿ ಸುಮ್ಮನಿರಲು ಬಿಡಲಿಲ್ಲ. ಎಲ್ಲರ ಮಾತನ್ನು ಧಿಕ್ಕರಿಸಿ, ತಮ್ಮ ಪಾಲಿಗೆ ಬಂದ ಕಲ್ಲಿನ ಗುಡ್ಡವನ್ನೇ ಸಮತಟ್ಟು ಮಾಡಲು ಮುಂದಾದರು. ಸತತ 5 ವರ್ಷಗಳ ಕಾಲ ಗುಡ್ಡವನ್ನು ಅಗೆದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಬಗೆದರು. ಬುಟ್ಟಿಗಟ್ಟಲೇ ಮಣ್ಣು ಹೊತ್ತು ಹಾಕಿದರು. ನಂತರ ಕೃಷಿಗೆ ಮುಂದಾದಾಗ ಎದುರಾಗಿದ್ದು ನೀರಿನ ಸಮಸ್ಯೆ. ಆಗ ತಾವೇ ಸುಮಾರು 12-14 ಅಡಿ ಆಳ, 6 ಅಡಿ ಅಗಲದ ವಿಸ್ತೀರ್ಣದ ಬಾವಿ ತೆಗೆದರು. ತಮ್ಮ ಹೊಲಕ್ಕೆ ನೈಸರ್ಗಿಕವಾಗಿ ಹರಿದು ಬರುವ ನೀರನ್ನು ಬಾವಿಯಲ್ಲಿ ಸಂಗ್ರಹಿಸಿ ಬಳಸಲು ಆರಂಭಿಸಿದರು. ಈಗಲೂ ಅದೇ ನೀರನ್ನೇ ಬೆಳೆಗಳಿಗೆ ಉಪಯೋಗಿಸುತ್ತಾರೆ. ತನ್ನ ಜಮೀನಿನಲ್ಲಿರುವ ಒಂದು ಅಡಿ ಜಾಗವನ್ನೂ ಇವರು ಖಾಲಿ ಬಿಡುವುದಿಲ್ಲ. ಹೊಲದ ಬದುವಿನಲ್ಲೂ ವಿವಿಧ ಬಗೆಯ ಬಳ್ಳಿಗಳನ್ನು ಬೆಳೆಸಿದ್ದಾರೆ.

ಹೊಲದಲ್ಲಿ ಏನುಂಟು?
ಕಲ್ಲು ಬಂಡೆಗಳ ನಡುವಿನ ಗರಸು ಮಣ್ಣಿನ ಭೂಮಿಯಲ್ಲಿ ಅಸಾಧ್ಯ ಎಂಬುದನ್ನು ಮಹಾಗುಂಡಪ್ಪ ಸಾಧ್ಯವನ್ನಾಗಿಸಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ನುಗ್ಗೆ (20 ಗಿಡ), ಲಿಂಬು (30), ಪೇರು (30), ಕರಿಬೇವು (20), ಚಿಕ್ಕು (5), ಮಾವು (9), ಬೆಟ್ಟದ ನೆಲ್ಲಿ (02), ಒಂದೊಂದು ಮೋಸಂಬಿ, ದಾಳಿಂಬೆ ಗಿಡ ಬೆಳೆಸಿದ್ದಾರೆ. ವರ್ಷಕ್ಕೆರಡು ಹಂತದಲ್ಲಿ ವಿವಿಧ ತರಕಾರಿ ಬೆಳೆಯುತ್ತಾರೆ. ಮುಖ್ಯವಾಗಿ ಹಿರೇಕಾಯಿ, ಸೌತೆ, ಬೆಂಡಿ, ಟೋಮೆಟೋ, ಬದನೆ, ಮೆಣಸಿನಕಾಯಿ ಬೆಳೆಗಳನ್ನು ಮಿಶ್ರ ಪದ್ಧತಿಯಲ್ಲಿ ಬೆಳೆಯುತ್ತಾರೆ. ಪ್ರಮುಖ ಹಬ್ಬಗಳಿಗೆ ಚೆಂಡು ಹೂ, ಕಬ್ಬು, ಬಗೆ-ಬಗೆಯ ಸೊಪ್ಪು (ಕೋತ್ತಂಬರಿ, ಮೆಂತೆ, ಪಾಲಕ್‌, ಪುಂಡಿಪಲ್ಲೆ, ಸಬ್ಬಸಗಿ, ಹಕ್ಕರಕಿ) ಕಟಾವಿಗೆ ಬರುವಂತೆ ಬೇಸಾಯ ಮಾಡುತ್ತಾರೆ.  ಸಮೀಪದ ಗುಳೇದಗುಡ್ಡಕ್ಕೆ ಹೋಗಿ ತರಕಾರಿ ಮಾರುತ್ತಾರೆ. ಇವರಿಗೆ ಒಂದು ವರ್ಷಕ್ಕೆ ಬರೀ ತರಕಾರಿಯಿಂದಲೇ ಬರುವ ಆದಾಯವೆಷ್ಟು ಗೊತ್ತೆ? ಸುಮಾರು 50-60 ಸಾವಿರ ರೂ. ಅದರಲ್ಲಿ ತರಕಾರಿ ಬೆಳೆಗೆ ತಗುಲಿದ ಖರ್ಚು-ವೆಚ್ಚ 15 ಸಾವಿರ ರೂ. ಅಂದರೆ, ತರಕಾರಿ ಕೃಷಿಯಿಂದ ವರ್ಷಕ್ಕೆ ಕನಿಷ್ಠ 45 ಸಾವಿರ ರೂ. ಆದಾಯವಂತೂ ಗ್ಯಾರಂಟಿ. 

ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಅಭಾವ ಆದಾಗ ಜನರೇಟರ್‌ ಮೂಲಕ ಬಾವಿಯ ನೀರನ್ನು ಬೆಳೆಗಳಿಗೆ ಪೂರೈಸುತ್ತಾರೆ. ಹೀಗಾಗಿ ವರ್ಷವಿಡೀ ತರಕಾರಿ ಬೆಳೆಯುತ್ತಾರೆ.  ತರಕಾರಿ ಮತ್ತು ಇತರೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ಆಕಳಿನ ಕೊಟ್ಟಿಗೆ ಗೊಬ್ಬರವನ್ನು ಬೆಳೆಗಳಿಗೆ ಬಳಸುತ್ತಿರುವುದರಿಂದ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. 

ವಿನೂತನ ಯತ್ನ
ಗುಡ್ಡದಲ್ಲಿನ ತಮ್ಮ ಜಮೀನನಿನ ಉಳುಮೆ ಮಾಡಲು ಹತ್ತಾರು ಸಮಸ್ಯೆ ಎದುರಿಸಿದ ಇವರು, ಕೊನೆಗೆ ವಿನೂತನ ಯತ್ನದಿಂದ ಕೃಷಿ ಆರಂಭಿಸಿದರು. ಸೈಕಲ್‌ನಿಂದ ತಾವೇ ಕೈ ಕುಂಟೆ ತಯಾರಿಸಿಕೊಂಡಿದ್ದು ಇದರಿಂದಲೇ ಉಳುಮೆ ಮಾಡುವ ಇವರಿಗೆ ಎತ್ತು, ಟ್ರಾÂಕ್ಟರ್‌ ಎಲ್ಲವೂ ಈ ಕೈ ಕುಂಟೆ. ಬಿತ್ತನೆಯನ್ನು ಸಹ ಇದರಿಂದಲೇ ಮಾಡುವುದು ವಿಶೇಷ.ಬಹಳಷ್ಟು ಜನ ಕೃಷಿಯತ್ತ ವಿಮುಖವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಶ್ರಮಜೀವಿ ಮಹಾ “ಗುಂಡಪ್ಪ’ ರೈತರಿಗೆ ಮಾದರಿಯಾಗಿದ್ದಾರೆ. ಈತನ ಸಾಧನೆ ಗುರುತಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯ 2015ರಲ್ಲಿ “ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿ ನೀಡಿ ಗೌರವಿಸಿದೆ.

ಶರಣು ಹುಬ್ಬಳ್ಳಿ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.